ಪುಟ:ಯುಗಳಾಂಗುರೀಯ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



೨೦

ಹಿರಣ್ಮಯಿ - ಅದನ್ನು ಮನೆಯಲ್ಲಿಟ್ಟು ಬಂದಿದ್ದೇನೆ ; ಐದು ವರು
ಷವು ಮುಗಿಯುವುದಕ್ಕೆ ಕೆಲವು ಫುಳಿಗೆಗಳು ಉಳಿದವೆ ; ಆದುದರಿಂದ
ಅದನ್ನು ಧಾರಣೆ ಮಾಡಲು ಆನಂದಸ್ವಾಮಿಯು ಹೇಳಿರುವ ನಿಷೇಧವು
ನಿವಾರಣೆಯಾಗಿಲ್ಲ.
ರಾಜ - ಒಳ್ಳೆಯದು, ಆ ಉಂಗುರಕ್ಕೆ ಅನುರೂಪವಾದ ಮತ್ತೊಂದು
ಉಂಗುರವನ್ನು ನಿನ್ನ ಸ್ವಾಮಿಗೆ ಆನಂದಸ್ವಾಮಿಯು ಕೊಟ್ಟುದುದನ್ನು
ನೋಡಿದರೆ ಗುರ್ತಿಸಬಲ್ಲೆಯಾ ?
ಹಿರಣ್ಮಯಿ - ಎರಡುಂಗುರಗಳೂ ಸಮಾನವಾದಕಾರಣ ಗುರ್ತಿಸ
ಬಲ್ಲೆನು.
ಆಗ ಪ್ರತಿಹಾರಿಯು ರಾಜಾಜ್ಞಾನುಸಾರವಾಗಿ ಒಂದು ಸುವರ್ಣದ
ಭರಣಿಯನ್ನು ತಂದನು. ರಾಜನು ಭರಣಿಯನ್ನು ತೆಗೆದು ಅದರಲ್ಲಿದ್ದ
ಒಂದುಂಗುರವನ್ನು ತೆಗೆದು ಹಿರಣ್ಮಯಿಯ ಕೈಯಲ್ಲಿ ಕೊಟ್ಟು, ಆ ಉಂಗು
ರವು ಆರದು? ನೋಡು " ಎಂದು ಹೇಳಿದನು.
ಹಿರಣ್ಮಯಿಯು ಉಂಗುರವನ್ನು ತೆಗೆದುಕೊಂಡು ದೀಪದ ಬೆಳಕಿ
ನಲ್ಲಿ ನೋಡಿ, " ದೇವ! ಈ ಉಂಗುರವು ನನ್ನ ಸ್ವಾಮಿಯದೇ ಅಹುದು,
ಆದರೆ ತಮಗದೆಲ್ಲಿ ಬಂತು ? " ಎಂದು ಕೇಳಿ, ಸ್ವಲ್ಪ ಯೋಚಿಸಿ, ಪುನಃ,
" ದೇವ ! ಇದರಿಂದ ನಾನು ಪತಿಹೀನೆಯಾಗಿದ್ದೇನೆಂದು ತಿಳಿಯುತ್ತೇನೆ,
ಸ್ವಜನ ಹೀನರಾಗಿ ಮೃತರಾದವರ ಧನವು ತಮ್ಮ ಸರಕಾರಕ್ಕೆ ಬರುತ್ತದೆ.
ಹಾಗಿಲ್ಲದೆ ಅವನು ಜೀವಿತನಾಗಿದ್ದರೆ ಅದನ್ನವನು ತ್ಯಾಗಮಾಡುವುದು
ಅಸಂಭವ " ವೆಂದಳು. ರಾಜನು ನಕ್ಕು, " ನನ್ನ ಮಾತನ್ನು ನಂಬು, ನೀನು
ಪತಿಹೀನೆಯಲ್ಲ - ಸುಮಂಗಲಿ " ಎಂದನು.
ಹಿರಣ್ಮಯಿ - ಹಾಗಾದರೆ ನನ್ನ ಸ್ವಾಮಿಯು ನನಗಿಂತ ಹೆಚ್ಚು ದರಿ
ದ್ರನಾಗಿರಬೇಕು : ಧನಲೋಭದಿಂದ ಅದನ್ನು ವಿಕ್ರಯಿಸಿದ್ದಾನೆ.
ರಾಜ - ನಿನ್ನ ಸ್ವಾಮಿಯು ಐಶ್ವರ್ಯವಂತನು.
ಹಿರಣ್ಮಯಿ - ಹಾಗಾದರೆ, ತಾವು ಅವನನ್ನು ಮೋಸಗೊಳಿಸಿ ಅದನ್ನು
ಅವನಿಂದ ಅಪಹರಿಸಿರಬೇಕು.