ರಂಗಮ್ಮನ ವಠಾರ/೯

ವಿಕಿಸೋರ್ಸ್ದಿಂದ

ದ್ದುವು. ಜತೆಯಲ್ಲಿ ಅಂಚೆ ಚೀಟಿ ಇಟ್ಟಿದ್ದರೂ ಉತ್ತರ ಬಂದಿರಲಿಲ್ಲ. ಸ್ವೀಕೄತವಾಗಿರ ಬಹುದು; ಯಾವುದಾದರೊಂದು ವಾರಪತ್ರಿಕೆ ತೆರೆದೊಡನೆ ತನ್ನ ಕತೆಯೂ ಹೆಸರೂ ಕಣ್ಣಿಗೆ ಬೀಳಬಹುದು_ಎಂದು ಜಯರಾಮು ಆಸೆ ಕಟ್ಟಿಕೊಂಡಿದ್ದ. ಅದು ಆ ಏರಡು ಪತ್ರಿಕೆಗಳೂ ಹೊರಬೀಳುವ ದಿನ. ಬೇರೆ ವಾರವಾಗಿದ್ದರೆ ಜಯರಾಮು ಇಷ್ಟು ಹೊತ್ತಿಗೆ ಅಂಗಡಿ ಬೀದಿಯಲ್ಲಾಗಲೀ ವಾಚನಾಲಯದಲ್ಲಾಗಲೀ ಇರುತ್ತಿದ್ದ. ಆದರೆ ಈ ದಿನ ವಾರಪತ್ರಿಕೆಗಳನ್ನು ತೆರೆದು ನೋಡುವುದರಲ್ಲೂ ಆತನಿಗೆ ಆಸಿಕ್ತಿ ಇರಲಿಲ್ಲ.

ಜನರಿರುವ ಬೀದಿ ಬಿಟ್ಟು ಜಯರಾಮು ಕಾಲು ಹಾದಿ ಹಿಡಿದ. ಯಾರೂ ಜನ ರಿಲ್ಲದ ಜಾಗಕ್ಕೆ ದೂರ ಒಬ್ಬನೇ ಹೋಗಬೇಕೆಂದು ಅವನಿಗೆ ಬಯಕೆಯಾಯಿತು. ಯಾವುದೋ ಶಕ್ತಿ ನಗುನಗುತ್ತ ಒರಟು ಕೈಗಳಿಂದ ತನ್ನ ಕತ್ತನ್ನು ಹಿಸುಕಿ ಉಸಿರು ಕಟ್ಟಿಸುತ್ತಿದ್ದಂತೆ ಭಾಸವಾಗುತ್ತಿತ್ತು. ಹೄದಯ ಭಾರವಾಗಿ ಮೈ ಕಾವೇರಿದಂತೆ ತೋರಿತು.

...ರೈಲು ಸೇತುವೆಯನ್ನು ತಲುಪಿದ ಜಯರಾಮು, ಮಣ್ಣು ದಿಬ್ಬಗಳನ್ನು ಹಾದು ಕೆಳಕ್ಕಿಳಿದ. ಪಾದದ ಬಳಿ ಸ್ವಲ್ಪ ಹರಿದಿದ್ದ ಪಾಯಜಾಮ, ಮಾಸಿದ ಅಂಗಿ, ಎಣ್ಣೆ ಬಾಚಣಿಗೆಗಳ ಸ್ಪರ್ಶವಿಲ್ಲದೆ ಇದ್ದರೂ ಓರಣವಾಗಿದ್ದ ಕ್ರಾಪು......ಕಂಬಿಗೆ ಅಡ್ಡವಾಗಿ ಹಾಕಿದ ಹಲಿಗೆಗಳು ಅನಂತವಾಗಿದ್ದವು. ಕಲ್ಲು ತಾಕಿ ಒಮ್ಮೊಮ್ಮೆ ನೋವಾದರೂ, ಹಲಿಗೆಯಿಂದ ಹಲಿಗೆಗೆ ಹೆಜ್ಜೆ ಇಡುತ್ತ ಯಶವಂತಪುರದತ್ತ ಜಯ ರಾಮು ನಡೆದ.

ನಿರ್ಜನವಾಗಿದ್ದ ಮಲ್ಲೇಶ್ವರದ ರೈಲು ನಿಲ್ದಾಣ ಹಿಂದೆ ಬಿತ್ತು. ಆ ಬಳಿಕ ರೈಲು ಗೇಟು, ಕಾವಲು ಮನೆ, ಒಂಟಿ ಮರ. ಬರಲಿದ್ದ ಕಡು ಬೇಸಗೆಗೆ ಆಗಲೆ ಹೆದರಿ ನೆಲದ ಮೈ ಸುಕ್ಕುಗಟ್ಟಿತ್ತು. ಸಂಜೆಯಾಗುತ್ತ ಬಂದಿದ್ದರೂ ವೄದ್ದ ಸೂರ್ಯ ಉಗ್ರ ನಾಗಿಯೇ ಇದ್ದ. ಜಯರಾಮು ಅಲ್ಲೇ ಎಡಕ್ಕೆ ಇಳಿದು ಕೆರೆಯನ್ನು ಬಳಸಿಕೊಂಡು ಎದುರಿಗಿದ್ದ ಬೆಟ್ಟವನ್ನೇರಿದ. ಎತ್ತರದಲ್ಲಿ ಬಂಡೆಗಲ್ಲುಗಳಿದ್ದುವು. ಜಯರಾಮು ತನ್ನ ಪರಿಚಯದ ಕಲ್ಲಿಗೆ ಒರಗಿ ಕುಳಿತ.

ವಾರಕೋಮ್ಮೆಯೋ ಎರಡು ವಾರಗಳಿಗೊಮ್ಮೆಯೋ ಜಯರಾಮು ಅಲ್ಲಿಗೆ ಬರುವುದಿತ್ತು. ಅದು ಮನಸ್ಸು ತುಂಬಾ ಉಲ್ಲಾಸವಾಗಿದ್ದಾಗ, ಇಲ್ಲಿವೆ ಬಹಳ ಪ್ರಕ್ಷುಬ್ಧಗೊಂಡಿದ್ದಾಗ. ಮನಸ್ಸು ಸಂತೋಷದಿಂದ ಚಿಲಿಪಿಲಿಗುಡುತ್ತಿದ್ದ ದಿನ, ಬಾಡಿದ್ದರೂ ಸರಿಯೆ ಚಿಗುರಿದ್ದರೂ ಸರಿಯೆ ನಿಸರ್ಗ ಸುಂದರವಾಗಿ ಕಾಣಿಸಿ ಆತ ನನ್ನು ತನ್ಮಯಗೊಳಿಸುತ್ತಿತ್ತು. ಮನುಷ್ಯನನ್ನು ಮಣ್ಣಿಗೆ ಬಿಗಿದಿರುವ ಅಗೋಚರ ತಂತುವಿನ ವಿಷಯ ಆತ ವಿಸ್ಮಯಗೊಳ್ಳುತ್ತಿದ್ದ. ಕರಿಯ ಬಂಡೆಗಳು ಆತನಿಗೆ ಪ್ರಿಯ ವಾಗಿ ತೋರುತ್ತಿದ್ದುವು. ಬೆರಳುಗಳಿಂದ ಅವುಗಳನ್ನು ಮುಟ್ಟಿ ನೋಡುತ್ತಿದ್ದ. ಮನಸ್ಸು ಬೇಸರವಾಗಿದ್ದಾಗ, ಸುತ್ತಮುತ್ತಲಿನ ಬರಿಯ ಶೂನ್ಯವೂ ಒಂದು ಬಗೆಯ

ನೆಮ್ಮದಿಯನ್ನು ಆತನಿಗೆ ದೊರಕಿಸುತ್ತಿತ್ತು.

