ರಂಗಮ್ಮನ ವಠಾರ/೧೧

ವಿಕಿಸೋರ್ಸ್ದಿಂದ

ಆ ಮನೆಯಿಂದ ಹಾಗೆ ಅಳು ಬರುವುದು ಹೊಸ ವಿಷಯವಾಗಿರಲಿಲ್ಲ.
ಅದೊಂದು ಮನೆ, ಎದುರಿಗಿದ್ದ ಉಪಾಧ್ಯಾಯರದು, ಪಕ್ಕದಲ್ಲಿ ರಾಜಮ್ಮ ಮತ್ತು
ಮಕ್ಕಳ ಜಗಳ, ಕಮಲಮ್ಮನ ಗಂಡ ಊರಿಗೆ ಬಂದಾಗಲೊಂಮ್ಮೆ ವಿರಸ,ನಾಗರಾಜ
ರಾಯ-ಪದ್ಮಾವತಿಯರ ನಡುವೆ ಹುಣ್ಣಿಮೆ ಅಮಾವಾಸ್ಯೆಗೊಮ್ಮೆ ಕಲಹ...ಯಾವುದೂ
ಹೊಸತಾಗಿರಲಿಲ್ಲ, ಯಾರಿಗೂ ಅದರಲ್ಲಿ ವಿಶೇಷ ಅಸಕ್ತಿ ಇರಲಿಲ್ಲ. 'ಎಲ್ಲರ ಮನೆ
ದೋಸೆಯೂ ತೂತೇ' ಎಂದು ಸುಮ್ಮನಾಗುವುದೇ ಅಲ್ಲಿ ಕಂಡುಬರುತ್ತಿದ್ದ ಮುಖ್ಯ
ಪ್ರವ್ರತ್ತಿ. ಆದರೂ ಹೊಸ ಪ್ರಕರಣವಾದಾಗಲೆಲ್ಲ 'ಈ ಸಲ ಕಾರಣವೇನು?' ಎಂದು
ತಿಳಿಯುವ ಕುತೂಹಲ ಮಾತ್ರ ಹಲವರಲ್ಲಿ ಇರುತ್ತಿತ್ತು.
ಈ ಸಲವು ಮೊದಲ ಮನೆಗಳ ಕೆಲವರು,ಪೋಲೀಸನ ಮನೆಯಿಂದ ಬರು
ತ್ತಿದ್ದ ಸ್ವರಗಳಿಗೆ ಕಿವಿಗೊಟ್ಟರು.
"ಸ್ವಲ್ಪಾನಾದ್ರೂ ಮೈಮೇಲೆ ಪ್ರಜ್ನೆ ಬೇಡ ನಿಂಗೆ? ಹೋಗಿ ಸಂಗೀತ ಕಛೇರೀಲಿ
ಕೂತ್ಬಿಟ್ಟಿದಾಳೆ ಮಹಾರಾಣಿ. ಹುಂ!"
"ಇಲ್ಲಾ ಅಂದ್ರೆ....ಈಗ್ತಾನೇ ಹೋಗಿದ್ದೆ ಅಂದ್ರೆ..."
"ಮುಚ್ಚು ಬಾಯಿ!"
"ಅಯ್ಯೋ ಭಗವಂತಾ...."
ಭಗವಂತನನ್ನು ಕರೆದುದಕ್ಕಾಗಿ ಒದೆ.
"ಯಾರ್ಗೆ ಹೇಳಿದ್ದು ಬಾಯ್ಮುಚ್ಚೂಂತ?"
ಆ ಗಂಡಸು ಒಂದು ಕ್ಷಣ ಅಳುಕಿದಂತೆ ತೋರಿತು. ಮತ್ತೆ ಕೈಯ ಹೊಡೆತ.
"ನಿಮ್ಮ ದಮ್ಮಯ್ಯ....!"
"ಹೋಗ್ತೀಯಾ ಇನ್ನು?"
"ಖಂಡಿತಾ ಹೋಗೋಲ್ಲ....ಮಗುವಿನಾಣೆ...."
ಅಲ್ಲೆ ಹಿತ್ತಿಲ ಹೋಡೆಗೊರಗಿ ನಿಂತಿದ್ದ ಜಯರಾಮು ತಂಗಿ ಬರುತ್ತಿದ್ದುದನ್ನು
ನೋಡಿದ. ಆಕೆಯೂ ಅಣ್ಣನನ್ನು ಕಂಡು ಅವನ ಬಳಿಗೆ ಬಂದಳು. ಇಬ್ಬರೂ
ಕತ್ತಲೆಯಲ್ಲಿ ನಿಂತು, ಕಿಟಕಿಯ ಮೂಲಕ ಸ್ವಲ್ಪಸ್ವಲ್ಪವಾಗಿ ಕಾಣುತ್ತಿದ್ದ ದ್ರಶ್ಯವನ್ನು
ನೋಡಿದರು; ಕೇಳಿಸುತ್ತಿದ್ದ ಎಲ್ಲ ಮಾತುಗಳಿಗೂ ಕಿವಿಗೊಟ್ಟರು.
ಮಗುವಿನಾಣೆ....!
ಮೂವರು ಮಕ್ಕಳು ಹೆದರಿ ಗಡಗಡನೆ ನಡುಗುತ್ತ ಅಡುಗೆ ಮನೆ ಸೇರಿದ್ದರು.
ಹೊರಗೆ ನಿಂತಿದ್ದವರಿಗೆ, ಅಸಹಾಯಳಾಗಿ ನೆಲದ ಮೇಲೆ ಬಿದ್ದಿದ್ದ ಹೆಂಗಸು ಕಾಣು
ತ್ತಿರಲ್ಲಿಲ್ಲ. ಖಾಕಿಯ ಪೋಷಕು ಧರಿಸಿದ್ದ ಗಂಡಸು ಮಾತ್ರ ಅತ್ತಿತ್ತ ಚಲಿಸುವುದು
ಕಾಣಿಸುತ್ತಿತ್ತು.
ಇದರ ಹಿನ್ನಲೆ ಅಣ್ಣನಿಗೆ ತಿಳಿಯಲೆಂದು ತಂಗಿ ಹೇಳಿದಳು:
"ಕೊನೇ ಮನೆಯವರು ಒಂದೆರಡು ಹಾಡು ಹೇಳಿದ್ರು ಅಣ್ಣ. ಅದನ್ನ
ಕೇಳೋಕೆ ಈಕೆ ಬಂದಿದ್ರು ."
"ಗೊತಾಯ್ತು ಕಣೇ..."
"ಅಯ್ಯೋ!ಹ್ಯಾಗೆ ಹೊಡೀತಿದಾನೆ ಆತ!"
ಮತ್ತೆ ಹೊಸದಾಗಿ ಹೆಂಗಸಿನ ಧ್ವನಿ ಕಳಿಸಿತು:
"ಅಯ್ಯೋ ಹೋಡೇಬೇಡೀಂದ್ರೆ....ದಮ್ಮಯ್ಯ...."
ಜಯರಾಮು ಅವುಡುಕಚ್ಚಿ ಕಂಪಿಸುವ ಧ್ವನಿಯಲ್ಲಿ ಹೇಳಿದ:
"ಪಿಶಾಚಿ!ಬೆಲ್ಟು ಬಿಚ್ಛಿ ಹೊಡೀತಿದಾನೋ ಏನೋ...."
"ಥೂ!ಆತ ತುಂಬಾ ಕೇಟ್ಟೋನು."
"ಹೆಂಡತಿ ಅಂದರೆ ಕಾಲಿನ ಕಸ.ಇದು ಲಾಕಪ್ಪೊಂತ ತಿಳಕೊಂಡಿದಾನೆ. ಮ್ಯೆ
ಚರ್ಮ ಸುಲಿಯೋಕೆ ಅಲ್ಲಿ ಯಾರೂ ಇವತ್ತು ಸಿಗಲಿಲ್ವೇನೋ...."
"ಹೋಗಿ ರಂಗಮ್ನೋರನ್ನ ಕರೇಲೆ ಅಣ್ಣ?"
"ಬೇಡ ರಾಧಾ. ಇನ್ನೇನು ಅವರೇ ಬಂದ್ಬಿಡ್ತಾರೆ.
"ಜಯರಾಮು ರಂಗಮ್ಮನವರ ನಡೆ ನುಡಿಯನ್ನು ಚೆನ್ನಾಗಿ ಅಭ್ಯಾಸ ಮಾಡಿದ್ದ.
ವಠಾರದಲ್ಲಿ ಜಗಳ ಆರಂಭವಾದರೆ ಆ ಕ್ಷಣವೇ ಅವರು ಬರುತ್ತಿರಲಿಲ್ಲ.ಪರಿಸ್ಥಿತಿ
ತೀಕ್ಷ್ಣತೆಯ ಘಟ್ಟವನ್ನು ದಾಟಿ ಇಳಿಮುಖವಾದಾಗ ರಂಗಮ್ಮ ಬಂದು ಸ್ವರವೇರಿಸಿ
ಮಾತನಾಡುತ್ತಿದ್ದರು:
"ಏನದು ಗಲಾಟೆ? ಈ ವಠಾರ ಕುಡುಕರ ಕೇರಿ ಕೆಟೋಯ್ತೆ!"
ಆಗಾಗ್ಗೆ ದೇಹದ ಉಗಿ ಹೊರಹೋಗಲು ಅವಕಾಶ ಕೊಡುವುದು ಅಗತ್ಯ
ಎಂಬುದು ಅವರ ಅಭಿಪ್ರಾಯವಾಗಿತ್ತು.
ಈ ದಿನವೂ ಅವರ ಬಂದು ಪೋಲೀಸನ ಮನೆ ಬಾಗಿಲಲ್ಲಿ ನಿಂತರು:
"ರಂಗಸ್ವಾಮೀ!ರಂಗಸ್ವಾಮೀ!ಏನ್ರೀ ಅದು?"
ಒಂದು ಕ್ಷಣ ಮೌನ. ಆ ಬಳಿಕ, ತನಗೆ ಸಹಾನುಭೂತಿ ತೋರುವವರು ಬಂದ
ರೆಂದು, ಹೆಂಗಸು ಬಾಗಿಲಿನ ಹೋರಗೂ ಕೇಳಿಸುವಂತೆ ಗಟ್ಟಿಯಾಗಿ ಅತ್ತಳು.
