ಪುಟ:ಕಥಾ ಸಂಗ್ರಹ - ಭಾಗ ೨.djvu/೨೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

284 ಕಥಾಸಂಗ್ರಹ೫ ನಯ ಭಾಗ ಅಕಟಕಟಾ! ಈ ಭೂಲೋಕದಲ್ಲಿ ದುರಾತ್ಮರಾದ ಕ್ಷತ್ರಿಯರು ಕರ್ತವ್ಯಾ ಕರ್ತವ್ಯಗ ಳನ್ನು ತಿಳಿಯದೆ ಉನ್ಮತ್ತರಾಗಿ ಸಜ್ಜನರನ್ನು ಬಹಳವಾಗಿ ಬಾಧಿಸುತ್ತಿದ್ದಾರೆ. ಈ ಪಾಪಾ ತ್ರ ಹುಟ್ಟನ್ನೇ ಹಾಳುಮಾಡಿ ಈ ಭೂಮಂಡಲವನ್ನೆಲ್ಲಾ ಬ್ರಾಹ್ಮಣರ ಸ್ವಾಧೀನಮಾಡು ವೆನು ಎಂದು ಹೇಳಿ ಮೃತನಾದ ತಂದೆಗೆ ಮಾಡಬೇಕಾದ ಕರ್ಮಗಳನ್ನೆಲ್ಲಾ ವಿಧಿವತ್ತಾಗಿ ನೆರವೇರಿಸಿ ಕೂಡಲೆ ಪ್ರಳಯ ಕಾಲದ ರುದ್ರನಂತೆ ಮೊರೆದು ಕೊಡಲಿಯನ್ನು ತೆಗೆದು ಕೊಂಡು ಹೊರಟು ಭೂಲೋಕದಲ್ಲಿರುವ ಕ್ಷತ್ರಿಯಜಾತಿಯ ಒಂದು ಗಂಡು ಪಿಳ್ಳೆಯಾ ದರೂ ಬಿಡದೆ ಇಪ್ಪತ್ತೊಂದು ಸಾರಿ ಪುನಃ ಪುನಃ ಹುಡುಕಿಕೊಂಡು ಸುತ್ತಿ ಕೊಡಲಿ ಯಿಂದ ಕಡಿದು ಆ ಕ್ಷತ್ರಿಯರ ರಕ್ತನದೀ ಪ್ರವಾಹದಲ್ಲಿ ಮಿಂದು ಆ ರಕ್ತ ಜಲದಿಂದಲೇ ಸತ್ತ ತಂದೆಗೆ ತರ್ಪಣವನ್ನು ಕೊಟ್ಟು ಭೂಮಂಡಲವನ್ನೆಲ್ಲಾ ಕಶ್ಯಪರಿಗೆ ದಾನಮಾಡಿ ದಾನವಾಗಿ ಕೊಟ್ಟ ಮೇಲೆ ಆ ಭೂಮಿಯಲ್ಲಿ ತಾನಿರಬಾರದೆಂದು ಯೋಚಿಸಿ ಪಡುವಣ ಕಡಲ ಬಳಿಗೆ ಬಂದು ಸಮುದ್ರರಾಜನಿಗೆ ಹನ್ನೆರಡು ಗಾವುದಗಳಷ್ಟು ಹಿಂದಕ್ಕೆ ಹೋಗುವಂತೆ ಹೇಳಲು ; ಅವನು ಅದರಂತೆ ಬಿಟ್ಟು ಹಿಂದಕ್ಕೆ ಹೋದ ಸ್ಥಳದಲ್ಲಿರುವ ಮಹೇಂದ್ರ ಪರ್ವತದಲ್ಲಿ ತಪಸ್ಸು ಮಾಡಿಕೊಂಡು ನಿರ್ವ್ಯಸನದಿಂದಿದ್ದನು. ಇತ್ತಲಾ ಕಶ್ಯಪಮುಸಿಯು-ಪರಶುರಾಮನು ತನಗೆ ದಾನವಾಗಿ ಕೊಟ್ಟ ಭೂಮಂಡಲವನ್ನು ಯಾರಿಗೆ ಕೊಡಬೇಕೆಂದು