ಭಕ್ತಿಯೆಂಬುದು ಯುಕ್ತಿಯೊಳಗು, ಪೂಜೆಯೆಂಬುದು
ಗೋಚರ
ಲೇಖಕರು: Allama Prabhu
ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya
ಭಕ್ತಿಯೆಂಬುದು ಯುಕ್ತಿಯೊಳಗು
ಪೂಜೆಯೆಂಬುದು ನಿರ್ಮಾಲ್ಯದೊಳಗು. ಪ್ರಸಾದವೆಂಬುದು ಓಗರದೊಳಗು
ಆಚಾರವೆಂಬುದು ಅನಾಚಾರದೊಳಗು. ಧರ್ಮವೆಂಬುದು ಅಧರ್ಮದೊಳಗು
ಸುಖವೆಂಬುದು ದುಃಖದೊಳಗು. ವ್ರತವೆಂಬುದು ವೈರಾಗ್ಯದೊಳಗು
ನೇಮವೆಂಬುದು ಉದ್ದೇಶದೊಳಗು. ಅಹಿಂಸೆಯೆಂಬುದು ಹಿಂಸೆಯೊಳಗು!_ಇವಾವಂಗವೂ ಇಲ್ಲದೆ ಗುಹೇಶ್ವರಾ ನಿಮ್ಮ ಶರಣ ಸುಖಿಯಾಗಿರ್ದನು!