ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಪೋದ್ಘಾತ ವನ್ನು ಶೀಘ್ರವಾಗಿ ಇಳಿಸುವದು ಶಾರೀರಶಾಸ್ತ್ರಕ್ಕೂ ರಸಾಯನಶಾಸ್ತ್ರಕ್ಕೂ ವಿರುದ್ಧ ಮಾತ್ರ ವಲ್ಲ; ಅದು ರೋಗಿಗೆ ಖಂಡಿತವಾಗಿ ಕೆಡಕನ್ನು ಮಾಡಿ, ಅವನು ಸ್ವಸ್ಥನಾಗುವ ಸಂಭವ ವನ್ನು ಕಡಿಮೆಮಾಡುತ್ತದೆ ಸ್ವಲ್ಪ ವರ್ಷಗಳ ಹಿಂದೆ ಇಂಧಾ ಎಂಟಪ್ಯಾರೆಟೆಕ್ (ಜ್ವರ ತಗ್ಗಿಸ ತಕ್ಕ) ಎನ್ನುವ ಔಷಧಗಳನ್ನು ಬಹಳವಾಗಿ ಉಪಯೋಗಿಸಿದರಿಂದಲೇ ಹೃದಯದ ಕೆಲಸ ನಿಂತುಹೋದ್ದರೆ, ಮತ್ತು ನರಗಳ ಸಂಬಂಧವಾದ ಅಕ್ರಮಗಳ, ಅನೇಕ ದೃಷ್ಟಾಂತಗಳು ಉಂಟಾದ್ದೆಂತ ತೋರಿಸಬಹುದು “ಹಾಗಾದರೆ ಜ್ವರದಲ್ಲಿ ಮತ್ತು ಬಿಸಿಯನ್ನು ತಗ್ಗಿಸುವ ಯತ್ನದಲ್ಲಿ ತಣ್ಣೀರನ್ನು ಅಧವಾ ನೀರಿನ ಗಟ್ಟಿಯನ್ನು (Ice) ಉಪಯೋಗಿಸುವದು ದೋಷಕರವಲ್ಲವೋ ಎಂಬ ಜಿಜ್ಞಾಸವು ಅನೇಕರಲ್ಲಿ ಸ್ವಾಭಾವಿಕವಾಗಿ ಹುಟ್ಟುತ್ತದೆಂಬದು ನಿಸ್ಸಂದೇಹ.” ( ಈ ಪ್ರಶ್ನೆಗೆ ಅಲ್ಲ' ಎಂತ ಉತ್ತರ ಒರದು, ತಣಸಿನಿಂದ ನರಗಳ, ಯಕೃತ್ತಿನ ಮತ್ತು ವೃಕ್ಕುಗಳ ಕೆಲಸವು ಅಧಿಕವಾಗಿ, ವಿಷವು ಹೊರಗೆ ಹೋಗಬಹುದೆಂತ ಹೇಳಿ) “ತಣ್ಣೀರಸ್ನಾನದಿಂದ (ದೇಹದೊಳಗಿನ) ಬಿಸಿ ಯನ್ನುಂಟುಮಾಡುವ ಸ್ಥಾನಗಳ ಕೆಲಸವನ್ನು ಹಿಡಿದು ನಿಲ್ಲಿಸುವದಲ್ಲದೆ, ಎಷಪರಿಹಾರಕ ಫಲವಿಲ್ಲ ಎಂತಾದರೆ, ಅದು ಆ ಔಷಧಗಳಷ್ಟೇ ಬಾಧಕಕರ " ( ಈ ಸ್ಥಾನದಿಂದ ಅದನ್ನು ನೋಡಲಿಕ್ಕಾರಂಭಿಸಿದಂದಿನಿಂದ ಜ್ವರವು 104 ಡಿಗ್ರಿಗೆ ಏರಿ, ಅಲ್ಲಿಯೇ ನಿಂತರೆಂದರಿಂದ ಮಾತ್ರ ರೋಗಿಗೆ ಹಗಲೂ ರಾತ್ರಿಗಳಲ್ಲೆಲ್ಲಾ #v I ManII, M D (ller all ತಣ್ಣೀರು, ತಣ್ಣೀರ ವತ್ತಡಗಳು, ತಣ್ಣೀರಬಟ್ಟೆಗಳ ಹೊದಿಸುಎಕೆಗಳು, of Health, ಅಥವಾ ಕರಾರದಲ್ಲಿರಿಸಿ ತಣ್ಣೀರಸ್ನಾನಮಾಡಿಸುವದು ಮತ್ತು ಬಿಸಿಲೇಪ ಗಳು, ಇವುಗಳನ್ನುಪಯೋಗಿಸುವ ಪಕ್ಷವನ್ನು ನಾನು ಯಾವಾಗಲಾದರೂ ಸಮರ್ಧಿಸಿದ್ದಿಲ್ಲ.” ಬ್ರಾಂಡಿಯ ಉಪಯೋಗದ ಕುರಿತು ಇನ್ನೊಬ್ಬರು ಡಾಕ್ಟರರು* ಹೇಳುವದೇನೆಂದರೆ ಕೆಲವು ದಶವರ್ಷಗಳ ಹಿಂದೆ ಅನೇಕ ರೋಗಗಳಿಗೆ ಮದ್ಯವು ಸಾಧಾರಣವಾದ ಪರಿಹಾರವಾಗಿತ್ತು. ಬಾಯ್ದೆ ಜ್ವರವು ಇದಕ್ಕೊಂದು ಒಳ್ಳೆ ದೃಷ್ಟಾಂತ ಅರ್ಧಶತಮಾನದ ಪೂರ್ವದಲ್ಲಿ ಅದಕ್ಕೆ ಮದ್ಯವು ನಿತ್ಯವಾದ ಚಿಕಿತ್ಸೆಯಾಗಿತ್ತು ಆದರೆ ಈ ಕಾಲದಲ್ಲಿ ಆಧುನಿಕ ಅನುಭವವುಳ್ಳ ಎಲ್ಲಾ ವೈದ್ಯರು ಈ ರೋಗದಲ್ಲಿ ಮದ್ಯದ ಉಪಯೋಗ ವನ್ನು ಪ್ರತಿಷೇಧಿಸುತ್ತಾರೆ ಟಾಯ್ಪೋಯ್ಡ್ ಜ್ವರಕ್ಕೆ ಮದ್ಯ ಕೊಡುವ ದಿವಸಗಳಲ್ಲಿ ರೋಗಿಗೆ ಟಾಯ್ಕೆಯ್ದಿನ ಕ್ರಿಮಿಗಳೊಂದಿಗೆ ಮಾಡಬೇಕಾದ ಯುದ್ದಕ್ಕಿಂತಲೂ ತನ್ನ ದೇಹದೊಳಗೆ ಹೊಗಿಸಿದ ಮದ್ಯದೊಂದಿಗೆ ಯುದ್ಧವನ್ನು ಮಾಡುವದು ಹೆಚ್ಚು ಕಷ್ಟವಾಗಿರಬೇಕೆಂತ ನಾವು ಹೇಳುವೆವು.” ಮದ್ಯ ಮುಂತಾದ ತೀಕ್ಹಣವಾದ ಉತ್ತೇಜನಗಳ ಮತ್ತು ತಣ್ಣೀರಿನ ಸ್ನಾನಾದಿಗಳ ಉಪ ಯೋಗದ ಬಿಷಯದಲ್ಲಿ ನಮ್ಮ ಅಭಿಪ್ರಾಯವೇನೆಂದರೆ ರೋಗಕ್ಕೆ ತಕ್ಕನಾದ ಔಷಧವಿದ್ದು, ಅದನ್ನು ಸೇವಿಸಿ ಜೀರ್ಣಿಸಲಿಕ್ಕೆ ಬೇಕಾದಷ್ಟು ಸಹ ಶಕ್ತಿಯು ರೋಗಿಗೆ ಇಲ್ಲವೆಂತಲೂ, ಅಂಧಾದ್ದರ ಉಪಯೋಗದಿಂದ ಅಷ್ಟು ಶಕ್ತಿ ರೋಗಿಗೆ ಬರಬಹುದೆಂತ ಕಂಡ ಸಂಗತಿಯಲ್ಲಿ ಮಾತ್ರ, ತಾತ್ಕಾಲಿಕ ಪ್ರಯೋಗವಾಗಿ ಅವುಗಳನ್ನು ಉಪಯೋಗಿಸಬಹುದಲ್ಲದೆ, ಅವರ ಳನ್ನು ಈಗಿನಂತೆ ಚಿಕಿತ್ಸಾಂಗವಾಗಿ ಪದೇಪದೇ ಉಪಯೋಗಿಸುವದು ಶುದ್ದ ತಪ್ಪು, ಕೆಲವು ಸಂಗತಿಯಲ್ಲಿ ಮಾತನಾಡುವ ಶಕ್ತಿಯಿಲ್ಲದೆ ಸಾಯುವದಕ್ಕೆ ಸಮೀಪಿಸಿದ ರೋಗಿಗೆ ಕಸ್ತೂ