ವಿಸ್ತಾರವಾದ ಬಂಡೆಗಲ್ಲು . ಕೆಳಗೆ ಒಂದೆಡೆ ಸಿಡಿಮದ್ದು ಹಾಕಿ ಒಂದಷ್ಟು ಭಾಗ
ವನ್ನು ಒಡೆದು ಒಯ್ದಿದ್ದರು. ಆದರೂ ಎಷ್ಟೊಂದು ಆಚಲವಾಗಿ ಗಂಭೀರವಾಗಿ
ಅದು ನಿಂತಿತ್ತು! ಏನಾದರೊಂದು ಘಟನೆಯಿಂದ ಹೃದಯಕ್ಕೆ ಆಘಾತವಾದಾಗ, ಮನ
ಸ್ಸಿಗೆ ನೋವಾದಾಗ, ಜಯರಾಮು "ಈ ಬಂಡೆ ಕಲ್ಲಿನ ಬಲ ನನಾಗಿರಬಾರದೆ?" ಎಂದು
ಕೊಳ್ಳುತ್ತಿದ್ದ.
ಪ್ರೌಢಶಾಲೆಯಲ್ಲಿದ್ದಾಗ ದೊಡ್ಡ ಹುಡುಗರು ಅವನಿಗೆ ಕೀಟಲೆ ಕೊಟ್ಟು ಗೇಲಿ
ಮಾಡುತ್ತಿದ್ದರು:
"ಏ ಹುಡುಗಿ!"
ಆಗ ಜಯರಾಮು ನೋಡಲು ಸುಂದರನಾಗಿದ್ದ. ಮುಟ್ಟಿದರೆ ಮುದುಡಿ
ಕೊಂಡು ತನ್ನಷ್ಟಕ್ಕೆ ಸುಮ್ಮನಿರುತ್ತಿದ್ದ. ತಾನು ದುರ್ಬಲನೆಂಬುದರ ಅರಿವಾದಾಗಲೆಲ್ಲ
ಅವನಿಗೆ ಅಳು ಬರುತ್ತಿತ್ತು.
ಆದರೆ ಕಾಲೇಜಿನ ಮೆಟ್ಟಿಲೇರುವ ಹೊತ್ತಿಗೆ ಅವನಲ್ಲಿ ಮಾರ್ಪಾಟಾಗಿತ್ತು.
ಮುಖದ ಮೇಲೆ ಹೇರಳವಾಗಿ ಮೂಡಿದ ತಾರುಣ್ಯ ಪೀಟಿಕೆಗಳು ಅವನ ಸೌಂದರ್ಯ
ದಿಂದ ಹುಡುಗಿತನವನ್ನು ಕಸಿದುಕೊಂಡುವು. ಕಾಲೇಜಿಗೆ ಬರಲು ಬರಿಗಾಲಿನಲ್ಲಿ
ಮೈಲು ಮೈಲುಗಳ ನಡಿಗೆ, ಬರಿಗೈ, ಬರಿಜೇಬು, ಇತರ ಹಲವಾರು ವಿದ್ಯಾರ್ಥಿಗಳ
ವಿಲಾಸಮಯ ಜೀವನದೊಡನೆ ತನ್ನದರ ಹೋಲಿಕೆ ಇವೆಲ್ಲ ತನ್ನ ಕುಟುಂಬದ ಇರುವಿ
ಕೆಯ ನಿಜಸ್ವರೂಪದ ಪರಿಚಯವನ್ನು ಆತನಿಗೆ ಮಾಡಿಕೊಟ್ಟುವು.
ಆ ಬಳಿಕ ಆತನ ದೃಷ್ಟಿ ಸುತ್ತುಮುತ್ತಲೂ ಹರಿದು, ತನ್ನ ಕುಟುಂಬದ ರೂಪು
ರೇಖೆಗಳೇ ಇದ್ದ ಇತರ ನೂರು ಕುಟುಂಬಗಳನ್ನು ಗುರುತಿಸಿತು. ತಮಗಿಂತ ಕಡು
ಬಡವರಾದ ಸಹಸ್ರ ಜನರನ್ನೂ ಕಂಡಿತು. ಸಂಖ್ಯೆಯಲ್ಲಿ ಅಲ್ಪರಾದ ಸುಖಜೀವಿ
ಭಾಗ್ಯವಂತರನ್ನೂ ಆತ ನೋಡಿದ. ಸಾಮರಸ್ಯವಿಲ್ಲದ ಜೀವನ....ದಿನನಿತ್ಯದ ಅನು
ಭವಗಳೊ! ಪ್ರತಿಯೊಂದು ಸೂಜಿ ಚುಚ್ಚಿದ ಹಾಗೆ ಅಚ್ಚೊತ್ತಿ ಹೋಗುತ್ತಿತ್ತು.
ತನ್ನ ಪ್ರೀತಿಯ ತಾಯಿ ಇತರ ಹಲವರಂತೆ ಯಾಕೆ ಮೈ ತುಂಬಿಕೊಂಡಿಲ್ಲ?
ಆಕೆಯ ಮುಖವನ್ನು ಯಾವಾಗಲೂ ದುಃಖದ ಮೋಡ ಯಾಕೆ ಕವಿದೇ ಇರುತ್ತದೆ?
ಇದು ಈಗೀಗ ಜಯರಾಮುಗೆ ಅರ್ಥವಾಗುತ್ತಿತ್ತು.
ತಂಗಿ ರಾಧೆಯನ್ನು ಆತ ತುಂಬಾ ಪ್ರೀತಿಸುತ್ತಿದ್ದ. ಮಕ್ಕಳು ಅನ್ಯೋನ್ಯ
ವಾಗಿರುವುದನ್ನು ಕಂಡು ತಾಯಿಗೆ ಸಮಾಧಾನ. ಆದರೆ ಆ ತಂಗಿ ಅವನ ಜತೆಯಲ್ಲೇ
ಸದಾ ಕಾಲವೂ ಇರುವುದು ಸಾಧ್ಯವಿರಲಿಲ್ಲ. ರಾಧಾ ಇನ್ನೊಬ್ಬರ ಮನೆಗೆ ಹೋಗ
ಬೇಕಾದ ವೇಳೆ ಸಮೀಪಿಸುತ್ತಿತ್ತು. ಅವಳಿಗಾಗಿ ಆ ವರೆಗೂ ಯಾವುದೇ ಮನೆಯ
ಬಾಗಿಲು ತೆರೆದಿಲ್ಲವಾದರೂ ನೋಡುತ್ತಿದ್ದ ಎಲ್ಲರ ದೃಷ್ಟಿಯಲ್ಲಿ ಮದುವೆಯ ದಿನ
ಹತ್ತಿರ ಬರುತ್ತಿತ್ತೆಂಬುದು ಸ್ಪಷ್ಟವಾಗಿತ್ತು.

