Transclusion_Status_Detection_Tool

ಮಲವೊತ್ತಿದರೆ ಹಾಳುಗೇರಿಯಲ್ಲಿ ಬಿಡಬೇಕಯ್ಯ.

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು



Pages   (key to Page Status)   


ಮಲವೊತ್ತಿದರೆ ಹಾಳುಗೇರಿಯಲ್ಲಿ ಬಿಡಬೇಕಯ್ಯ. ಜಲವೊತ್ತಿದರೆ ಬಚ್ಚಲೊಳಗೆ ಬಿಡಬೇಕಯ್ಯ. ಇಂದ್ರಿಯವೊತ್ತಿದರೆ ಯೋನಿಯೆಂಬ ಬಚ್ಚಲೊಳಗೆ ಬಿಡಬೇಕಯ್ಯ. ಸ್ವಾನನೊಂದು ಚರ್ಮವ ಕಚ್ಚಿ ತಂದು
ತಿಪ್ಪೆಯ ಕೆರದು ಹೂಳಿ
ಮತ್ತೊಂದು ನಾಯಿ ಬಂದು ಕಚ್ಚೀತೆಂದು ಕಾಯ್ದುಕೊಂಡಿಪ್ಪಂತೆ ತಾನುಚ್ಚೆಯ ಹೊಯಿವ ಬಚ್ಚಲಗುಂಡಿಯ ಜೀವದ ಹೆಣನ ಮನೆಯ ಮರೆಯಲ್ಲಿರಿಸಿಕೊಂಡು
ಮತ್ತೊಂದು ಬಂದು ಕಚ್ಚೀತ್ತೆಂದು ಕುಕ್ಕನಾಯಂತೆ ಕಾಯ್ದುಕೊಂಡಿಪ್ಪವಂಗೆ ಶಿವಕೃಪೆಯಿನ್ನೆಲ್ಲಿಯದೋ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.