ಹರಿಯ ಹಾದಿಯಲ್ಲಿ ಕರಿಯ

ವಿಕಿಸೋರ್ಸ್ದಿಂದ



Pages   (key to Page Status)   


ಹರಿಯ ಹಾದಿಯಲ್ಲಿ ಕರಿಯ ಮಲ್ಲಿಗೆಯ ಕಂಡೆ. ಕರಿಯ ಮಲ್ಲಿಗೆಯ ಕಮಲವ ಕುಯಿದು ಕಾಮಾರಿಯ ಚರಣವನರ್ಚಿಸಬಲ್ಲ ನಿಸ್ಸೀಮ ಶರಣಂಗೆ
ನಾಮ ಸೀಮೆಗಳೆಂದೇನು? ಕಾಲ ಕಲ್ಪಿತವೆಂದೇನು? ನಿರ್ವಿಕಲ್ಪಭಾವದಲ್ಲಿ ಲಿಂಗಾರ್ಚನೆಯ ಮಾಡುವ ಶರಣಂಗೆ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.