ಪುಟ:ಕಥಾ ಸಂಗ್ರಹ - ಭಾಗ ೨.djvu/೨೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನರಸಿಂಹಾವತಾರದ ಕಥೆ 231 ಳಿಂದಲೂ ನಾನಾ ವಿಧಪ್ರಾಣಿಗಳಿಂದಲೂ ಮತ್ತು ಹಿಮ ಜಲ ಅಗ್ನಿ ಭೂಮಿ ಆಕಾಶ ಹಗಲು ರಾತ್ರಿ ಒಳಗೆ ಹೊರಗೆ ನಿದ್ರಿಸುವಾಗ ಸಿಡಿಲು ಶಿಲೆ ಅಬಿಳವಿಧಾಸ್ತ್ರ ತೃಣಕಾಷ್ಠ ಮಂತ್ರ ವ್ಯಾಧಿ ಇವು ಮೊದಲಾದುವುಗಳಿಂದಲೂ ನನಗೆ ಮರಣವುಂಟಾಗದಂತೆ ವರೆ ವನ್ನು ಕೊಡು, ಬಲುಮಾತುಗಳಿಂದೇನು ? ಸಮಸ್ತ ಲೋಕಗಳವರೂ ಬಂದು ಭಯ ಭಕ್ತಿಯಿಂದ ನನ್ನನ್ನು ಓಲೈಸಬೇಕು, ಈ ಪ್ರಕಾರವಾದ ವರವನ್ನು ಕೊಡಬೇಕೆಂದು ಕೇಳಿಕೊಂಡನು. ಆಗ ಕಮಲಸಂಭವನು ತನ್ನ ಮನಸ್ಸಿನಲ್ಲಿ-ಇವನು ಮಹಾದುಷ್ಟನು. ಮೊದಲೇ ಲೋಕಗಳನ್ನೆಲ್ಲಾ ಹಿಡಿದು ತಿಕ್ಕಿ ಮುಕ್ಕುತ್ತಿರುವನು. ಇದರ ಮೇಲೆ ಇಂಥ ಮಹಾವರವನ್ನು ಕೊಟ್ಟರೆ ಕ್ಷಣಕಾಲದಲ್ಲಿ ಲೋಕಗಳನ್ನೆಲ್ಲಾ ಸುಟ್ಟು ಬೂದಿ ಮಾಡಿ ಬಿಡುವನು, ಅಸದೃಶವರಗಳನ್ನು ಕೇಳಿಕೊಂಡನಲ್ಲಾ ! ಇದಕ್ಕೆ ಏನು ಮಾಡಬೇಕು ? ಇವನು ನ್ಯಾಯವಾಗಿ ಮಹೋಗ್ರತಪಸ್ಸಿನಿಂದ ಕಷ್ಟ ಪಟ್ಟು ನನ್ನನ್ನು ಮೆಚ್ಚಿಸಿರುವನು. ವರವನ್ನು ಕೊಡದೆ ಹೋದರೆ ನನ್ನ ಭಕ್ತರು ನಗುವರು, ಮತ್ತು ಭಕ್ತಿಯಲ್ಲಿ ನಂಬಿ ಕೆಯನ್ನು ತೊರೆಯುವರು ಎಂದು ಯೋಚಿಸಿ ಕಡೆಗೆ ಏನಾದರೂ ಆಗಲಿ, ಇವನು ಕೇಳಿಕೊಂಡಂತೆ ವರಗಳನ್ನು ಕೊಡತಕ್ಕುದು ಯುಕ್ತವಾಗಿದೆ ಎಂದು ನಿಶ್ಚಯಿಸಿ ಆ ಹಿರಣ್ಯಕಶಿಪುವನ್ನು ಕುರಿತು--ನಿನ್ನ ಮನಸ್ಸಿನ ಇಷ್ಟ ಪ್ರಕಾರವೇ ವರಗಳನ್ನು ಕೊಟ್ಟೆನು, ಸಂತೋಷದಿಂದ ಹೋಗು ಎಂದು ಹೇಳಿ ಅದೃಶ್ಯನಾದನು, ಆಗ ಹಿರಣ್ಯ ಕಶಿಪುವು ಮಹಾಸಂತೋಷದಿಂದ ಕೂಡಿದವನಾಗಿ ದೇವತೆಗಳ ಬಡಗಿಯಾದ ಮಯ ನನ್ನು ನೆನೆಯಲು; ಆ ಕೂಡಲೆ ಆತನು ಬಂದು ನಿಂತು ಕೈಮುಗಿದು-ನನಗೇನಪ್ಪಣೆ ? ಎಂದು ಕೇಳಲು ; ಅದಕ್ಕೆ ಹಿರಣ್ಯಕಶಿಪುವು-ನೀನು ಈ ಕ್ಷಣದಲ್ಲೇ ಹೋಗಿ ನನ್ನ ಪಟ್ಟಣವನ್ನು ಸರ್ವೋನ್ನತವಾಗಿ ದಿವ್ಯಾಲಂಕಾರಗಳಿಂದ ಶೃಂಗರಿಸು ಎಂದು ಅಪ್ಪಣೆ ಯನ್ನು ಕೊಟ್ಟು ಕಳುಹಿಸಿದನು, ಆ ಬಳಿಕ ಮಯನು ಅವನ ಅಪ್ಪಣೆಯನ್ನು ತಲೆಯಲ್ಲಿ ಆಂತು ಬಂದು ಆ ಪಟ್ಟಣವನ್ನೆಲ್ಲಾ ಜಾಗ್ರತೆಯಾಗಿ ಆಶ್ಚರ್ಯವಿಧ ದಿಂದ ಶೃಂಗರಿಸಿದನು. ಅನಂತರದಲ್ಲಿ ಹಿರಣ್ಯಕಶಿಪುವು ಸರ್ವಸಂವಿಧಾನದೊಡನೆ ಕೂಡಿ ಗೋಧೂಳೀಲಗ್ನದಲ್ಲಿ ಪರವನ್ನು ಪ್ರವೇಶಿಸಿ ಒಂದು ದಿನ ಮಾತ್ರ ಅಲ್ಲಿದ್ದು ಮಾರಣೆಯ ದಿನವೇ ದೈತ್ಯಭಟರೊಡನೆ ಕೂಡಿ ಸರ್ವಲೋಕಗಳನ್ನೂ ಭಯಪಡಿಸುತ್ತ ಹೊರಟು ಇಂದ್ರಲೋಕಕ್ಕೆ ಹೋಗಿ ಆರ್ಭಟಿಸಿ ಇಂದ್ರಾದೃಷ್ಟದಿಕ್ಷಾಲಕರನ್ನು ಯುದ್ಧಕ್ಕೆ ಕರೆಯಲು ; ಆ ಇಂದ್ರನು ಅಷ್ಟ ದಿಕ್ಷಾಲಕರೊಡನೆ ಕೂಡಿ ಹಿರಣ್ಯಕಶಿಪು ವನ್ನು ಕುರಿತು-ಅಲ್ಪಶಕ್ತರಾದ ನಾವು ಮಹಾತ್ಮನಾದ ನಿನ್ನೊಡನೆ ಯುದ್ಧ ಮಾಡ ಲಾರೆವು, ನಾವೆಲ್ಲರೂ ನಿನಗೆ ಕಪ್ಪಗಳನ್ನು ಕೊಡುತ್ತ ನೀನು ಹೇಳಿದಂತೆ ಕೇಳಿಕೊಂಡು ಅಧೀನರಾಗಿರುವೆವು ಎಂದು ವಿನಯಪೂರ್ವಕವಾಗಿ ಬೇಡಿಕೊಂಡುದರಿಂದ ಆ ದೈತ್ಯನು ಅವರು ಭಯಭಕ್ತಿಯಿಂದ ತಂದೊಪ್ಪಿಸಿದ ಕಪ್ಪಗಳನ್ನು ತೆಗಿಸಿಕೊಂಡು ಅವರೆಲ್ಲರನ್ನೂ ಜತೆಯಲ್ಲಿ ಕರೆದುಕೊಂಡು ಹಿಂದಿರುಗಿ ತನ್ನ ಪಟ್ಟಣಕ್ಕೆ ಬಂದು ಸಿಂಹಾಸನದ ಮೇಲೆ ಕುಳಿತುಕೊಂಡು ಸರ್ವಲೋಕಗಳವರಿಂದ ಸೇವಿಸಲ್ಪಡುವವನಾಗಿ ತ್ರಿಭುವನಾಧಿಪತ್ಯ ವನ್ನು ಹೊಂದಿ-ಭೂಲೋಕದಲ್ಲಿ ಮಾಡುವ ಕರ್ಮಗಳಲ್ಲಿ ಸರ್ವರೂ ನನ್ನ ಹೆಸರನ್ನು