ವಿಷಯಕ್ಕೆ ಹೋಗು

ಹೊತ್ತಾರೆ ಪೂಜಿಸಲು ಬೇಡ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya


ಹೊತ್ತಾರೆ ಪೂಜಿಸಲು ಬೇಡ ಕಂಡಾ. ಬೈಗೆಯೂ ಪೂಜಿಸಲು ಬೇಡ ಕಂಡಾ. ಇರುಳುವುನು ಹಗಲುವನು ಕಳೆದು
ಪೂಜೆಯನು ಪೂಜಿಸಲು ಬೇಕು ಕಂಡಾ
ಇಂತಪ್ಪ ಪೂಜೆಯನು ಪೂಜಿಸುವರ
ಎನಗೆ ನೀ ತೋರಾ ಗುಹೇಶ್ವರಾ.