ಈ ಸಲ ಪ್ರವಾಸದಿಂದ ಹಿಂತಿರುಗಿ ಬಂದ ತಂದೆ....ಒಂದು ಸಂಸಾರವನ್ನು

ಸಾಕಲು ಅವರು ಎಷ್ಟೊಂದು ಕಷ್ಟಪಡಬೇಕು! ತಂದೆ ಮತ್ತು ತಾಯಿ ...
ಜಯರಾಮು ಮನೆಯಿಂದ ಈ ಸಂಜೆ ಹೊರಟು ಬಂದುಬಿಟ್ಟಿದ್ದ, ಹೆತ್ತವರು
ತಮ್ಮ ಮಕ್ಕಳೆದುರು ಮಾತನಾಡಲಾಗದ ಎಷ್ಟೋ ವಿಷಯಗಳಿದ್ದುವು. ದಂಪತಿ
ಎಂದ ಮೇಲೆ ಅವರಿಗೆ ಏಕಾಂತ ಬೇಡವೆ? ರಾತ್ರಿಯಂತೂ ಆ ಕೊಠಡಿ_ಮನೆಯೊಳಗೆ
ಸಂಸಾರವೆಲ್ಲ ನಿದ್ದೆ ಹೋದಾಗ ಗೋಪ್ಯವೆಂಬುವುದಿಲ್ಲ. ಹಗಲಾದರೂ ಮಾತನಾಡಲು
ಅವರಿಗೆ ಅವಕಾಶವಿಲ್ಲದಿದ್ದರೆ?
'ರಾಧೆಗೇನೂ ತಿಳಿಯೋದೇ ಇಲ್ಲ. ಆಕೆ ಇನ್ನೂ ಹಸುಳೆ', ಎಂದುಕೊಂಡು ಜಯರಾಮು. ತಾನು ಆಕೆಯನ್ನು ಕರೆದುಕೊಂಡು ಬರಬೇಕಾಗಿತ್ತು, ಒಬ್ಬನೇ ಬಂದು ತಪ್ಪು ಮಾಡಿದೆ _ಎಂದು ಪರಿತಪಿಸಿದೆ.
ಜಯರಾಮುವಿಗೆ ಓದಿನಲ್ಲಿ ಆಸಕ್ತಿ ಇರಲಿಲ್ಲ. ಆತ ಪರೀಕ್ಷೆಯಲ್ಲಿ ಉತ್ತೀರ್ಣ
ನಾಗದೆ ಇರಲು ಇದೇ ಬಹಳ ಮಟ್ಟಿಗೆ ಕಾರಣವಾಗಿತ್ತು.
ಒಂದು ದಿನ ಅರ್ಥಶಾಸ್ತ್ರದ ಉಪನ್ಯಾಸಕರು ಕೇಳಿದ್ದರು:
"ಏನಪ್ಪಾ, ಓದೋಕೆ ಮನಸಿಲ್ವೆ?"
ಆ ಮಾತು ಕೇಳಿ ಜಯರಾಮುವಿನ ಮುಖ ಕೆಂಪಗಾಗಿತ್ತು. ಉತ್ತರ ಹೊರ
ಟಿರಲಿಲ್ಲ.
ಈಗಿನ ಕಾಲದ ಹುಡುಗರೆಲ್ಲ ಖಂಡಿತವಗಿಯೂ ಕೆಟ್ಟು ಹೋದರೆಂದು ನಂಬಿದ್ದ
ಸ್ವಲ್ಪ ವಯಸ್ಸಾಗಿದ್ದ ಆ ಅಧ್ಯಾಪಕರು ನೊಂದ ಧ್ವನಿಯಲ್ಲಿ ಹೇಳಿದ್ದರು:
"ಅನುಕೂಲವಿದ್ದರೆ ಎಷ್ಟು ವರ್ಷ ಬೇಕಾದರೂ ಇಲ್ಲೇ ಇರು. ಸಂತೋಷವೇ.
ಆದರೆ, ನಿನ್ನನ್ನ ನೋಡಿದರೆ, ಅನುಕೂಲವಿದ್ದ ಹಾಗೆ ಕಾಣಿಸೋದಿಲ್ಲ. ಕಲಿಯೋಕೆ
ಇಷ್ಟವಿಲ್ಲದೆ ಹೋದರೆ ಸುಮ್ಸುಮ್ನೆ ಹೆತ್ತವರ ಹೊಟ್ಟೆ ಉರಿಸಬಾರದಪ್ಪಾ."
ಜಯರಾಮುಗೆ ಅಳು ಬಂದಿತ್ತು. ಆದರೆ ಅದು ನಿರ್ಜನ ಪ್ರದೇಶವಾಗಿರಲಿಲ್ಲ
ವಾದ್ದರಿಂದ ಬಿಗಿದುಕೊಂಡ ಕುತ್ತಿಗೆಯ ನರಗಳು ಮತ್ತೆ ಸಡಿಲವಾದವು. ಆ ದಿನವೂ
ಜಯರಾಮು ಈ ಬೆಟ್ಟವನ್ನೇರಿ ಬಂದು,ಕತ್ತಲು ಆ ಭೂಮಿಯ ಮೇಲೆಲ್ಲ ಕರಿಯ
ತೆರೆ ಎಳೆಯುವವರೆಗೂ ಆಲ್ಲಿ ಕುಳಿತಿದ್ದ. ಯಾರೂ ಇಲ್ಲದೆ ಇದ್ದಾಗ ಕಣ್ಣೀರು
ಧಾರಾಕಾರವಾಗಿ ಹರಿದಿತ್ತು.
ಅಧ್ಯಾಪಕರು ನಿಜವಾದ್ದನ್ನೇ ಹೇಳಿದ್ದರು. ಪಾಠಗಳಲ್ಲಿ ಆತನಿಗೆ ಆಸಕ್ತಿ
ಇರಲಿಲ್ಲ. ಕಾಲೇಜಿನ ತರಗತಿಯ ನಾಲ್ಕು ಗೋಡೆಗಳೊಳಗಿದ್ದರೆ ಮಾತ್ರ ವಿದ್ಯಾವಂತ
ನಾಗುವುದು ಸಾಧ್ಯವೆಂಬುದನ್ನು ಅವನು ಒಪ್ಪುತ್ತಿರಲಿಲ್ಲ. ವಿದೇಶೀಯರು ಬಳುವಳಿ
ಯಾಗಿ ಕೊಟ್ಟು ಹೋಗಿದ್ದ ಈ ವಿದ್ಯಾಪದ್ಧತಿಯನ್ನು ಖಂಡಿಸುವ ಹಲವಾರು ಭಾಷಣ
ಗಳನ್ನು ಆತ ಕೇಳಿದ್ದ.ಈ ವಾದಸರಣಿ ಆತನಿಗೆ ಮೆಚ್ಚುಗೆಯಾಗಿತ್ತು. ಅವನಿಗೆ
ಇದ್ದ ಆಕರ್ಷಣೆ ಸಾಹಿತ್ಯವೊಂದೇ. ಪುಸ್ತಕಗಳ ಲೋಕದಲ್ಲಿ ಸುಖಿಯಾಗಿ ಇಲ್ಲವೆ
ದುಃಖಿಯಾಗಿ ವಿಹರಿಸುತ್ತ ಆತ ಕಷ್ಟಕೋಟಲೆಗಳ ವಾಸ್ತವ ಲೋಕವನ್ನು
ಮರೆಯುತ್ತಿದ್ದ.
ತಾನು ಈ ಸಲ ಪರೀಕ್ಷೆ ಕಟ್ಟದಿರುವುದೇ ಮೇಲು, ಈ ಓದು ಇಷ್ಟವಿಲ್ಲವೆಂದು
ತಂದೆ ಬಂದೊಡನೆ ಹೇಳಬೇಕು ಎಂದೆಲ್ಲ ಯೋಚಿಸುತ್ತ ಜಯರಾಮು ಮನೆಗೆ
ಮರೆಳಿದ್ದ ಆ ಸಂಜೆ.
"ಯಾಕೊ ಇಷ್ಟು ತಡ?"