ಪೋಲೀಸ್ ಖಾತೆಯವನೆಂಬ ಕಾರಣದಿಂದ ಬಹುವಚನದ ಗೌರವ ಆತನಿಗೆ
ರಂಗಮ್ಮನಿಂದ ದೊರೆಯುತ್ತಿತ್ತು.
ಉತ್ತರ ಬಂದೇ ಇದ್ದುದನ್ನು ಕಂಡು ರಂಗಮ್ಮ ಮತ್ತೋಮ್ಮೆ ಕೇಳಿದರು:
"ರಂಗಸ್ವಾಮಿ ಏನಪ್ಪಾ ಅದು?"
ರಂಗಸ್ವಾಮಿ ಬಾಗಿಲು ತೆರೆಯದೆಯೇ ಹೇಳಿದ:
"ನೋಡಿ ರಂಗಮ್ನೋರೆ ಈಕೆ ಮಾಡಿರೋದು. ಇವತ್ತು ರಾತ್ರೆ ಡ್ಯೂಟಿ
ಇದೇಂತ ಆಗ್ಲೇ ಹೇಳಿದ್ದೆ. ಬಂದು ಒಂದು ತುತ್ತು ತಿಂದು ಹೋಗೋಣ ಅಂದರೆ,
ಇಲ್ಲಿ ಬಡಿಸೋವರಿಗೇ ಗತಿ ಇಲ್ಲ. ಸಂಗೀತ ಕೇಳೋಕೆ ಹೋಗಿದಾಳೆ ಈ
ಮಹಾರಾಯ್ತಿ...."
"ಹೋಗಲಿ ಬಿಡಪ್ಪಾ. ಆಷ್ಟಕ್ಕೆಲ್ಲಾ_"
"ನೀವು ಹೋಗಿ ರಾನ್ಗಮ್ನೋರೆ. ಹೊರಗೆ ದುಡಿಯೋ ಗಂಡಸಿನ ಕಷ್ಟ
ಯಾರಿಗೆ ಗೊತ್ತಾಗುತ್ತೆ?"
ಆ ಸಂಭಾಷಣೆ ಕೇಳಿಸುತ್ತಿದ್ದ ಉಪಧ್ಯಾಯರು ಹೆ೦ಡತಿಯತ್ತ ನೋಡಿದರು. ಓದುತ್ತಿದ್ದ ಇಬ್ಬರು ಹುಡುಗರೂ ಪರಸ್ಪರ ಮುಖ ನೋಡಿಕೊ೦ಡರು.ರಾಜಮ್ಮ
ಬಾಗಿಲು ಬಳಿ ನಿ೦ತರು.ಗು೦ಡಣ್ಣ ಬಾಗಿಸಿದ ತಲೆಯನ್ನು ಎತ್ತಲಿಲ್ಲ.
ಒಳಗೆ ನೆಲದ ಮೇಲೆ ಮುದುರಿದ್ದ ಹೆ೦ಗಸು ಎದ್ದು ಕುಳಿತಳು. ಬಾಗಿಲು
ತೆರೆಯಿತು.ಕೈಯಲ್ಲಿ ಪೇಟ ಹಿಡಿದುಕೊ೦ಡು ರ೦ಗಸ್ವಾಮಿ ಹೊರಬ೦ದ. ಕತ್ತಲಲ್ಲಿ
ಆ ಮುಖ ಯಾರಿಗೂ ಕಾಣಿಸಲಿಲ್ಲ.
"ಯಾಕಪ್ಪ ಹೊರಟ್ಬಿಟ್ರಿ?"-
_ಎ೦ದು ರ೦ಗಮ್ಮ ಕೇಳುತ್ತಿದ್ದ೦ತೆಯೇ ಆತ ಅ೦ಗಳ ದಾಟಿ ಬೀದಿಗಿಳಿದ.
ಒಳಗಿನಿ೦ದ ಹೆ೦ಗಸು ಗೋಳಾಡಿದಳು:
"ಊಟ ಮಾಡ್ದೇನೇ ಹೋಗ್ತಿದಾರೆ ರ೦ಗಮ್ನೋರೇ..
"ರಾಜಿ ಮಾಡಿಸಲೆ೦ದು ರ೦ಗಮ್ಮ ಕರೆದರು:
"ರ೦ಗಸ್ವಾವೂ!
ಗ೦ಡಸು ಕೇಳಲೇ ಎಲ್ಲ.' ಡ್ಯೂಟಿ'ಗಾಗಿ ಆತ ಹೊರಟು ಹೋದ.
ರ೦ಗಮ್ಮ ಸ೦ತ್ಯೆಸುವ ನುಡಿಗಳನ್ನಾಡುತ್ತಿದ್ದ೦ತೆಯೇ ಈಗ ರ೦ಗಸ್ವಾಮಿಯ
ಹೆ೦ಡತಿ, ಹೃದಯಪಾಟತ್ರೆಯನ್ನು ಆ ದಿನ ಮಟ್ಟಿಹಗೆ ಬರಿದುಗೋಳಿಸಲೆ೦ದು ತು೦ಬಿದ
ದುಂಖವನ್ನೆಲ್ಲ ಹೋರಕ್ಕೆ ಹರಿಸಿದಳು.
ಜಯರಾಮು ನಿಟ್ಟುಸಿರುಬಿಟ್ಟು ಬೇಸರದ ಧ್ವನಿಯಲ್ಲಿನ ಹೇಳಿದ:
"ನಡೀ ರಾಧಾ, ಮನೆಗೆ ಹೋಗೋಣ."
ಅವರು ಮಹಡಿಯ ಮೆಟ್ಲಲೇರುತ್ತಿದ್ದಂತೆಯೇ,ಶಂಕರನಾರಾಯಣಯ್ಯ
ಮತ್ತು ಚಂದ್ರಶೇಖರಯ್ಯ ಎಬ್ಬರೂ ವಠಾರಕ್ಕೆ ಬಂದರು.ಚಂದ್ರಶೇಖರಯ್ಯನ
ಕೈಯಲ್ಲಿ ಎಂದಿನಂತೆ ಕಡತಗಳಣನ್ನು ಹೊತ್ತ ಚರ್ಮದ ಚೀಲವಿತ್ತು.ಶಂಕರನಾರಾ
ಯಣಯ್ಯನ ಕೈಲೋಂದು ಹಸುರೆಲೆಯ ಪೊಟ್ಟಣವಿತ್ತು-ನಿತ್ಯದಂತೆಯೇ.
"ಬರ್ತೇನಿ ಶಂಕರನಾರಾಯಣಯ್ಯ. ಗುಡ್ ನೈಟ್ಎಂದು ಚಂದ್ರಶೇಖ
ರಯ್ಯನೆಂದ ಶಂಕರನಾರಾಯಣಯ್ಯ ಮಾರುತ್ತರವಿತ್ತ:
"ನಮಸ್ಕಾರ,ನಮಸ್ಕಾರ."
ಮಹಡಿಯನ್ನೇರತೊಡಗಿದ್ದ ಅಣ್ಣ ತಂಗಿಯರನ್ನು ಕಂಡು ಚಂದ್ರಶೇಖರಯ್ಯ
ಸ್ವಲ್ಪ ವೇಗವಾಗಿಯೇ ಹೆಜ್ಜೆ ಹಾಕಿದ. ಜಯರಾಮು ಮಾತನಾಡಿಸಲೇಬೇಕಾಯಿತು.
"ಇವತ್ತು ಬೇಗ್ನೆ ಬಂದ್ಬಿಟ್ಟಿದೀರಾಲ್ಲ ಚಂದ್ರಶೇಖರ್ ರವರೆ?"
"ಕೊನೇ ಮನೆಯವರು ಒಂದೆರಡು ಹಾಡು ಹೇಳಿದ್ರು ಅಣ್ಣ. ಅದನ್ನ
ಕೇಳೋಕೆ ಈಕೆ ಬಂದಿದ್ರು."
"ಗೊತ್ತಾಯ್ತು ಕಣೇ.."
"ಅಯ್ಯೋ ! ಹ್ಯಾಗೆ ಹೊಡೀತಿದಾನೆ ಆತ!"
ಮತ್ತೇ ಹೊಸದಾಗಿ ಹೆಂಗಸಿನ ಧ್ವನಿ ಕೇಳಿಸಿತು:
"ಅಯ್ಯೋ ಹೊಡೀಬೇಡೀಂದ್ರೇ...ದಮ್ಮಯ್ಯ.."
ಜಯರಾಮು ಅವುಡುಕಚ್ಚಿ ಕಂಪಿಸುವ ಧ್ವನಿಯಲ್ಲಿ ಹೇಳಿದ:
"ಪಿಶಾಚಿ!ಬೆಲ್ಟು ಹೊಡೀತಿದಾನೋ ಏನೋ.."
"ಥೂ!ಆತ ತುಂಬಾ ಕೆಟ್ಟೋನು."
"ಹೆಂಡತಿ ಅಂದರೆ ಕಾಲಿನ ಕಸ .ಇದು ಆಕಪ್ಪೂಂತ ತಿಳಕೊಂಡಿದಾನೆ.ಮೈ
ಚರ್ಮ ಸುಲಿಯೋಕೆ ಅಲ್ಲಿ ಯಾರೂ ಇವತ್ತು ಸಿಗಲಿಲ್ವೇನೋ.."
"ಹೋಗಿ ರಂಗಮ್ನೋರನ್ನ ಕರೀಲೇ ಅಣ್ಣ?"
"ಬೇಡ ರಾಧಾ.ಇನ್ನೇನು ಅವರೇ ಬಂದ್ಬಿಡ್ತಾರೆ."
ಜಯರಾಮು ರಂಗಮ್ಮನವರ ನಡೆ ನುಡಿಯನ್ನು ಚೆನ್ನಾಗಿ ಅಭ್ಯಾಸ ಮಾಡಿದ್ದ.
ವಠಾರದಲ್ಲಿ ಜಗಳ ಆರಂಭವಾದರೆ ಆಕ್ಷಣವೇ ಅವರು ಬರುತ್ತಿರಲಿಲ್ಲ.ಪರಿಸ್ಥಿತಿ
ತೀಕ್ಷ್ಣತೆಯ ಘಟ್ಟವನ್ನು ದಾಟಿ ಇಳಿಮುಖವಾದಾಗ ರಂಗಮ್ಮ ಬಂದು ಸ್ವರವೇರಿಸಿ
ಮಾತನಾಡಿತ್ತಿದ್ದರು:
"ಏನದು ಗಲಾಟೆ? ಈ ವಠಾರ ಕುಡುಕರ ಕೇರಿ ಕೆಟ್ಹೋಯ್ತೆ!"
