ರಂಗಮ್ಮನ ವಠಾರ/೭

ವಿಕಿಸೋರ್ಸ್ದಿಂದ

ಎ‍ಚ್ಚರವಾಗದೆಯೆ ಇದ್ದ ಮಗುವಿಗೆ ಮೆತ್ತನ್ನ ಹಾಸಿಗೆ ದೊರೆಯಿತು.
ಶಂಕರನಾರಾಯಣಯ್ಯ ಒಂದು ಸಿಗರೇಟು ಸೇದುತ್ತ ಹಾಯಾಗಿ ಕುಳಿತ.
ಚಂಪಾ ಮಗುವನ್ನೂ ಮಗುವಿನ ತಂದೆಯ ಮುಖವನ್ನೂ ಪ್ರೀತಿಯಿಂದ ನೋಡಿದಳು.
ದೀಪ ಆರಿಹೋಯಿತು.
"ಇಲ್ಲಿ ನಾವು ದೀಪ ಆರಿಸ್ಬೇಕಾದ ತೊಂದರೇನೇ ಇಲ್ಲ," ಎಂದು ಶಂಕರನಾರಾ
ಯಣಯ್ಯ ನಕ್ಕ.
ನಗೆಯ ಶಾಖ ಚಂಪಾವತಿಗೂ ತಗಲಿತು.
ಗಂಡ ಹೆಂಡತಿ ಇಬ್ಬರೂ, ಹಾಸಿಗೆಯ ಮೇಲೆ ತಮಗೂ ಜಾಗ ಬೇಕೆಂದು,
ಮಗುವನ್ನು ಮೂಲೆಯಲ್ಲಿ ಮಲಗಿಸಿದರು.
ಹಗಲು ಬಯಸಿದ್ದನ್ನು ಈಗ ಆಕೆಯೇ ಕೊಟ್ಟಳು. ಅದನ್ನಾತ ಹುಸಿ ಮುನಿಸಿ
ನಿಂದ ವಾಪಸು ಮಾಡಿದ. ಆಕೆ ಮತ್ತೆ ಕೊಡಹೋಡಳು.
ಚಿತ್ರ ಬರೆಯುವ ಶಂಕರನಾರಾಯಣಯ್ಯ ಹೇಳಿದು:
"ಮೊದಲ ರಾತ್ರಿ."

ಬೆಳಗ್ಗೆ ಐದು ಘಂಟೆಯಿಂದಲೇ ಆಗುತ್ತಿದ್ದ ಸದ್ದು ಸಪ್ಪಳ ಕೊನೆಯ ಮನೆಯ

ದಂಪತಿಯನ್ನೂ ಎಚ್ಚರಗೊಳಿಸಿದುವು.
"ಈ ಮನೇಲಿ ನೀವು ಎಂಟು ಘಂಟೆವರೆಗೆ ನಿದ್ದೆ ಹೋದ ಹಾಗೆಯೇ," ಎಂದು
ಚಂಪಾ ಗಂಡನನ್ನು ಕುರಿತು ಹೇಳಿದಳು.
ಬೆಳಗಿನ ಬೆಚ್ಚಗಿನ ನಿದ್ದೆಗೆ ಅ‍ಷ್ಟು ಸುಲಭವಾಗಿ ಎಳ‍್ಳು ನೀರು ಬಿಡುವ ಹಾಗಿರ
ಲಿಲ್ಲ ಶಂಕರನಾರಾಯಣಯ್ಯ. ಹೆಂಡತಿಯ ಸಮೀಪಕ್ಕೆ ಸರಿಯುತ್ತ ನಿದ್ದೆಯ ಗೊಗ್ಗರ
ಧ್ವನಿಯಲ್ಲಿ ಆತ ಹೇಳಿದ:
"ಒಂದು ನಾಲ್ಕು ದಿವಸ. ಅಷ್ಟರಲ್ಲಿ ಅಭ್ಯಾಸವಾಗ್ಬಿಡುತ್ತೆ."
"ನಿಮ್ಮ ಸುಖ ಬಿಟ್ಟುಕೊಟ್ಟೀರಾ ನೀವು? ನಾನು ಮಾತ್ರ ಇಲ್ಲಿ ಇನ್ನು ಆರು
ಘಂಟೆಗೇ ಏಳ್ಬೇಕು."
"ರಾತ್ರಿ ಬೇಗ್ನೆ ಮಲಕೊಂಡ್ಬಿಡು."
"ನೀವು ಬಿಟ್ಟರೆ!"
ಆತ 'ಊ' ಎಂದು ಗಂಟಲಿನಿಂದ ಸ್ವರ ಹೊರಡಿಸುತ್ತ ಆಕೆಯ ಮೃದುವಾದ
ತೋಳಿಗೆ ತನ್ನ ಮೂಗನ್ನು ತೀಡಿದ.
ಪುಣ್ಯಾತ್ಮನಿಗೆ ಮತ್ತೆ ನಿದ್ದೆ ಬಂದುಬಿತ್ತಿದೆ. ಆ ಕತ್ತಲಲ್ಲೂ ಛಾವಣಿಯನ್ನೇ
ದಿತ್ತಿಸುತ್ತ, ವಠಾರದಿಂದ ಒಂದೊಂದಾಗಿ ಹೊರಬರುತ್ತಿದ್ದ ಬಗೆಬಗೆಯ ಸದ್ದುಗಳಿಗೆ
ಕಿವಿಗೊಡುತ್ತ, ನಿದ್ದೆ ಹೋಗಿದ್ದ ಮಗುವನ್ನು ಬಲತೋಳಿನಿಂದ ಬಳಸಿ ಚಂಪಾ
ಹೊತ್ತು ಕಳೆದಳು
...ಹೊರಗಿನಿಂದ ಯಾರದೋ ಸ್ವರ ಕೇಳಿಸಿತು.
