ಶ್ರೀಶೈಲ ಸಿಂಹಾಸನದ ಮೇಲೆ

ವಿಕಿಸೋರ್ಸ್ದಿಂದ



Pages   (key to Page Status)   


ಶ್ರೀಶೈಲ ಸಿಂಹಾಸನದ ಮೇಲೆ ಕುಳ್ಳಿರ್ದು
ಪುರದ ಬಾಗಿಲೊಳು ಕದಳಿಯ ನಿರ್ಮಿಸಿದರು
ನರರು ಸುರರು ಮುನಿಗಳಿಗೆ ಮರಹೆಂಬ ಕದವನಿಕ್ಕಿ ತರಗೊಳಿಸಿದರು ತ್ರಿವಿಧ ದುರ್ಗಂಗಳ. ಆ ಗಿರಿಯ ಸುತ್ತಲು ಗಾಳಿ ದೆಸೆದೆಸೆಗೆ ಬೀಸುತ್ತಿರೆ
ಕೆರಳಿ ಗಜ ಎಂಟೆಡೆಗೆ ಗಮಿಸುತ್ತಿರಲು ಪರಿವಾರ ತಮ್ಮೊಳಗೆ ಅತಿಮಥನದಿಂ ಕೆರಳೆ ಪುರದ ನಾಲ್ಕು ಕೇರಿಯನೆ ಬಲಿದರು. ಆ ನರನೆಂಬ ಹೆಸರಳಿದು
ಗುರುಮಾರ್ಗದಿಂದ ಮರಹೆಂಬ ಕದವ ಮುರಿದು ಒಳಹೊಕ್ಕು ಪುರದ ಮರ್ಮವನರಿದು
ಭರದಿಂದ ತ್ರಿಸ್ಥಾನವನುರುಹಿ ಪರಿವಾರವನು ವಶಕ್ಕೆ ತಂದು
ಗಿರಿಶಿಖರವನೇರಿ ಪುರವ ಸೂರೆಯಂಗೊಂಡು
ಪುರಕ್ಕೊಡೆಯನಾಗಿ ಪರಿಣಾಮದಿಂದ ಕೂಡಲಚೆನ್ನಸಂಗಯ್ಯನಲ್ಲಿ ಶರಣಾದವಂಗೆ ನಮೋ ನಮೋ ಎಂಬೆ