ಆಗಾಗ್ಗೆ ದೇಹದ ಉಗಿ ಹೊರಹೋಗಲು ಅವಕಾಶ ಕೊಡುವುದು ಅಗತ್ಯ
ಎಂಬುದು ಅವರ ಅಭಿಪ್ರಾಯವಾಗಿತ್ತು.
ಈ ದಿನವೂ ಅವರು ಬಂದು ಪೋಲೀಸನ ಮನೆ ಬಾಗಿಲಲ್ಲಿ ನಿಂತರು:
"ರಂಗಸ್ವಾಮಿ! ರಂಗಸ್ವಾಮಿ! ಏನ್ರೀ ಅದು?"
ಒಂದು ಕ್ಷಣ ಮೌನ.ಆ ಬಳಿಕ,ತನಗೆ ಸಹಾನುಭೂತಿ ತೋರುವವರು ಬಂದ
ರೆಂದು ,ಹೆಂಗಸು ಬಾಗಿಲಿನ ಹೊರಗೂ ಕೇಳಿಸುವಂತೆ ಗಟ್ಟಿಯಾಗಿ ಅತ್ತಳು .
ಪೋಲೀಸ್ ಖಾತೆಯವನೆಂಬ ಕಾರಣದಿಂದ ಬಹುವಚನದ ಗೌರವ ಆತನಿಗೆ
ರಂಗಮ್ಮನಿಂದ ದೊರೆಯುತ್ತಿತ್ತು.
ಉತ್ತರ ಬರದೇ ಇದ್ದುದನ್ನು ಕಂಡು ರಂಗಮ್ಮ ಮತ್ತೊಮ್ಮೆ ಕೇಳಿದರು :
"ರಂಗಸ್ವಾಮೀ, ಏನಪ್ಪಾ ಅದು?"
ರಂಗಸ್ವಾಮಿ ಬಾಗಿಲು ತೆರೆಯದೆಯೇ ಹೇಳಿದ :
"ನೋಡಿ ರಂಗಮ್ನೋರೆ ಈಕೆ ಮಾಡ್ತಿರೋದು.ಇವತ್ತು ರಾತ್ರಿ ಡ್ಯೂಟಿ
ಇದೇಂತ ಆಗ್ಲೇ ಹೇಳಿದ್ದೆ.ಬಂದು ಒಂದು ತುತ್ತು ತಿಂದು ಹೋಗೋಣ ಅಂದರೆ,
ಇಲ್ಲಿ ಬಡಿಸೋವರಿಗೇ ಗತಿ ಇಲ್ಲ.ಸಂಗೀತ ಕೇಳೋಕೆ ಹೋಗಿದಾಳೆ ಈ
ಮಹಾರಾಯ್ತಿ.."
"ಹೋಗಲಿ ಬಿಡಪ್ಪಾ.ಅಷ್ಟಕ್ಕೆಲ್ಲಾ -"
"ನೀವು ಹೋಗಿ ರಂಗಮ್ನೋರೇ. ಹೊರಗೆ ದುಡಿಯೋ ಗಂಡಸಿನ ಕಷ್ಟ
ಯಾರಿಗೆ ಗೊತ್ತಾಗುತ್ತೆ?"
ಆ ಸಂಭಾಷಣೆ ಕೇಳಿಸುತ್ತಿದ್ದ ಉಪಾಧ್ಯಾಯರು ಹೆಂಡತಿಯತ್ತ ನೋಡಿದರು.
ಓದುತ್ತಿದ್ದ ಇಬ್ಬರು ಹುಡುಗರೂ ಪರಸ್ಪರ ಮುಖ ನೋಡಿಕೊಂಡರು. ರಾಜಮ್ಮ
ಬಾಗಿಲ ಬಳಿ ನಿಂತರು.ಗುಂಡಣ್ಣ ಬಾಗಿಸಿದ ತಲೆಯನ್ನು ಎತ್ತಲಿಲ್ಲ.
ಒಳಗೆ ನೆಲದ ಮೇಲೆ ಮುದುರಿದ್ದ ಹೆಂಗಸು ಎದ್ದು ಕುಳಿತಳು .ಬಾಗಿಲು ತೆ
ರೆಯಿತು.ಕೈಯಲ್ಲಿ ಹಿಡಿದುಕೊಂಡು ರಂಗಸ್ವಾಮಿ ಹೊರಬಂದ.ಕತ್ತಲಲ್ಲಿ
ಆ ಮುಖ ಯಾರಿಗೂ ಕಾಣಿಸಲಿಲ್ಲ.
"ಯಾಕಪ್ಪಾ ಹೊರಟ್ಬಿಟ್ರಿ?"
-ಎಂದು ರಂಗಮ್ಮ ಕೇಳುತ್ತಿದ್ದಂತೆಯೇ ಆತ ಅಂಗಳ ದಾಟಿ ಬೀದಿಗಿಳಿದ.
ಒಳಗಿನಿಂದ ಹೆಂಗಸು ಗೋಳಾಡಿದಳು:
"ಊಟ ಮಾಡ್ದೇನೇ ಹೋಗ್ತಿದಾರೆ ರಂಗಮ್ನೋರೇ..."
ರಾಜಿ ಮಾಡಿಸಲೆಂದು ರಂಗಮ್ಮ ಕರೆದರು:
"ರಂಗಸ್ವಾಮಿ!"
ಗಂಡಸು ಕೇಳಲೇ ಇಲ್ಲ.'ಡ್ಯೂಟಿ'ಗಾಗಿ ಆತ ಹೊರಟು ಹೋದ.
ರಂಗಮ್ಮ ಸಂತೈಸುವ ನುಡಿಗಳನ್ನಾಡಿತ್ತಿದ್ದಂತೆಯೇ ಈಗ ರಂಗಸ್ವಾಮಿಯ
ಹೆಂಡತಿ,ಹೃದಯಪಾತ್ರೆಯನ್ನು ಆ ದಿನದ ಮಟ್ಟಿಗೆ ಬರಿದುಗೊಳಿಸಲೆಂದು ತುಂಬಿದ
ದುಃಖವನ್ನೆಲ್ಲ ಹೊರಕ್ಕೆ ಹರಿಸಿದಳು.
ಜಯರಾಮು ನಿಟ್ಟುಸಿರು ಬಿಟ್ಟು ಬೇಸರದ ಧ್ವನಿಯಲ್ಲಿ ಹೇಳಿದ:
"ನಡೀ ರಾಧಾ,ಮನೆಗೆ ಹೋಗೋಣ."
ಅವರು ಮಹಡಿಯ ಮೆಟ್ಟಿಲೇರುತ್ತಿದ್ದಂತೆಯೇ,ಶಂಕರನಾರಾಯಣಯ್ಯ
ಮತ್ತು ಚಂದ್ರಶೇಖರಯ್ಯ ಇಬ್ಬರೂ ವಠಾರಕ್ಕೆ ಬಂದರು.ಚಂದ್ರಶೇಖರಯ್ಯನ
ಕೈಯಲ್ಲಿ ಎಂದಿನಂತೆ ಕಡತಗಳನ್ನು ಹೊತ್ತ ಚರ್ಮದ ಚೀಲವಿತ್ತು.ಶಂಕರನಾರಾ
ಯಣಯ್ಯನ ಕೈಯಲ್ಲೊಂದು ಹಸುರೆಲೆಯ ಪೊಟ್ಟಣವಿತ್ತು-ನಿತ್ಯದಂತೆಯೇ.
"ಬರ್ತೀನಿ ಶಂಕರನಾರಾಯಣಯ್ಯ.ಗುಡ್ ನೈಟ್,"ಎಂದು ಚಂದ್ರಶೇಖ
ರಯ್ಯನೆಂದ.ಶಂಕರನಾರಾಯಣಯ್ಯ ಮಾರುತ್ತರವಿತ್ತ:
"ನಮಸ್ಕಾರ,ನಮಸ್ಕಾರ."
ಮಹಡಿಯನ್ನೇರತೊಡಗಿದ್ದ ಅಣ್ಣ ತಂಗಿಯರನ್ನು ಕಂಡು ಚಂದ್ರಶೇಖರಯ್ಯ
ಸ್ವಲ್ಪ ವೇಗವಾಗಿಯೇ ಹೆಜ್ಜೆ ಹಾಕಿದ.ಜಯರಾಮು ಮಾತನಾಡಿಸಲೇಬೇಕಾಯಿತು.

"ಇವತ್ತು ಬೇಗ್ನೆ ಬಂದ್ಬಿಟ್ಟಿದೀರಲ್ಲ ಚಂದ್ರಶೇಖರ್ರವರೆ?"
"ಬಂದ್ಬಿಟ್ಟೆ ಜಯರಾಂ."
"ಹೊಸ ಬಿಡಾರದವರ ಪರಿಚಯ ಮಾಡ್ಕೊಂಡ ಹಾಗಿದೆ."
"ಅಯ್ಯೋ ಅದೊಂದು ದುರಭ್ಯಾಸ."
ಮುಂದಿದ್ದ ರಾಧಾ ಮನೆಯತ್ತ ಸಾಗುತ್ತ ಹಿಂದಿರುಗಿ ನೋಡಿದಳು. ಕತ್ತಲು.
ಚಂದ್ರಶೇಖರಯ್ಯನ ಮುಖ ಸ್ಫಷ್ಟವಾಗಿ ಕಾಣಿಸಲಿಲ್ಲ. ಆದರೆ ಆ ಕಣ್ಣುಗಳೆರಡು
ತನ್ನನ್ನೇ ದಿಟ್ಟಿಸುತ್ತಿದ್ದಂತೆ ರಾಧೆಗೆ ಭಾಸವಾಗಿ, ಮುಖದಲ್ಲಿ ರಕ್ತ ಸಂಚಾರ ತೀವ್ರ
ವಾಯಿತು.
ಚಂದ್ರಶೇಖರಯ್ಯ ತನ್ನ ಬಾಗಿಲಿನ ಬೀಗಕ್ಕೆ ಕೀಲಿಕೈ ತಿರುವುತ್ತಿದ್ದಂತೆ ಜಯ
ರಾಮು ತಡೆದು ನಿಂತು ಕೇಳಿದ:
"ನಾಲ್ಕೈದು ದಿವಸದಿಂದ ನೀವು ಊರಿನಲ್ಲಿರ್ಲಿಲ್ಲಾಂತ ತೋರುತ್ತೆ."
"ಅಯ್ಯೊ, ಇಲ್ಲೇ ಇದೀನಿ ಒಂದು ವಾರದಿಂದ."