"ಘಂಟೆ ಆರಾಯ್ತು. ಕಾಮಾಕ್ಷಿ ಮನೆ ಗಡಿಯಾರ ನೋಡ್ಕೊಂಡು ಬಂದೆ."
ಆರು ಆಗಿಹೋಯ್ತೆ? ಈ ವಠಾರದ ಗವಿಯೊಳಕ್ಕೆ ಬೆಳಕು ಇಳಿಯುವುದೇ
ತಡವೇನೋ?-ಎಂದು ಕೊಂಡಳು ಚಂಪಾ. ಮಲಗಿದ್ದು ಸಾಕೆಂದು ಎದ್ದು ಕುಳತಳು.
ಆಕೆಯ ಕಿವಿಗೆ ಬಿದ್ದ ಗಡಿಯಾರ ಎಂಬ ಪದ ಬೇರೆ ಯೋಚನೆಗಳಿಗೂ ಕಾರಣ
ವಾಯಿತು. ತನ್ನ ಬಾಣಂತಿತನದಲ್ಲಿ ಮಾರಾಟವಾಗಿ ಹೋಗಿತ್ತು ಗಂಡನ ಕೈ ಗಡಿಯಾರ.
ಆ ಬಳಿಕ ತಾನೆಷ್ಟು ಪೀಡಿಸಿದರೂ ಆತ ಹೊಸತೊಂದನ್ನು ಕೊಂಡುಕೊಳ್ಳಲಿಲ್ಲ. ಹಾಗೆ
ಕೊಂಡುಕೊಳ್ಳಲು ಹಣವಿರಲಿಲ್ಲ. ಅಲ್ಲಿಂದ ಇಲ್ಲಿಂದ ಆ ಕೆಲಸ ಈ ಕೆಲಸಕ್ಕೆಂದು
ಮುಂಗಡ ಪಡೆಯುತ್ತಿದ್ದ ಹಣದಿಂದಲೇ ಸಂಸಾರದ ವೆಚ್ಛ ಸಾಗುತಿತ್ತು. ಅದ
ರಲ್ಲಿಯೂ ನಾಲ್ಕು ಪುಡಿಕಾಸು ಎಂದಾದರೂ ಉಲಿದಾಗ, ತನಗಾಗಿ ಒಂದು ಸೀರೆ
ಯನ್ನೋ ರವಕೆ ಕಣವನ್ನೋ ಮಗುವಿನ ಲಂಗಕ್ಕಾಗಿ ಬಟ್ಟೆಯನ್ನೋ ಆತ ತರುತ್ತಿದ್ದ.
ಹಾಗೆ ತಂದಾಗ ಚಂಪಾವತಿಯ ಹೃದಯ ತುಂಬಿ ಬರುತ್ತಿತ್ತು. ಆದರೆ ತನ್ನ
ಸ್ವಂತಕ್ಕಾಗಿ ಆತ ಏನನ್ನೂ ಕೊಳ್ಳುತ್ತಿಲ್ಲವಲ್ಲಾ ಎಂದು ನೋವೂ ಆಗುತ್ತಿತ್ತು.
"ನಂಗೆ ಇದೆಲ್ಲಾ ಬೇಡೀಂದ್ರೆ.ಎಷ್ಟು ಸೀರೆ, ಎಷ್ತು ರವಕೆ-ಸಾಕು
ಇಷ‍್ಟೊಂದು," ಎಂದು ಗಂಡನೊಡನೆ ಆಕೆ ಜಗಳವಾಡಿದ್ದಳು.
"ನಿಂಗೆ ಬೇಡವಾದರೆ ಬೇರೆ ಯಾರಿಗಾದರೂ ಕೊಡ್ಲೇನು?"
-ಆತ ನಗುತ್ತ ಕೆಣಕಿ ಮಾತನಾಡಿದ್ದ.
"ಸಾಕು ತಮಾಷೆ.ಯಾವತ್ತೂಂದ್ರೆ ನೀವು ಗದಿಯಾರ ಕೊಂಡ್ಕೊಳ್ಳೋದು?"
-ಆಕೆ ರೇಗಿ ಕೇಳಿದ್ದಳು.
"ಗಡಿಯಾರದ ಯೋಚ್ನೆ ನಿಂಗೆ ಯಾತಕ್ಕೆ? ನೀನು ಹೇಳೋ ಹೊತ್ತಿಗೆ
ಮುಂಚೇನೆ ಮನೆ ಸೇರಿದ್ರೆ ಸಾಲ್ದೆ?"
ಗಂಡ ಹಾಗೆ ಹೇಳಿದಾಗ ತುಂಬು ನೋಟದಿಂದ ಅವನನ್ನು ತಾನು ನೋಡಿ
ದ್ದಳು. ಆತನೋ ಘಾಟಿ. ಆ ಪರಿಸ್ಥಿತಿಯ ಪೂಣ್ ಲಾಭ ಪಡೆದಿದ್ದ.
...ಚಂಪಾ ಬಿಚ್ಚಿದ್ದ ಕೂದಲ ರಾಶಿಯನ್ನು ಬಿಗಿ ಹಿಡಿದು ಗಂಟು ಹಾಕಿದಳು.
ಅಗಣಿ ತೆಗೆದು ಕದವನ್ನಿಷ್ಟು ಓರೆ ಮಾಡಿ ಇಣಕಿ ನೋಡಿ ಓಣಿಯುದ್ದಕ್ಕೂ ದೃಷ್ಟಿ
ಹಾಯಿಸಿದಳು ಹಾಗೆಯೇ ನಡು ಹಾದಿಯ ಮೂಲಕ ಮುಖ್ಯ ಮನೆಯನ್ನೂ ದಾಟಿ
ಹೊರ ಅಂಗಳಕ್ಕೆ ಹೋಗಿ,ವಠಾರದ ಆಚೆಗಿನ ಬೇರೆಯೇ ಒಂದು ಜಗತ್ತಿನಂತೆ ಕಂಡ.
