ಮಾತಿನಲ್ಲಿ ಮಹತ್ವವ ನುಡಿದು

ವಿಕಿಸೋರ್ಸ್ದಿಂದ



Pages   (key to Page Status)   


ಮಾತಿನಲ್ಲಿ ಮಹತ್ವವ ನುಡಿದು ನೀತಿಯಲ್ಲಿ ಅಧಮರಾದ ಮಾನವರು ಈಶ್ವರೋವಾಚವ ನುಡಿದುಕೊಂಡು ನಡೆದರೆ ಬೆಟ್ಟಕ್ಕ ನಾಯಿ ಬಗುಳಿದಂತೆ. ಕಷ್ಟರ ನುಡಿ ಕಾಮಾರಿಯ ಮುಟ್ಟದು ಕಾಣಾ. ನಿಮ್ಮ ಮುಟ್ಟದ ಮನಕ್ಕೆ ಬಂದಂತೆ ನಡೆವವರ
ಮನಕ್ಕೆ ಬಂದಂತೆ ನುಡಿವವರ ಮಚ್ಚೆನು ಕಾಣಾ. ಅಲ್ಲಿ ನೀವಿಲ್ಲದ ಕಾರಣ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.