ಸದಸ್ಯ:Sathyarvidupalapati

ವಿಕಿಸೋರ್ಸ್ದಿಂದ

ಹೆಸರು: ಸತ್ಯ ವಿಡುಪಲಪಾಟಿ.ಆರ್. ಕರ್ನಾಟಕ ರಾಜ್ಯದ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನವನಾಗಿದ್ದು, ದಿನಾಂಕ ೧೫/೦೧/೧೯೯೭ ರಂದು ಜನಿಸಿದ್ದೇನೆ. ತಂದೆಯವರು ಶ್ರೀ ರಮೇಶ್.ವಿ.ಎಸ್ ಮತ್ತು ತಾಯಿಯವರು ಶ್ರೀಮತಿ ಶುಭ ರಮೇಶ್. ಒಬ್ಬ ಸಹೋದರನಿದ್ದು ಅವನ ಹೆಸರು ವಿಕಾಸ್ ವಿಡುಪಲಪಾಟಿ.ಆರ್. ಹಿಂದೂ ಧರ್ಮಕ್ಕೆ ಸೇರಿದವನಾದ ನಾನು ಆರ್ಯ ವೈಶ್ಯ ಕುಲದವನು.ಮಾತೃಭಾಷೆ ಕನ್ನಡ. ಹಿಂದಿ,ಇಂಗ್ಲೀಷ್ ಮತ್ತು ತೆಲುಗು ಭಾಷೆಗಳನ್ನೂ ಮಾತನಾಡಬಲ್ಲೆನು.

ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಾದ ಹಿರಿಯೂರಿನಲ್ಲೇ ಸಂಪೂರ್ಣಗೊಳಿಸಿ ಪ್ರೌಢ ಶಿಕ್ಷಣವನ್ನು ಅಸಂಷನ್ ಆಂಗ್ಲ ಪ್ರೌಢಶಾಲೆಯಲ್ಲಿ ವ್ಯಾಸಂಗಮಾಡಿ ೧೦ನೇ ತರಗತಿ(ಎಸ್.ಎಸ್.ಎಲ್.ಸಿ)ಯಲ್ಲಿ ಶೇ.೯೪ ಅಂಕ ಗಳಿಸಿದ್ದು ರೆಡ್ ಕ್ರಾಸ್ ಸಂಸ್ಥೆ, ಆರ್ಯ ವೈಶ್ಯ ಮಂಡಳಿ ಮುಂತಾದ ಅನೇಕ ಸಂಘ ಸಂಸ್ಥೆಗಳಿಂದ ಪ್ರಶಸ್ತಿಗಳನ್ನು ಪಡೆದಿದ್ದೇನೆ. ನಂತರ ಚಿತ್ರದುರ್ಗದ ಡಾನ್ ಬಾಸ್ಕೊ ಪದವಿ ಪೂರ್ವ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಸಂಪೂರ್ಣಗೊಳಿಸಿ ೧೨ನೇ ತರಗತಿ(ಪಿ.ಯು.ಸಿ)ಯಲ್ಲಿ ಶೇ.೯೩ ಅಂಕ ಗಳಿಸಿದ್ದು ಅನೇಕ ಸಂಸ್ಥೆಗಳಿಂದ ಸನ್ಮಾನಿಸಲಾಗಿದೆ.

ನನ್ನ ಇದುವರೆಗಿನ ಸಾಧನೆಗಳೆಂದರೆ ೫ನೇ ತರಗತಿಯಲ್ಲಿ ಪುಟಾಣಿ ವಿ‌‍‍ಜ಼್ಜಾನ ಎನ್ನುವ ಸ್ಪರ್ಧೆಯಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಬಂಗಾರದ ಪದಕ ಗಳಿಸಿದ್ದೇನೆ.ಚಿಂತನ ವಿಜ಼್ಜಾನ ಮತ್ತು ಗಣಿತ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗಳಿಸಿದ್ದೇನೆ. ಪಿ.ಯು ವ್ಯಾಸಂಗ ಮಾಡುವಾಗ ಜಿಲ್ಲಾಮಟ್ಟದ ಭಾಷಣ ಸ್ಪರ್ಧೆಯಲ್ಲಿ ಎರಡನೆಯ ಬಹುಮಾನ ಗಳಿಸಲಾಗಿದೆ.

ನನ್ನ ಹವ್ಯಾಸಗಳು ಎಂದರೆ ಕಥೆ ಕಾದಂಬರಿಗಳನ್ನು ಓದುವುದು ಮತ್ತು ಸುಮಧುರ ಹಾಡುಗಳನ್ನು ಕೇಳುವುದು.