ಶ್ರೀಗುರು ಸಪ್ತವಿಧದೀಕ್ಷೆಯನಿತ್ತು ಶಿಷ್ಯನ

ವಿಕಿಸೋರ್ಸ್ದಿಂದ



Pages   (key to Page Status)   


ಶ್ರೀಗುರು ಸಪ್ತವಿಧದೀಕ್ಷೆಯನಿತ್ತು ಶಿಷ್ಯನ ಶಿರದರಮನೆಯ ಚಿತ್ಕಲೆಯನೆ ಇಷ್ಟಲಿಂಗವಾಗಿ ನೋ[ಮಾ ?]ಡಿ
ಆಂಗದಲ್ಲಿ ಸಂಗಗೊಳಿಸಿದ ಬಳಿಕ ಆದೆ ಪ್ರಾಣಲಿಂಗವೆಂದರಿದು ಸಾವಧಾನದಿಂದರ್ಚಿಸಬೇಕು. ಆದನಾವಾಗಳೂ ತನುವಿಂದಗಲದಿರಬೇಕು. ಇದು ಶರಣರ ಮಚ್ಚು ಪರಾತನರ ನಚ್ಚು ! ಇದನರಿಯದೆ ದುರ್ಲಕ್ಷ್ಯದಿಂದ ಲಿಂಗವನಗಲಿದ ಭಂಗಿತರ ಕೂಡಲಚೆನ್ನಸಂಗಯ್ಯನ ಶರಣರೆಂತು ಮೆಚ್ಚುವರು ?