"ನಿಜವೆ!....."
"ಯಾಕೋ ಬರಬರುತ್ತಾ ಬೆಂಗಳೂರು ಬೊಂಬಾಯಿ ಆಗ್ತಿದೆ. ಪಕ್ಕದ್ಮನೇಲಿ
ಯಾರಿದಾರೆ ಅನ್ನೋದೇ ಗೊತ್ತಾಗ್ತಾ ಇಲ್ಲ...." ಎಂದು ಚಂದ್ರಶೇಖರಯ್ಯ ನಕ್ಕು
ಬಿಟ್ಟ. ಜಯರಾಮುವೂ ನಕ್ಕು, ತನ್ನ ಮನೆಯತ್ತ ಸಾಗಿದ. ಬೊಂಬಾಯಿಯೊಡನೆ
ಹೋಲಿಕೆ. ಜಯರಾಮು ಆ ದೊಡ್ಡ ಊರನ್ನು ಕಂಡಿರಲಿಲ್ಲ. ಚಂದ್ರಶೇಖರಯ್ಯನೋ
ಲೋಕಾನುಭವಿ. ಪಕ್ಕದ ಮನೆಯಲ್ಲಿ ಯಾರಿರುವರೆಂಬುದನ್ನೂ ತಿಳಿಯಲು ಬಯಸದೆ,
ಅಥವಾ ತಿಳಿಯಲಾಗದೆ, ಜನ ಆ ದೊಡ್ಡ ನಗರದಲ್ಲಿ ಜೀವಿಸುವುದನ್ನು ಜಯರಾಮು
ಚಿತ್ರಿಸಿಕೊಂಡ.
ಆತನ ತಾಯಿ ಪಿಸು ಧ್ವನಿಯಲ್ಲಿ ಕೇಳಿದರು:
"ಏನಂದ್ನೊ?"
"ಯಾರು?"
"ಶ್! ಪಕ್ಕದ್ಮನೆಯಾತ."
"ಏನೂ ಇಲ್ಲ!"
ತಾಯಿಯ ಪಿಸುಮಾತಿನಿಂದ ಜಯರಾಮುಗೆ ಆಶ್ಚರ್ಯವಾಯಿತು.ಮಗನ
ಉತ್ತರದಿಂದ ತಾಯಿಗೆ ನಿರಾಶೆಯಾಯಿತು."ಅಪ್ಪ ಬಂದಿಲ್ವಾ ಇನ್ನೂ?"ಎನ್ನುತ್ತ,
ಕಿಟಕಿಯಿಂದ ಹೊರಗಿಣಿಕಿ ಬೀದಿಯತ್ತ ನೋಡುತ್ತಿದ್ದ ತಂಗಿಯನ್ನು ದಿಟ್ಟಿಸಿದ ಜಯ
ರಾಮು, ಏನೋ ಹೊಳೆದವನಂತೆ ತಾಯಿಯತ್ತ ನೋಡಿದ. 'ಓ' ಎನ್ನುವಂತೆ
ಆತನ ಹುಬ್ಬುಗಳು ಮೇಲಕ್ಕೆ ಚಲಿಸಿದುವು. ಮರುಕ್ಷಣವೆ ಯೋಚನೆಯ ಮೋಡ
ಕವಿದು ಮುಖ ಬಾಡಿತು.
ಆಣ್ಣ-ತಾಯಿ ಇಬ್ಬರೊಡನೆಯೂ ರಾಧಾ ಅಂದಳು:
"ಆ ಕೊನೇ ಮನೆಯಾಕೆ ಚಂಪಾ ಎಷ್ಟು ಚೆನ್ನಾಗಿ ಹಾಡ್ತಾಳೇಂತ!ವ‌‍‍‍ಠಾರ
ದೋರೆಲ್ಲ ಜಮೆಯಾಗ್ಬಿ‌‌‍‍‍‍‌‌‌‍ಟ್ಟಿದ್ರು."
"ಕೆಳಗೇನೋ ಗಲಾಟೆಯಾಗ್ತಿತ್ತಲ್ಲೋ. ಮೆಲಕ್ಬನ್ನೀಂತ ನಿಮ್ಮಿಬ್ರನ್ನೂ ಕೂಗ್ದೆ
-ನಿಮಗೆ ಕೇಳಿಸ್ಲೇ ಇಲ್ಲ."
ತಾಯಿ ಮಾತು ಮುಗಿಸುತ್ತಲೆ ಜಯರಾಮುವೆಂದ:
"ಕೊನೇ ಮನೆಯೋರು ಹಾಡ್ತಿದ್ರು. ಅದನ್ನ ಕೇಳೋಕೆ ಹೋದ್ರೊಂತ
ತನ್ನ ಹೆಂಡತಿಗೆ ಪೋಲೀಸ್ ಸಾಹೇಬರು ಚೆನ್ನಾಗಿ ಶಿಕ್ಷೆ ಕೊಟ್ರು."
"ಅವನೊಬ್ಬ__"
ಏನೋ ಹೇಳಬೇಕೆಂದಿದ್ದರು ತಾಯಿ. ಆದರೆ ಮಾತು ಅಲ್ಲಿಗೆ ನಿಂತಿತು.......
ಕೆಳಗೆ ರಂಗಮ್ಮ ತಮ್ಮನ್ನು ಹಾದು ಮುಂದೆ ಹೋಗುತ್ತಿದ್ದ ಶಂಕರನಾರಾಯ
ಣಯ್ಯನನ್ನು ಕಂಡರು.
"ಈಗ ಬಂದಿರೇನಪ್ಪ?"
"ಹೂಂ ರಂಗಮ್ನೋರೆ."
ಮಾತು ಬೆಳೆಸಲು ಇಷ್ಟವಿಲ್ಲದೆ ಶಂಕರನಾರಾಯಣಯ್ಯ ಅಷ್ಟು ಹೇಳಿ ನೇರವಾಗಿ
ತನ್ನ ಬಾಗಿಲಿನತ್ತ ನಡೆದ. ಆದರೆ ರಂಗಸ್ವಾಮಿಯ ಹೆಂಡತಿ ಹಣೆಯ ಮೇಲೆ
ಕೈಯಿಟ್ಟು ಅಳುತ್ತಿದ್ದ ದೃಶ್ಯ ತೆರೆದ ಬಾಗಿಲಿನ ಎಡೆಯಿಂದ ಅತನಿಗೆ ಕಾಣಿಸದಿರಲಿಲ್ಲ.
ರಂಗಮ್ಮ ಅಳುತ್ತಿದ್ದಾಕೆಯನ್ನು ಸಂತೈಸಲು ಯತ್ನಿಸಿದರು.
"ಏಳಮ್ಮ ನೀನು. ಮಕ್ಕಳಿಗೆ ಬಡಿಸು.ನೀನೂ ಊಟ ಮಾಡಿ ನಿದ್ದೆ ಹೋಗು.
ಆತನೇನೊ ಇನ್ನು ಬರೋದಿಲ್ಲ. ಹೂಂ. ಏಳು ಏಳು!"
ಇಷ್ಟು ಹೇಳಿ ಅವರು ಅಸ್ಪಷ್ಟವಾಗಿ ಏನನ್ನೋ ಹೇಳುತ್ತ ತಮ್ಮ ಗೂಡನ್ನು
ಸೇರಿದರು.
.....ಒಳಗಿನಿಂದ ಆಗಣಿ ಹಾಕಿತ್ತು.
"ಬಾಗಿಲು!" ಎಂದು ಒರಟು ಒರಟಾಗಿ ಎಂದೂ ಕೂಗಿದವನಲ್ಲ ಶಂಕರ
ನಾರಾಯಣಯ್ಯ. ಬಾಗಿಲು ಮುಚ್ಚಿದಾಗ ಹೊರಗೆ ನಿಂತು, ಪ್ರೀತಿಯೇ ಮಾತಾಯಿ
ತೇನೋ ಎಂಬಂತೆ ಕರೆಯುತ್ತಿದ್ದ:
"ಚಂಪಾ!"
ಆ ಸ್ವರ ಕೇಳಿಸಿದ ಮನೆ ಹೆಂಗಸರಿಗೆಲ್ಲಾ ಕಸಿವಿಸಿಯಾಗುತ್ತಿತ್ತು. ಚಂಪಾವತಿ
ಭಾಗ್ಯವಂತೆ ಎಂದುಕೊಳ್ಳುತ್ತಿದ್ದರು:
ಆ ಭಾಗ್ಯವಂತೆಯೊ ಗಂಡ ತನ್ನ ಹೆಸರು ಹಿಡಿದು ಕರೆಯುವಂತೆ ಮಾಡ
ಬೇಕೆಂದೇ, ಕತ್ತಲಾಗುತ್ತಲೇ ಬಾಗಿಲು ಹಾಕುತ್ತಿದ್ದಳು. ಅಷ್ಟೇ ಅಲ್ಲ ಎರಡನೇ ಬಾರಿ
ಆತ ಕರೆಯಲೆಂದೇ,ಮೊದಲ ಸಲಕ್ಕೇ ಬಾಗಿಲು ತೆರೆಯುತ್ತಿರಲಿಲ್ಲ.
ಹೆಂಡತಿಯ ಈ ಹಂಚಿಕೆಯೊಂದೂ ತಿಳಿಯದ ಮುಗ್ಧನಾಗಿರಲಿಲ್ಲ ಶಂಕರ
ನಾರಾಯಣಯ್ಯ. ಆತನಿಗೂ ಈ ಬಗೆ ಇಷ್ಟವೇ.

"ಚಂಪಾ.."
ಮತ್ತಷ್ಟು ಮೃದುವಾದ, ಸ್ವಲ್ಪ ದೀರ್ಘವಾದ ಎರಡನೆಯ ಕರೆ.