ಆ ಬೀದಿ-ಮನೆಗಳನ್ನು ನೋಡಿದಳು.
ಆಕೆ ಅಲ್ಲಿ ನಿಂತಿದ್ದಂತೆಯೇ ವಠಾರದ ಹೆಂಗಸರು ಒಬ್ಬೊಬ್ಬರಾಗಿ ಬಂದು ತಮ್ಮ
ಬಿಂದಿಗೆಯನ್ನೋ ಬಕೀಟನ್ನೋ ಕೊಳಾಯಿಯಿಂದ ಮೊದಲ್ಗೊಂಡು ಒಂದರ
ಹಿಂದೊಂದಾಗಿ ಇರಿಸಿದರು. ಕೆಲವರು ತಮ್ಮ ಮನೆ ಗುರುತಿಗಾಗಿ ಬರಿಯ ಪಾತ್ರೆ
ಗಳನ್ನೂ ಇಟ್ಟರು.
ರಾತ್ರೆ ತನ್ನೊಡನೆ ಮಾತನಾಡಿದ ಪದ್ಮಾವತಿ ಬಂದಾಗ ಚಂಪಾ ಮುಗುಳು
ನಕ್ಕಳು
"ಇನ್ನು ಸ್ವಲ್ಪ ಹೊತ್ನಲ್ಲೇ ಕೊಳಾಯಿ ಬೀಗ ತೆಗೆದ್ಬಿಡುತ್ತಾರೆ ನಿಮ್ಮ ಬಿಂದಿ
ಗೇನು ಇಟ್ಬಿಡಿ, ಎಂದು ಪದ್ಮಾವತಿ ಹೊಸಬಳನ್ನು ಉದ್ದೇಶಿಸಿ ಹೇಳಿದಳು.
"ಹೊನ್ರಿ ಇಡ್ತಿನಿ ಎಂದಳು ಚಂಪಾವತಿ. ಅಷ್ಟಕ್ಕೆ ಮಾತು ನಿಲ್ಲಿಸಲಾರದೆ
ಅವಳೆಂದಳು.
"ನೀರಿಗೆ ಕ್ಯೂ ನಿಂತ್ಕೋಬೇಕು ಅಲ್ವೆ?
ಹಿ೦ದು ಮುಂದು ನೋಡಿ ಯಾರೊ ಇಲ್ಲವೆಂದು ಮನವರಿಕೆ ಮಾಡಿಕೊಂಡು
ಪದ್ಮವತಿ ಹೊಸಬಳನ್ನು ಉದ್ದೇಶಿಸಿ ಹೇಳಿದಳು.
"ಇಲ್ಲಿ ಇದೊಂದು ಗೋಳು.
ತಗ್ಗಿದ ಧ್ವನಿ. ಧ್ವನಿಯಲ್ಲಿ ಅಳುಕು.
"ಜಾಸ್ತಿ ಜನ ಇದ್ದ ಕಡೆ ಹೀಗೆಲ್ಲಾ ಮಾಡ್ಲೇಬೇಕಾಗುತ್ತೆ," ಎಂದು ನುಡಿದು,
ಪದ್ಮಾವತಿ ನಿಜ ವಿಷಯವನ್ನು ತಿಳಿಸಿದಳು:
"ಹೂಂ. ಮೊದ್ಲು ಮೀಟ್ರ ಇರ್ಲಿಲ್ವಂತೆ. ಆಗ ಎಷ್ಟು ಬೇಕಾದರೂ ಎಷ್ಟೊ
ತ್ತಿಗೆ ಬೇಕದರೊ ನೀರು ಹಿಡಕೋತಿದ್ರು. ಮೀ೨ಪಟರು ಬಂದ್ಮೇಲೆ ಬೀಗ ಹಾಕೋಕೆ
ಶುರು ಮಾಡಿದ್ದು, ಆಗಲೂ ಇಷ್ಟು ತಾಪತ್ರಯ ఇರಿಲ್ಲ, ಇಷ್ಟೆ ಹೊತ್ತು ಅಂತೇನೊ
ಇರಿಲ್ಲ, ಆಮೇಲೆ ನೀರು ಜಾಸ್ತಿ ಖರ್ಚಾಗುತ್ತೇಂತ ಗಲಾಟೆಯಾಯ್ತಮ್ಮ
ನಾನು ಮುಂಚೆ ನಾನು ಮುಂಚೆ ಅಂತ ಜಗಳ ಬೇರೆ.. ಗೊತ್ತೇ ಇದೆಯಲ್ಲ ನೀರಿನ
ಜಗಳ, ಇತ್ತಿಚೀಗೆ ನಾಲ್ಕೈದು ವರ್ಷಹಳಿಂದ ಹೀಗೆ ಕ್ಯೋ ನಿಲ್ಲೋಕೆ ರಂಗಮ್ಮ
ಕಲಿಸಿದ್ರು."
"ರಂಗಮ್ನೋರು ಕಲಿಸಿದ್ರೆ?"
ಉತ್ತರ ಕೊಡಲು ಹೊರಟ ಪದ್ಮಾವತಿಯ ಸ್ವರ ಮತ್ತಷ್ಟು ತಗ್ಗಿತು
"ಹೂಂ. ಅವರೇನೂಂತ ತಿಳಕೊಂಡ್ರಿ? ಒಂದು ದಿನ ಅವರು ಇಲ್ವೆ ಹೋಗ್ಲಿ
ಈ ವಠರಾ ನಡಿಯುತ್ಯ ಹೇಗೆ ನಡಿಯುತ್ಯೆ ಹೇಗೆ?"
