ಪುಟ:Vimoochane.pdf/೨೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸತ್ಕಾರವನ್ನೆ ಏರ್ಪಡಿಸಿದೆವು.

ಅವನೆದುರು ಶ್ರೀಕಂಠ ಹೇಳಿದ:

ಇವರು ಮಿಸ್ಟರ್ ಚಂದ್ರಶೇಖರ್, ನನ್ನ ಕಾರ್ಯದರ್ಶಿ.

” ಕಾರ್ಯದರ್ಶಿ! ನನ್ನ ಮುಖ ಉರಿಯಿತು ಕ್ಷಣಕಾಲ, ಆದರೆ ಹೌಡ್ಯುಡುಗಳ ನಡುವೆ ಚೇತರಿಸಿಕೊಂಡೆ, ಜೇಬುಗಳ್ಳ ಎನಿಸಿಕೊಳ್ಳು ವುದಕ್ಕಿಂತ ಕಾರ್ಯದರ್ಶಿ ಎಂದು ಕರೆಸಿಕೊಳ್ಳುವುದು ಮೇಲಾಗಿತ್ತಲ್ಲವೆ?

ಆ ಬಂಗಾಳಿ ಹೊರಟು ಹೋದ ಮೇಲೆ ಶ್ರೀಕಂಠನೆಂದ:

"ಈ ಕಂಟ್ರಾಕ್ಟು ದೊರಕ್ಸೊಕೆ ಅರ್ಧ ಲಕ್ಷ ಖರ್ಚಾಗುತ್ತೆ. ಆದರೆ ಆ ಮೇಲೆ ತೊಂದರೆ ಇರೋಲ್ಲ, ಯುದ್ಧ ಇರೋವಷ್ಟು ಕಾಲವೂ ಮಜಾ, ಏನ೦ತೀಯಾ ಕಾರ್ಯದರ್ಶಿ ?"

ನಾನು ಮೆಚ್ಚುಗೆಯ ಮುಗುಳು ನಗು ಸೂಸಿದೆ.

ಶ್ರೀಕಂಠನಿಗೆ ಸ್ವಂತದ ವ್ಯಕ್ತಿತ್ವವಿಲ್ಲವೆಂದು ನಾನು ಭಾವಿಸಿದ್ದು ತಪ್ಪಾಗಿತ್ತು, ಆ ಬಾಲ್ಯದ ಸಹಪಾಠಿ ಬೆಳೆದು ಹೊಸ ವ್ಯಕ್ತಿಯಾಗಿದ್ದ. ಹಣ ಅವನಿಗೆ ಸಮಾಜದಲ್ಲಿ ಮನ್ನಣೆಯ ಸ್ಥಾನವನ್ನು ದೊರಕಿಸಿ ಕೊಟ್ಟಿತ್ತು, ಆತ್ಮ ವಿಶ್ವಾಸದಿಂದ ಅತ ವ್ಯವಹಾರ ನಡೆಸುತ್ತಿದ್ದ. ದರ್ಪದ ರೀವಿಯಿಂದ ಇತರರೊಡನೆ ವರ್ತಿಸುತ್ತಿದ್ದ, ಮೂವತ್ತರ ಯುವಕನಾಗಿದ್ದರೇನಾಯಿತು? ಅವನ ಮಾತಿಗೆ ಬೆಲೆ ಇರುತಿತ್ತು. ಶ್ರೀಕಂಠನ ಮತ್ತು ಅವನ ಮಾವನ ಹೆಸರೆತ್ತಿದರೆ ಸಾಕು, ಸರಕಾರಿ ವೃತ್ತಗಳಲ್ಲಿ ಗೌರವ ಕಾಣಬರುತಿತ್ತು.

ರಾಜ್ಯ ಯಂತ್ರ ಮತ್ತು ಶ್ರೀಮಂತಿಕೆ.....

ಅದೊಂದು ಸಂಜೆ ಶ್ರೀಕಂಠ ನನ್ನನ್ನು ಕಂಡಾಗ, ಬಲವಾಗಿ ಕೈ ಹಿಡಿದು ಕುಲುಕಿ, ನನ್ನ ಬೆನ್ನು ತಟ್ಟಿ, ಹೇಳಿದ.

ಏನೋಂತಿದ್ದೆ. ಭೇಷ್... ನಿನ್ನ ಸ್ನೇಹಿತನಾದು ಸಾರ್ಥಕ ವಾಯ್ತು."

ಏನ್ಸಮಾಚಾರ?"

"ಐ ಜಿ ಪಿ ಫೋನ್ ಮಾಡಿದ್ರು ಕಣೋ..

"ನನ್ನ ಮುಖ ಕಪ್ಪಿಟ್ಟಿತು. ನನ್ನ ಹಿಂದೆಯೇ ಬಂದಿದ್ದ