ಈ ಪುಟವನ್ನು ಪ್ರಕಟಿಸಲಾಗಿದೆ
೨೮
ಕೆಳಗಿನ ನೆರಳು
ಹಲಿತವಾಗಿತ್ತು ಆ ತಂಡ, ವಾಸಂತಿಗೆ ಕೂತಲ್ಲಿಂದಲೇ ಒಳಗಿನ ಸಂಭಾಷಣೆ ಕೇಳುತ್ತಿತ್ತು.
ಕೋಣೆಯಲ್ಲಿ ಸಾಹೇಬರು ಗಂಭೀರ ಧ್ವನಿಯಲ್ಲಿ ಮಾತನಾಡಲು ಪ್ರಾರಂಭಿಸಿದರು:
- “ನೀನು ಎಲ್ಲಿಂದ ಬಂದೆ, ಹೇಗೆ ಬಂದೆ, ಗೊತ್ತಿದೆಯೆ?”
- "ಗೊತ್ತಿದೆ.”
- "ಮಾರುತ್ತರ ಕೊಡ್ತೀಯಾ?"
- "ನಿರುದ್ಯೋಗಿಯಾಗಿ, ಮೈಮೇಲೆ ಅರಿವೆ ಇಲ್ಲದೇ ನೌಕರೀ ಕೇಳಲು ಬಂದಿದ್ದೆ."
- "ತಾವು ದೊಡ್ಡ ಮನಸ್ಸು ಮಾಡಿ ನೌಕರಿ ಕೊಟ್ಟಿರಿ ತಮಗೆ ನಾನು ಉಪಕೃತ"
- "ಆ ಉಪಕಾರದ ಪ್ರತಿಫಲವನ್ನು ಈ ರೀತಿಯಲ್ಲಿ ತೀರಿಸುವಿಯಾ?”
- "ನಾನು ಯಾವ ಅನ್ಯಾಯವನ್ನೂ ಮಾಡಿಲ್ಲ"
- "ಇನ್ನೂ ಏನನ್ಯಾಯವಾಗುವುದು ಉಳಿದಿದೆ? ನಾನಿರುವ ಆಫೀಸಿನಲ್ಲಿ ಇಂಥವರಿಗೆ ಎಡೆ ಇಲ್ಲಾ"
- "ಅಷ್ಟು ದೂರ ಹೋಗಿ ನನ್ನ ಹೊಟ್ಟೆಯ ಮೇಲೆ ಕಾಲಿಡಬೇಡಿ"
- "ಹಾಗಾದರೆ ನಾನು ಹೇಳಿದಂತೆ ನಡೆಯುತ್ತೀಯಾ?"
- "ತಮ್ಮ ಆಜ್ಞೆ ಏನು?"
- "ನೀನೂ ವಾಸಂತಿ ಇಬ್ಬರೂ ಇನ್ನೂ ಅನೀತಿಯಮಟ್ಟವನ್ನು ದಾಟಿಲ್ಲವೆಂದು ನಾನು ಭಾವಿಸುತ್ತೇನೆ."
- "ದೇವರಸಾಕ್ಷಿಯಾಗಿ ನಾವಿನ್ನೂ ಅನೀತಿಯ ಮಟ್ಟವನ್ನು ದಾಟಿಲ್ಲ--ಆದರೆ–-”
- "ಆದರೆ ಗೀದರೆ ಬೇಕಿಲ್ಲ. ನೀನು ಅವಳನ್ನು ಲಗ್ನವಾಗುವ ಮಾತನ್ನು ಮರೆತುಬಿಡು. ನಮ್ಮ ಧರ್ಮ ಅಚ್ಚಳಿಯದೆ ಬೆಳೆದು ಬಂದ ರೀತಿಯಲ್ಲಿ ಉಳಿಯಬೇಕು."