-ಎಂದು ಜಯರಾಮುವಿನ ತಾಯಿ ಕೇಳಿದಳು. ಮಗ ಉತ್ತರ ಕೊಡಲಿಲ್ಲ
ವೆಂದು ಆಕೆ ಸಿಟ್ಟಾದಳು.
"ಮಾತು ಕೂಡ ಆಡ್ಬಾರ್ದೇನೊ?" ಎಂದು ತಾಯಿ ರೇಗಿ ನುಡಿದು, ತಾನು
ಒಡೆದು ಮಗಳ ಕೈಯಲ್ಲಿ ಓದಿಸಿ ದೇವರ ಪಠದ ಹಿಂದಿರಿಸಿದ್ದ ಕಾಗದವನ್ನು ಮಗನಿಗೆ
ಕೊಟ್ಟಳು.
"ನೋಡು, ನಿಮ್ಮಪ್ಪ ಕಾಗದ ಬರೆದಿದ್ದಾರೆ. ಪರೀಕ್ಷೆ ದುಡ್ಡು ಕಟ್ಟೋಕೇಂತ
ಮನಿಯಾರ್ಡರೂ ಕಳಿಸಿದ್ದಾರೆ."
ತಂದೆಯ ಕಾಗದ ಓದಿದ ಮಗನ ಮನಸ್ಸು ಕುಗ್ಗಿ ಹೋಹಿತು. ಆತನ ವಿದ್ಯಾ
ಭ್ಯಾಸಕ್ಕೂ ಆ ಪರೀಕ್ಷೆಗೂ ಅವರು ಅಷ್ಟೊಂದು ಮಹತ್ವ ಕೊಟ್ಟಿದ್ದರು! "ಇನ್ನು
ಮುಂದಕ್ಕೆ ಓದಿಸುವ ಸಾಮರ್ಥ್ಯ ನನಗಿಲ್ಲ. ಆದರೆ ನನ್ನ ಮಗ ಇಂಟರ್ ಪರೀಕ್ಷೆ
ಯಾದರೂ ಪಾಸಾಗಬೇಕು. ನೀನು ಬೇಗನೆ ಸಂಪಾದಿಸುವಂತಾಗಬೇಕು. ನಮ್ಮ
ಸಂಸಾರದ ಪರಿಸ್ಥಿತಿ ನಿನಗೆ ಗೊತ್ತೇ ಇದೆ..."
ಇಯಿ ಕೇಳಿದ್ದಳು:
"ನಿದ್ದೆ ಬಂತೆ ಜಯರಾಮೂ?"
ಆ ಪ್ರಶ್ನೆ ಕೇಳಿಸಿದ್ದರೂ ಉತ್ತರ ಕೊಡಲಿಲ್ಲ ಆತ. ಅತ್ತಿತ್ತ ಮಿಸುಕದೆ ಮಲ
ಗಿದ. ಯೋಚನೆಯಿಂದ ಆ ಮೆದುಳು ಭಣಗುಟ್ಟಿತು...ತಂದೆಯ ಬಯಕೆಯನ್ನು
ಪೂರೈಸುವುದಕ್ಕಾದರೂ ತಾನು ಓದಬೇಕು, ಉತ್ತೀರ್ಣನಾಗಬೇಕು, ಎಷ್ಟೆಂದರೂ
ಇನ್ನು ಕೆಲವು ತಿಂಗಳು ಮಾತ್ರ ಎಂದುಕೊಂಡ.
ಆದರೆ ಆ ತೀರ್ಮಾನವನ್ನು ಕಾರ್ಯಗತಗೊಳಿಸುವುದು ಸುಲಭವಾಗಿರಲಿಲ್ಲ.
ಮತ್ತೆ ಮತ್ತೆ ಜಯರಾಮು ಪರೀಕ್ಷೆಗೆ ಕುಳಿತುಕೊಳ್ಳಬೇಕಾಯಿತು. ತಂದೆ ಅವಾಚ್ಯ
ಮಾತುಗಳಿಂದ ಗದರಿಸಲಿಲ್ಲವಾದರೂ ಅವರಿಗೆ ತುಂಬಾ ದುಃಖವಾಗಿದೆ ಎಂಬುದನ್ನು
ಜಯರಾಮು ತಿಳಿದ.
ಒಮ್ಮೆ ಆತನ ತಂದೆ ಕೇಳಿದರು:
"ಷಾರ್ಟ್ ಹ್ಯಾಂಡ್ ಟೈಪ್ ರೈಟಿಂಗ್ ಕಲೀತಿಯೇನೋ?"
ಜಯರಾಮು ಉತ್ತರ ಕೊಡಲಿಲ್ಲ. ಆದರೆ ಆ ಕಲಿಯುವಿಕೆಯಿಂದ ಮುಖ್ಯ
ಪರೀಕ್ಷೆಗೆ ಭಂಗ ಬರಬಹುದೆಂದು ಅಳುಕಿ ಅವರೇ ಹೇಳಿದರು:
"ಈಗ ಬೇಡ. ಮೊದಲು ಪರೀಕ್ಷೆಯೊಂದು ಆಗಲಿ."
ಈ ಸಂಜೆ ತಾಯಿ ತಂದೆಯರಿಂದ, ತಂಗಿಯಿಂದ ದೂರ ಬಂದು ಕುಳಿತು ಜಯ
ರಾಮು ಅಂತರ್ಮುಖಿಯಾಗಿ ಬಹಳ ಹೊತ್ತು ಯೋಚಿಸಿದ.
ತಂದೆ ಬಡಕಲಾಗಿದ್ದರು. ಪ್ರವಾಸ ವ್ಯಾಪಾರದಿಂದ ಅವರ ಆರೋಗ್ಯ ಕೆಟ್ಟಿತ್ತು
ಇಳಿಮುಖವಾಗಿತ್ತು ಸಂಪಾದನೆ. ತನ್ನ ತಂಗಿಯ ಮದುವೆ...
ಮತ್ತೂ ಹಿಂದಕ್ಕೆ ಬಂಡೆಕಲ್ಲಿಗೊರೈಗಿ ಕಾಲುಗಳನ್ನು ಸಡಿಲವಾಗಿ ಚಾಚಿ ಜಯ
ರಾಮು ನಿಟ್ಟುಸಿರುಬಿಟ್ಟ.
ಹೇಗಿರುತ್ತಾರೆ ಮನುಷ್ಯರು! ಉದಾಹರಣೆಗೆ ರಂಗಮ್ಮ. ಅವರಲ್ಲಿ ಜಯ
ರಾಮು ಒಳ್ಳೆಯವೆಂದು ಭಾವಿಸಿದ್ದ ಎಷ್ಟೋ ಗುಣಗಳಿದ್ದುವು. ಕೆಟ್ಟ ಗುಣಗಳೂ
ಇದ್ದವು. ಅವರು ಕಷ್ಟಪಟ್ಟು ಮಕ್ಕಳನ್ನು ಬೆಳಸಿ ದೊಡ್ಡವರಾಗಿ ಮಾಡಿದ ಸಾಹಸದ
ಕತೆ ಕೇಳಿದಾಗ ಜಯರಾಮು ಬೆರಗಾಗಿದ್ದ. ಆದರೆ ರಂಗಮ್ಮ ವಯಸ್ಸಾದಂತೆ ಹೆಚ್ಚು
ಹೆಚ್ಚು ಜಿಪುಣರಾಗುತ್ತ ಬಂದಿದ್ದರು. ಹಣ ಎಂದರೆ ಎಷ್ಟೊಂದು ಪ್ರೀತಿ ಅವರಿಗೆ!
ಆ ನೀರು ಲೈಟುಗಳು ಲೆಕ್ಕ...
ಒಂದು ದಿನ ವಠಾರದ ಎಲ್ಲರ ಮುಂದೆ ಜಯರಾಮು ಅವರನ್ನು ಕೇಳಿದ್ದ :
"ಕಕ್ಕಸು ನೋಡಿದ್ರಾ ರಂಗಮ್ನೋರೆ?"
"ಏನಾಗಿದೆಯಪ್ಪಾ...?"
