ಬ್ರಹ್ಮ ಪಡೆಯಲರಿಯನೇತಕೊ ದೇವನಾದಡೆ

ವಿಕಿಸೋರ್ಸ್ದಿಂದ



Pages   (key to Page Status)   


ಬ್ರಹ್ಮ ದೇವನಾದಡೆ ಹಮ್ಮಿನಿಂದ ಹೋದ ತಲೆಯ ಗಮ್ಮನೆ ಪಡೆಯಲರಿಯನೇತಕೊ ? ವಿಷ್ಣು ದೇವನಾದಡೆ ಸುಟ್ಟು ಹೋದ ಮನ್ಮಥನ ಪ್ರಾಣವ ನೆಟ್ಟನೆ ಕೊಡಲರಿಯನೇತಕೊ ? ಇದನರಿಯದೆ
ಹುಟ್ಟಿಸುವಾತ ಬ್ರಹ್ಮ ರಕ್ಷಿಸುವಾತ ವಿಷ್ಣುವೆಂದು ನುಡಿವ
ಭ್ರಷ್ಟ ವಿಪ್ರರೆಂಬ ಹೊಲೆಮನದ ಹಾರುವರ ಮೆಟ್ಟಿ ಮೆಟ್ಟಿ ತುಳಿತುಳಿದು ಹೊಟ್ಟೆ ಹರಿಯಲೊದೆಯೆಂದಾತ ನಮ್ಮ ಅಖಂಡೇಶ್ವರನು.