"ಇವುಗಳ್ನ ನೀವು ನೋಡಿಲ್ಲಾಂತ ಕಾಣುತ್ತೆ. ಯೂನಿಯನ್
ನವರು ಹೊರಡ್ಸಿದಾರೆ."
ಆ ಕರಪತ್ರಗಳನ್ನು "ಸತ್ಯದ ಬತ್ತಳಿಕೆಯಿಂದ ಮೊದಲ
ಬಾಣ," "--ಎರಡನೆ ಬಾಣ", ಎಂದು ಕರೆದಿದ್ದರು. ನಗರದ ಮಾಲೀಕರೆಲ್ಲ ಯುದ್ಧ ಕಾಲದಲ್ಲಿ ಬಹಿರಂಗವಾಗಿ ಸಂಪಾದಿಸಿದ ಲಾಭದ ವಿವರಗಳು ಆದರಲ್ಲಿದ್ದುವು. ಅ ಬಳಿಕ ಉಕ್ಕಿನಂಥ ಐಕ್ಯ ಕ್ಕಾಗಿ-- ಸಂಘಟತ ಹೋರಾಟಕ್ಕಾಗಿ--ಕರೆ.
ಯಾರೋ ಅವುಗಳನ್ನು, ಹೃದಯಕ್ಕೆ ನಾಟುವಂತೆ ಬರೆದಿದ್ದರು.
"ಇವು ಹ್ಯಾಗಿವೆ ಚೆಲುವಯ್ಯ?"
"ಹೋಪ್ ಲೆಸ್, ಕೃಷ್ಣರಾಜ್ ಕೈಲಿ ಬರೆಸಿದಾರೆ."
"ಯಾರು ಕೃಷ್ಣರಾಜ?"
"ಅವನೇ ಸಾರ್. ಲೇಖನ, ಕತೆ-ಗಿತೆ, ಬರೆದು ತಾನೂ ಒಬ್ಬ
ಪ್ರಗತಿಶೀಲ ಸಾಹಿತಿ ಅಂತ ಮೆರಿತಾನಲ್ಲ--ಅವನೇ."
ಆಗಾಗ್ಗೆ ಪತ್ರಿಕೆ ಪುಸ್ತಕಗಳನ್ನು ಓದುವ ಅಭ್ಯಾಸವಿದ್ದ ನನಗೆ
ಆ ಹೆಸರು ಅಪರಿಚಿತವಾಗಿರಲಿಲ್ಲ.
"ಯೂನಿಯನ್ ನವರು ಅಂಕೆ--ಸಂಖ್ಯೆ--ವಿವರ ಒದಗಿಸ್ತಾರೆ.
ಆತ ಬರಕೊಡ್ತಾನೆ."
"ಫೀಸು ಗೀಸು ಇವೆಯೋ--?"
"ಇಲ್ವೇ ಇರತ್ಯೆ ಸಾರ್ ...... ನೋಡಿ ಎಷ್ಟು ತುಚ್ಛವಾಗಿ
ಬರೆದಿದಾನೆ -- ಕೈಲಿ ಲೇಖನಿ ಇದೇಂತ, ಬರೆಯೋಕೆ ಕಾಗದ ಇದೇಂತ--"
ಸ್ವತಃ ತಾನೇ ಚರಂಡಿಯಲ್ಲಿ ಬ್ರಷ್ ಅದ್ದಿ ತುಚ್ಛವಾಗಿ ಬರೆಯು
ವವನ ದೃಷ್ಟಿಯಲ್ಲಿ, ಜಗತ್ತೇ ತುಚ್ಛವಾಗಿ ತೋರುತಿತ್ತು. ಕಾಮಾಲೆ ಕಾಹಿಲೆಯವನಿಗೆ ಪ್ರಪಂಚವೆಲ್ಲ ಅರಿಸಿನ-ಅರಿಸಿನವಾದ ಹಾಗೆ.... ಮುಂದೆ ಅವನ ಮಾತು ಕೇಳುವ ಇಷ್ಟ ನನಗಿರಲಿಲ್ಲ---ನಾನೆದ್ದು ಒಳ ಹೋದೆ.