"ಥೂ ಥೂ... ಹೊಲಸೂಂದರೆ ಹೊಲಸು.."
"ಕಕ್ಕಸು ತೊಳೆಯೋಳು ಬರ್ಲಿಲ್ವೇನೊ?"
"ಬಂದಿದ್ಲು. ನೀವು ಕೊಡೋದು ನಾಲ್ಕೇ ಆಣೆ. ನಾಲ್ಕಾಣೆಗೆ ಎಷ್ಟು ತೊಳೀ
ಬೇಕೋ ಅಷ್ಟು ತೊಳೀತಾಳೆ."
ರಂಗಮ್ಮ ಸಿಟ್ಟಾಗಿ ಕೇಳಿದರು.
"ಇನ್ನೇನು? ಒಂದು ರೂಪಾಯಿ ಕೊಡ್ಲೆ ನಾನು?"
"ನೀವ್ಯಾಕೆ ಕೊಡ್ಬೇಕು? ಇಷ್ಟು ಸಂಸಾರ ಇಲ್ವೆ ಇಲ್ಲಿ? ಒಬ್ಬೊಬ್ಬರು ಬಾಡಿಗೆ
ಜತೇಲಿ ಎರಡೆರಡಾಣೆ ಕೊಡ್ಲಿ. ಆಗ ಒಂದು ರೂಪಾಯಿ ಕಕ್ಕಸು ತೊಳೆಯೋಳಿಗೆ
ಕೊಡೋಕೆ ಅಗಲ್ವೊ?"
ಅಲ್ಲಿದ್ದ ಹೆಂಗಸರೆಲ್ಲ ಜಯರಾಮುವನ್ನು ದುರುಗಟ್ಟಿ ನೋಡಿದರು. ಅದರೆ
ಅವನ ಕಣ್ಣುಗಳಲ್ಲಿ ತುಂಟತನ ಮಿನುಗುತ್ತಿದ್ದುದು ಕೆಲವರಿಗೆ ಕಾಣಿಸದಿರಲಿಲ್ಲ. ಆದರೆ
ಆ ವ್ಯಂಗ್ಯ ಅರ್ಥವಾಗದೆ ರಂಗಮ್ಮ ಎರಡೆರಡಾಣೆಯಂತೆ ಒಂದು ರೂಪಾಯಿ ಹನ್ನೆರ
ಡಾಣೆ ಜಮೆಯಾಗುವುದನ್ನೂ ಮುನಿಸಿಪಾಲಿಟಿಯವಳಿಗೆ ಎಂಟಾಣೆ ಕೊಟ್ಟರೂ ಒಂದೂ
ಕಾಲು ರೂಪಾಯಿ ಮಿಗುವುದನ್ನೂ ಮನಸ್ಸಿನಲ್ಲೆ ಲೆಕ್ಕ ಹಾಕಿದರು. ಅದೊಂದನ್ನೂ
ಹೊರಗೆ ತೋರಗೊಡದೆ ಅವರು ಗೊಣಗಿದರು:
"ಸರಿ, ಇನ್ನು ಅದೊಂದು. ಇವರೆಲ್ಲಾ ಬಾಡಿಗೆ ಒಮ್ಮೆ ಸರಿಯಾಗಿ ಕೊಟ್ಟರೆ
ಸಾಕಾಗಿದೆ."
ಮೇಲಿಂದ ಕಿಟಿಕಿ ಮೂಲಕ ಇಣಿಕಿ ನೋಡಿ ಜಯರಾಮುವಿನ ತಾಯಿ
ಕೇಳಿದ್ದಳು:
"ಏನೋ ಅದು ಗಲಾಟೆ?"
ಜಯರಾಮು ಮೇಲಕ್ಕೆ ಬಂದು, ಕೆಳಗೆ ಆದ ಸಂಭಾಷಣೆಯನ್ನು ತಾಯಿಗೂ
ಹೇಳಿ ಬಿದ್ದು ನಕ್ಕ. ಆಕೆಗೂ ನಗು ಬರದಿರಲಿಲ್ಲ. ಆದರೂ ಎಂದಿನಂತೆ ಆಕೆ
ಹೇಳಿದಳು:
"ವಯಸ್ಸಾದೋರ ಜತೇಲಿ ಹಾಗೆಲ್ಲ ಮಾತಾಡ್ಬಾರದಪ್ಪಾ."
ಆದರೆ ಅಂತಹ ತುಂಟ ಮಾತುಗಳಿಂದ ಸಂತೋಷವಾಗಿರುತ್ತಿದ್ದ ಜಯರಾಮು
ಮತ್ತೊಂದು ದಿನ ರಂಗಮ್ಮ ಒಬ್ಬರೇ ಇದ್ದಾಗ ಕೇಳಿದ್ದ:
"ನಾನು ಅವತ್ತು ಹೇಳಿದ ವಿಷಯ ಏನ್ಮಾಡಿದಿರಿ ರಂಗಮ್ನೋರೆ?"
"ಯಾವ ವಿಷಯ್ವೊ?"
"ಅದೇ-ಕಕ್ಕಸಿಂದು."
ಹಾಗೆ ಹೇಳಿದಾಗ ಗಾಂಭೀರ್ಯ ಮರೆಯಾಗಿ ನಗು ಬಂದು ಬಿಟ್ಟಿತ್ತು ಜಯ
ರಾಮುಗೆ. ಅದನ್ನು ಗಮನಿಸಿ ರಂಗಮ್ಮ ಅರೆಮನಸಿನಿಂದ ರೇಗುತ್ತ ಹೇಳಿದ್ದರು:
"ನಗ್ತೀಯೇನೋ? ಕೈಲಾಗದ ಮುದುಕಿ ಒಬ್ಬಳಿದಾಳೇಂತ ನಿನಗೆಲ್ಲಾ ತಮಾಷೆ
ಯಾಗ್ಬಿಟ್ಟಿದೆ ಅಲ್ವೇ? ತಾಳು ಬರ್ಲಿ ನಿಮ್ಮಪ್ಪ."
ಜಯರಾಮು ನಕ್ಕು, ರಂಗಮ್ಮನನ್ನು ಕೇಳಿದ:
"ಗೋದಿಗೀದಿ ಏನಾದರೂ ಇದ್ದರೆ ಕೊಡಿ. ಹಿಟ್ಟು ಮಾಡಿಸಿಕೊಂಡು ಬರ್ತೀನಿ."
ಆ ಕ್ಷಣ ರಂಗಮ್ಮನಿಗೆ ಬೇರೆ ಎಲ್ಲವೂ ಮರೆತು ಹೋಯಿತು. ಸ್ವಯಂಸೇವಕ
ನಾಗಿ ಬಂದ ಜಯರಾಮು ಅವರ ಪ್ರೀತಿಪಾತ್ರನಾದ.
ನಾರಾಯಣಿ ಸತ್ತಾಗ ಅಂತ್ಯಸಂಸ್ಕಾರಕ್ಕೆಂದು ರಂಗಮ್ಮ ಐದು ರೂಪಾಯಿ
ತೆಗೆದುಕೊಟ್ಟ ಸನ್ನಿವೇಶ, ಹಾಗೆಯೇ ಅಕ್ಕಪಕ್ಕದವರು ಕಾಹಿಲೆ ಬಿದ್ದಾಗ ಅವರು
ನಡೆಸುತ್ತಿದ್ದ ಆರೈಕೆ- ಅದೊಂದು ಚಿತ್ರವಾದರೆ, ನಾರಾಯಣಿಯ ಗಂಡ ಮಕ್ಕಳೊಡನೆ
ಮನೆ ಬಿಟ್ಟು ಹೊರಟು ಹೋಗುವಂತೆ ಅವರು ಮಾಡಿದ್ದು, ಖಾಲಿ ಮನೆಯನ್ನು
ನೋಡಲು ಯಾರಾದರೂ ಬಂದಾಗ ಅವರು ಒಪ್ಪುವಂತೆ ಒಲಿಸಲು ಆಕೆ ತೋರಿಸು
ತ್ತಿದ್ದ ವಾಕ್ಚಾತುರ್ಯ- ಇದು ಇನ್ನೊಂದು ಚಿತ್ರವಾಗಿತ್ತು.