"ಒಳಗೆ ಹೋಗ್ರೀನಪ್ಪ. ಮಗು ಎದ್ದಿದೆಯೋ ಏನೋ...?" ಎಂದು ಚಂಪಾ
ಅವಸರವಾಗಿ ತನ್ನ ಗೂಡಿನತ್ತ ಬಂದಳು.
ಮಗು ಎದ್ದಿರಲಿಲ್ಲ. ಹೇಗೂ ತಾನು ಕೊನೆಯವಳು: ನೀರಿಗೆ ಪಾತ್ರೆ ಆಮೇಲೆ
ಇಟ್ಟರಾಯ್ತು ಎ೦ದು ಒಲೆ ಹಚ್ಚಿದಳು. ಬಿಸಿ ನೀರು ಕಾಯಿಸುವುದಕ್ಕಾಗಿಯೇ ಇದ್ದ
ಸಣ್ಣ ಹ೦ಡೆಯಲ್ಲಿ ನೀರು ಕಾಯಿಸಿದಳು. ಸ್ನಾನವನ್ನೂ ಮಾಡಿ ಮುಗಿಸಿ ಕಾಫಿಗೆ
ನೀರಿಟ್ಟಳು. ಹಾಲಿನವಳನ್ನು ಗೊತ್ತು ಮಾಡುವ ಕೆಲಸವೊ೦ದಿತ್ತು. ಓಣಿಯೊಳಗೆ
ಹಾಲವ್ವ ಬರುವ ಸದ್ದಿಗೆ ಆಕೆ ಕಿವಿಗೊಟ್ಟಳು.
ಹಾಲವ್ವನಿಗೆ ಸ೦ಬ೦ಧಿಸಿದ ಸ೦ಭಾಷಣೆ_ಎಷ್ಟೊ೦ದು ಕಡೆ ಚ೦ಪಾ ಕೇಳಿದ್ದಳು
ಅದನ್ನು!ಆದರೆ ಎಲ್ಲ ಕಡೆಗಳಲ್ಲೂ ಆ ಮಾತುಕತೆಯ ರೀತಿಯೊ೦ದೇ.
ಈ ಓಣಿಗೆ ಬೇರೆ ಬೇರೆಯಾಗಿಯೇ ಇಬ್ಬರು ಬ೦ದರು. ಎದುರು ಮನೆ
ಗೊಬ್ಬಳು. ಪಕ್ಕದ ಮನೆಗೊಬ್ಬಳು.
ಸ್ವರಗಳು ಕೇಳಿಸಿದವು.
_"...ಅಯ್ಯೋ!ನೀರೇ!"
_"...ಇನ್ನೂ ಸ್ವಲ್ಪ ಹಾಕು."
_"...ಹೂ೦. ಕೊಸರು."
ಚ೦ಪಾ ಒ೦ದು ಲೋಟವನ್ನು ಕೈಯಲ್ಲಿ ಹಿಡಿದು ಬಾಗಿಲಿಗೆ ಬ೦ದು ನಿ೦ತಳು.
ತನ್ನ ಮನೆಯ ಬಾಗಿಲಲ್ಲಿ ಹಾಲು ಪಾತ್ರೆಯೊಡನೆ ಪದ್ಮಾವತಿ ಕೇಳಿದಳು:
"ಹಾಲು ಹಾಕಿಸ್ಕೋತೀರಾ?"
"ಹೂ೦ ಕಣ್ರಿ...."
ಪದ್ಮಾವತಿ ಹೊಸ ಬಿಡಾರದವರ ಪರವಾಗಿ ಮಾತನಾಡಿದಳು:
"ವರ್ತನೆ ಗೊತ್ಮಾಡ್ಕೊತೀಯೇನವ್ವಾ?"
ಹಾಲವ್ವ ಚ೦ಪಾವತಿಯನ್ನು ನೋಡುತ್ತಾ ಕೇಳಿದಳು:
"ಎಷ್ಟು ಬೇಕು?
ಉತ್ತರವನ್ನು ಹಾಲವ್ವಳೊಬ್ಬಳೆ ಅಲ್ಲ, ಸುತ್ತಲಿದ್ದ ಹಲವರು ಇದಿರು ನೋಡಿ
ದರು. ಹೊಸ ಮನೆಯವರು ಎಷ್ಟು ಹಾಲು ಕೂಳ್ಳುವರೆ೦ದು ತಿಳಿಯುವ ತವಕ.
ಹಾಲವ್ವಳೊಬ್ಬಳನ್ನೇ ನೋಡುತ್ತ ಚ೦ಪ ಅ೦ದಳು:
"ಒ೦ದು ಪಾವು."
"ಚ೦ಜೆಗೂ ಆಕೀಸ್ಕೊ೦ತೀರಾ?"
"ಇಲ್ಲ. ಬೆಳಗ್ಗೆ ಮಾತ್ರ."
ದಿನಕ್ಕೊ೦ದೇ ಪಾವು. ಇವರೂ ನಮ್ಮ ಹಾಗೆಯೇ ಎ೦ದುಕೊ೦ಡರು, ಚ೦ಪಾ
ವತಿಯ ಉತ್ತರ ಕೇಳಿದವರೆಲ್ಲ.
"ಅ೦ಗೇ ಮಾಡಿ."
"ಇವತ್ನಿ೦ದ್ಲೇ ಹಾಕು."
ಹಾಲವ್ವ ಅನುಮಾನಿಸಿದಳು.
"ಇನ್ನೂ ಹತ್ತು ಮನೆ ಐತವ್ವ" ಅಂದಳು.
