ಭವತೀ ಕಾತ್ಯಾಯನೀ/೩೯ನೆಯ ಗ್ರಂಥ/೩ ನೆಯ ಪ್ರಕರಣ

ವಿಕಿಸೋರ್ಸ್ದಿಂದ

-೧೨-

ದಲೇ ಸಕಲಪ್ರಾಣಿಗಳು ವಿಷಯಕಾರಗಳಲ್ಲಿ ಬಿದ್ದು ಅಲ್ಲಿಯೇ ಹೊರಳಾಡುತ್ತಲಿರುವದು

ಸಕಲರಿಗೂ ದೃಗ್ಗೋಚರವೇ ಇರುವದು. ಎಲ್ಲೆಲ್ಲಿ ನೋಡಿದರೂ ಯಾರನ್ನು ನೋಡಿದರೂ ವಿಷಯೋಪ ಭೋಗದಲ್ಲಿ ತೊಡಗಿದವರೇ ಕಣ್ಣಿಗೆ ಕಾಣುವರಲ್ಲದೆ, ವಿಷಯವರಾಙ್ಮುಖ ರಾದವರ, ತೋರವವೇ ಇಲ್ಲ. ಈ ಸಂಗತಿಯನ್ನರಿತ ವಿದ್ವಜ್ಜನರು “ವೇಧಾ ದ್ವೇಧಾ ಭ್ರಮಂಚಕ್ರೇ ಕಾಂತಾಸು ಕನಕೇ‍ಷ್ಚುಚ|ತಾಸುತೇಷ್ವಪ್ಯನಾಸಕ್ತಃಸಾಕ್ಷಾದ್ಭರ್ಗೋ ನರಾ ಕೃತಿಃ।” ಅಂದರೆ ಸೃಷ್ಟಿಕರ್ತನಾದ ಬ್ರಹ್ಮದೇವನು ಸೃಷ್ಟಿಮಾಡುವಾಗಲೇ ಪುರುಷರ ಉದ್ದೇಶವಾಗಿ ಕಾಂತಾ-ಕನಕ(ಸುವರ್ಣ)ಗಳೆಂಬ ಎರಡು ಸ್ಥಳಗಳಲ್ಲಿ ಮೋಹವನ್ನಿಟ್ಟನು; ಆದರೆ ಅವೆರಡರಲ್ಲಿಯೂ ಆಸಕ್ತಿಯಿಲ್ಲದ ಪುರುಷನು ಮನುಷ್ಯದೇಹವನ್ನು ಧರಿಸಿದ್ದರೂ ಸಾಕ್ಷಾತ್ ಪರಮೇಶ್ವರನೇ ಎಂದು ಹೇಳಬೇಕೆಂದು ಹೇಳಿರುವರು. ಸಾರಾಂಶ, ಜಗತ್ತಿ ನಲ್ಲಿ ವಿಷಯಾಸಕ್ತನಾಗದಿರುವ ಪುರುಷನೇ ದುರ್ಲಭನೆಂಬ ತಾತ್ಪರ್ಯವು.