ಹೀಗೆ ಪ್ರತಿ ಮನುಷ್ಯನನ್ನೂ ಜಯರಾಮು ಸೂಕ್ಷ್ಮವಾಗಿ ನಿರೀಕ್ಷಿಸಿ ತಿಳಿದು
ಕೊಳ್ಳುತ್ತಿದ್ದ. ಪ್ರತಿಯೊಬ್ಬನೂ ಒಳಿತು_ಕೆಡಕುಗಳ ಸಮ್ಮಿಶ್ರಣ. ಕೆಲವರಲ್ಲಿ ಒಳಿತು
ಹೆಚ್ಚು. ಕೆಲವರಲ್ಲಿ ಕೆಡುಕು. ಪ್ರತಿಯೊಬ್ಬರನ್ನೂ ಹಾಗೆ ತೂಗಿ ನೋಡಿದ ಮೇಲೆ
ಮತ್ತೊಂದು ಪ್ರಶ್ನೆ ಏಳುತ್ತಿತ್ತು, 'ಈ ಮನುಷ್ಯ ಹೀಗೇಕೆ?' ಶಂಕೆ ಸಂದೇಹಗಳು

12

90

ಸೇತುವೆ

ಮೂಡಿದಾಗಲೆಲ್ಲ ಜಯರಾಮು ಪುಸ್ತಕಗಳಲ್ಲಿ ವಿವರಣೆ ಹುಡುಕುತ್ತಿದ್ದ. ಆದರೆ
ಸಮರ್ಪಕ ಉತ್ತರ ಅಲ್ಲಿ ಪ್ರತಿ ಸಲವೂ ಸಿಗುತ್ತಿರಲಿಲ್ಲ.
ಮನಸ್ಸಿನ ಆ ಭಾವನೆಗಳಿಗೆ ಮಾತಿನ ರೂಪ ಕೊಟ್ಟು ಆತ ಕವಿತೆಗಳನ್ನು ಬರೆದ,
ತಂಗಿ ರಾಧಾಗೆ ಅವು ಅರ್ಥವಾಗಲಿಲ್ಲಿ. ಆದರೆ ಆಕೆಯ ದೃಷ್ಟಿಯಲ್ಲಿ ಅಣ್ಣ ನಿಸ್ಸಂದೇಹ
ವಾಗಿಯೂ ದೊಡ್ಡ ಕವಿಯಾಗಿದ್ದ. ಆಕೆ ಕೇಳಿದ್ದಳು:
"ಅಣ್ಣ, ಇದನ್ನೆಲ್ಲ ಅಚ್ಚು ಹಾಕಿಸಿ ಒಂದು ಪುಸ್ತಕ ಮಾಡಬಹುದು, ಅಲ್ವಾ ?"
"ಹುಚ್ಚಿ! ಅದಕ್ಕೆಲ್ಲಾ ದುಡ್ಬೇಕು."
ಆ ವಿಷಯ ರಾಧೆಗೆ ಅರ್ಥವಾಗಿರಲಿಲ್ಲ. ಆದರೆ 'ದುಡ್ಡು'ಎಂಬ ಪದ ಅವಳ
ಬಾಯಿ ಮುಚ್ಚಿಸಿತು. ತಮ್ಮ ಮನೆಯಲ್ಲಿ ದುಡ್ಡು ಇಲ್ಲ ಎಂಬುದಷ್ಟು ಆಕೆಗೆ ಗೊತ್ತಿತ್ತು.
ತಂದೆಯೂ ಒಮ್ಮೆ ಆ ಕವಿತೆಗಳನ್ನು ನೋಡಿದರು. ಆಗ ಜಯರಾಮ ಅವರ
ಮುಖವನ್ನೇ ಪರೀಕ್ಷಿಸಿದ. ಅವರು ಪುಟ ತಿರುವಿ ಹಾಕಿ, ಬಡ ಕನ್ನಡಕವನ್ನು ತೆಗೆ
ದಿಟ್ಟು, ಮಗನನ್ನೇ ದಿಟ್ಟಿಸಿ ಹೇಳಿದರು.
"ಹುಂ. ಪಾಠ ಓದೋದು ಬಿಟ್ಬಿಟ್ಟು, ತಲೆ ಕೆಡಿಸ್ಕೊಂಡು ಎಲ್ಲಾದರೂ ಕೂತೆ
ಅಂದ್ರೆ ...."
ಜಯರಾಮುಗೆ ಮುಖಕ್ಕೆ ಹೊಡೆದ ಹಾಗಾಯಿತು. ಆತ ಮೂಕನಾಗಿ ಹೋದ.
ಬಹಳ ಪುಸ್ತಕಗಳನ್ನೋದಿ ಸಾಹಿತ್ಯದ ಅಭಿರುಚಿಯಿದ್ದ ತಂದೆಯಿಂದ ಪ್ರೋತ್ಸಾಹದ
ಮಾತು ಬರುವುದೆಂದು ಆತ ನಿರೀಕ್ಷಿಸಿದ್ದು ಸುಳ್ಳಾಯಿತು. ತನ್ನ ಕಾವ್ಯಸೃಷ್ಟಿಗೆ ಇದೇ
ಕೊನೆ ಎಂದುಕೊಂಡ.
ಅದಾದ ಮೇಲೆ ಒಮ್ಮೆ ವಠಾರದಲ್ಲಿ ಸೌದೆ ಪ್ರಕರಣ ನಡೆಯಿತು. ಇನ್ನೊಬ್ಬರ
ಮನೆಯಿಂದ ಹಾರವನ್ನಲ್ಲ ಸೀರೆಯನ್ನಲ್ಲ ಎರಡು ತುಂಡು ಸೌದೆಯನ್ನು ಹೆಂಗ
ಸೊಬ್ಬಳು ಕದ್ದಳು. ಒಮ್ಮೆ ಒಳ್ಳೆಯವಳೆನಿಸಿಕೊಡಿದ್ದ ನಾರಾಯಣಿ ಆಗ ಕಳ್ಳಿ
ಯಾದಳು. ಎಂತೆಂತಹ ಹೀನ ಸ್ಥಿತಿಗೆ ಜನರನ್ನು ಬಡತನ ತಳ್ಳುತ್ತಿತ್ತು!
ಜಯರಾಮುವಿನ ಮೇಲೆ ಆ ಘಟನೆ ವಿಚಿತ್ರ ಪರಿಣಾಮವನ್ನು ಉಂಟು ಮಾಡಿತು. ನಾರಾಯಣಿಯನ್ನು ಲೇವಡಿ ಮಾಡಿದ ಹೆಂಗಸರೊಡನೆ ಆತ ಜಗಳವಾಡಿದ.
ಕಳವು ಮಾಡಿದ ಹೆಂಗಸಿನ ನೆರವಿಗೆ ಬಂದ ಹುಡುಗನನ್ನು ನೋಡಿ ಇತರರೆಲ್ಲ ನಕ್ಕರು.
ನೆಮ್ಮದಿ ಕೆಡಸಿಕೊಂಡ ಜಯರಾಮ ಹಾಗೆಯೇ ನಾಲ್ಕು ದಿನ ತಳ್ಳಿದ.
ಐದನೆಯ ದಿನ ಆತ ಕತೆ ಬರೆಯಲೆಬೇಕಯಿತು. "ಒಂದು ತುಂಡು ಸೌದೆ"
ಬರೆದು ಮುಗಿಸಿದ ಮೇಲೆ, ಅವನಿಗೆ ಹೃದಯ ಹಗುರವೆನಿಸಿತು.
ತಂಗಿ ರಾಧೆಯೇ ಎಂದಿನಂತೆ ಅದನ್ನು ಮೊದಲು ಓದಿದಳು, ಕುಣಿದಾಡಿದಳು
"ಅಯ್ಯೋ| ಎಷ್ಟು ಚೆನ್ನಾಗಿದೆ| ಅವರ ಮನೆ ಮುಂದೆ ನಿಂತ್ಕೊಂಡು ಓದ್ಬೇಕು
ಇದನ್ನ."
ಮಕ್ಕಳ ಸಂತೋಷ ತಾಯಿಯ ಎದೆಯಲ್ಲೂ ಅಸ್ಪಷ್ಟವಾಗಿ ಪ್ರತಿಧ್ವನಿಸದಿರ
ಲಿಲ್ಲ. ಆದರೂ ಆಕೆಯೆಂದಳು:
"ಹಾಗೇನೂ ಮಾಡ್ಬೇಡೀಪ್ಪ ಸದ್ಯ:"
ರಾಧೆ ಕೇಳಿದಳು:
"ಅಣ್ಣ, ಇದನ್ನ ಪತ್ರಿಕೆಗೆ ಕಳಿಸ್ಬಾರ್ದ ಅಣ್ಣ?"
ಕಳುಹಿಸಿ ನೋಡಬೇಕೆಂದು ಆತನಿಗೂ ಆಸೆಯಿತ್ತು. ಆದರೆ ಧೈರ್ಯವಿರಲಿಲ್ಲ.
