ಪುಟ:ಕಥಾ ಸಂಗ್ರಹ - ಭಾಗ ೨.djvu/೧೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

172 ಕಥಾಸಂಗ್ರಹ -೪ ನೆಯ ಭಾಗ ರಕ್ತಧಾರೆಗಳುಳ್ಳವನಾಗಿ ರಥದಿಂದ ಕೆಳಗೆ ಬಿದ್ದು ಮೂರ್ಛಾಗತನಾಗಲು ; ಆಗ ಭಯದಿಂದ ಓಡಿಹೋಗಿದ್ದ ಕಪಿಗಳೆಲ್ಲಾ ಒಟ್ಟುಗೂಡಿ ಆರ್ಭಟವನ್ನು ಮಾಡುತ್ತ ಬಿದ್ದಿ ರುವ ರಾವಣನ ಬಳಿಗೆ ಬಂದು ನಾತಿದೂರದಲ್ಲಿ ಮುಂಗೈಗಳನ್ನು ನೆಲಕ್ಕೂರಿ ಗದ್ಧವನ್ನು ನೆಲದ ಮಟ್ಟಿಗೂ ಬೊಗ್ಗಿಸಿ ಪಲ್ಲಿ ರಿದು ಖೋ ಎಂದು ಕೂಗುತ್ತ ಕೂಡಲೆ ಹಿಂದಕ್ಕೆ ಹಾರುತ್ತ ಸಂತೋಷದಿಂದ ನೆಗೆದಾಡಿದುವು. ಅನಂತರದಲ್ಲಿ ಅತಿ ವೀರನಾದ ಸುಗ್ರೀ ವನು--ಅಹಹ ! ಮೋಸವಾಯಿತೇ ! ಈ ಖಳನು ರಾಘವನ ಬಾಣಕ್ಕೆ ಆಹಾರವಾ ಗತಕ್ಕವನು ಅದು ಕಾರಣ ನಾನು ಇವನನ್ನು ಕೊಲ್ಲ ಬಾರದಾಗಿದ್ದಿತು. ರಾಮನು ಈ ಸಂಗತಿಯನ್ನು ಕೇಳಿ ಹೇಗಾದರೂ ವೈರಿನಾಶವು ಕ್ಷೇಮಕರವಾದುದು ಎನ್ನು ವನೋ ? ಅಥವಾ ನೀನು ನನ್ನ ಕೀರ್ತಿಯನ್ನು ಅಪಹರಿಸಿಕೊಂಡಿ ಎಂದು ಹೇಳು ವನೋ ? ಎಂಬ ಶಂಕಾತಂಕಿತ ಮನಸ್ಕನಾಗಿದ್ದನು. ಅಷ್ಟರಲ್ಲಿ ರಾವಣನ ಸಾರಥಿಯು ಅತಿಶೀಘ್ರವಾಗಿ ಬಂದು ಅವನ ಶರೀರದಲ್ಲಿ ಜೀವಚಿನ್ನೆಗಳನ್ನಾರೈಯು ಮೂಗಿನ ರಂಧ್ರದಲ್ಲಿ ಉಸಿರು ಹೊರಡುತ್ತಿರುವುದನ್ನು ತಿಳಿದು ತಡಮಾಡದೆ ಅತಿ ಜಾಗರೂಕತೆಯಿಂದ ಶೈತ್ಯೋಪಚಾರಗಳನ್ನು ಮಾಡಲು ; ಆಗ ರಾವಣನು-ಉಸ್ಟ್ ಎಂದು ಮೆಲ್ಲನೆದ್ದು ಸಾರಥಿಯಿಂದ ಹೂಜಿಯಲ್ಲಿ ನೀರನ್ನು ತರಿಸಿಕೊಂಡು ಕೈಕಾಲು ಮೈಮೊಗಗಳ ರಕ್ತಗಳನ್ನು ತೊಳೆದು ಕೊಂಡು ಬಾಯ್ತುಕ್ಕು ಳಿಸಿ ಮದ್ದಿನ ಗುಳಿಗೆಗಳನ್ನು ನುಂಗಿ ಸುಗಂಧವನ್ನು ಪೂಸಿ ದಿವ್ಯವಸ್ನಾಭರಣಗಳನ್ನು