ಶೈವಸಿದ್ಧಾಂತದವರು "ಪಶು-ಪಾಶ-ಪರಮೇಶ್ವರ'ರೆಂಬ ಈಮೂರೇ ಪದಾರ್ಥಗಳು

ಜಗತ್ತಿನಲ್ಲಿ ಇರುವವು. ಇವುಗಳಹೊರತು ಮತ್ತೊಂದು ಪದಾರ್ಥವೇ ಇಲ್ಲ. ಈ ಮೂರೇ ಪದಾರ್ಥಗಳಿಂದೇ ಜಗತ್ತು ತುಂಬಿರುವದು . ನಮ್ಮನ್ನು ಹಿಡಿದುಕೊಂಡು ದೇವತೆಗಳ ವರೆಗೆ ಇರುವ ಪ್ರಾಣಿಗಳೆಲ್ಲ ಪಶುಗಳೆನಿಸುವವು. ಪಾಶವೆಂದರೆ ಇವರು ಉಪಭೋಗಿ ಸುವ ವಿಷಯಗಳೇ. ಪರಮೇಶ್ವರನೆಂದರೆ ಪಾಶಗಳಲ್ಲಿ ತೊಡಗಿದ ಪಶುಗಳನ್ನುದ್ಧರಿಸುವ ದೇವರು. ಕಣ್ಣಿಯಿಂದ ಕಟ್ಟ ಹಾಕಿದ್ದರಿಂದ ಮಲ-ಮೂತ್ರಗಳನ್ನು ಕಟ್ಟದ ಸ್ಥಳದ ಲ್ಲಿಯೇ ಮಾಡಿಕೊಂಡು, ಹಸಿವಾದರೆ ಅಲ್ಲಿಯೇ ಇದ್ದು ಮೇಯುತ್ತ, ನಿದ್ರೆ ಬಂದರೆ ಅದೇ ಹೊಲಸಿನಲ್ಲಿಯೇ ಮಲಗಿ ನಿದ್ರೆಮಾಡುತ್ತ, ಮೈಯೆಲ್ಲ ಹೊಲಸು ಮಾಡಿಕೊಂಡು, ದುರ್ಗಂಧವನ್ನು ಅನುಭೋಗಿಸುತ್ತ, ಬೇಜಾರಗೊಂಡಿರುವ ದನಗಳನ್ನು ಬೆಳಗಿನ ಝುವ ದಲ್ಲಿ ಪರಮಕಾರುಣಿಕನಾದ ಗೋಪಾಲಕನು ಹೇಗೆ ಕಣ್ಣಿಯನ್ನುಚ್ಚಿಬಿಡುವನೋ, ಹಾಗೆ ಪರಮಕಾರುಣಿಕನಾದ ಪರಮೇಶ್ವರನು, ವಿಷಯಾಸಕ್ತರಾಗಿ ಸಂಸಾರದಲ್ಲಿ ಹೊರ ಳಾಡುತ್ತ ಅನೇಕ ಯಾತನೆಗಳನ್ನು ಅನುಭೋಗಿಸುತ್ತ ಪಾರಗಾಣದೆ ಪ್ರಾಂತ- ಲ್ಲಿವೈರಾಗ್ಯ ಹೊಂದಿತನ್ನನ್ನು ಸ್ಮರಿಸುವ ನಮ್ಮನ್ನು ಸದ್ಗುರುರೂಪವನ್ನು ಧರಿಸಿ ಪ್ರತ್ಯಕ್ಷವಾಗಿ ಬಂದು ವಿವೇಕೋಪದೇಶದಿಂದ ಪಾಶಗಳೆನಿಸುವ ವಿಷಯಗಳಿಂದ ದೂರಮಾಡುವನು. ಆದ್ದರಿಂ ದಲೇ ಪರಮೇಶ್ವರನಿಗೆ("ಪಶುಪತಿ")ಯೆಂಬ ಹೆಸರುಂಟಾಗಿರುವದು. ನಾವೆಲ್ಲ ಪಶುಗಳು, ವಿಷಯಗಳೇ ಪಾಶಗಳು ಅಂದರೆ ಕಣ್ಣಿಗಳು, ನಾವೆಲ್ಲರೂ ವಿಷಯಾಸಕ್ತರಾಗಿರುವದ ರಿಂದ ನಮಗೆ ಪಶು ಎಂಬ ಹೆಸರು ಬಂದಿದೆ. ಈ ಅಭಿಪ್ರಾಯವನ್ನು "ಶಿವಕಲ್ಪವಲ್ಲಿ" ಎಂಬ ಗ್ರಂಥದಲ್ಲಿ “ಶಿಪಿವಿಷ್ಟ” ಎಂಬ ನಾಮದ ಅರ್ಥವನ್ನು ಮಾಡುವಾಗ "ಪಶವಃ ಪರಮಾತ್ಮನಿ ಧೀವಿರಹಾತ್ ದ್ವಿಪದಾಶ್ಚ, ನರಾಶ್ಚ ಸುರಾಃ ಪಶವಃ|ತದನುಗ್ರಹ ಕೃದ್ದ ದಯಂ ಪ್ರವಿಶನ್ ಪ್ರಥಿತೋSಸಿ ವಿಭೋ ಶಿಪಿವಿಷ,ಇತಿ||” ಪರಮಾತ್ಮನ ವಿಷಯವಾದ ಜ್ಞಾನವಿಲ್ಲದ ರಿಂದ ಎರಡು ಕಾಲುಗಳುಳ್ಳ ಮನುಷ್ಯರೂ, ದೇವತೆಗಳೂ ಕೂಡ ಪಶುಗ