ತನಗೆ ಮೆಚ್ಚುಗೆಯಾಗಿದ್ದ ಆ ಕತೆಯನ್ನು ದೊಡ್ದ ಪತ್ರಿಕೆಯ ಸಂಪಾದಕರು ಅಸ್ವೀಕೃತ
ವೆಂದು ಹಿಂತಿರುಗಿಸಬಹುದೆಂಬ ಭಯವಿತ್ತು.
ಪತ್ರಿಕೆಯಲ್ಲಿ ಆ ಕತೆ ಪ್ರಕಟವಾಗಿ ತನ್ನ ಹೆಸರೂ ಅಚ್ಚಾಗಿ ತನ್ನನ್ನು ಬರೆಹ
ಗಾರನೆಂದು ನಾಲ್ಕು ಜನ ಕರೆಯುವ ಕಲ್ಪನೆಯ ಚಿತ್ರ... ಅದು ಸೊಗಸಾಗಿತ್ತು... ಆ
ಆಸೆಯನ್ನು ಅದುಮಿ ಹಿಡಿಯುವುದು ಸಾಧ್ಯವಿರಲಿಲ್ಲ. ಕೊನೆಗೆ, ಅಗಲ ಕಿರಿದಾದ
ಒಂದು ಓಣಿಯಲ್ಲಿದ್ದ ಪುಟ್ಟ ಆಕೃತಿಯ ಪತ್ರಿಕೆಯಾದ 'ಕಥಾಪ್ರಿಯ' ನಿಗೆ ಜಯರಾಮು
ತನ್ನ ಕತೆಯನ್ನು ಕಳುಹಿಸಿಕೊಟ್ಟ. ಸ್ವತಃ ತಾನೇ ಆ ಸಂಪಾದಕರನ್ನು ಕಾಣುವ
ಸಾಹಸ ಮಾಡಲಿಲ್ಲ. ಆ ಅಮೂಲ್ಯ ಕೃತಿಯನ್ನು ರಚಿಸಿದವನು ಇನ್ನೂ ಬಾಲಕನೆಂದು
ತಿಳಿದರೆ ಅವರು ಅದನ್ನು ಪ್ರಕಟಿಸದೇ ಹೋಗಬಹುದೆಂಬ್ ಅಳುಕು.
ಮುಂದಿನ ತಿಂಗಳ "ಕಥಾಪ್ರೀಯ್"ನಿಗಾಗಿ ಕಾದು ಕುಳಿತದ್ದಾಯಿತು. ಅದರಲ್ಲಿ
ಅಚ್ಚಾಗಿರಲಿಲ್ಲ. ಜಯರಾಮು ಆ ಸಂಪಾದಕರಿಗೆ ಕಾಗದ ಬರೆದು ತನ್ನ ಹಸ್ತಪ್ರತಿಯ
ಬೇರೆ ಪ್ರಿಕೆಯವರು ಕೇಳಿದ್ದಾರೆ" ಎಂದು ಇನ್ನೊಂದು ಕಾಗದ ಬರೆದ. ಬೇಡವೆಂದು ಅವರು ತಿಳಿಸಿ
ಬೇರೆ ಪತ್ರಿಕೆಯವರು ಕೇಳಿದ್ದಾರೆ" ಎಂದು ಇನ್ನೊಂದು ಕಾಗದ ಬರೆದ. ಬೇಡವೆಂದು ಅವರು ತಿಳಿಸಲಿಲ್ಲ.
ಅನಂತರ ಬಂದ "ಕಥಾಪ್ರಿಯ" ಸಂಚಿಕೆಯಲ್ಲಿ "ಒಂದು ತುಂಡು ಸೌದೆ" ಅಚ್ಚಾ
ಗಿತ್ತು. ಬರೆದವರು: ಎಂ.ಎಸ್. ಜಯರಾಮು. ಅಣ್ಣ ತಂಗಿಯರ ಆನಂದಕ್ಕೆ
ಪಾರವೇ ಇರಲಿಲ್ಲ. ತಾಯಿಗೂ ಅದು ಹೊಸ ವಿಷಯವಾಗಿತ್ತು. ಆ ಪತ್ರಿಕೆಗಳಲ್ಲಿ
ಹೆಸರಾಂತ್ ಬರೆಹಗಾರರ ಕತೆಗಳಿರಲಿಲ್ಲ. ಆ ಕತೆಗಾಗಿ ತನಗೆ ನೀಡಿದ
ಪ್ರೋತ್ಸಾಹಕ್ಕಾಗಿ ವಂದಿಸಿ ಆತ ಆ ಸಂಪಾದಕರಿಗೆ ಇನ್ನೊಂದು ಕಾಗದ ಬರೆದ.
ಉತ್ತರ ಆಗಲೂ ಬರಲಿಲ್ಲ. ಆ ಕತೆಗಾಗಿ ತನಗೆ ಐದು ರೂಪಾಯಿ ಸಂಭಾವನೆ ಬಂದ
ಹಾಗೆ ಕನಸೂ ಬಿತ್ತು. ಆದರೆ ಕನಸಿನ ಲೋಕಕ್ಕೂ ವಾಸ್ತವ ಪರಿಸ್ಥಿತಿಗೂ ಹೋಲಿಕೆ
ಇರಲಿಲ್ಲ. ಸಂಭಾವನೆಯ ಹಣ ಹೋಗಲಿ, ಪತ್ರಿಕೆಯ ಒಂದು ಪ್ರತಿಯೂ ಆತನಿಗೆ
ಬರಲಿಲ್ಲ. ಆ ಪತ್ರಿಕೆಯನ್ನು ಹೆಚ್ಚು ಜನ ಓದಿದಂತೆಯೂ ತೋರಲಿಲ್ಲ. ಮಲ್ಲೇ
ಶ್ವರದ ಅಂಗಡಿ ಬೀದಿಯಲ್ಲಿ ಮಾತ್ರ ಒಂದು ಅಂಗಡಿಯಲ್ಲಿ ತಿಂಗಳ ಮೊದಲಲ್ಲಿ ಆರು
ಪ್ರತಿಗಳಿದ್ದುವು. ಒಂದನ್ನು ತಾನು ಕೊಂಡುಕೊಂಡಿದ್ದ. ಮತ್ತೆ ಎರಡು ವಾರ
ಬಿಟ್ಟು ಅತ್ತ ಹೋದಾಗ, ಊಳಿದ ಐದು ಪ್ರತಿಗಳೂ ಅಲ್ಲಿಯೇ ಇದ್ದುದು ಕಂಡುಬಂತು.
ಮತ್ತೊಮ್ಮೆ ಪ್ರವಾಸದಿಂದ ಹಿಂತಿರುಗಿದ ತಂದೆಯ ಕಣ್ಣಿಗೆ ಆ 'ಕಥಾಪ್ರಿಯ'
ಸ೦ಚಿಕೆ ಬೀಳದಿರಲಿಲ್ಲ. ಮಗನ ಕಥೆಯನ್ನೋದಿ ಅವರು ಏನನ್ನೂ ಹೇಳಲಿಲ್ಲ. ಆದರೆ
ಮತ್ತೊಮ್ಮೆ ಪ್ರವಾಸ ಹೊರಡುವ ಹೊತ್ತಿಗೆ ಅವರು ಅ೦ದರು:
"ಪಾಠ ಗೀಠ ಸರಿಯಾಗಿ ಓದ್ಕೊಳ್ತಾ ಇದೀಯೇನೋ ಜಯರಾಮು?"
"ಹೂನಪ್ಪಾ"
ಕತೆ ಬರೆದುದಕ್ಕೆ ತ೦ದೆಯ ಕ್ಯಲಿ ಭ್ಯಗಳ ಪ್ರತಿಫಲ ಸಿಗದಿದ್ದುದೇ ಆತನಿಗೆ
ದೊರೆತ ಉತ್ತೇಜನವಾಯಿತು ಪತ್ರಿಕೆಗಳನ್ನು ಈಗ ಹೆಚ್ಚು ಸೂಕ್ಷ್ಮವಾಗಿ ಪರಿಶೀಲಿಸಿ,
ಮಕ್ಕಳ ಪುಟ ಪ್ರಶ್ನೋತ್ತರ ವಿಭಾಗಗಳಲ್ಲಿ ಪ್ರಸಿದ್ದಿಗೆ ಬ೦ದ... ಸಾಹಿತ್ಯ ಕ್ಷೇತ್ರದಲ್ಲಿ
ಪ್ರಖ್ಯಾತನಾಗುವುದು ಸುಲಭಸಾಧ್ಯವಲ್ಲವೆ೦ಬುದು ಆತನಿಗೆ ಮನವರಿಕೆಯಾಗಿತ್ತು.
ಬರೆಯವವನಿಗೆ ನಿಸ್ಸ೦ಶಯವಾಗಿಯೂ ಪ್ರತಿಭೆ ಇರಬೇಕು: ಆದರೆ ಅಷ್ಟಿದ್ದರೆ
ಸಾಲದು, ಆತ ಶ್ರಮ ಪಡಬೆಕು: ದೀರ್ಘಕಾಲದ ಪರಿಶ್ರಮ, ಎಡಬಿಡದೆ ಸಾಧನೆ,