"ಹತ್ತರ ಜತೇಲಿ ಹನ್ನೊಂದು. ಹೆಂಗೋ ಸುಧಾರಿಸ್ಕೊಂಡರಾಯ್ತು, ಕೊಟ್ಬಿ
ಡವ್ವಾ," ಎಂದು ಪದ್ಮಾವತಿಯೂ ಶಿಫಾರಸು ಮಾಡಿದಳು.
ಹಾಲವ್ವ ಒಂದು ಪಾವು ಅಳೆದಳು.
"ಹೆಂಗೆ?" ಎಂದಳು ಚಂಪಾ, ದರ ವಿಚಾರಿಸುತ್ತ.
ಹಾಲವ್ವ ಬುಟ್ಟಿಯನ್ನು ತಲೆಯ ಮೇಲಿರಿಸಿ ಎದ್ದು ನಿಂತು ಅಂದಳು:
"ಇವರೆಲ್ಲಾ ಎಂಗ್ಕೊಡ್ತಾರೊ ಆಂಗೆ. ಅವರ್ಗೊಂದು ನಿಮ್ಗೊಂದಾ? ರೂಪಾ
ಯಿಗೆ ಎಲ್ಡು ಸೇರು. ನೀರಾಲೂಂತ ಜಗಳ ಮಾತ್ರ ಕಾಯ್ಬಾರ್ದು. ಈಗ್ಲೆ
ಯೋಳಿದೀನಿ."
ನಿರುತ್ತರಳಾಗಿದ್ದ ಪದ್ಮಾವತಿ ಹಾಲವ್ವನ ಮಾತನ್ನು ಅಲ್ಲಗಳೆಯಲಿಲ್ಲ. ಚಂಪಾ
ಒಳಗೆ ಹೋಗಿ ಹಾಲನ್ನು ಬಿಸಿಗಿಟ್ಟಲು.
"ಏಳೀಂದ್ರೆ ಕಾಫಿ ಆರ್ಹೋಗುತ್ತೆ," ಎಂದು ಗಂಡನನ್ನು ಎರಡು ಮೂರು ಸಾರೆ
ಕರೆದು, ಎಬ್ಬಿಸಿದಳು.
ಕಾಫಿ ಕುಡಿದು ಶಂಕರನಾರಾಯಣಯ್ಯ ಅಳುತ್ತಲೇ ಇದ್ದ ಮಗುವನ್ನು ಸಂತೈ
ಸಲು ಯತ್ನಿಸಿದ. ಒಂದು ಸಿಗರೇಟು ಹಚ್ಚಿಕೊಂಡು ಉಂಗುರ ಉಂಗುರವಾಗಿ ಹೊಗೆ
ಯುಗುಳುತ್ತಾ ಅದನ್ನು ಮಗುವಿಗೆ ತೋರಿಸುತ್ತಾ ಆಟವಾಡಿಸಿದ.
ಆದರೆ ಆ ಮಗಳು ಅಳು ನಿಲ್ಲಿಸಿದ್ದು, ತಾಯಿ ಎತ್ತಿಕೊಂಡಾಗಲೇ.
"ನಿನ್ನ ಮಗಳೇನೇ. ಯಾವ ಸಂಶಯವೂ ಇಲ್ಲ."
"ಹೇಳಿದ್ದನ್ನೇ ಎಷ್ಟು ಸಾರೆ ಹೇಳ್ತೀರಾ?"
__ಚಂಪಾ ಗಂಡನನ್ನು ಟೀಕಿಸಿದಳು.
"ಹೋಗಿ ಏನಾದರೂ ತರಕಾರಿ ತಗೊಂಡ್ಬನ್ನಿ," ಎಂದು ಗಂಡನಿಗೆ ಕೆಲಸ
ಕೊಟ್ಟಳು.
ಅಷ್ಟರಲ್ಲಿ ಊರುಗೋಲಿನ ಟಕ್ ಟಕ್ ಸದ್ದಾಯಿತು. ಗಂಟಲಿನಿಂದ ಹೊರ
ಡುತ್ತಿದ್ದ ನರಳುವ ಸ್ವರ ಕೇಳಿಸಿತು. ಶಂಕರನಾರಾಯಣಯ್ಯ ಹೆಂಡತಿಯ ಮುಖ
ನೋಡಿದ. ಹೆಂಡತಿ ಗಂಡನ ಮುಖ ನೋಡಿದಳು.
ಮರುಕ್ಷಣವೇ ರಂಗಮ್ಮ ಬಾಗಿಲಲ್ಲಿ ಪ್ರತ್ಯಕ್ಷವಾದರು:
"ಚೆನ್ನಾಗಿದೀರೇನಪ್ಪ? ಎಲ್ಲಾ ಅನುಕೂಲವಾಗಿದ್ಯೆ?"
ಶಂಕರನಾರಾಯಣಯ್ಯನಿಗೆ ಕೈಲಿದ್ದ ಸಿಗರೇಟನ್ನು ಏನು ಮಾಡಬೇಕೋ ತಿಳಿ
ಯಲಿಲ್ಲ. ತನಗೆ ವಯಸ್ಸು ಮೂವತ್ತೈದು ಆಗಿದ್ದರೂ ರಂಗಮ್ಮನಂತಹ ವಯಸ್ಕ
ರೆದುರಲ್ಲಿ ತಾನು ಹುಡುಗನೇ ಎಂದು ಆತನಿಗೆ ಭಾಸವಾಗುತ್ತಿತ್ತು. ಆದರೆ ಆತ
ಸಿಗರೇಟನ್ನು ಆರಿಸಲಿಲ್ಲ. ಸ್ವಲ್ಪ ಮರೆಮಾಡಿ, ಕುಳಿತಲ್ಲಿಂದಲೇ ಹೇಳಿದ:
"ಓಹೋ. ಎಲ್ಲಾ ಸರಿಯಾಗಿಯೇ ಇದೆ. ಒಳಗ್ಬನ್ನಿ ರಂಗಮ್ನೋರೆ."

