ಭವತೀ ಕಾತ್ಯಾಯನೀ/೩೮ನೆಯ ಗ್ರಂಥ/ಪ್ರಸ್ತಾವನೆ

ವಿಕಿಸೋರ್ಸ್ದಿಂದ

ಪ್ರಸ್ತಾವನೆ

ನಮ್ಮ ಕನ್ನಡದಲ್ಲಿ ಎಲ್ಲಬಗೆಯ ಪುಸ್ತಕಗಳ ಕೊರತೆಯಿರುವಾಗ, ಹೆಣು ಮಕ್ಕಳ ವಾಚನಕ್ಕೆ ತಕ್ಕ ಪುಸ್ತಕಗಳ ಕೊರತೆಯಿರುವದೆಂದು ಬರೆಯುವದು ಅಪ್ರಾಸಂಗಿಕವೇ ಸರಿ. ಈ ಕೊರತೆಯನ್ನು ಅಂಶತಃ ದೂರಮಾಡುವಉದ್ದೇಶದಿಂದ ನಾವು ಈ ಪುಸ್ತಕವನ್ನು ಬಹು ಆಸ್ಥೆಯಿಂದ ಬರೆದಿರುವೆವು. ಈ ಪುಸ್ತಕವನ್ನು ಬರೆಯಲಿಕ್ಕೆ ಶ್ರೀಮದ್ಬಹ್ಮನಿಷ್ಠ ಸಾಂಬದೀಕ್ಷಿತ ಕಾಶೀಕರ ಕೃತ “ಶ್ರೀಯಾಜ್ಞವಲ್ಕ್ಯಚರಿತ,” ಮಹಾರಾಷ್ಟ್ರದೊಳಗಿನ “ಮೈತ್ರೇಯಿ” ಎಂಬ ಪುಸ್ತಕ ಇವು ಸಹಾಯಕಾರಿಗಳಾಗಿದ್ದರೂ ಮುಖ್ಯವಾಗಿ ೪ ನೆಯ ಪ್ರಕರಣವು ಶ್ರೀ ಗುರುಪ್ರೇರಣೆಯಿಂದಲೇ ಬರೆಯಲ್ಪಟ್ಟಿದ್ದೆಂದು ನಾವು ಸೂಚಿಸದೆಯಿರಲಾರೆವು. ಶ್ರೀ ಭಗವತೀ-ಕಾತ್ಯಾಯನಿಯನ್ನು ಅನುಕರಿಸುವಂಥ ಮಾತೃ-ಭಗಿನೀವರ್ಗವು ಕನ್ನಡಿಗರಲ್ಲಿ ಹೆಚ್ಚಲೆಂತಲೂ, ನಮ್ಮ ಚಿರಂಜೀವಿಗಳಾದ ಸೌಭಾಗ್ಯಕಾಂಕ್ಷಿಣಿಯರು ಸುಬ್ಬಕ್ಕ, ರೇಣಕ್ಕ ಇವರು ಸದ್ಗುಣಿಗಳಾಗುವಂತೆ ಅನುಗ್ರಹಿಸಬೇಕೆಂತಲೂ ಆ ಭಗವತಿಯನ್ನೇ ಭಕ್ತಿಯಿಂದ ಪ್ರಾರ್ಥಿಸುವೆವು.

ಈ ಪುಸ್ತಕದ ಕಡೆಯ ಫಾರಮನ್ನು ನಜರಚೂಕಿಯಿಂದ ತಪ್ಪುಗಳನ್ನು ತಿದ್ದದೆ ಹಾಗೇ ಹಾಕಿದ್ದರಿಂದ, ಮುಖ್ಯವಾಗಿ ಕಡೆಯ ಪಾನಿನಲ್ಲಿ ಬಹಳ ತಪ್ಪುಗಳು ಉಳಿದವೆ. ಅವುಗಳಲ್ಲಿ ದೊಡ್ಡ ತಪ್ಪುಗಳ ತಿದ್ದುಪಡೆಯನ್ನು ಮಾತ್ರ ಕೆಳಗೆ ಕೊಟ್ಟಿರುತ್ತದೆ. ಅವನ್ನಷ್ಟು, ವಾಚಕರು ದಯಮಾಡಿ ಲಕ್ಷದಲ್ಲಿಟ್ಟು ಓದಬೇಕೆಂದು ಪ್ರಾರ್ಥಿಸುವೆವು.

ಪುಟ.
೩೬
೩೯
೩೯
೩೯
೩೯
೪೦

ಸಾಲು.
೨೩
೧೫
೨೩
೨೬
೨೯

ಅಶುದ್ಧ.
ತರುಣೋಪಾಯ
ದೈವತವು
ಸಮೃದ್ಧಿಯ
ಕರ್ತವ್ಯವೆಂದು
ಮಾಯಾಮ್ಮೊಹಿರ
ಒಬ್ಬನೊಬ್ಬ

ಶುದ್ಧ.
ತರುಣೋಪಾಯ
ದೈವತವು
ಸಮಾದಿಯ
ಕರ್ತವ್ಯವೆಂದು
ಮಾಯಾಮೋಹಿತ
ಒಬ್ಬನೊಬ್ಬ

ಹಾವೇರಿ.
೧೮೪೧ ಚೈತ್ರ ವದ್ಯ ೫.
ಕನ್ನಡಿಗರ ಸೇವಕ,
ಕುಲಕರಣಿ.(ಗಳಗನಾಥ)