ಯೋಚಿಸಿ ಭೂಮಂಡಲದಲ್ಲಿ ಯಾರಾ ದರೂ ಕ್ಷತ್ರಿಯರಿದ್ದಾರೋ ಎಂದು ಹುಡುಕುತ್ತ ಅಯೋಧ್ಯಾ ಪಟ್ಟಣಕ್ಕೆ ಬಂದು ಅಲ್ಲಿ ಪರಶುರಾಮನ ಸಂಹಾರಕಾಲದಲ್ಲಿದ್ದ ಒಬ್ಬ ಹತ್ತು ವರುಷದ ಗಂಡುಮಗನಿಗೆ ಹೆಂಗ ಸರೆಲ್ಲಾ ಕೂಡಿ ಸ್ತ್ರೀವೇಷವನ್ನು ಹಾಕಿ ಸೀರೆಯನ್ನು ಡಿಸಿ ಪುರುಷರೂಪನ್ನು ಮರಿಸಿಟ್ಟಿ ದ್ದುದರಿಂದ ಭೂಮಂಡಲವನ್ನೆಲ್ಲಾ ಅವನಿಗೆ ಕೊಟ್ಟು ತಾನು ತಪಸ್ಸಿಗೆ ಹೋದನು. ಆ ಸೂರ್ಯವಂಶದಲ್ಲಿ ಮಹಾವಿಷ್ಣುವು ತನ್ನ ಪೂರ್ಣಾಂಶದಿಂದ ರಾವಣಸಂಹಾರಾರ್ಥ ವಾಗಿ ರಾಮನಾಮದಿಂದ ಅವತರಿಸಿ ಶಿವಧನಸ್ಸನ್ನು ಮುರಿದು ಸೀತೆಯನ್ನು ಮದುವೆ ಯಾಗಿ ಬರುವ ದಾರಿಯಲ್ಲಿ ಪರಶುರಾಮನು ರಾಮನೊಡನೆ ಯುದಕ್ಕೆ ನಿಂತು ತನ್ನ ವಿಷ್ಣ೦ಶವನ್ನು ಅವನಿಗೆ ಒಪ್ಪಿಸಿ ತಾನು ತಪಸ್ಸಿಗೆ ಹೊರಟುಹೋದನು. ತರುವಾಯ ಚಕ್ರರಾಜನು ಕಾರ್ತವೀರ್ಯಾರ್ಜುನನ ಜನ್ಮವನ್ನು ನೀಗಿ ಅಹಂಕಾರಶೂನ್ಯನಾಗಿ ವೈಕುಂಠವನ್ನು ಹೊಕ್ಕು ಮಹಾವಿಷ್ಣುವಿಗೆ ನಮಸ್ಕರಿಸಿ-ಎಲೈ ಮಹಾತ್ಮನೇ, ನಾನು ಅಲ್ಪನು, ಮಢನು ಮತ್ತು ದುರಹಂಕಾರಿಯು, ಮಹಾತ್ಮನಾದ ನಿನ್ನ ಪಾದ ಸನ್ನಿಧಾನದಲ್ಲಿ ಕೇವಲ ಅಜ್ಞಾನಿಯಾದ ನಾನು ಮಾಡಿದ ಅಪರಾಧವನ್ನು ಕ್ಷಮಿಸಿ ನನ್ನನ್ನು ಕಾಪಾಡಬೇಕೆಂದು ಬೇಡಿಕೊಂಡು ದರಿಂದ ಕರುಣಾಳುವಾದ ವಿಷ್ಣುವು ಹಾಗೆಯೇ ಅವನ ಅಪರಾಧವನ್ನು ಮನ್ನಿಸಿ ಯಥಾಪ್ರಕಾರವಾಗಿ ಆ ಚಕ್ರಾ ಯುಧವನ್ನು ತನ್ನ ಬಲಗೈಯಲ್ಲಿ ಧರಿಸಿಕೊಂಡನು. For the Seventh or Rama Incarnation, see pages 32-209. ರಾಮಾವತಾರದ ಕಥ, ಪುಟ ೩೨-೨೦೯ ನೋಡಿರಿ.