ರಂಗಮ್ಮನ ವಠಾರ

71

"ಇಲ್ಲವಪ್ಪ, ಬೆಟ್ಟದಷ್ಟು ಬಿದ್ದಿದೆ ಕೆಲಸ... ಎನ್ಮಾಡ್ತಿದಾಳೆ ಮಗಳು?"
"ನೋಡಿ, ಒಂದು ಸಲ ಪಿಟೀಲು ಬಾರಿಸಿ ಆಯ್ತು," ಎಂದು ಚಂಪಾ ಉತ್ತರ
ವಿತ್ತಳು.
"ಹೂಂ. ನೀರು ಎಲ್ಲರೂ ಹಿಡ್ಕೊಡದ್ದಾಯ್ತು... ಯಾರೋ ಒಬ್ಬಿಬ್ಬರು
ಮಾತ್ರ ಇದಾರೇಂತೆ ತೋರುತ್ತೆ. ನೀವು ಬಂದ್ಬಿಡೀಂತ ಹೇಳೋಕೆ ಬಂದೆ"
"ಬಂದೆ ರಂಗಮ್ನೋರೆ."
ರಂಗಮ್ಮ ಹಿಂತಿರುಗಿದೊಡನೆ ಶಂಕರನಾರಾಯಣಯ್ಯ ಕೇಳಿದ:
"ನಾನು ಹೋಗಿ ಮೂರು ಬಿ೦ದಿಗೆ ತ೦ದ್ಭಿಡೇನೇ?"
"ನಿಮ್ಮ ದಮ್ಮಯ್ಯ, ಅಷ್ಟು ಮಾಗ್ಡ್ಭೇಡಿ ಸದ್ಯಃ. ನೀರು ನೀವು ಹೊತ್ತದ್ದು
ಇವರೆಲ್ಲಾ ನೋಡ್ಬಿಟ್ರೆ ಆಘೋಯ್ತು?"
"ಹಾಗ೦ತೀಯಾ?"
"ಹೊ೦. ಹಾ೦ಗತೀನಿ...ಸಿಗರೇಟು ಸೇದ್ಕೊ೦ಡು ಇಲ್ಲೇ ಇರಿ. ಮಗೂನ
ನೋಡ್ಕೊಳ್ಳಿ ಸ್ವಲ್ಪ. ಬ೦ದ್ಬಿಟ್ಟೆ."
"ಆಗಲಿ, ಅಮ್ಮಣ್ಣಿ."
...ಚ೦ಪಾ ನೀರು ತು೦ಬಿಸಿಯಾದ ಮೇಲೆ, ಶ೦ಕರನಾರಾಯಣಯ್ಯ ಅ೦ಗಡಿ
ಬೀದಿಗೆ ಹೋಗಿ ತರಕಾರಿ ತ೦ದ. ಆತ ಹಿ೦ದಿರುಗುವಷ್ಟರಲ್ಲೆ ವಠಾರದ ಗ೦ಡಸರಲ್ಲಿ
ɻ ಹೆಚ್ಚಿನವರೆಲ್ಲ ಹೊರಹೋಗಿದ್ದರು. ಗು೦ಡಣ್ಣನೊಬ್ಬ ಗೇಟಿನ ಬಳಿ ನಿ೦ತು,
ಮುಗುಳ್ನಕ್ಕ. ಶ೦ಕರನಾರಾಯಣಯ್ಯ, ರಾತ್ರೆ ತನ್ನನ್ನು ಮಾತನಾಡಿಸಿದವನ ನೆನ
ಪಾಗಿ, ಮಹಡಿಯತ್ತ ನೋಡಿದ. ಮೂಲೆಯ ಕಿಟಿಕಿಯಿ೦ದ ಕುಡಿಮೂಸಿ ಇದೇ ಈಗ
ಚಿಗುರೊಡೆಯುತ್ತಿದ್ದ ಮುಖವೊ೦ದು ಆತನನ್ನು ನೋಡುತ್ತಿತ್ತು. ಹಾಗೆ ನೋಡು
ತ್ತಿದ್ದವನು ಜಯರಾಮು. ಈ ಹುಡುಗ ರಾತ್ರೆ 'ಯಾರದು?' ಎ೦ದು ತನ್ನನ್ನು
ಪ್ರಶ್ನಿಸಿರಲಾರ ಎನ್ನಿಸಿತು ಶ೦ಕರನಾರಾಯಣಯ್ಯುನಿಗೆ. ಆತ ಸಮಸ್ಯೆಯ ಪರಿಹಾರ
ಕ್ಕಾಗಿ ಗು೦ಡಣ್ಣನ ನೆರವು ಕೆಳಿದ.
"ನಿಮ್ಮ ಹೆಸರು ಗೊತ್ತಾಗಿಲ್ಲ."
"ಗು೦ಡಣ್ಣ ಅ೦ತ."
ಹೊಸಬರು ತಾವಾಗಿಯೇ ಆ ರೀತಿ ತನ್ನ ಪರಿಚಯ ಮಾಡಿಕೊ೦ಡರೆ೦ದು
ಗು೦ಡಣ್ಣನಿಗೆ ಹೆಮ್ಮೆ ಎನಿಸಿತು.
"ನನ್ನ ಹೆಸರು ಶ೦ಕರನಾರಾಯಣಯ್ಯ."
"ಗೊತ್ತು ರ೦ಗವೋರು ಮೊನ್ನೆಯೇ ಹೇಳಿದ್ರು."
"ಹಾಗೇನು? ಮಹಡೀ ಮೇಲೆ ಯಾರಿರ್ತಾರೆ ಗು೦ಡಣ್ಣ?"
