ಮುತ್ತು ನೀರಲ್ಲಿ ಹುಟ್ಟಿ

ವಿಕಿಸೋರ್ಸ್ದಿಂದ



Pages   (key to Page Status)   

ಮುತ್ತು ನೀರಲ್ಲಿ ಹುಟ್ಟಿ ಮತ್ತೆ ನೀರಪ್ಪುದೆ ಗುರುಕಾರುಣ್ಯವ ಹಡೆದ ಭಕ್ತನು ಹಿಂದಣ ಪೂರ್ವಾಶ್ರಯವ ಬೆರಸಿದಡೆ
ಗುರುದ್ರೋಹ ಲಿಂಗದ್ರೋಹ ಜಂಗಮದ್ರೋಹ ಆಚಾರದ್ರೋಹ ಪ್ರಸಾದದ್ರೋಹ. ಇಂತೀ ಪಂಚಮಹಾಪಾತಕಂಗಳು ಭಕ್ತಂಗಲ್ಲದೆ ಭವಿಗೆಲ್ಲಿಯದೊ ಗುರುವಿದು
ಲಿಂಗವಿದು
ಜಂಗಮವಿದು ಆಚಾರವಿದು
ಪ್ರಸಾದವಿದೆಂದರಿಯದಿದ್ದಡೆ ಕುಂಭಿಪಾತಕ ನಾಯಕನರಕ ಕೂಡಲಸಂಗಮದೇವಾ.