ಳೆನಿಸುವರು. ನಾಲ್ಕು ಕಾಲುಗಳುಳ್ಳ ದನ-ಕರಗಳಿಗೂ,ಮನುಷ್ಯರಿಗೂ,ದೇವತೆಗಳಿಗೂ

-೧೩-

ಪರಮಾತ್ಮನ ಜ್ಞಾನವಿಲ್ಲ. ಇಂಥ ಪರಮಾತ್ಮನ ಜ್ಞಾನವಿಲ್ಲದವರನ್ನು ಉದ್ಧರಿಸುವದಕ್ಕಾಗಿ, ಅವರವರ ಹೃದಯವನ್ನು ಪ್ರವೇಶಮಾಡುವದರಿಂದ ಪರಮೇಶ್ವರನೇ ನಿನಗೆ “ಶಿಪಿವಿಷ" ಎಂಬ ನಾಮವು ಬಂದಿರುವದು "ಶಿಸಿ" ಅಂದರೆ "ಪಶು" "ವಿಷ್ಟ" ಅಂದರೇ" ಪ್ರವೇಶಮಾಡಿ ದವನು" ಎಂದು ಭಾಸ್ಕರರಾಯರೆಂಬ ವಿದ್ವಾಂಸರು ಹೇಳಿರುತ್ತಾರೆ. ಈ ಅಭಿಪ್ರಾಯವನ್ನು ಶ್ರೀ ಮಚ್ಚಾರೀರಕಭಾಷ್ಯ ಜಿಜ್ಞಾಸಾಸೂತ್ರದಭಾಷ್ಯದಲ್ಲಿ "ಪಶ್ಚಾದಿಭಿಶ್ಚಾ ವಿಶೇಷಾತ್" ಇಲ್ಲಿಂದ ಉಪಕ್ರಮಿಸಿ "ಅತಶ್ಚ ಪಪ್ವಾದಿಭೀಃ‍ ಸಮಾನಃ ಪುರುಷಾಣಾಂ ಪ್ರಮಾಣಪ್ರಮೇಯ ವ್ಯವಹಾರಃ" ಇಲ್ಲಿಯವರೆಗಿನ ಗ್ರಂಥದಿಂದ ವಿವರಿಸಿರುತ್ತಾರೆ. ಕೈಯಲ್ಲಿ ಕೋಲು ಹಿಡಿದು ಬೆದರಿಸಿದರೆ ಇವನು ನಮ್ಮನ್ನು ಹೊಡೆಯುತ್ತಾನೆಂಬ ಭೀತಿಯಿಂದ ಪಶುಗಳುಓಡಹತ್ತುತ್ತವೆ, ಅದೇ, ಎಳೆಯಹುಲ್ಲನ್ನು ಕೈಯಲ್ಲಿ ಹಿಡಿದು ತೋರಿಸುತ್ತ ಕರೆಯಹತ್ತಿದರೆ ಒಂದೊಂದೇ ಹೆಜ್ಜೆಯನ್ನಿಡುತ್ತ ಪ್ರೀತಿಸುತ್ತಿಬರುತ್ತವೆ. ಇದೇ ಮೇರೆಗೆ ಕೈಯಲ್ಲಿ ಶಸ್ತ್ರವನ್ನು ಹಿಡಿದು ಕಣ್ಣು ಕೆಂಪು ಮಾಡಿಕೊಂಡು ಬೆದರಿಸುತ್ತಿರುವ ಬಲಾಢ್ಯಪುರುಷನನ್ನು ಕಂಡರೆ ತಿಳುವ ಳಿಕೆಯುಳ್ಳವನೆನಿಸುವ ಮನುಷ್ಯನಾದರೂ ಓಡಹತ್ತುತ್ತಾನೆ; ಪ್ರೀತಿಯಿಂದ ಕರೆಯುವ ಸೌಮ್ಯನಾದ ಪುರುಷನ ಹತ್ತರ ಮೆಲ್ಲನೆ ಹೋಗುತ್ತಾನೆ, ಆದ್ದರಿಂದ ಪಶುಗಳು ಹೇಗೆ ದೇಹಾಭಿಮಾನಿಗಳಾಗಿ ವಿಷಯಾಸಕ್ತಗಳೋ, ಇದರಂತೆಯೇ ತಿಳುವಳಿಕೆಯುಳ್ಳ ಮನು ಷ್ಯನಾದರೂ ದೇಹಾಭಿಮಾನಿಯಾಗಿ ವಿಷಯಾಸಕ್ತನಾಗಿಹೋದರೆ, ಇವನನ್ನು ಪಶುವೆಂದು ಯಾಕೆ ಹೇಳಬಾರದು? ಇನ್ನು ದೇವತೆಗಳಿಗೆ ದೇಹಾಭಿಮಾನವೂ, ವಿಷಯಾಸಕ್ತಿಯೂ ಅದೆಯೋ, ಇಲ್ಲವೋ ಎಂಬದನ್ನು ಕುರಿತು ವಿಚಾರಿಸುವಾ; ದೇವತೆಗಳು ದೈತ್ಯರಕೂಡ ಹೋರಾಡಿದ್ದು ಪುರಾಣೇತಿಹಾಸಗಳಲ್ಲಿ ಕಂಡುಬರುತ್ತದೆ. ಈ ದೇವತೆಗಳು ಬ್ರಹ್ಮಜ್ಞಾ ನಿಗಳೇ ಆಗಿದ್ದರೆ, ದೈತ್ಯರಕೂಡ ಯಾತರ ಸಲುವಾಗಿ ಹೋರಾಡುತ್ತಿದ್ದರು? ಇದಕ್ಕೆ ವಿಷಯಾಭಿಲಾಷೆಯೇ ಕಾರಣವೆನಿಸುವದು. ಈ ಭೂಲೋಕದಲ್ಲಿ ಯಾರಾದರೂ ಅತ್ಯುಗ್ರ ತಪಸ್ಸನ್ನು ಮಾಡಹತ್ತಿದರೆ, ದೇವತೆಗಳಿಗೆ ಹೊಟ್ಟೆಕಿಚ್ಚು ಯಾಕೆ ? ಸಗರರಾಯನು ಅಶ್ವಮೇಧಯಾಗವನ್ನು ಮಾಡಿದಾಗ ದೇವೇಂದ್ರನು ಅಶ್ವವನ್ನು ಯಾಕೆ ಕದ್ದೊಯ್ಯ ಬೇಕು? ಈ ವಿಷಯದಲ್ಲಿ ಇಂದ್ರನಿಗೆ ತನ್ನ ಪದಚ್ಯುತಿಯಾಗುವದೆಂಬ ಭೀತಿಯೇ ಕಾರ ಣವಾಗಿರುವದು . ಹೀಗೆ ವಿಷಯಗಳು ಬ್ರಹ್ಮಾದಿ ದೇವತೆಗಳನ್ನೂ ಕೂಡ ಅಮಾರ್ಗಕ್ಕೆ ಹಚ್ಚಿದಮೇಲೆ, ನಮ್ಮಂಥವರ ಪಾಡೇನು ?