ಮೊದಲ ಸಲ ಕರೆದಾಗಲೇ ಬಂದು ಬಾಗಿಲ ಹಿಂದೆಯೇ ನಿಂತಿದ್ದ ಚಂಪಾವತಿ
ಚಿಲಕ ತೆಗೆದು ಬಾಗಿಲು ತೆರೆದಳು. ಮೀನು ನೀರೊಳಕ್ಕೆ ನುಸುಳಿದ ಹಾಗೆ ಸದ್ದಿಲ್ಲದೆ,
ಆತ ಮನೆಯೊಳಕ್ಕೆ ಬಂದ. ನಿರೀಕ್ಷೆಯ ಮುಗುಳುನಗೆ ಆಕೆಯ ತುಟಿಗಳ ಮೇಲೆ
ಮೂಡಿ ಅರಳುತ್ತಿತ್ತು. ಆತ ಕಣ್ಣೆವೆ ಮುಚ್ಚಿ ತೆರೆಯುವದರೊಳಗೆ ಕದವನ್ನು
ಹಿಂದಕ್ಕೆ ತಳ್ಳಿ ಅಗಣಿ ಹಾಕಿದ;ಕೈಯಲ್ಲಿದ್ದ ಪೊಟ್ಟಣವನ್ನು ನೆಲದ ಮೇಲಿರಿಸಿದ; ಓಡಿ
ಹೋಗುವವಳಂತೆ ನಟಿಸುತ್ತಿದ್ದ ಚಂಪಾವತಿಯನ್ನು ಎರಡೂ ಬಾಹುಗಳಿಂದ ಸುತ್ತು
ವರಿದ. ಆತನ ದೃಷ್ಟಿ ಅರಳುತ್ತಲಿದ್ದ ಆ ತುಟಿಗಳ ಸೊಬಗಿನ ಮೇಲೆಯೇ ನೆಟ್ಟಿತು.
ಆಕೆಯ ಅರೆಮುಚ್ಚಿದ ಕಣ‍್ಣುಗಳು ಯಾವುದೋ ಸುಖಕ್ಕಾಗಿ ತುಟಿಗಳೊಡನೆ ಸ್ಪರ್ಧಿ
ಸಿದುವು. ಆತ ಬೆಳಕಿನೆದುರಲ್ಲಿ ಏನೂ ಕಾಣಿಸಬಾರದೆಂದು ಕಣ‍್ಣು ಮುಚ್ಚಿಯೇ ಕೊಟ್ಟ.
ಒಂದು, ಎರಡು, ಮೂರು...ನಾಲ್ಕು....
ಕಂಠದಿಂದ ಕುಲು ಕುಲು ಧ್ವನಿ ಹೊರಡಿಸುತ್ತ ಆಕೆಯೆಂದಳು:
"ಸುಸ್ತು, ಹೆಚ್ಚಾಯ್ತು ಇವತ್ತು!"
ಇಬ್ಬರೂ ತಮ್ಮನ್ನೇ ನೋಡುತ್ತಿದ್ದ ಮಗುವನ್ನು ಕಂಡರು, ಅಪ್ಪ ಅಮ್ಮ
ಅದೇನೋ ಮಾಡುತ್ತಿದ್ದುದನ್ನು ಆ ಮಗು ನೋಡಿ ನಕ್ಕಿತು.
ಹುಸಿಮುನಿಸಿನ ಧ್ವನಿಯಲ್ಲಿ ಚಂಪಾ ಅಂದಳು:
"ನೋಡಿ...ಮಗು...ನಾಚಿಕೇನೂ ಇಲ್ಲ ನಿಮಗೆ."
"ಹೋಗಲಿ ಬಿಡು. ತನ್ನ ತಾಯಿ ಎಂಥವಳೂಂತ ಈಗಿನಿಂದ್ಲೇ ಗೊತ್ತಾಗಲಿ
ಅದಕ್ಕೆ!"
"ಊಂ...ಆಗ್ಲೇ ಬಂದಿದ್ರಂತೆ. ಎಲ್ಲಿಗೆ ಹೋಗಿದ್ರಿ?"
"ಜನಾನಾ ಕಚೇರಿ ನಡೀತಾ ಇತ್ತು ಇಲ್ಲಿ. ಹೊರಟ್ಹೋ
"ಸಾಕು ತಮಾಷೆ."
"ಭರ್ಜರಿಯಾಗಿತ್ತೊ?"
"ಹೂಂ ಎಲ್ಲರಿಗೂ ಖುಶಿಯಾಯ್ತು."
"ಸರಿ ಇನ್ನು. ಹಾಡು ಹೇಳಿಯೇ ನೀರು ಬರಿಸು, ದೀಪ ತರಿಸು_ಅಂತಾರೆ
ನೋಡು!"
"ರಂಗಮ್ನೋರು ಬಂದಿದ್ರು."
"ಓ! ಅವರೆದುರು ಓ ಮೋರೆ ರಾಜಾಂತ ಹಾಡಿದ್ಯೇನು?"
"ಉಂಟೆ ಎಲ್ಲಾದರೂ? ಕಾಲಹರಣ ಮೇಲರಾ ಹರೇ ಹಾಡ್ಪೆ."
"ಭೇಷ್."
"ಅವರು ಹೋದ್ಮೇಲೆ__"
"ಗೊತ್ತು ಬಿಡು. ಹಾ ಪ್ರಿಯಾ ಪ್ರಶಾಂತ ಹೃದಯಾ ಹಾನಿ_"
"ಥೂ_ಥೂ...ಮೈಸೂರು ಮಲ್ಲಿಗೇದು ಹಾಡ್ದೆ."
"ಬೇರೆ ಗವಾಯಿಗಳೂ ಇದ್ರೋ?"
"ಇಲ್ದೆ ಇರ್ತಾರ್ಯೆ? ಆದರೆ ಕೊನೇಲಿ_"
"ಏನಾಯ್ತು?"
"ಹಾಡು ಕೇಳೋಕೆ ಬಂದಿದ್ಲೂಂತ ಮೊದಲ್ನೇ ಮನೆ ಯಜಮಾನ ಹೆಂಡತಿಗೆ
ಹೊಡೆದ್ನಂತೆ."
ಬರುತ್ತ ತಾನು ಕಂಡ ದೃಶ್ಯ......ಶಂಕರನಾರಾಯಣಯ್ಯನಿಗೆ ಸ್ಪಷ್ಟವಾಯಿತು
ಈಗ.
"ಅವನಾ_ ಪೋಲಿಸ್ನೋನು! ಅವನ ಪಿಂಡ."
ಪೊಟ್ಟಣವನ್ನು ಬಿಚ್ಚಿ ಚಂಪಾ ಹೂವಿನ ಸುವಾಸನೆಯನ್ನು ಒಳಕ್ಕೆಳೆದು ಶ್ವಾಸ
ಕೋಶಗಳನ್ನು ತುಂಬಿಕೊಂಡಳು. ಆ ಕ್ಷಣ ಮತ್ತೊಮ್ಮೆ ಗಂಡನ ಎದೆಯಲ್ಲಿ ಒರಗುವ
ಮನಸ್ಸಾಯಿತು. ಆದರೆ ಆಗಲೆ ಅತಿಯಾಗಬಾರದೆಂದು ಆಕೆ ಮನಸ್ಸನ್ನು ಬಿಗಿಹಿಡಿದು
ಅಡುಗೆ ಮನೆಯತ್ತ ಹೋದಳು.
"ಆ ದೀಪಾನ ಇನ್ನೂ ಸ್ವಲ್ಪ ಈಚೆಗೆ ತರಬೇಕೂಂದ್ರೆ."
ಆತ ಬಟ್ವೆ ಬದಲಾಯಿಸಿ, ಬಲ್ಬಿನ ಮೇಲುಗಡೆ ಒಂದು ದಾರವನ್ನು ಕಟ್ಟಿ
ಅಡುಗೆ ಮನೆಯ ಛಾವಣಿಯತ್ತ ಎಳೆದು ಬಿಗಿದ. ನಡುವಿನ ಗೋಡೆಗೆ ನೇರವಾಗಿ
ದೀಪ ಬಂದು, ಎರಡೂ ಕಡೆ ಒಂದೇ ಸಮನೆ ಬೆಳಕು ಬಿತ್ತು.
"ಸಾಕೇನೆ?"
"ಹೂಂ. ಸಾಕು. ಸರಿಯಾಗಿದೆ."
ತನ್ನ ಬಡಕಲು ಕುರ್ಚಿಯ ಮೇಲೆ ನಿಂತಿದ್ದ ಶಂಕರನಾರಾಯಣಯ್ಯ ಕೆಳಕ್ಕೆ
ಧುಮುಕುತ್ತ ಹೇಳಿದ:
"ಈಗ ಅಡ್ಡಗೋಡೆ ಮೇಲೆ ಇಟ್ಟ ಹಾಗಾಯ್ತು."
ಚಂಪಾ ನಕ್ಕಳು.
ಆ ದಿನ ತಾನು ಮಾಡಿದ ಕೆಲಸ; ನಡೆದ ಮಾತುಕತೆ; ಹಳೆಯ ಸ್ನೇಹಿತ
ನೊಬ್ಬನ ಸಂದರ್ಶನ; ಹಿಂದೆ ವಾಸವಾಗಿದ್ದ ಮನೆಯ ಪ್ರದೇಶದ ಪರಿಚಿತರೊಬ್ಬರು
ಭೇಟಿಯಾದದ್ದು....ಚಂದ್ರಶೇಖರಯ್ಯನ ಜತೆಯಲ್ಲಿ ಕಾಫಿ ಕುಡಿದದ್ದು....
ಪ್ರತಿಯೊಂದರ ವರದಿಯನ್ನೂ ಆತ ಹೆಂಡತಿಗೆ ಒಪ್ಪಿಸಿದ. ಆಕೆ ಹೂಂಗುಟ್ಟುತ್ತಾ
ಅಡುಗೆ ಮಾಡಿದಳು. ಅನ್ನ ಬೆಂದಿತು. ತಿಳಿಸಾರು ಸಿದ್ಧವಾಯಿತು.
ಚಂಪಾ ಹಾಸಿಗೆ ಹಾಸಿದಳು. ತನ್ನ ತೊಡೆಯ ಮೇಲೆಯೇ ನಿದ್ದೆ ಹೋಗಿದ್ದ
ಮಗುವನ್ನು ಶಂಕರನಾರಾಯಣಯ್ಯ ಹಾಸಿಗೆಯ ಮೇಲೆ ಮಲಗಿಸಿದ.
ಗಂಡ ಹೆಂಡತಿ ಇಬ್ಬರೂ ಊಟಕ್ಕೆ ಕುಳಿತು ಒಬ್ಬರಿಗೊಬ್ಬರು ಬಡಿಸುತ್ತ
ಉಂಡರು.
ಊಟ ಮುಗಿದು ಅವರು,ಸುವಾಸಿತ ಅಡಿಗೆ ಪುಡಿ ಬಾಯಿಗೆ ಹಾಕಿಕೊಂಡರು.
ಶಂಕರನಾರಾಯಣಯ್ಯ ಸಿಗರೇಟು ಹಚ್ಚಿದ.
