ಪುಟ:ಯುಗಳಾಂಗುರೀಯ.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೨

ಹಿರಣ್ಮಯಿಯು ಅಧೋವದನೆಯಾದಳು. ರಾಜನು ಪುನಃ, " ನಿನ್ನ
ದಾಸಿಯಾದ ಅಮಲೆಯು ಪದೇಪದೇ ಪುರಂದರನ ಮನೆಗೆ ಹೋಗಿ ಬರು
ವುದೇಕೆ ? " ಎಂದು ಪ್ರಶ್ನೆಮಾಡಿದನು
ಹಿರಣ್ಮಯಿಯು ಮತ್ತೂ ಹೆಚ್ಚು ಲಜ್ಜಾವನತಮುಖಿಯಾಗಿ, " ರಾಜಾ
ಮದನದೇವನು ಎಂತಹ ಸರ್ವಜ್ಞನು ! " ಎಂದು ಭಾವಿಸಿದಳು.
ರಾಜನು, " ಮತ್ತೊಂದು ಹೆಚ್ಚಿನ ಮಾತು ಉಂಟು ; ನೀನು ಸರನಾ
ರಿಯಾಗಿದ್ದುಕೊಂಡು, ಪುರಂದರನು ಕೊಟ್ಟ ವಜ್ರದ ಹಾರವನ್ನು ತೆಗೆದು
ಕೊಂಡುದು ಹೇಗೆ ? ' ಎಂದು ಪುನಃ ಪ್ರಶ್ನೆಯನ್ನು ಮಾಡಿದನು.
ಹಿರಣ್ಮಯಿಯು ಆಗ ಮಾತಾಡಿದಳು. ಅವಳು, " ಆರ್ಯಪುತ್ರ !
ನೀನು ಸರ್ವಜ್ಞನಲ್ಲವೆಂಬುದು ನನಗೀಗ ಗೊತ್ತಾಯಿತು. ವಜ್ರದ ಹಾರ
ವನ್ನು ನಾನು ಹಿಂದಿರುಗಿ ಕೊಟ್ಟುಬಿಟ್ಟೆನು " ಎಂದಳು.
ರಾಜ_ನೀನಾ ವಜ್ರದ ಹಾರವನ್ನೆನಗೆ ವಿಕ್ರಯಿಸಿದೆ ; ಆ ಹಾರ
ವನ್ನು ನೋಡು.
ಹೀಗೆಂದು ಹೇಳಿ ರಾಜನು ಭರಣಿಯಿಂದ ಹಾರವನ್ನು ತೆಗೆದು ತೋರಿ
ದನು. ಹಿರಣ್ಮಯಿಯು ವಜ್ರದ ಹಾರವನ್ನು ಗುರ್ತಿಸಿ ವಿಸ್ಮಿತೆಯಾಗಿ,
" ಆರ್ಯಪುತ್ರ ! ನಾನೇ ಸ್ವಂತವಾಗಿ ನಿನ್ನಬಳಿ ಬಂದು ಆ ಹಾರವನ್ನು
ಮಾರಿದೆನೆ ? " ಎಂದು ಕೇಳಿದಳು.
ರಾಜ - ಇಲ್ಲ. ನಿನ್ನ ದಾಸಿ, ಅಥವಾ ದೂತಿಯು ತಂದು ವಿಕ್ರಯಿಸಿ
ದಳು. ಅವಳನ್ನು ಕರೆಯಿಸಲೆ ?
ಹಿರಣ್ಮಯಿಯು, ಕೋಪಗೊಂಡಿದ್ದವಳ ವದನಮಂಡಲವು ನಗುಮು
ಖವಾಗಿ, " ಆರ್ಯಪುತ್ರ ! ಅಪರಾಧವನ್ನು ಮನ್ನಿಸು, ಅಮಲೆಯನ್ನು
ಕರೆಯಿಸಬೇಕಾದುದಿಲ್ಲ: ವಿಕ್ರಯಮಾಡಿದುದನ್ನು ನಾನೊಪ್ಪುವೆನು "
ಎಂದಳು.
ಕೇಳಿ ರಾಜನಿಗೆ ಆಶ್ಚರ್ಯವುಂಟಾಗಿ, " ಹೆಂಗಸರ ಚರಿತ್ರೆಯು ಅಭಾ
ವನೀಯವಾದುದು ; ನೀನು ಅನ್ಯನ ಪತ್ನಿಯಾಗಿ ಪುರಂದರನಿಂದ ಹಾರ
ವನ್ನು ತೆಗೆದುಕೊಂಡೇಕೆ ? " ಎಂದನು
ಹಿರಣ್ಮಯಿ ಪ್ರಣಯದ ಉಪಹಾರವೆಂದು ಗ್ರಹಣಮಾಡಿದೆನು.