ಜೀವಾತ್ಮನಿಂದ ಸಂಯುಕ್ತವಾದ ಮನಸ್ಸು ಇಂದ್ರಿಯಗಳಿಂದ ಕೂಡಿಕೊಳ್ಳು, ತ್ತದೆ. ಮನಸ್ಸಿನಿಂದ ಕೂಡಿಕೊಂಡಿರುವ ಜ್ಞಾನೇಯಂದ್ರಿಯಗಳು ವಿಷಯಗಳ ಮೇಲೆ ಹೋಗುತ್ತವೆ. ಆಗ ವಿಷಯಗಳ ಜ್ಞಾನವಾಗುತ್ತದೆ. ಮನಸ್ಸು ಒಂದು ಕಡೆ ಇಂದ್ರಿ ಯಗಳು ಬೇರೆ ಕಡೆಗೆ ಹೀಗಿದ್ದರೆ ವಿಷಯಗಳ ಜ್ಞಾನವು ಎಲ್ಲಿಂದುಂಟಾಗಬೇಕು? ಈ ವಿಷಯಗಳಲ್ಲಿ ಐದುಭಾಗಗಳನ್ನು ಮಾಡಿರುತ್ತಾರೆ. ಅವು ಯಾವವೆಂದರೆ, ೧ ರೂಪ, ೨ ಶಬ್ದ, ೩ ಗಂಧ ೪ ರಸ, ೫ ಸ್ಪರ್ಶ ಎಂಬವು. ಕಣ್ಣಿಗೆ ತೋರುವದು ರೂಪವು. ಕಿವಿಗೆ ಕೇಳುವದು ಶಬವು, ಘ್ರಾಣೇಂದ್ರಿಯಕ್ಕೆ ಗೋಚರವಾಗುವದು ಗಂಥರು. ರಸ