ಅಷ್ಟರಲ್ಲಿ ಓಣಿಯಿಂದ ರಂಗಮ್ಮನ ಸ್ವರ ಕೇಳಿಸಿತು.
"ಆಗ್ತಾ ಬಂತೇನ್ರೇ?ಇನ್ನು ಹತ್ನಿಮಿಷ.ದೀಪ ಆರಿಸ್ತೀನಿ".
ದಂಪತಿ ಮಲಗಿಕೊಂಡು ಆ ವಿಷಯ ಈ ವಿಷಯ ಮಾತನಾಡಿದರು. ಅಷ್ಟ
ರಲ್ಲೇ ದೀಪ ಆರಿತು.ಹೊರಳಿ,ಪರಸ್ಪರ ಮುಖಗಳನ್ನು ಸಮೀಪಕ್ಕೆ ತಂದರು.
ಪಿಸುಮಾತಿನ ಸಂಭಾಷಣೆ ಮತ್ತೂ ನಡೆಯಿತು.
"ಎದುರು ಸಾಲ್ನಲ್ಲಿ ಎರಡ್ನೇ ಮನೆ ಇಲ್ವಾ-ಅಲ್ಲಿಯ ಹುಡುಗಿ ಅಹಲ್ಯಾ-"
"ಹೂಂ.ಏನು?"
"ಎಷ್ಟು ಚೆನ್ನಾಗಿ ಹಾಡ್ತಾಳೇಂತ.ಇವತ್ತೊಂದು ಹೊಸ ಹಾಡು ಹಾಡಿದ್ಲು.
ತುಂಬಾ ಸೊಗಸಾಗಿತ್ತು."
"ಯಾವುದು- ಅಂದು ತೋರ್ಸು."
"ಇನ್ನೂ ಬರ್ಕೊಂಡಿಲ್ಲಾಂದ್ರೆ."
"ಗೊತ್ತಮ್ಮಾ.ಮೊದಲ್ನೇ ಸಾಲು ಹೇಳು,ಸಾಕು.ಯಾವ ಹಾಡೂಂತ
ನೋಡ್ತೀನಿ."
ಮಲಗಿದ್ದಲ್ಲಿಂದಲೇ ಪಿಸುದನಿಯಲ್ಲೇ ಮೊದಲ ಸಾಲನ್ನು ಚಂಪಾ ಅಂದಳು:
"ಒಳಗೆ ಬಾ ಯಾತ್ರಿಕನೆ ಶಿಲೆಯಲ್ಲವೀ ಗುಡಿಯು
ಕಲೆಯ ಬಲೆಯು........"
ಶಂಕರನಾರಾಯಣಯ್ಯ ಸುಮ್ಮನಿದ್ದ.ಚಂಪಾ ಕೇಳಿದಳು:
"ಹ್ಯಾಗಿದೆ?ಚೆನ್ನಾಗಿಲ್ವಾ?" "ಚೆನ್ನಾಗಿದೆ.ನಾನು ಕೇಳೇ ಇರ್ಲಿಲ್ಲ ಈವರೆಗೂ."
"ನಾಳೆ ದಿವಸ ಪೂರ್ತಿ ಹಾಡ್ತೀನಿ."
"ಚಂಪಾ!"
ಎಷ್ಟೊಂದು ವೈವಿಧ್ಯಪೂರ್ಣವಾಗಿ ಆ ಹೆಸರನ್ನು ಆತ ಉಚ್ಚರಿಸುತ್ತಿದ್ದ!
ಒಂದೊಂದು ಸ್ವರಕ್ಕೂ ಒಂದೊಂದು ಅರ್ಥ.ಈ ಸಲ ಕರೆದ ಧ್ವನಿಯ ಅರ್ಥವೇ
ನೆಂಬುದು ಅವಳಿಗೆ ಗೊತ್ತಿತ್ತು.ಆಕೆ ಮಾತನಾಡಲಿಲ್ಲ.ರಾಗವೆಳೆದಳು:
"ಊ..."
"ನಾನು ಯಾತ್ರಿಕ.ನೀನು ಕಲೆಯ ಬಲೆ."
"ಊ..."

ರಾಗವೆಳೆಯುತ್ತಲೇ ಚಂಪಾವತಿ ತನ್ನೊಂದು ತೋಳಿನಿಂದ ಆತನ ಕತ್ತನ್ನು

ರಂಗಮ್ಮನ ವಠಾರ

113

ಬಳಸಿಕೊಂಡಳು
.....ಬಲಪಾರ್ಶ್ವದ ಮನೆಯಲ್ಲಿ ಪದ್ಮಾವತಿ ಚಪಡಿಸುತ್ತಿದ್ದಳು, ನಿದ್ದೆ
ಬಾರದೆ. ಗಂಡ ನಾಗರಾಜರಾಯ ಗೊರಕೆ ಹೊಡೆಯುತ್ತಿದ್ದ.ಮಕ್ಕಳು ಎಂದೋ
ಮಲಗಿದ್ದೂವು. ಆ ಸಂಜೆ ಚಂಪಾವತಿಯ ಹಾಡುಗಳನ್ನು ಕೇಳಿದಾಗಿನಿಂದ ಆಕೆಯ
ಮನಸ್ಸು ಅಲ್ಲೋಲಕಲ್ಲೋಲವಾಗಿತ್ತು. ಮದುವೆಯ ಮೊದಲಿನ ಅನಂತರದ ದಿನ
ಗಳೆಲ್ಲ ನೆನಪಿಗೆ ಬಂದುವು. ಸವಿಯಾದುದು ಎಷ್ಟೊಂದು ಅಲ್ಪವಾಗಿತ್ತು ಅದರಲ್ಲಿ!
ಪದ್ಮಾವತಿ ಬುದ್ಧಿವಂತೆ. ನಾರಾಯಣಿ ಇದ್ದ ಮನೆಗೆ ಬಿಡಾರ ಬಂದವರು ಶ್ರೀಮಂತ
ರಲ್ಲವೆಂಬುದನ್ನು ಆಕೆ ಸುಲಭವಾಗಿ ತಿಳಿದುಕೊಂಡಿದ್ದಳು. ಆದರೂ ಎಷ್ಟೊಂದು
ಅನ್ಯೋನ್ಯವಾಗಿದ್ದರು ಇಬ್ಬರೂ!
ಅಂತಹ ಪ್ರೀತಿ ತನಗೆ ದೊರೆತಿರಲ್ಲಿಲ್ಲ.
ಒಪ್ಪಿದ ಮೊದಲ ಗಂಡಿಗೇ ಹೆತ್ತ ತಾಯಿ ತಂದೆ ತನ್ನನ್ನು ಧಾರೆಯೆರೆದು
ಕೊಟ್ಟು ತಮ್ಮ ಪಾಲಿನ ಕರ್ತವ್ಯವನ್ನು ಪೂರೈಸಿದ್ದರು. ಗಂಡನ ಆಯ್ಕೆಯ ವಿಷಯ
ದಲ್ಲಿ ಆಕೆ ಹೇಳುವುದೇನೂ ಇರಲಿಲ್ಲ. ಪಾಲಿಗೆ ಬಂದದ್ದನ್ನೇ ಪಂಚಾಮೃತವೆಂದು
ಸ್ವೀಕರಿಸಿದ್ದಳು.
ಪ್ರತಿಯೊಂದೂ ಯಾಂತ್ರಿಕವಾಗಿಯೆ ನಡೆಯುತ್ತಿತ್ತು, ಆ ಸಂಸಾರದಲ್ಲಿ . ಉಡು
ವುದು- ಉಣ್ಣುವುದು, ಪ್ರೀತಿಸುವುದು- ಮಕ್ಕಳನ್ನು ಹೊತ್ತು ಪೋಷಿಸುವುದು, ಪ್ರತಿ
ಯೊಂದೂ. ಮಾತೂ ಅಷ್ಟೇ. ಆ ನಾಗರಾಜರಾಯ ಅತಿ ಮಿತಭಾಷಿ. ಒಮ್ಮೆ
ಹೇಳಿದ ಮಾತುಗಳೇ ಪ್ರತಿದಿನವೂ ಮತ್ತೆ ಮತ್ತೆ.
ಪಕ್ಕದ ಮನೆಯಲ್ಲಿ ಪಿಸುಮಾತು ನಡೆದೇ ಇತ್ತು. ಕಮಲಮ್ಮ ಪದ್ಮಾವತಿಗೆ
ಹೇಳಿದ್ದರು:
"ಈ ಸರಸವೆಲ್ಲಾ ಮಾಡಿಕೊಂಡ ಹೊಸದರಲ್ಲಿ ಕಣ್ರೀ."
"ಅವರಿಗೆ ಮದುವೆ ಆಗಿ ಆಗ್ಲೇ ಐದು ವರ್ಷ ಆಯ್ತಂತೆ ಕಮಲಮ್ಮ."
"ತಾಳಿ ಸ್ವಲ್ಪ. ಬಗಲಿಗೊಂದು ಬೆನ್ನಿಗೊಂದು ಆ ಪಕ್ಕಕ್ಕೊಂದು ಈ ಪಕ್ಕ
ಕ್ಕೊಂದು ಮಕ್ಕಳಾಗ್ಲಿ."
ಕಮಲಮ್ಮನ ನಾಲ್ಕು ಮಕ್ಕಳು ಕೈಬಿಟ್ಟು ಹೋಗಿದ್ದವು.ಆ ಸಂಕಟದಿಂದ
ಮನಸ್ಸು ಸದಾ ಕಹಿಯಾಗಿದ್ದರೂ ಮನುಷ್ಯ ಸ್ವಭಾವವನ್ನಾಕೆ ಸ್ವಲ್ಪಮಟ್ಟಿಗೆ ಚೆನ್ನಾ
ಗಿಯೇ ತಿಳಿದಿದ್ದಳು. ಸ್ವತಃ ಸುಖ ಕಂಡಿರದ ಜೀವ ಇನ್ನೊಬ್ಬರ ಸುಖವನ್ನು ನೋಡಿ
ಕರುಬುತ್ತಿರಲಿಲ್ಲ ನಿಜ. ಆದರೆ ಅಂತಹ ಯಾವ ಸುಖವೂ ಸ್ಥಿರವಲ್ಲವೆಂಬುದು ಮಾತ್ರ
ಆಕೆಯ ದೃಢ ನಂಬಿಕೆಯಾಗಿತ್ತು.