"ಸ್ಕೂಲು ಹುಡುಗರು," ಎ೦ದು ತಾತ್ಸಾರದಿ೦ದ ಹೇಳಿ ಗು೦ಡಣ್ಣ ಮು೦ದು
ವರಿಸಿದ:
"ಆ ಕೊನೇಲಿ ಬುಕ್ ಏಜಂಟು ಪುಸ್ತಕ ಮಾರ್ತಾರೆ, ಅಲ್ಲಿ నింತಿದಾನಲ್ಲಾ
ಅವನೇ-ಅವರ ಮಗ ಜಯರಾವು."
ತನ್ನ ಪ್ರಸ್ತಾಪ ಬಂತೆಂದು ಜಯರಾಮು ಮುಖ ತಿರುಗಿಸಿದ. ಆದರೆ
ಗುಂಡಣ್ಣನ ಉತ್ತರದಿಂದ ಶಂಕರನಾರಾಯಣಯ್ಯನ ಸಮಸ್ಯೆ ಬಗೆಹರಿಯಲಿಲ್ಲ.
“ಬೇರೆ ಯಾರೊ ಇಲ್ವೇನು?"
"ಇದಾರೆ-ಚಂದ್ರಶೇಖರಯ್ಯ ಅಂತ ఒಬ್ರು ಇನ್‌ಶೊರೆಸ್ಸು...."
ಗುಂಡಣ್ಣನ ಮಾತು ಪೂರೈಸುವುದಕ್ಕೆ ಮುಂಚೆಯೇ ಶಂಕರನಾರಾಯಣಯ್ಯ
ಮನೆಯತ್ತ ಬೇಗ ಬೇಗನೆ ಕಾಲು ಹಾಕಿದ. ಆ ಯುವಕನೇ, ಸಂದೇಹವಿರಲಿಲ್ಲ.
ಪರಿಚಯ ಮಾಡಿಕೊಳ್ಳುವ ಯೋಚನೆ! ವಿಮಾ ಸಂಸ್ಥೆಯ ಪ್ರತಿನಿಧಿಯೊಡನೆ ಪರಿ
ಚಯವೇ? ವಠಾರದಲ್ಲಿ ತಾನು ದೂರವಿಡಬೇಕಾದ ವ್ಯಕ್ತಿ ಈ ಚಂದ್ರಶೇಖರಯ್ಯ
ಎಂದು ಆತ ಆ ಕ್ಷಣವೇ ತೀರ್ಮಾನಿಸಿದ.
ಹೊತ್ತು ಏರುತ್ತಿತ್ತು, ಹೆಂಗಸರು ಮಕ್ಕಳಿಂದಷ್ಟೇ ತುಂಬಿದ ವಠಾರ. ಇದು
ಹೊಸ ಜಾಗನಲ್ಲ. ಬಹಳ ದಿನಗಳಿಂದಲೂ ತಾನು ನೋಡುತ್ತ ಇದ್ದ ದೃಶ್ಯ-ಎಂದು
ಆತನೆಗೆ ಭಾಸವಾಯಿತು.
ಬಾಗಿಲಿನೊಳಕ್ಕೆ ಕಾಲಿಡುತ್ತ ಆತ ಹೇಳಿದ:
" ಏ ಚಂಪಾ.. ಇಷ್ಟು ಹೊತ್ತಿಗೆ ವಠಾರದಲ್ಲಿ ಗಂಡಸರು ಯಾರೂ ಇರಲ್ವಲ್ಲೇ!
ಇನ್ನು ನಾನೂ ಬೆಳಗ್ಗೆ ಎದ್ದ ತಕ್ಷಣ ಹೊರಟ್ಟಿಡಬೇಕು."
"ಯಾಕೋ?יי
"ಮತ್ತೆ! ನಾನು ವಠಾರದಲ್ಲೆ ಇದ್ದರೆ ಸುಮ ನಿರು ತರೆಯೇ ಇವರೆల్ల?"
"ಏನಾಡ್ತಾರೆ?"
“ಈ ಚಂಪಾ ಗಂಡನನ್ನ ಮನೇಲೆ ಇಟ್ಟೊಂಬಿಡ್ತಾ ಅಂತಾರೆ."
“ಸಾಕು ನಿಮ್ರಮಾಷೆ. ಬಾಗಿಲು ಅಡ್ಡ ಮಾಡಿ ಸ್ವಲ್ಪ ತರಕಾರಿ ಹೆಚ್ಚಿ
ಅದೇನು ತಂದಿದೀರೋ?”
"ನೋಡಿದ್ಯಾ ಚಾಕರೀನೊ ಮಾಡಿಸ್ಕೊತಾಳೆ-ಅಂತ ಅವರು ಹೇಳಿದ್ರೂ
ತಪ್ಪೇನು?"
ಶಂಕರನಾರಾಯಣಯ್ಯ ಹನ್ನೊಂದು ಘ೦ಟೆಯ ಹೊತ್ತಿಗೆ ಸಾನ ಊಟ
ಎರಡೂ ಮುಗಿಸಿ ಗಾಂಧಿನಗರಕ್ಕೆ ಹೊರಟ. ಕೋಹಿನೊರು ಹಂಚಿಕೆಗಾರರಿಗೋಸ್ಕರ,
ಆರು ತಿಂಗಳ ಅನಂತರ ಬಿಡುಗಡೆಯಾಗಲಿದ್ದ ಒಂದು ಹಿಂದೀ: ಚಲಚ್ಚಿತ್ರಕ್ಕೆ ಜಾಹೀ
ರಾತು ಚಿತ್ರ ಬರೆಯುವ ಕೆಲಸ ಆರಂಭವಾಗಿತ್ತು. ಮನುಷ್ಯರನ್ನು ಇದ್ದುದಕ್ಕಿಂತಲೂ
ನಾಲ್ಕು ಪಾಲು ಗಾತ್ರದಲ್ಲಿ ತೋರಿಸುವ ಚಿತ್ರಗಳು, ಬಟ್ಟೆಯ ಮೇಲೆ ಅಳತೆ ಕೋಲಿನ
ಆಧಾರದಿಂದ ಪ್ರತಿರೂಪವನ್ನು ಒಡಮೂಡಿಸಿ, ದೊಡ್ಡ ದೊಡ್ಡ ಬ್ರಷ್ ಹಿಡಿದು ಬಣ್ಣ
ಬಳೆಯುವ ಕೆಲಸ.