-೧೪-

ನೇಂದ್ರಿಯಕ್ಕೆ ತಿಳಿಯುವದು ರಸವು. ಚರ್ಮೇಂದ್ರಿಯಕ್ಕೆ ವಿಷಯವಾಗುವದು ಸ್ಪರ್ಶವು. ವಿಷಯಗಳನ್ನು ಉಪಯೋಗಿಸಿಕೊಳ್ಳುವ ಚಾತುರ್ಯವು ಮನುಷ್ಯಪ್ರಾಣಿಗೆ ವಿಶೇಷ ವಾಗಿರುತ್ತದೆ; ಆದ್ದರಿಂದ ಇತರ ಪ್ರಾಣಿಗಳಿಗಿಂತಲೂ ಮನಷ್ಯನನ್ನು ವಿಷಯಗಳು ಬಹು ತೀವ್ರವಾಗಿ ಅಂಟಿಕೊಳ್ಳುತ್ತವೆ. ಮನುಷ್ಯನು ಒಂದು ಸಾರೆ ವಿಷಯಗಳಲ್ಲಿ ಪ್ರವೇಶಮಾಡಿದರೆ ಸಾಕು. ಅವನಿಗೆ ಅವನ್ನು ಒದ್ದುಗೆದು ಹೊರಗೆ ಬರುವದಕ್ಕೆ ಆಗು ವದೇ ಇಲ್ಲ. ವಿಷಯಗಳಲ್ಲಿ ಏನೂ ಸ್ವಾರಸ್ಯವಿಲ್ಲದಿದ್ದರೂ ಚಿಂತೆಯಿಲ್ಲ, ಅವನ್ನು ಬಿಡುವಹಾಗಿಲ್ಲ. ಒಂದು ನಾಯಿಯು ಹಾದಿಹಿಡಿದು ಹೋಗುವಾಗ ಒಂದು ಎಲವು ಕಣ್ಣಿಗೆ ಬಿದರೆ ಅದನ್ನು ಮಾಂಸಭ‍ಮದಿಂದ ಬಾಯಿಯಲ್ಲಿ ಕಟ್ಟಿಕೊಳ್ಳುತ್ತದೆ. ಆ ಮೇಲೆ ಆ ನಾಯಿಗೆ ಆ ಎಲವನ್ನು ಬಿಡುವದಕ್ಕೆ ಆಗುವದಿಲ್ಲ. ಎಲ್ಲಿ ಹೋದರೂ ಆ ಎಲವನ್ನು ಬಾಯಿಯಲ್ಲಿ ಕಚ್ಚೇಇರುತ್ತದೆಂಬದು ಎಲ್ಲರಿಗೂ ಅನುಭವದ ಸಂಗತಿಯೇ ಇರುತ್ತದೆ. ಅದು ಯಾಕೆ ಬಿಡುವದಿಲ್ಲವೆಂದರೆ, ತನ್ನ ಬಾಯಿಯಲ್ಲಿರುವ ಮಧುರವಾದ ಜೊಲ್ಲು ಆ ಏಲವಿನ ಮೇಲೆ ಬಿದ್ದ ಕೂಡಲೆ ಆ ಎಲವು ಒಂದು ಪ್ರಕಾರವಾಗಿ ಅದಕ್ಕೆ ರುಚಿಸುತ್ತದೆ, ಬಾಯಿಯಲ್ಲಿ ಕಚ್ಚಿರುವದರಿಂದ ಯಾವಾಗಲಾ ಜೊಲ್ಲಿನಿಂದ ಅದು ಆರ್ದ್ರವಾಗಿರುತ್ತದೇ. ಅದನ್ನು ಇದು ಮತ್ತು ಮತ್ತು ನೆಕ್ಕುತ್ತಲೇ ಇರುತ್ತದೆ. ಈ ದೃಷ್ಟಾಂತದಿಂದ ಮನುಷ್ಯನು ನೀರಸವಾದ ವಿಷಯಗಳಲ್ಲಿ ತೊಡಗಿಕೊಂಡು ಪರಮಾರ್ಥ ವನ್ನು ಮರೆತುಬಿಡುತ್ತಾನೆ. ಆ ನಾಯಿಯು