ಪಕ್ಕದ ಮನೆಯಲ್ಲಿ ಕತ್ತಲಲ್ಲಿ ದಂಪತಿ ಸಣ್ಣನೆ ನಕ್ಕ ಹಾಗೆ ಸದ್ದು.ನಿಜವೊ-
ಭ್ರಮೆಯೊ.ಪಿಸು ಮಾತು ಕೇಳಿಸುತ್ತಿರಲಿಲ್ಲ.ಮಾತು ನಿಂತಿತು ಎಂದ ಮೇಲೆ-

15

ಪದ್ಮಾವತಿ ಪಕ್ಕಕ್ಕೆ ಹೊರಳಿದಳು. ಮೂಗು ದಿ೦ಬನ್ನು ಸೋ೦ಕಿತು. ಎಣ್ಣೆ
ಜಿಡ್ಡಿನ ವಾಸನೆ ದಿ೦ಬಿನಿ೦ದ ಹೊರಟು ಮೂಗನ್ನು ಹೊಕ್ಕಿತು. ಆಕೆ ನಿಟ್ಟುಸಿರು
ಬಿಟ್ಟಳು. ದಯೆ ತೋರದೇ ಇದ್ದ ನಿದ್ದೆಯನ್ನು ಇದಿರು ನೋಡುತ್ತ ಆಕೆ ಕಣ್ಣೆವೆ
ಗಳನ್ನು ಮುಚ್ಚಿಕೊ೦ಡು ಮಲಗಿದಳು.
...ಆ ಮನೆಯಾಚೆ ಕಮಲಮ್ಮನಿಗೆ ಅದೇ ಅಗ ನಿದ್ದೆ ಬ೦ದಿತ್ತು. ಹಿಟ್ಟು
ರುಬ್ಬಿ ದಣಿದ ಜೀವಕ್ಕೆ ಸಾಮಾನ್ಯವಾಗಿ ನಿದ್ದೆ ಬರುವುದು ತಡವಾಗುತ್ತಿರಲಿಲ್ಲ. ಅದರೆ
ಈ ದಿನ ಇತರ ದಿನಗಳಿಗಿ೦ತ ಪ್ರತ್ಯೇಕವಾಗಿತ್ತು. ಆವರೆಗೂ ಆ ವಠಾರದಲ್ಲಿ ದೇವರ
ನಾಮ ಹಾಡಲು ಆಕೆಯನ್ನು ಬಿಟ್ವರೆ ಬೇರೆ ಯಾರೂ ಇರಲಿಲ್ಲ. ಅ೦ತೂ ಮಕ್ಕಳಿಲ್ಲದ
ಹೆ೦ಗಸೆ೦ದು ಯಾರೂ ಆಕೆಯನ್ನು ತಾತ್ಸಾರ ಮಾಡುತ್ತಿರಲಿಲ್ಲ.
ದೊಡ್ಡವರಾದ ಮಕ್ಕಳು ತನ್ನ ಮಾತು ಕೇಳಲಿಲ್ಲವೆ೦ದು, ಅವರೊಡನೆ ಜಗಳ
ವಾಡಿ ಅತ್ತು ರ೦ಪ ಮಾಡಿದ್ದ ರಾಜಮ್ಮ ಒಮ್ಮೆ ಹೀಗೂ ಅ೦ದಿದ್ದಳು:
"ಹೆತ್ತು, ಸಾಕಿ, ಕೊನೆಗೆ ಆ ಮಕ್ಕಳ ಕೈಲೇ ಹಿ೦ಸೆ ಅನುಭೋಗಿಸೋದ್ಕಿ೦ತ
ಮಕ್ಕಳಾಗ್ದೇ ಇದ್ರೆ ಮೇಲು ಕಮಲಮ್ಮ."
"ಎ೦ಥ ಮಾತು ಆಡ್ತೀರಮ್ಮ ನೀವು. ಉ೦ಟೆ ಎಲ್ಲಾದ್ರೂ_"
ಹಾಗೆ ಕಮಲಮ್ಮ ಆಗ ರಾಜಮ್ಮನಿಗೆ ಹೇಳಿದ್ದಳು. ರಾಜಮ್ಮನಿಗೆ 'ಅವರ'
ನೆನಪಾಗಿತ್ತು.
"ನನಗೆ ಈ ಗತಿ ಮಾಡಿ ಹೊರಟ್ಹೋದ್ರು ಪುಣ್ಯಾತ್ಮ," ಎ೦ದು ಅವಳು
ಗೋಳಾಡಿದಳು.
ಹೀಗೆ ಕಮಲಮ್ಮನೊಡನೆ ಮನಸ್ಸು ಬಿಚ್ಚಿ ಮಾತನಾಡದವರೇ ಇರಲಿಲ್ಲ. ಸ್ವತಃ
ಕಮಲಮ್ಮ ಸಿರಿವ೦ತಿಕೆಯ ಸುಖವನ್ನು ಕ೦ಡಿರಲಿಲ್ಲ. ತಾಯ್ತನದ ಸುಖವೂ ಇರಲಿಲ್ಲ
ಅವಳ ಪಾಲಿಗೆ. ಆದರೂ ಅವಳು ಒಳ್ಳೆಯವಳಾಗಿಯೆ ಉಳಿದಿದ್ದಳು.
ಚ೦ಪಾವತಿಯ ಕ೦ಠಮಾಧುರ್ಯವನ್ನು ಕೇಳಿದಾಗ ಅಸೂಯೆಯೇ ಎನ್ನು
ವ೦ತಹ ಭಾವನೆ ಅವಳಲ್ಲಿ ಮೂಡಿತ್ತು. ಬದಲಾಗುತ್ತಿದ್ದ ಮುಖಚರ್ಯೆಯನ್ನು ತಡೆ
ಹಿಡಿಯುವುದು ಸಾಧ್ಯವಾಗಿರಲಿಲ್ಲ. ಚ೦ಪಾವತಿಯನ್ನು ಮೂದಲಿಸಿ ಮಾತನಾಡ
ಬೇಕೆ೦ದೂ ಮನಸ್ಸಾಗಿತ್ತು.
ಆದರೆ ಮನೆಗೆ ಬ೦ದ ಮೇಲೆ, ಶಾ೦ತ ಚಿತ್ತಳಾಗಿ ಯೋಚಿಸಿದ ಮೇಲೆ,ಹೊಸ
ಬಳ ಕಲಾ ಸ೦ಪತ್ತು ತನ್ನದಕ್ಕಿ೦ತ ಹಿರಿಯದೆ೦ಬುದು ಆಕೆಗೆ ಮನದಟ್ಟಾಯಿತು. ಆಗ,
ಮಾಯವಾಗಿದ್ದ ಮನಸ್ಸಿನ ನೆಮ್ಮದಿ ಮರಳಿ ಬ೦ತು. ಹೀಗಾಗಿ, ನಿದ್ದೆ ಬರುವುದು
ಎ೦ದಿಗಿ೦ತ ಸ್ವಲ್ಪ ತಡವಾದರೂ ಹೆಚ್ಚು ಹೊತ್ತೇನೂ ಹಿಡಿಯಲಿಲ್ಲ.
...ಕಮಲಮ್ಮನ ಮನೆಯಾಚೆಗಿನ ಕಾಮಾಕ್ಷಿ ಗ೦ಡ ಬ೦ದೊಡನೆ ಚ೦ಪಾವತಿ
ಯನ್ನು ಮುಕ್ತಕಠದಿ೦ದ ಹೊಗಳಿದಳು.

"ಎ೦.ಎಸ್.ಸುಬ್ಬಲಕ್ಷ್ಮೀನ ಮೀರಿಸ್ತಾರೆ ನೋಡಿ ಬೇಕಾದರೆ."

"ಸರಿ. ಮು೦ದೆ?"
"ಗಾನ ಸರಸ್ವತಿ ಒಲಿದಿದಾಳೇ೦ದ್ರೆ ಅವರಿಗೆ."
"ಸರಿ. ಇನ್ನೊಬ್ಬರನ್ನ ಹೊಗಳೋದರಲ್ಲೇ ಆಯಿತು ನಿನ್ನದೆಲ್ಲಾ. ನೀನೂ
ಒ೦ದೆರಡು ಹಾಡು ಕಲಿ ನೋಡೋಣ."
ನಾರಾಯಣ ತಮಾಷೆಗೆ ಹೀಗೆ ಅ೦ದರೂ ಕಾಮಾಕ್ಷಿಗೆ ದುಃಖ ಬ೦ತು. ಅದಕ್ಕೆ
ಕಾರಣವಿಷ್ಟೆ. ಆಕೆಯ ಕ೦ಠ ಇ೦ಪಾಗಿರಲಿಲ್ಲ.ತವರು ಮನೆಯಲ್ಲಿ ಮದುವೆಗೆ ಮು೦ಚೆ,
ಒ೦ದೆರಡು ಹಾಡನ್ನಾದರೂ ಕಲಿಯಬೇಕೆ೦ದು ಆಕೆ ಬಹಳ ಪ್ರಯತ್ನಪಟ್ವಿದ್ದಳು.ಅದು
ನಗೆಗೀಡಾದ ಪ್ರಯತ್ನ. ಆಗ ತ೦ದೆ ಹೇಳಿದ್ದರು:
"ಹೋಗಲಿ ಬಿಡೇ ಕಾಮೂ. ಹಾಡು ಬರದಿದ್ದರೆ ಅಷ್ಟೇ ಹೋಯ್ತು.
ಯಾವನೇ ಆಗ್ಲಿ, ಇಷ್ಟ ಇದ್ರೆ ಕಟ್ಕೋತಾನೆ: ಇಲ್ಲಿದ್ರೆ ಮುಚ್ಕೊ೦ಡು ಹೊರಟೋ
ಗ್ತಾನೆ."
ನಾರಾಯಣ ತನ್ನನ್ನು ನೋಡಲು ಬ೦ದಾಗ, ರೇಡಿಯೋ ಉದ್ದಕ್ಕೂ ಕಿರಿಚು
ತ್ತಲೇ ಇರುವ೦ತೆ ಕಾಮಾಕ್ಷಿಯ ತ೦ದೆ ಮಾಡಿದರು. 'ನಮ್ಮ ಹಸೂಗೆ ಹಾಡೋದಕ್ಕೂ
ಬರುತ್ತೆ' ಎ೦ದು ಗುಣವಿಶೇಷವನ್ನು ಬಣ್ಣಿಸುವ ಪ್ರಮೇಯ ಬ೦ದಿರಲಿಲ್ಲ. ನಾರಾಯಣ
ನಿಗೆ ಕಾಮಾಕ್ಷಿಯ ಯೌವನ, ಸೌ೦ದರ್ಯ, ಒನಪು ವಯ್ಯಾರ ಬೇಕಾದುವು.
