ಮುಕ್ತಿಗೆ ಅಗ್ನಿಮಂಡಲದ ಸದಾ

ವಿಕಿಸೋರ್ಸ್ದಿಂದ



Pages   (key to Page Status)   


ಮುಕ್ತಿಗೆ ಸದಾ ಸಂಧಾನವಾದ ಮಹಾಜ್ಞಾನ ಶಿವಕ್ಷೇತ್ರವೆಂಬ ಶಾಂಭವಿಯಚಕ್ರವಿವರವೆಂತೆಂದೊಡೆ: ಅಗ್ನಿಮಂಡಲದ ಪೂರ್ವದಿಕ್ಕಿನ ಸಕಾರವೇ ವಾಮೆ
ಷಕಾರವೇ ಜೇಷೆ*
ಶಕಾರವೇ ರೌದ್ರಿ
ವಕಾರವೇ ಕಾಳಿ. ಅಗ್ನಿಮಂಡಲದ ನೈಋತ್ಯದಳಕ್ಕೆ ಆಧಾರಚಕ್ರಸಂಬಂಧವು. ಅದರ ಮುಂದಣ ಲಕಾರವೇ ಬಾಲೆ
ರಕಾರವೇ ಬಲಪ್ರಮಥಿನಿ
ಯಕಾರವೇ ಸರ್ವಭೂತದಮನಿ
ಮಕಾರವೇ ಮನೋನ್ಮನಿ. ಇನ್ನು ಸೂರ್ಯಮಂಡಲದ ಬಕಾರ ಭಕಾರಗಳೆರಡು ಕೂಡಿ ಅಗ್ನಿಮಂಡಲದ ಈಶಾನ್ಯದಳಕ್ಕೆ ಸ್ವಾಧಿಷಾ*ನಚಕ್ರಸಂಬಂಧವು. ಮುಂದೆ ಚಂದ್ರಮಂಡಲದ ವಿವರವೆಂತೆಂದೊಡೆ: ಅಃ ಎಂಬುದೇ ಷಣ್ಮುಖಿ
ಅಂ ಎಂಬುದೇ ಭವ
ಔಕಾರವೇ ಶರ್ವ
ಓಕಾರವೇ ರುದ್ರ
ಐಕಾರವೇ ಮಹಾದೇವ
ಏಕಾರವೇ ಸೋಮ
ಲೂೃಕಾರವೇ ಭೀಮ
ಲೃಕಾರವೇ ಉಗ್ರ
Iೂಕಾರವೇ ಪಶುಪತಿ
ಋಕಾರವೇ ಉಮೇಶ್ವರ
ಊಕಾರವೇ ಚಂಡೇಶ್ವರ
ಉಕಾರವೇ ನಂದೀಶ್ವರ
ಈಕಾರವೇ ಮಹಾಕಾಳ
ಇಕಾರವೇ ಭೃಂಗಿರಿಟಿ
ಆಕಾರವೇ ಗಣೇಶ್ವರ
ಅಕಾರವೇ ವೃಷಭೇಶ್ವರ
ಚಂದ್ರಮಂಡಲದಲ್ಲಿ ವಿಶುದ್ಧಿಚಕ್ರಸಂಬಂಧವು. ಇನ್ನು ಮುಂದೆ ಸೂರ್ಯಮಂಡಲವೆಂತೆಂದೊಡೆ: ಪೂರ್ವದಳದ ಕಕಾರವೇ ಅನಂತ
ಖಕಾರವೇ ಸೂಕ್ಷ್ಮ
ಗಕಾರವೇ ಶಿವೋತ್ತಮ
ಘಕಾರವೇ ಏಕನೇತ್ರ
ಙಕಾರವೇ ಏಕರುದ್ರ. ಚಕಾರವೇ ತ್ರಿಮೂರ್ತಿ
ಛಕಾರವೇ ಶ್ರೀಕಂಠ
ಜಕಾರವೇ ಶಿಖಂಡಿ
ಝಕಾರವೇ ಇಂದ್ರ
ಞಕಾರವೇ ಅಗ್ನಿ. ಟಕಾರವೇ ಯಮ
ಠಕಾರವೇ ನೈಋತ್ಯ. ಸೂರ್ಯಮಂಡಲದ ನೈಋತ್ಯದಳಕ್ಕೆ ಅನಾಹತಚಕ್ರಸಂಬಂಧವು. ಡಕಾರವೇ ವರುಣ
ಢಕಾರವೇ ವಾಯುವ್ಯ
ಣಕಾರವೇ ಕುಬೇರ
ತಕಾರವೇ ಈಶಾನ್ಯ
ಥಕಾರವೇ ಧರಾ
ದಕಾರವೇ ಧ್ರುವ
ಧಕಾರವೇ ಸೋಮ
ನಕಾರವೇ ಅಪ್ಪು
ಪಕಾರವೇ ಅನಿಲ
ಫಕಾರವೇ ಅನಲ
ಸೂರ್ಯಮಂಡಲದ ವರುಣದಳದಿಂದೆ ಈಶಾನ್ಯದಳಕ್ಕೆ ಮಣಿಪೂರಕಚಕ್ರ ಸಂಬಂಧವು. ಈಶಾನ್ಯ ಇಂದ್ರ ಮಧ್ಯದ ಬಕಾರ ಭಕಾರಂಗಳ ಪೆಸರು
ಬಕಾರವೇ ಪ್ರತ್ಯೇಶ
ಭಕಾರವೇ ಪ್ರಭವ
ಇವೆರಡು ಸ್ವಾಧಿಷಾ*ನಚಕ್ರದವು. ಇನ್ನು ಅಕಾರ ಹಕಾರಂಗಳಿಗೆ ಭೇದವಿಲ್ಲದ ಕಾರಣ ಚಂದ್ರಮಂಡಲದ ಅ ಎಂಬಕ್ಷರವು ಅಗ್ನಿಮಂಡಲದ ಲಂಬಕ್ಷರವು ಇವೆರಡು ಆಜ್ಞಾಚಕ್ರಸಂಬಂಧವಾಗಿಹವು. ಈ ಷಟ್‍ಚಕ್ರಂಗಳು ಶಾಂಭವಿಚಕ್ರದಲ್ಲಿ ಸಂಬಂಧವಾಗಿಹವು. ಇನ್ನು ಅಷ್ಟದಳಂಗಳಿಗೆ ಹಂಚಿಹಾಕುವ ವಿವರವೆಂತೆಂದೊಡೆ: ವಾಮ
ಗಣೇಶ್ವರ
ವೃಷಭೇಶ್ವರ
ಅನಂತ
ಸೂಕ್ಷ್ಮ
ಶಿವೋತ್ತಮ
ಇಂದ್ರ
ಸತ್ಯ
ಭೃಂಗಿ
ಅಂತರ್ಲಕ್ಷ ಈ ಹತ್ತು ಇಂದ್ರದಳದಲ್ಲಿ ಸಂಬಂಧವು. ಜೇಷ*
ಮಹಾಕಾಳ
ಭೃಂಗರೀಟಿ
ಏಕನೇತ್ರ
ಏಕರುದ್ರ
ತ್ರಿಮೂರ್ತಿ
ಅಗ್ನಿ
ಪೂಷನ್
ವಿಧಿ
ದಮ ಈ ಹತ್ತು ಅಗ್ನಿದಳದಲ್ಲಿ ಸಂಬಂಧವು. ರೌದ್ರಿ
ನಂದೀಶ್ವರ
ಚಂಡೇಶ್ವರ
ಶ್ರೀಕಂಠ
ಶಿಖಂಡಿ
ಇಂದ್ರ ಯಮ
ಭಾಸ್ಕರ
ಪುಷ್ಪದತ್ತ
ಬಲಾಟ ಈ ಹತ್ತು ಯಮದಳದಲ್ಲಿ ಸಂಬಂಧವು. ಕಾಳಿ
ಉಮೇಶ್ವರ
ಪಶುಪತಿ
ಅಗ್ನಿ
ಯಮ
ನೈಋತ್ಯ
ದೌವಾರಿಕ
ಸುಗ್ರೀವ
ಆವರಣ ಈ ಹತ್ತು ನೈಋತ್ಯದಳದಲ್ಲಿ ಸಂಬಂಧವು. ಬಾಲೆ
ಉಗ್ರ
ಭೀಮ
ವರುಣ
ಏಕನೇತ್ರ
ಕುಬೇರ
ಅರುಣ
ಅಸುರ
ಗಂಹ್ವರ
ವೇಗ
ಈ ಹತ್ತು ವರುಣದಳದಲ್ಲಿ ಸಂಬಂಧವು. ಬಲಪ್ರಮಥಿನಿ
ಸೋಮ
ಅಪನಿಲ
ಮಹಾದೇವ
ಈಶಾನ್ಯ
ಧರಾ