ಬಾಯಿಯಲ್ಲಿ ಎಲ್ಲವನ್ನು ಕಚ್ಚಿಕೊಂಡು ಆಹಾರ-ವಿಹಾರಗಳನ್ನು ಹ್ಯಾಗೆ ಬಿಡುತ್ತದೆಯೋ, ಹಾಗೆ ಮನುಷ್ಯನು ಪರಮಾರ್ಥವನ್ನು ಮರೆತು ವಿಷಯಭೋಗದಲ್ಲಿ ತೊಡಗುವನು. ಈ ವಿಷಯಗಳು ಯಾವಾಗಲೂ ಹಾನಿ ಕಾರಕಗಳೆಂಬ ಬಗ್ಯೆ ಪೌರಾಣಿಕರು "ಕುರಂಗಮಾತಂಗ ಪತಂಗಭೃಂಗ ವಿಾನಾಹತಾಃ ಪಂಚಭಿರೇವಪಂಚ | ಏಕಃಪ್ರಮಾದೀ ಸಕಥಂ ನ ಹನ್ಯತೇ ಯಃ ಸೇವತೆ ಪಂಚಭಿರೇವ ಪಂಚ |"ಅಂದರೆ “ ಕುರಂಗವೆಂದರೆ ಎರಳೆಯು, ಇದು ಶಬ್ದವೆಂಬ ವಿಷಯವನ್ನು ತನ್ನ ಶ್ರೋತ್ರೇಂದ್ರಿಯದಿಂದ ಅನುಭವಿಸಿ ನಾಶವನ್ನು ಹೊಂದುವದು. ಅದು ಹೇಗೆಂದರೆ- ಒಬ್ಬಚಿಗರಿಬೇಟೆಗಾರನು ಚಿಗರಿಗಳನ್ನು ಹಿಡಿಯುವದರಸಲುವಾಗಿ ತನ್ನ ಬಲೆಯನ್ನು ಸುತ್ತ ಲೂ ಬೀಸಿಕೊಂಡು, ದಿವ್ಯವಾದ ಗಾನವನ್ನು ಮಾಡುತ್ತಕುಳಿತಿರುತ್ತಾನೆ. ಅಷ್ಟರಲ್ಲಿ ಒಂದು ಜಿಂಕೆಯು ಆ ದಿವ್ಯವಾದ ಗಾನದಲ್ಲಿ ಲುಬ್ಬವಾಗಿ ಆ ಬಲೆಯಲ್ಲಿ ಬಿದ್ದು ಸಾಯು ತ್ತದೆ. ಮಾತಂಗವೆಂದರೆ ಆನೆಯು, ಇದು ಸ್ಪರ್ಶವೆಂಬ ವಿಷಯದಿಂದ ಹಾನಿಯನ್ನು ಹೊಂದುವದು. ಅದು ಹೇಗಂದರೆ, ಆನೆಯನ್ನು ಹಿಡಿಯುವದರಸಲುವಾಗಿ ತರುಣವಾದ ಹೆಣ್ಣಾನೆಯನ್ನು ಗಂಡಾನೆಯಹತ್ತರ ಒಯ್ಯುತ್ತಾರೆ. ಆಗ ಆ ಗಂಡಾನೆಯು, ಹಣ್ಣಾನೆಯ ಮೈಮೇಲೆ ತನ್ನ ಸೊಂಡಿಲವನ್ನಾಡಿಸಿ ಆ ಸ್ಪರ್ಶಕ್ಕೆ ಮೋಹಿತವಾಗಿ ಸಿಕ್ಕು ತನ್ನ ಸ್ವಾತಂತ್ರ್ಯ ವನ್ನು ಕಳೆದುಕೊಳ್ಳುತದೆ; ಆದ್ದರಿಂದ ನಾನಾವಿಧವಾದ ಭಂಗವನ್ನು ಹೊಂದುತ್ತದೆ. ಪತಂಗವೆಂದರೆ ದೀಪದಹುಳವು. ಇದು ದೀಪವನ್ನುನೋಡಿ ದಿವ್ಯವಾದ ಫಲವೆಂಬ ಭ್ರಾಂತಿ