ಧರಿಸಿ ಸ್ವಲ್ಪವಾಗಿ ಆಹಾರವನ್ನು ತೆಗೆದು ಕೊಂಡು ಕರ್ಪೂರ ತಾಂಬೂಲವನ್ನು ಸವಿದು ಕೂಡಲೆ ರಥಾರೂಢನಾಗಿ ಸುಗ್ರೀವನೆದುರಿಗೆ ಬಂದು ನಿಂತು-ಎಲೈ ಕಪಿರಾಜನೇ, ಈ ವರೆಗೂ ನನ್ನೊಡನೆ ಯುದ್ಧ ಮಾಡಿದ ವೀರರಲ್ಲಿ ನನಗಿಂಥ ನೋವನ್ನುಂಟುಮಾಡಿ ದವರೊಬ್ಬರೂ ಇಲ್ಲ, ನೀನು ಮಹಾ ವೀರನಾದ ವಾಲಿಗೆ ಸರಿಯಾದ ತಮ್ಮನು ! ಮತ್ತು ಸುಭಟನು. ಶಹಬಾಸ್ ಎಂದು ಕೊಂಡಾಡಿ ಧನುಸ್ಸನ್ನು ತೆಗೆದು ಕೊಂಡು ಬ್ರಹ್ಮದೇವತಾಕವಾದ ಮಂತ್ರದಿಂದ ಬಾಣಾಗ್ರ ಪ್ರದೇಶವನ್ನು ಮಂತ್ರಿಸಿ ಬೊಬ್ಬಿ ರಿದು ತೆಬ್ಬಿನ ಹೆದ್ದ ನಿಯವನ್ನು ತೋರಿಸಿ ಬಾಣವನ್ನು ಸಂಧಾನಿಸಿ ಕಿವಿವರೆಗೆಳೆದು ಸುಗ್ರೀವನಿಗೆ ಗುರಿಗಟ್ಟಿ ಇದೋ, ಈ ಬಾಣಘಾತವನ್ನು ಸಹಿಸಿಕೋ ಎಂದು ಎಚ್ಚರಿಸಿ ಹೇಳಿ ಅವನೆದೆಗೆಸೆದನು. ಆ ಬಾಣಹತಿಯಿಂದ ಸುಗ್ರೀವನು ತಿಳಿವಡಗಿ ಭೂಮಿಗೊರಗಿದನು, ಆ ಕೂಡಲೆ ಸಮಸ್ತ ಕಪಿಸೇನಾಪತಿಗಳೂ ಕಲ್ಮರ ಬೆಟ್ಟ ಗುಂಡುಗಳನ್ನು ತೆಗೆದು ಕೊಂಡು ಬಂದು ದಶದಿಕ್ಕುಗಳಲ್ಲೂ ರಾವಣನನ್ನು ಕವಿದು ಆರ್ಭಟಿಸುತ್ತ ಹೊಯ್ಯುತ್ತಿರಲು; ಆಗ ಕಲ್ಲು ಗುಂಡೇ ಮೊದಲಾದುವುಗಳಿಂದ ತನ್ನನ್ನು ತರುಬುತ್ತಿ ರುವ ಕಪಿಪರಿವಾರವನ್ನೆಲ್ಲಾ ತರಿದು ಕೆಡಹಿ ತನ್ನ ರಥವನ್ನು ಮುಂದಕ್ಕೆ ಹರಿಸಿ ರಾಮನನ್ನು ಹುಡುಕುತ್ತ ಬರುತ್ತಿರಲು ; ಆಗ ಸರ್ವಸೇನಾಪತಿಯಾದ ನೀಲನು ವಿಲ ಯಕಾಲದ ಕಾಲನಂತೆ ಪರಭೀಕರ ಕೊಪಯುಕ್ತನಾಗಿ ಹುರಿಯ ಕಚ್ಚುತ್ತ ಒಂದು ದೊಡ್ಡ ಬೆಟ್ಟವನ್ನು ಕೈಯಲ್ಲಿ ತೆಗೆದು ಕೊಂಡು ಸೀತಾಚೋರನ ಎದುರಿಗೆ ಬಂದು ನಿಂತು ಎಲ್ಲಿ ಗೆಲಾ ! ಖಳನೇ, ಹೋಗುತ್ತಿರುವಿ ? ನಿನ್ನ ದುರ್ಗವ್ರದ ಬಲು