ವನ್ನಾದರೂ ಅವರು ತೋರದೆ ಇದ್ದರೆ? ಹೀಗಾಗಿ, ಮೆಲ್ಲಮೆಲ್ಲನೆ ಅವರೂ ಚಟುವಟಿಕೆ
ಯಲ್ಲಿ ಭಾಗವಹಿಸಿದರು.
ಧರ್ಮಪ್ರವರ್ತಕ ಚೆನ್ನಣ್ಣನವರು 'ದಯೆ ಇಟ್ಟು ಒಪ್ಪಿದು'ದಾಯಿತು.
ಕರಪತ್ರದ ಮುದ್ರಣಕ್ಕಾಗಿ ಸ್ವತಃ ನಂಜುಂಡಯ್ಯನವರೇ ತಾಲ್ಲೂಕು ಕೇಂದ್ರಕ್ಕೆ
ಪ್ರಯಾಣ ಬೆಳೆಸಿದರು.
ಜಯದೇವ ತಿಮ್ಮಯ್ಯನವರನ್ನು ಕರೆದ.
"ಎಲ್ಲಾ ನಮಗೇ ವಹಿಸಿಬಿಟ್ಟಿದಾರೆ. ಏನೇನು ಮಾಡೋಣ?"
ಹಣೆಯನ್ನು ಪೂರ್ತಿ ಮುಚ್ಚುವಂತೆ ಟೋಪಿಯನ್ನು ಮುಂದಕ್ಕೆ ಸರಿಸಿ
ತಿಮ್ಮಯ್ಯ ಹೇಳಿದರು:
"ಇದೊಳ್ಳೇ ಗ್ರಹಚಾರ ಬಂತಲ್ಲಪ್ಪ!"
"ಯಾವ ನಾಟಕ ಆಡೋಣ?"
"ಒಂದೇ ನಾಟಕ ಸಾಲ್ದೆ? ಹುಡುಗ ಹುಡುಗೀರು ಒಟ್ಟಿಗೇ ಪಾತ್ರವಹಿಸಿದರೆ
ಚೆನ್ನಾಗಿರುತ್ತೆ."
"ಅದಕ್ಕಿನ್ನೂ ಬಹಳ ದಿವಸ ಕಾಯ್ಬೇಕು."
"ಹೌದಪ್ಪಾ. ಏನಾದರೂ ತೊ೦ದರೆಯಾದರೆ ಅದೂ ಕಷ್ಟವೇ."
ಜಯದೇವ ನಕ್ಕು ಹೇಳಿದ:
"ಯಾರಿ೦ದ ತೊ೦ದರೆ?"
"ಮಕ್ಕಳಿಗೇನು ಗೊತ್ತಿರುತ್ತೆ ಪಾಪ? ತೊಂದರೆ ಬರೋದೆಲ್ಲಾ ತಾಯ್ತಂದೆಯ
ರಿ೦ದ."
"ಅವರಿಗೆ ಬುದ್ಧಿ ಬರೋ ಹೊತ್ತಿಗೆ ಈಗಿನ ಮಕ್ಕಳೇ ತಾಯ್ತಂದೆಯ
ರಾಗಿರ್ತಾರೆ!"
ತಿಮ್ಮಯ್ಯ ಸ್ವಲ್ಪ ಹೊತ್ತು ಯೋಚಿಸುತ್ತ ಕುಳಿತರು.
ಜಯದೇವ ಕೇಳಿದ:
"ಹೊಳೀತೇ?"
ತಿಮ್ಮಯ್ಯ ಟೋಪಿಯನ್ನು ಹಿಂದಕ್ಕೆ ಸರಿಸಿದರು.
"ಇಲ್ವಲ್ಲಾ!"
ತುಂಟತನದ ನಗೆ ಬೀರುತ್ತ ಜಯದೇವ ಹೇಳಿದ:
"ನಶ್ಯ ಹಾಕಿ ನೋಡಿ."
"ಅಂದ ಹಾಗೆ, ಮರೆತೇ ಬಿಟ್ಟಿದ್ದೆ ಅದನ್ನ. ಅದಕ್ಕೇ ಇಷ್ಟೊ೦ದು ಪೇಚಾಟ!"
ನಶ್ಯವೇರಿಸಿ, "ಹ್ಞೆ ಹ್ಞೆ" ಎ೦ದು ಸದ್ದು ಹೊರಡಿಸಿ, ಗ೦ಟಲು ಸರಿಪಡಿಸಿ,
ತಿಮ್ಮಯ್ಯ ನಕ್ಕರು.
"ನೋಡಿ. ಹೊಸ ರೀತಿ ನಾಟಕ ಮಾಡೋಣ ಈ ಸಲ. ಮೂಕ ನಾಟಕ."
ಪುಟ:ನವೋದಯ.pdf/೧೫೮
ಈ ಪುಟವನ್ನು ಪ್ರಕಟಿಸಲಾಗಿದೆ
ನವೋದಯ
475
![](http://upload.wikimedia.org/wikipedia/commons/thumb/5/50/%E0%B2%A8%E0%B2%B5%E0%B3%8B%E0%B2%A6%E0%B2%AF.pdf/page158-1024px-%E0%B2%A8%E0%B2%B5%E0%B3%8B%E0%B2%A6%E0%B2%AF.pdf.jpg)