ಯಿಂದ ದೀಪದಮೇಲೆ ಬಿದ್ದು ಸತ್ತುಹೋಗುತ್ತದೆ. ಭ೦ಗವೆಂದರೆ ಗುಂಗೀಹುಳವು. ಇದು

-೧೫-

ಪುಷ್ಪಗಂಧಕ್ಕೆ ಮೋಹಿತವಾಗಿ ಸಕಲಪುಷ್ಪಗಳಲ್ಲಿ ಸಂಚರಿಸುತ್ತ ಚಂಪಕ(ಸಂಪಗಿ) ಪುಷ್ಪ ದಲ್ಲಿ ಕೂಡುತ್ತದೆ. ಆಮೇಲೆ ಎದ್ದು ಹಾರಿಹೋಗುವದಕ್ಕೆ ಬಾರದಂತಾಗಿ ಅಲ್ಲಿಯೇ ಸತ್ತುಹೋಗುತ್ತದೆ. ಇನ್ನು ಮೀನವು ಬಲೆಗಾರನ ಉಕ್ಕಿನಗಾಣದ ತುದಿಯ ಗೋದೀ ಹಿಟ್ಟನರಸಕ್ಕೆ ಮೆಚ್ಚಿಕೊಂಡು ಹಿಡಿಯಲು, ಪರಗೀ ಮುಳ್ಳಿನಂತೆ ವಕ್ರವಾಗಿರುವ ಆ ಗಾಣವು ಗಂಟಲಿನಲ್ಲಿ ಸಿಕ್ಕಕೂಡಲೆ ಸತ್ತುಹೋಗುತ್ತದೆ.ಹೀಗೆ ಹೀಗೆ ಇವೆಲ್ಲ ಪ್ರಾಣಿಗಳು ಒಂದೊಂದೇ ಇಂದ್ರಿಯಗಳಿಂದ ಒಂದೊಂದೇ ವಿಷಯಗಳನ್ನನುಭವಿಸಿ ಸತ್ತುಹೋಗು ತ್ತವೆ. ಇದು ಎಲ್ಲರಿಗೂ ಗೊತ್ತಿದ್ದ ಸಂಗತಿಯೇ ಇರುವದು. ಹೀಗಿರಲು, ಹೆಜ್ಜೆಹೆಜ್ಜೆಗೆ ತಪ್ಪುಮಾಡುತ್ತಿರುವ ಮನುಷ್ಯನು ತಾನೊಬ್ಬನೇ ಯಾವಾಗಲೂ ಐದೂ ಇಂದ್ರಿಯಗಳಿಂದ ವಿ ಷ ಯ ಗ ಳ ನ್ನು ಒಂದೇಕಾಲಕ್ಕೆ ಸೇವಿಸಿದಮೇಲೆ ಇವನ ಹಾನಿಯಾಗದೆ ಹೇಗೆ ಉಳಿಯುವದು? ಇದರ ಮೇಲಿಂನ ಇಂದ್ರಿಯಗಳ ಸಾಮರ್ಥ್ಯದ ಜ್ಞಾನವಾಗುತ್ತದೆ.

