ಪುಟ:ಯುಗಳಾಂಗುರೀಯ.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೧

ರಾಜನು ಅಂತಹ ದುಸ್ಸಾಹಸಿಕವಾದ ಮಾತನ್ನು ಕೇಳಿ ವಿಸ್ಮಿತನಾಗಿ,
" ನೀನು ಬಹಳ ಸಾಹಸವುಳ್ಳವಳು ! ರಾಜಾ ಮದನದೇವನು ಕಳ್ಳನೆಂದು
ಮತ್ತಾರೂ ಹೇಳಿಲ್ಲ " ವೆಂದನು.
ಹಿರಣ್ಮಯಿ - ಹಾಗಿಲ್ಲದಿದ್ದರೆ, ತಮಗಾ ಉಂಗುರವೆಲ್ಲಿ ಸಿಕ್ಕಿತು ?
ರಾಜ - ನಿನಗೆ ವಿವಾಹವಾದ ರಾತ್ರಿ ಅನಂದಸ್ವಾಮಿಯು ಅದನ್ನು
ತಂದು ನನ್ನ ಬೆರಳಿಗೆ ಹಾಕಿದನು.
ಆಗ ಹಿರಣ್ಮಯಿಯು ಲಜ್ಜೆಯಿಂದ ಅಧೋಮಖಿಯಾಗಿ, " ಅರ್ಯ
ಪುತ್ರ ! ನನ್ನಪರಾಧವನ್ನು ಕ್ಷಮಿಸಬೇಕು : ನಾನು ಚಪಲೆ ; ತಿಳಿಯದೆ
ಕಟೂಕ್ತಿಗಳನ್ನು ಹೇಳಿದೆನು " ಎಂದಳು.

ಒಂಭತ್ತನೆಯ ಪರಿಚ್ಛೇದ.

——————

ಹಿರಣ್ಮಯಿಯು ರಾಜಮಹಿಷಿ ! ಅದನ್ನು ಕೇಳಿ ಹಿರಣ್ಮಯಿಯು ವಿಸ್ಮಿ
ತೆಯಾದಳು. ಆದರೆ ಸ್ವಲ್ಪವಾದರೂ ಆಹ್ಲಾದಿತೆಯಾಗಲಿಲ್ಲ ; ವಿಶೇಷ
ವಾಗಿ, ವಿಷಣ್ಣೆಯಾಗಿ, " ನಾನಿದುವರೆಗೆ ಪುರಂದರನನ್ನು ಪಡೆಯಲಿಲ್ಲವಾದರೂ
ಪರಪತ್ನೀತ್ವದ ಸಂಕಟವನ್ನು ಅನುಭವಿಸಲಿಲ್ಲ. ಇಂದುಮೊದಲು, ನನ
ಗಾ ವ್ಯಸನವು ಪ್ರಾರಂಭವಾಯಿತಲ್ಲದೆ, ನಾನು ಮನಸಾ ಪುರಂದರನ ಪತ್ನಿ
ಯಾಗಿ, ಅನನ್ಯಾನುರಾಗಿಣಿಯಾಗಿ ಈ ಮಹತ್ಮನಾದ ರಾಜನ ಗೃಹವನ್ನು
ಕಳಂಕಿತವಾಗಿ ಮಾಡುವುದು ಹೇಗೆ ? " ಎಂದು ಯೋಚಿಸಿಕೊಂಡಿದ್ದ
ಸಮಯದಲ್ಲಿ, ರಾಜನು, " ಹಿರಣ್ಮಯಿ : ನೀನೇನೋ ನನ್ನ ಮಹಿಷಿಯಾದೆ,
ಆದರೆ ನಿನ್ನನ್ನು ಪರಿಗ್ರಹಿಸುವುದಕ್ಕೆ ಮುಂಚಿತವಾಗಿ ನಿನ್ನಿಂದ ಕೆಲವು ಅಂ
ಶಗಳನ್ನು ತಿಳಿಯಬೇಕಾಗಿದೆ, ನೀನು ಬೆಲೆಯನ್ನು ಕೊಡದೆ ಪುರಂದರನ
ಮನೆಯಲ್ಲಿ ವಾಸ ಮಾಡುವುದು ಹೇಗೆ ? " ಎಂದು ಪ್ರಶ್ನೆಯನ್ನು
ಮಾಡಿದನು.