ಪುಟ:ಕನ್ನಡದ ಬಾವುಟ.djvu/೧೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೩೬

ಕಾದಿಹೆವು ಕಣ್ಣೀರು ತುಂಬಿ. ನಾಗರಿಕತೆಯ
ನಾಗಿನಿಯು ಪ್ರಗತಿನಾಮಕ ಫಣೆಯಮೇಲೆತ್ತಿ
ಚುಂಬಿಸಿಯೇ ಕೊಲ್ಲಲೆಳಸುತಿದೆ. ಹಿಂದಿನ ಬುತ್ತಿ
ಸವೆಯುತಿದೆ. ಇಂದಿಹ ಮಹಾತಪಸ್ಸಿನ ಚಿತೆಯ
ರಕ್ತಿಮ ವಿಭೂತಿ ಯೊಳೆ ಮುಂದಿನ ನವೋದಯದ
ಧವಳಿಯ ಪಿನಾಕಧರನೈ ತಹನು: ಮತ್ತೊಮ್ಮೆ
 ಭಾರತಾಂಬೆಯು ಜಗದ ಬೆಳಕಾಗುವಳು ;
 ಹೆಮ್ಮೆ ಗೌರವಗಳಿಂದ ಜನಗಣದ ಕಟುನಿರ್ದಯವ
 ಲೋಭ ಬುದ್ದಿಯ ಹೀನ ಕುಟಿಲತೆಯನುರೆ ನೀಗಿ
 ಮೆರೆವಳು ತಪಸ್ವಿನಿಯೆ ಚಕ್ರವರ್ತಿನಿಯಾಗಿ !
ಕೆ. ವಿ. ಪುಟ್ಟಪ್ಪ
---೦---


೩೯. ಬೇಲೂರಿನ ಶಿಲಾಬಾಲಿಕೆಯರು
ಶ್ರವಣಕೆ ಸಿಲುಕದ ಲಲಿತಾ
ರವ ಸುಖವಂ ರಸನೆಗೊದನವದನ್ನತ ದ್ರವಮಂ
ಎವೆಯಿಕ್ಕದ ನಯನಗಳಿಂ
ಸವಿವುದು ನೀವೆಂಬ ಮಾಯಗಾತಿಯರಿವರಾರ್

ಶೃಂಗಾರ ವಲ್ಲರಿಯೆ ಲತೆಯೊಡನೆ ಬಳುಕಿ ನೀ೦
    ನ್ನತ್ಯಲಾಸ್ಯದಿನಾರನೋಲಿಸುತಿರುವೆ
ಮಾಧುರ್ಯ ಮಂಜೂಷೆ ಮಧುರತರ ಮೌನದಿಂ
   ದಾರ ಚರಿತೆಗಳ ಶುಕಿಗುಸಿರುತಿರುವೆ |
ಮುಗ್ಧ ಮೋಹನವದನೆ ಮುಕುರದೊಳ್ ನೋಡಿ ನೀ
   ನಾರ ನೆನೆದಿಂದು ನಸುನಗುತಲಿರುವೆ
ಪ್ರಣಯಪ್ರರೋಹೆ ನೀ೦ ಪ್ರಿಯತರಾಕೃತಿಯಿಂದೆ
   ರುಷೆನಿಂತಾರೊಳಭಿನಯಿಸುತಿರುವೆ
ಶಿಲ್ಪಿ ವರ ಕುವರಿಯರೆ ಸೌಂದರ್ಯ ಮುದ್ರಿಕೆಯರೆ
ದೇವ ದೇವನ ಸೇವೆಗೈ ತರ್ಪ ಸಾಧುಕುಲಮಂ
ಭಾವ ವಿನ್ಯಾಸ ವೈಕೃತಿಗಳಿಂ ಬೆರಗುವಡಿಸಿ
ಚಂಚಲತೆಗೆಡೆಯೆನಿಸಿ ನೀವಿಂತು ನಿಲುವುದೇಕೆ?

ಇನ್ನೆವರನೊಲಿದು ಬಾರದ ನಿಮ್ಮ ಮನದಿನಿಯ
   ನಿನ್ನು ಬಹನೆಂದು ನೀ೦ ತಿಳಿವುದೆಂತು
ಅಗಣಿತ ಪ್ರೇಕ್ಷಕರೊಳಿಲ್ಲದಾ ಪ್ರೇಮಿ ಯಾ
   ವಿಷಮ ಸಮಯದಿ ನಿಮಗೆ ದೊರೆವುದೆಂತು