ಅಗಾಧವಾದ ತಾಳ್ಮೆ-ಇವು ಅವಶ್ಯ. ಜಯರಾಮುಗೆ ಇದು ಇಳಿದಿತ್ತು.
ತನಗೆ ಇಷ್ಟವಿಲ್ಲದೆ ಹೋದರೂ. ಜಯರಾಮುಗೆ ಇದು ತಿಳಿದಿತ್ತು.
ತನಗೆ ಇಷ್ಟವಿಲ್ಲದೆ ಹೋದರೂ ಜಯರಾಮು ಕಷ್ಟಪಟ್ಟು ಓದಿದ್ದ: ಪಾರೀಕ್ಷೆಗೆ
ಕುಳಿತಿದ್ದ: ಆದರೆ ಉತ್ತೀರ್ಣನಾಗಿರಲಿಲ್ಲ. ಅದಾದ ಮೆಲೆ 'ಮರಳಿ ಯತ್ನವ
ಮಾಡು.'
ಮು೦ದಿನ ಸೆಪ್ಟೆ೦ಬರ್ನಲ್ಲಿ ಉಳಿದೊ೦ದು ಭಾಗದಾಲ್ಲೂ ತೇರ್ಗಡೆಯಾಗಬಹು
ದೆ೦ಬ ನ೦ಬಿಕೆ ಅವನಿಗಿತ್ತು. ಆನ೦ತರ ಉದ್ಯೋಗ ದೊರಕಿಸಿಕೊ೦ಡು ತ೦ದೆಗೆ ನೆರ
ವಾಗಬೇಕು.
......ಕತ್ತಲಾಗುತ್ತ ಬ೦ದಿತ್ತು. ಬ೦ಡೆಗಲ್ಲಿಗೆ ಒರಗಿದ್ದ ಜಯರಾಮು ನೇರ
ವಾಗಿ ಕುಳಿತ. ಕುಳಿರು ಗಾಳಿ ಆತನ ಮೈ ಕೈಗಳ ಮೇಲೆ ಸುತ್ತಾಡಿತು. ದೂರದಲ್ಲಿ
ಬೀದಿಯ ಮನೆಗಳ ವಿದ್ಯುದ್ವೀಒಅಗಳು ಹತ್ತಿಕೊ೦ಡವು. ಚಿಕ್ಕ ರೈಲುಗಾಡಿ ಯಶವ೦ತ
ಪುರದಿ೦ದ ಮಲ್ಲೇಶ್ವರಕ್ಕೆ ಬುಸುಗುಟ್ಟಿಕೊ೦ಡು ಹೋಯಿತು.
ವಿಸ್ತಾರವಾಗಿ ಏಳೆ೦ಟು ಮೈಲುಗಳ ಉದ್ದಗಲಕ್ಕೆ ಹರಡಿಕೊ೦ಡಿದ್ದ ಬೆ೦ಗ
ಳೂರು, ಅಲ್ಲಿ ವಾಸಿಸುವ ಲಕ್ಷವಾಧಿ ಜನ. ಆ ಜನರಲ್ಲಿ ತಾನೊಬ್ಬ. ಸಾ೦ಜಿಯಾ
ದೊಡನೆ ನಗರದ ಸಹಸ್ರ ಸಹಸ್ರ ಮನೆಗಳಿಲ್ಲಿ ದೀಪಗಳುರಿಯುತ್ತಿದ್ದವು. ರಾತ್ರೆ,
ಒ೦ದರ ಆನ೦ತರ ಒ೦ದಾಗಿ, ನಿದ್ದೆ ಬ೦ತೆ೦ದು ಕಣ್ಣುಮುಚ್ಚಿಕೊಳ್ಳುತ್ತಿದ್ದವು.
ಇರುಳು ಕಳೆದು ಸೂರ್ಯೋದಯ. ಮತ್ತೆ ದಿನದ ದುಡಿಮೆ. ಎಲ್ಲವು ಹೊಟ್ಟೆಗಾಗಿ,
ಗೇಣು ಬಟ್ಟೆಗಾಗಿ.
ತಾನು ಸಾಹಿತ್ಯ ಸೃಷ್ಟಿಸಬೇಕು. ಆದರೆ ಸಾಹಿತ್ಯ ಸೃಷ್ಟಿಯೊ೦ದನ್ನೇ ಮಾಡುತ್ತ
ಲಿದ್ದರೆ, ಹೊಟ್ಟೆ ತು೦ಬುವುದು. ಅದಕ್ಕಾಗಿ ತಾನು ದುಡಿಯಬೇಕು. ದುಡಿತದ ಮಾರು
ಕಟ್ಟೆಯಲ್ಲಿ ತನ್ನ ಬೆಲೆಯನ್ನು ಹಚ್ಚಿಸಿಕೊಳ್ಳುವುದಕ್ಕೋಸ್ಕರ ಪರೀಕ್ಷೆಯಲ್ಲಿ ಉತ್ತೀರ್ಣ
ನಾಗಬೇಕು.
ಕಾಲು ಹಾದಿಯೂ ಕಾಣದಷ್ಟು ಕತ್ತಲಾಗಿತ್ತು.
ಒಮ್ಮೆ ಸೂರ್ಯ ಮರೆಯಾದನೆಂದರೆ ಕತ್ತಲು ಧಾವಿಸಿ ಬರುವುದು ಎಷ್ಟು
ಬೇಗನೆ!
ಜಯರಾಮು ಮನೆಯ ಕಡೆಗೆ ಹೊರಟ.
ರೈಲು ಹಾದಿ, ಒಂಟೆ ಮರ. ಕಾವಲು ಮನೆ, ನಿಲ್ದಾಣ...
ಎಡಬದಿಯಲ್ಲಿದ್ದ ಎತ್ತರದೊಂದು ದೊಡ್ದ ಮನೆಯಿಂದ ರೇಡಿಯೋ
ಹಾಡುತ್ತಿತ್ತು:
"ದುನಿಯಾ ರಂಗ್ ರಂಗೇಲಿ ಬಾಬಾ, ದುನಿಯಾ ರಂಗ್ ರಂಗೇಲಿ."
ಅದು ಯಾರ ಕಂಠವೋ ಜಯರಾಮುವಿಗೆ ತಿಳಿಯದು. ಆತನ ಮನೆಯಲ್ಲೇನೂ
ರೇಡಿಯೋ ಇರಲಿಲ್ಲ. ಆತ ಚಲಚ್ಚಿತ್ರಗಳ ಹುಚ್ಚನೂ ಅಲ್ಲ. ಮುಖ್ಯವಾಗಿ,
ಅಂತಹ ಹುಚ್ಚಿಗೆಲ್ಲ ಅಗತ್ಯವಾಗಿ ಬೇಕಾಗುವ ಹಣ ಅವನಲ್ಲಿರಲಿಲ್ಲ.
ಒಂದು ಸಂಸಾರಕ್ಕೆ ಒಳ್ಳೆಯ ಪುಸ್ತಕ ಭಂಡಾರದಷ್ಟೇ ಒಂದು ರೇಡಿಯೋ ಕೂಡ
ಆಗತ್ಯವೆಂಬುದು ಜಯರಾಮುವಿನ ಅಭಿಪ್ರಾಯವಾಗಿತ್ತು.
ಹಾಡು ಎಂದರೆ ಪ್ರಾಣಬಿಡುವ ರಾಧಾ ಎಷ್ಟೋ ಸಾರೆ ಹೇಳಿದ್ದಳು:
"ಅಣ್ಣಾ, ಒಂದು ರೇಡಿಯೋ ಇದ್ದರೆ ಚೆನ್ನಾಗಿರುತ್ತೆ, ಅಲ್ವಾ?"
ಅ ಕೊಠಡಿ ಮನೆಗೆ ಆದೊಂದು ಐಶ್ವರ್ಯ ಬೇರೆ-ರಂಗಮ್ಮನ ವಠಾರಕ್ಕೆ
ರೇಡಿಯೋ!
ವಠಾರದತ್ತ ನಡೆಯುತ್ತ ಜಯರಾಮು ಯೋಚಿಸಿದ:
'ಸಾಕಷ್ಟು ಸಂಪಾದನೆ ಇರುವವನೇ ತನ್ನ ತಂಗಿಗೆ ಗಂಡನಾಗಿ ದೊರೆತರೆ? ಒಂದು
ರೇಡಿಯೋ ಕೊಂಡುಕೊಳ್ಳುವ ಸಾಮರ್ಥ್ಯವಿರುವ ಪುಟ್ಟ ಸಂಸಾರಕ್ಕೇ ಆಕೆ ಗೃಹಿಣೆ
ಯಾದರೆ?'
ಜಯರಾಮು ಮನೆ ಸೇರಿದಾಗ ಅವನ ತಂದೆ ಊಟಕ್ಕೆ ಕುಳಿತುಕೊಂಡಿದ್ದರು. ಮಗನನ್ನು
ನೋಡಿ ಅವರೆಂದರು:
"ಅದೆಷ್ಟೊತ್ತೋ ಮನೇಗ್ಬರೋದು? ಹೂಂ... ಕೈಕಾಲು ತೊಳಕೊಂಡು ಬಾ."
ಮಗನಿಗೂ ತಾಯಿ ಬಟ್ತಲಿಟ್ಟಳು.