ಚಪ್ಪಲಿ ಮೆಟ್ಟಿಕೊಂಡು ಶಂಕರನಾರಾಯಣಯ್ಯ ಅಂಗಳಕ್ಕಿಳಿದ. ಚ೦ಪಾ
ಕೂಸನ್ನೆತ್ತಿಕೊ೦ಡು ಗೇಟನವರೆಗೂ ಆತನನ್ನು ಹಿ೦ಬಾಲಿಸಿ బంದಳು.
ಗೇಟಿನ ಹೊರಗೆ ಒಂದು ಕ್ಷಣ ನಿಂತು ಶಂಕರನಾರಾಯಣಯ್ಯ ಕೇಳಿದ:
"ಎನಾದರು ತರಬೇಕೇನು?"
"ದುಡು ಕೈಗೆ ಬರೋ ಲಕ್ಷಣ ಲಕ್ಷಣ ಇದೆಯೊ?"
"ಅದ್ಯಾ?ಕೆ ನಿ೦ಗೆ?
"ನ೦ಗೇನೂ ಬೇಡಿಪ್ಪಾ."
“ಸರಿ ಮತ್ತೆ!"
ಬಲು ಸುಲಭವಾಗಿ ರೇಗುವ ಗುಣವಿತ್ತು ಶಂಕರನಾರಾಯಣಯ್ಯನಿಗೆ. ಆತ
ರೇಗಿದೊಡನೆ ಚ೦ಪಾಗೆ ಸಂತೋಷವಾಗುತ್ತಿತ್ತು.
"ಹೋಗಲಿ. ಹಾದೀಲಿ ಎಲ್ಲಾದರೂ ಓ೦ದು ಕುಚ್ಚು ಹೂ ತನ್ನಿ."
"ಅಬ್ಬ!"
ವಠಾರದ ಮು೦ಭಾಗದ ಕಿಟಕಿಗಳಿ೦ದಲೂ ಬೀದಿಯಾಚಿಗಿನ ಎದುರು ಮನೆ
ಗಳಿ೦ದಲೂ-ಬೀದಿಯಲ್ಲಿ ನಡೆದು ಹೋಗುತ್ತಿದ್ದ ಕೆಲವರೂ-ರಂಗಮ್ಮನ ವಠಾರ
ದೆದುರು ಸಲ್ಲಾಪ ನಡೆಸುತ್ತಿದ್ದ ದ೦ಪತಿಯನ್ನು ನೋಡಿದರು. ಆ ದೃಷ್ಟಿಗಳ ಬಿಸಿ
ತಾಕುತ್ತಲೇ ಶಂಕರನಾರಾಯಣಯ್ಯ ಹೇಳಿದ :
“ಹೀಗೆ ನಾವು ನಿಂತು ಮಾತನಾಡೋದು ಸರಿಯಲ್ಲ ಕಣೇ."
"ಯಾಕೊ?"
“ನಾವು ಗಂಡ ಹೆಂಡತಿ ಅಲ್ಲಾ೦ತ ತಿಳಿಕೊಂಡಿಟ್ಟಾರು ಯಾರಾದರೂ!"
"ಓಹೋ!"
"ಗಂಡ ಹೆಂಡತಿ ಎಲ್ಲಿಯಾದರೂ ಇಷ್ಟು ಅನ್ಯೋನ್ಯವಾಗಿ ಇರ್ತಾರೇನು?"
"ಹೋಗೀಪಾ, ಸಾಕು ನಿಮ್ಮ ಚೇಷ್ಟೆ."
ಆತ ಬೀದಿಗಿಳಿಯುತ್ತಿದ್ದಂತೆ ಚಂಪಾ ಮೆಲುದನಿಯಲ್ಲಿ ಎಚ್ಚರಿಕೆಯ ಮಾತ
ನಾಡಿದಳು;
“ಸಾಯಂಕಾಲ ಜಾಗ್ರತೆ ಬ೦ದ್ಬಿಡಿ....."
ಹೆಂಡತಿಯೊಡನೆ ಮಾತನಾಡುತ್ತಿ ಶಂಕರನಾರಾಯಣಯ್ಯ ಮಹಡಿಯತ್ತ
ತಿರುಗಿ ನೋಡಲಿಲ್ಲ. ಚಂದ್ರಶೇಖರಯ್ಯ ಎಲ್ಲಾದರೂ ತನ್ನನ್ನು ಕಂಡು 'ನಮಸ್ಕಾರ'
ಎನ್ನಬಹುದೆಂದು ಆತ ಹೆದರಿದ್ದ.
ಚಂಪಾ ಒಳಹೋಗುತ್ತಿದ್ದಂತೆ ರಂಗಮ್ಮ ಕೇಳಿದರು:
"ದಿನಾ ಇಷ್ಟುಹೊತ್ತಿಗೆ ನಿಮ್ಮ ಯಜಮಾನರು ಕೆಲಸಕ್ಕೆ ಹೋಗ್ತಾರೋ?"
"ಹೂ೦ ಕಣ್ರಿ."