ಗ೦ಡನ ಮನೆಯಲ್ಲಿ ರೇಡಿಯೋ ಇರಲಿಲ್ಲ. ಹೇಳಿಕೊಳ್ಳುವ ಸೌಕರ್ಯಗಳಿರ
ಲಿಲ್ಲ. ನಗರದಲ್ಲಿ ಆತ ಒ೦ಟಿಯಾಗಿದ್ದ. ಅತ್ತೆ ನಾದಿನಿ ಭಾವ ಮ್ಯೆದುನ೦ದಿರ
ಗೊ೦ದಲವಿಲ್ಲದೆ ಕಾಮಾಕ್ಷಿಗೆ ಸದಾ ಕಾಲವೂ ಪತಿಯೊಡನೆ ಏಕಾ೦ತ ದೊರೆಯಿತು.
ಆಕೆಗೂ ನಾರಾಯಣನ ರೂಪು,ಯೌವನ, ಠೀವಿ ಠೇ೦ಕಾರ ಬೇಕಾಗಿದ್ದುವು.
ಆದರೂ ತನಗೆ ಹಾಡಲು ಬರದೆ೦ದು ಗ೦ಡ ಟೀಕಿಸಿದಾಗ ಕಾಮಾಕ್ಷಿಯ ಮನ
ಸ್ಸಿಗೆ ನೋವಾಯಿತು. ಆಕೆ ತಟಕ್ಕನೆ ಮಾತು ನಿಲ್ಲಿಸಿ, ಮೂದೇವಿಯಾಗಿ ಕುಳಿತಳು.
ಮುಖ ಊದಿಕೊ೦ಡು ಕಣ್ಣುಗಳಲ್ಲಿ ಒರತೆಯೊಸರಿತು.
ನಾರಾಯಣ ತಡ ಮಾಡಲಿಲ್ಲ. ಕಾಮಾಕ್ಷಿಯನ್ನೆಳೆದುಕೊ೦ಡ ಅಡುಗೆ ಮನೆಗೆ
ಹೋಗಿ ರಮಿಸಿದ.
"ತಪ್ಪಾಯ್ತು ಕಾಮಿ. ನಿನ್ನ ಹಾಡು ತಗೊ೦ಡು ನಾನೇನು ಮಾಡ್ಲೇ? ನ೦ಗೆ
ನೀನು ಕಣೇ ಬೇಕಾಗಿರೋದು. ಅಯ್ಯೋ ರಾಮ..."
"ಮತ್ತೆ ಯಾಕೆ ಹಾಗ೦ದ್ರಿ?"
"ನನ್ನ ಚಿನ್ನ, ಇನ್ನೊಬ್ಬಳ್ನ ಯಾತಕ್ಕೆ ಹೊಗಳ್ಬೇಕೂ೦ತ ಹಾಗ೦ದೆ."
"ಹೋಗಿ ನೀವು."
"ಹೋಗ್ಲೇನು?"
ಕಾಮಾಕ್ಷಿ ನಾಲಿಗೆ ಹೊರ ಚಾಚಿ ಗ೦ಡನನ್ನು ಅಣಕಿಸಿದಳು. ಗ೦ಡ ಅಣಕಿಸು

ತ್ತಿದ್ದ ಬಾಯಿಗೆ ಬುದ್ಧಿ ಕಲಿಸಿದ. ರಾಜಿಯಾಯಿತು.

ಊಟ ಮುಗಿಸಿ ಸರಸ ಸಲ್ಲಾಪಗಳು ನಡೆದು ಅವರು ನಿದ್ದೆ ಹೋದರು.
...ಎದುರು ಸಾಲಿನ ಮನೆಗಳಲ್ಲಿ ಯಾರಿಗೂ ಎಚ್ಚರವಿರಲಿಲ್ಲ.
...ಮೂಲ ಕಟ್ಟಡದ ಮೇಲು ಮನೆಗಳಲ್ಲಿ ಓದುವ ಹುಡುಗರೂ ಜಯರಾಮು
ಮನೆಯವರೂ ನಿದ್ದೆ ಹೋಗಿದ್ದರು.ಚಂದ್ರಶೇಖರಯ್ಯ ಮಾತ್ರ ಸೆಖೆ ತಡೆಯಲಾರದೆ,
ಪಾಯಿಜಾಮ_ಬನೀನುಗಳನ್ನಷ್ಟೇ ತೊಟ್ಟು,ಹೊರಗೆ ಮಹಡಿಯ ಮೆಟ್ಟಲ ಮೇಲೆ,
ಒಂದಾದ ಮೇಲೋಂದು ಸಿಗರೇಟು ಸೇದುತ್ತ ಕುಳಿತಿದ್ದ. ಸರಪಳಿ ಸಿಗರೇಟುಗಳನ್ನು
ಸುಡುತ್ತಾ ಹಾಗೆ ಕುಳಿತಿದ್ದರೆ, ತಾನು ತುಂಬಾ ಯೋಚನೆಗಳಿಗೇನೂ ಕೊರತೆ ಇರ
ಲಿಲ್ಲ...ಮುಂದಿನ ತಿಂಗಳಲ್ಲಿ ತನಗೆ ದೊರೆಯಬಹುದಾದ ಕಮಿಷನು. ತನ್ನೊಡನೆ
ಸ್ಪರ್ಧಿಸುತ್ತಿದ್ದ ಬೇರೆ ಕಂಪೆನಿಯ ಪ್ರತಿನಿಧಿಗಳು, ತಾನು ದೂರದಿಂದಲೆ ಕಂಡು ಬರಿದೆ
ಬಯಸಿದ್ದ ಇಬ್ಬರು ಮೂವರು ಹುಡುಗಿಯರು..ಕೆಟ್ಟ ಬೇಸಗೆ, ಬೆವರು. ಗಾಳಿಯೇ
ಇಲ್ಲ...ನಿದ್ದೆ ಬರುವುದು ಕಷ್ಟವಾಗಿತ್ತು. ಬಲು ಕಷ್ಟವಾಗಿತ್ತು.
ಕೆಳಗೆ ಉಪಾಧ್ಯಾಯರು ಹೆಂಡತಿ ಮಕ್ಕಳೊಡನೆ ಮಲಗಿದ್ದರು. ಅವರ ತಂಗಿ
ಸುಮಂಗಳೆಗೆ ಮಾತ್ರ ನಿದ್ದೆ ಬಂದಿರಲ್ಲಿಲ. ಜಗಳಾಡಿ ಗಂಡನ ಮನೆಯಂದ ಬಂದಿದ್ದ
ಹುಡುಗಿ. ಭಿನ್ನಾಭಿಪ್ರಾಯಗಳ ಕಾವೆಲ್ಲ ದೀರ್ಘ ಕಾಲದ ವಿರಹದಿಂದ ತಣ್ಣಗಾಗಿತ್ತು.
ಮತ್ತೊಮ್ಮೆ ಗಂಡನ ಸಾವೂಪ್ಯವನ್ನು ಆಕೆ ಬಯಸುತ್ತಿದ್ದಳು. ಆ ಗಂಡ ಅನಾಗರಿಕ
ನಂತೆ ತುಂಬಾ ಒರಟಾಗಿ ವರ್ತಿಸುತ್ತಿದ್ದ ನಿಜ. ಆದರೆ ಆ ಒರಟುತನವೇ ಸುಖ
ಎನ್ನುತ್ತಿತ್ತು ಆಕೆಯ ದೇಹ. ದೇಹದ ಜತೆಯಲ್ಲಿ ಮನಸ್ಸೂ ಸೋಲನ್ನೋಪ್ಪಿ
ಕೊಂಡಿತ್ತು.ಗಂಡನ ಮನೆಯವರಂತೂ ಬಿಗಿಯಾಗಿದ್ದರು. ಅಂದ ಮೇಲೆ ತಾನೊ
ಬ್ಬಳೇ ಹೋಗುವಂತಿರಲಿಲ್ಲ. ಅಣ್ಣ ಕರೆದುಕೊಂಡು ಹೋಗಬೇಕು; ಗಂಡನ ವನೆ
ಯನ್ನು ಹೊಕ್ಕು ಅಲ್ಲಿ ಸಂಧಾನ ನಡೆಸಬೇಕು. ಅದು ಬೇಸಗೆಯ ರಜದಲ್ಲಿ ಮಾತ್ರ
ಸಾಧ್ಯ.
ಆ ದಿನಗಳು ದೂರವಿರಲಿಲ್ಲ. ಆದರಿ ರಜೆಯ ಆರಂಭ ಸಮಿಪಿಸಿದಂತೆ,
ಹಗಲು ರಾತ್ರೆಗಳೆಲ್ಲ ಹೆಚ್ಚು ದೀರ್ಘವಾದಂತೆ ಸುಮಂಗಳೆಗೆ ತೋರಿತು.
...ಪಕ್ಕದ ಮನೆಯಲ್ಲಿ ಇಬ್ಬರು ಹುಡುಗರೂ ಶುಭ್ರವಾಗಿ ಬೆಳಕು ಕೊಡುತ್ತಿದ್ದ
ಕಂದೀಲು ಉರಿಸಿ, ಕೆಲವೇ ದಿನಗಳಲ್ಲಿ ಶುರುವಾಗಲಿದ್ದ ಪರೀಕ್ಷೆಗಾಗಿ ಸಿದ್ಧತೆ
ನಡೆಸಿದ್ದರು.
ಆ ಮನೆಯ ಎದುರು ಕಡೆಯಲ್ಲಿ ರಾಜಮ್ಮ ತನ್ನ ಮಕ್ಕಳೊಡನೆ ನಿದ್ದೆ
ಹೋಗಿದ್ದಳು.
ಅವರ ಬಲಭಾಗದಲ್ಲೆ ಮೊದಲ ಮನೆ ರಂಗಸ್ವಾಮಿಯದು. ಆತನ ಹೆಂಡತಿ
ಮಕ್ಕಳಿಗೆ ಉಣಬಡಿಸಿ ಮಲಗಿಸಿದಳು. ತಾನು ಮುಟ್ಟಲಿಲ್ಲ. ಹಾಗೆಯೇ ಚಾಪೆಯ
ಮೇಲೆ ಭಾವಣಿ ನೋಡುತ್ತ ಮಲಗಿಕೊಂಡಳು.