----------------------

೪ ನೆಯ ಪ್ರಕರಣ---ಮನಸ್ಸಿನ ಶುದ್ದೀಕರಣ

ಹೀಗೆ ಇಂದ್ರಿಯಗಳು ಎಷ್ಟೇ ಬಲಿಷ್ಠವಾಗಿರಲಿ, ವಿಷಯಗಳು ಎಷ್ಟೇ ಆಕರ್ಷಕ ವಾಗಿರಲಿ, ಮನಸ್ಸನ್ನಷ್ಟು ನಾವು ತಿದ್ದಿ ಹಾದಿಗೆ ತಂದು ಬಿಟ್ಟರೆ ಅವುಗಳ ಬಾಧೆಯು ಇಲ್ಲದಂತಾಗುವದು. ಆದರೆ ಈಗಿನ ಕಾಲದ ನಾವು ಕೆಲಸಕ್ಕೆ ಬಾರದ ಕಾಡುಕಲ್ಲಿನಂತಿ ರುವ ನಮ್ಮ ಮನಸ್ಸನ್ನು ತಿದ್ದಿ ಹಾದಿಗೆ ತರುವ ಕ್ರಮವು ಹೇಗೆ? ಅದನ್ನು ತಿದ್ದುವದಕ್ಕೆ ಉಪಾಯಗಳು ಯಾವವು? ಮತ್ತು ಆ ಉಪಾಯಗಳು ಸುಲಭಸಾಧ್ಯಗಳೊ, ಕಠಿಣ ಸಾಧ್ಯಗಳೊ, ಅಸಾಧ್ಯಗಳೊ? ಕದಾಚಿತ್ ಅವು ಅಸಾಧ್ಯವಾಗಿದ್ದರೆ, ಅವನ್ನು ಹೇಳಿ ಪ್ರಯೋಜನವೇನು ? ಕೇಳಿ ಫಲವೇನು? ಯಾವ ಉಪಾಯಗಳು ಸುಲಭಸಾಧ್ಯವಾಗಿ ಯೂ, ಅನುಭವಕ್ಕೆ ಬರುವವಾಗಿಯೂ, ಇರುವವೋ, ಅಂಥ ಉಪಾಯಗಳನ್ನು ಮಾತ್ರ ಹೇಳುವದೂ, ಕೇಳುವದೂ ಶ್ರೇಯಸ್ಕರವಾಗಿರುವದು. ಆದ್ದರಿಂದ ಅಂಥ ಉಪಾಯ ಗಳನ್ನೇ ಇಲ್ಲಿ ನಾವು ಹೇಳುವದಕ್ಕೆ ಯತ್ನಿಸುತ್ತೇವೆ. ಮನಸ್ಸನ್ನು ಶುದ್ಧ ಮಾಡಿಕೊಳ್ಳುವ ದಕ್ಕಿಂತ ಮೊದಲು, ಮನಸ್ಸಿನ ಉತ್ಪತ್ತಿಯನ್ನು ನಾವು ತಿಳಿದುಕೊಳ್ಳಬೇಕಾಗುತ್ತದೆ. ಅದರ ಉತ್ಪತ್ತಿಯು ಯಾವ ಪದಾರ್ಥಗಳಿಂದಾಗುತ್ತದೆಂಬುವದು ತಿಳಿದರೆ, ಆಯಾ ಪದಾರ್ಥ ಗಳ ಸಾಧಕ-ಬಾಧಕತನದ ಮೇಲಿಂದ ಮನಸ್ಸನ್ನು ತಿದ್ದಿಕೊಳ್ಳುವದು ಜಡವಾಗುವದಿಲ್ಲ. ಆದ್ದರಿಂದ ಮನಸ್ಸಿನ ಉತ್ಪತ್ತಿಯು ಯಾತರಿಂದಾಗುತ್ತದೆಂಬದನ್ನು ಮೊದಲು ನಿರ್ಣಯಿಸಿ, ಅನಂತರದಲ್ಲಿ ಮನಸ್ಸಿನ ಶುದ್ದಿಯ ಪ್ರಕಾರವನ್ನು ಹೇಳುವದಕ್ಕೆ ಉಪಕ್ರಮಿಸುತ್ತೇವೆ.

ಮನುಸ್ಸು ಅಣುಮಾತ್ರವಿರುತ್ತದೆಂದು ಶಾಸ್ತ್ರಕಾರರು ಶಾಸ್ತ್ರದಲ್ಲಿ ಹೇಳಿರುತ್ತಾರೆ. ಇದರ ಮೇಲಿಂದ ವಿಚಾರಿಸಿದರೆ, ಅಣುಪ್ರಮಾಣವಾಗಿರುವ ಮನಸ್ಸು ಯಾವ ಕೆಲಸಗ ಳನ್ನು ಮಾಡುವದಕ್ಕೆ ಸಮರ್ಥವಾದೀತು? ಅಶಕ್ತನಾದ ಮನುಷ್ಯನು ಪುಷ್ಟನ ಹಾಗೆ ಕೆಲಸವನ್ನು ಮಾಡಲಾರನೆಂಬುವದು ಸ್ಪಷ್ಟವಿರುತ್ತದೆ. ಆದ್ದರಿಂದ ಅಣುಮಾತ್ರವಾಗಿದ್ದ