ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಚರಿತ್ರೆ

ಗ್ರಹಣಮಾಡಿ ಈಶ್ವರ ಸಾಕ್ಷಾತ್ಕಾರವೇ ಮನುಷ್ಯನಿಗೆ ಮುಖ್ಯಲಕ್ಷ್ಯವಾಗಿರಬೇಕೆಂದೂ ಇದು ಪ್ರತಿಯೊಬ್ಬನಿಗೂ ಸಾಧ್ಯವೆಂದೂ ತೋರಿಸಿ ಈ ಲಕ್ಷ್ಯವೂ ತಪ್ಪದಂತೆ ಕಾಪಾಡಿಕೊ೦ಡು ಬ೦ದಿದ್ದಾರೆ.

ಎ೦ಥ ಸರ್ವೋತ್ತಮವಾದ ವಸ್ತುವಾದರೂ ಕಾಲಕ್ರಮದಲ್ಲಿ ಬದಲಾವಣೆಯನ್ನು ಹೊಂದಿ ಕೆಟ್ಟುಹೋಗುವದು. ತಳತಳನೆ ಹೊಳೆಯುವ ಬೆಳ್ಳಿ, ಬಂಗಾರಗಳಾದರೂ ಬಹಳಕಾಲ ಹಾಗೇಬಿಟ್ಟರೆ ಮಲಿನವಾಗುವುವು. ಅಂಥದರಲ್ಲಿ ಕೊಳಕಾಗುವುದಕ್ಕೆ ಪ್ರಬಲವಾದ ಇತರ ಕಾರಣಗಳಿದ್ದರಂತೂ ಹೇಳಬೇಕಾಗಿಯೇ ಇಲ್ಲ. ಧರ್ಮದ ಸ್ಥಿತಿಯೂ ಹೀಗೆಯೇ, ಮಾಲಿನ್ಯಕ್ಕೆ ಇತರ ಯಾವ ಕಾರಣವಿಲ್ಲದಿದ್ದರೂ ಕಾಲಕ್ರಮದಲ್ಲಿ ಜನರು ಧರ್ಮದ ಸಾರವನ್ನು ಮರೆತು ಮುಖ್ಯವಾದದ್ದನ್ನು ತಾತ್ಕಾರಮಾಡಿ ಗೌಣವಾದದನ್ನೇ ಮುಖ್ಯವಾಗಿ ಮಾಡಿಕೊಂಡು, ಮೌಢ್ಯದಲ್ಲಿ ಮುಳುಗಿ ಹೋಗುವರು. ಅದರಿಂದ ಧರ್ಮಗ್ಲಾನಿಯೂ ಅಧರ್ಮದ ಅಭ್ಯುತ್ಥಾನವೂ ಉಂಟಾಗುವುವು. ಜನರಿಗೆ ನಾನಾವಿಧದಲ್ಲಿ ಮೊಗಸುತ್ತಾಗಿ ಎಲ್ಲೆಲ್ಲಿಯೂ ಅಶಾಂತಿಯೂ ಹಾಕಾಕಾರವೂ ಹುಟ್ಟುವುವು. ಆಗ ಈಶ್ವರನು ಅವತಾರಮಾಡಿ ಧರ್ಮಸಂಸ್ಥಾಪನೆ ಮಾಡಿ ಶಾಂತಿಯನ್ನು ನೆಲೆಗೊಳಿಸುವನು. ಆದರೆ ಕಾರಣವಿಲ್ಲದೆ ಕಾರ್ಯವಿರುವುದಿಲ್ಲ. ಅವತಾರಕ್ಕೆ ಆವಶ್ಯಕತೆ ಇಲ್ಲ ದಿದ್ದರೆ ಪರಮಾತ್ಮನೆಂದಿಗೂ ಅವತಾರಮಾಡುವುದಿಲ್ಲ. ಆವಶ್ಯಕತೆ ಇದ್ದರೆ ಎಂದಿಗೂ ಕಣ್ಣು ಮುಚ್ಚಿಕೊಂಡು ಸುಮ್ಮನೆ ಇರುವುದಿಲ್ಲ. ಶ್ರೀಕೃಷ್ಣ, ಬುದ್ಧ, ಶಂಕರಾಚಾರ್ಯ ಮುಂತಾದವರು ಜನಿಸಿದ ಸಂದರ್ಭಗಳನ್ನೂ ಅವರ ಚರಿತ್ರೆಯನ್ನೂ ನೋಡಿದರೆ ಇದು ವಿಶದವಾಗುವುದು.

ಮೇಲೆ ಹೇಳಿದ ಮೌಡ್ಯಕ್ಕೆ ನಮ್ಮ ಈಗಿನ ಸ್ಥಿತಿಯಿಂದ ಬೇಕಾದಷ್ಟು ಉದಾಹರಣೆಗಳನ್ನು ಕೊಡಬಹುದು. ನಮಗೆ ಈಗ ಸಂಧ್ಯಾವಂದನೆಯು ನಿರರ್ಥಕವಾದ, ಉಚ್ಚಾರವನ್ನು ಮಾಡಲಾರದ, ಹಿರಿಯರು ಹೊರೆಸಿದ ಒಂದು ಭಾರವಾಗಿದೆ. ಅದರ