ಧ್ರುವ
ವಾಯು
ನಾಗಮುಖ
ಸೋಮ
ಈ ಹತ್ತು ವಾಯುವ್ಯದಳದಲ್ಲಿ ಸಂಬಂಧವು. ಸರ್ವಭೂತದಮನಿ
ರುದ್ರ
ಶರ್ವ
ಸೋಮ
ಅಪ್ಪು
ನೀಲ
ಕುಬೇರ
ಅಘೋರ
ದಿತಿ
ಅದಿತಿ
ಈ ಹತ್ತು ಕುಬೇರದಳದಲ್ಲಿ ಸಂಬಂಧವು. ಮನೋನ್ಮನಿ
ಭವ
ಷಣ್ಮುಖಿ
ನಳ
ಪ್ರತ್ಯೇಶ
ಪ್ರಭವ
ಈಶಾನ್ಯ
ಪರ್ಜನ್ಯ
ಜಯಂತ
ಸಂಕರ
ಈ ಹತ್ತು ಈಶಾನ್ಯದಳದಲ್ಲಿ ಸಂಬಂಧವು. ಇಲ್ಲಿಗೆ ಅಷ್ಟದಳದ ವಿವರ ಮುಗಿಯಿತು. ಇನ್ನು ಮುಂದೆ ಚೌದಳದ ವಿವರವೆಂತೆಂದೊಡೆ : ಇಂತಪ್ಪ ಅಷ್ಟದಳವನೊಳಕೊಂಡು ಅಂಬಿಕೆ
ಗಣಾನಿ
ಈಶ್ವರಿ
ಮನೋನ್ಮನಿ ಎಂಬ ಚತುರ್ದಳ ಶಕ್ತಿಯರಿರ್ಪರು. ಪೂರ್ವದಳದ ಸಕಾರವೇ ಅಂಬಿಕೆ. ದಕ್ಷಿಣದಳದ ಅಕಅರವೇ ಗಣಾನಿ. ಪಶ್ಚಿಮದಳದ ವಿಕಾರವೇ ಈಶ್ವರಿ. ಉತ್ತರದಳದ ಕ್ಷಕಾರವೇ ಮನೋನ್ಮನಿ. ಇಂತೀ ಚತುರ್ವಿಧಶಕ್ತಿಯನೊಳಕೊಂಡಿರ್ಪಳು ಹ್ರೀಂಕಾರಶಕ್ತಿ. ಹ್ರೀಂಕಾರಶಕ್ತಿ ಎಂದಡೂ ಮೂಲಜ್ಞಾನ ಚಿತ್ತು ಎಂದಡೂ ಚಿದಾತ್ಮ ಎಂದಡೂ ಪರ್ಯಾಯ ನಾಮವು. ಇಂತಪ್ಪ ಹ್ರೀಂಕಾರಶಕ್ತಿಗೆ ಆಶ್ರಯವಾಗಿರ್ಪುದು ನಿಷ್ಕಲಲಿಂಗವು. ನಿಷ್ಕಲಲಿಂಗವೆಂದಡೂ ಶುದ್ಧಪ್ರಸಾದವೆಂದಡೂ ಹಕಾರಪ್ರಣವವೆಂದಡೂ ಪರ್ಯಾಯ ನಾಮಂಗಳು. ಇಂತಪ್ಪ ನಾಮಂಗಳನೊಳಕೊಂಡು ಪಿಂಡ ಬ್ರಹ್ಮಾಂಡಗಳೊಳಹೊರಗೆ ಪರಿಪೂರ್ಣವಾಗಿ ತುಂಬಿ ತೊಳಗಿ ಬೆಳಗುತಿರ್ಪುದು ನೋಡಾ ನಿಷ್ಕಲಲಿಂಗವು. ಇಂತಪ್ಪ ಅನಾದಿ ನಿಷ್ಕಲ ಪರಶಿವಬ್ರಹ್ಮದ ನಿಜದ ನಿಲವನು ಶ್ರುತಿಗುರುವಚನ ಸ್ವಾನುಭಾವಂಗಳಿಂದರಿದು ತನ್ನೊಳಗೆ ಗರ್ಭೀಕರಿಸಿಕೊಂಡು ಸುಳಿವ ಮಹಾಶರಣರ ಶ್ರೀಚರಣಕ್ಕೆ ನಮೋ ನಮೋ ಎಂಬೆನಯ್ಯಾ ಅಖಂಡೇಶ್ವರಾ.