ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೦

ಭಾರತೀಯರ ಇತಿಹಾಸವು.

ಭರತಖಂಡವೆಂಬ ಹೆಸರು ಪ್ರಾಪ್ತವಾಯಿತೆಂದು ಮತ್ತೆ ಕೆಲವರ ಹೇಳಿಕೆ; ದುಷ್ಯಂತರ ಜನ ಮಗನಾದ ವೀರ ಸಾರ್ವಭೌಮ ಭರತ ರಾಜನಿಂದ ಭರತಖ೦ಡಕ್ಕೆ ಈ ಹೆಸರು ನಮ್ಮ ಪೂರ್ವಿಕರು ಕೊಟ್ಟರೆಂದು ಬೇರೆ ಕೆಲವರ ಎಣಿಕೆ, ಭರತಖಂಡಕ್ಕೆ ಯಾವ 'ಭರತ'ರಿಂದ ಈ ಭಾರಣೆಯ ಹೆಸರು ಬಂದಿದ್ದರೂ ಸರಿ; ಒಬ್ಬೊಬ್ಬ ಭರತ ರಾಜನ ಚರಿತ್ರೆಯ ನೊದಿದರೂ, ಅವರು ನೆರವೇರಿಸಿದ ಮಹಾ ಮಹಾ ಕಾರ್ಯಗಳಿಂದ ಹಿಂದೂ ದೇಶಕ್ಕೆ ಭರತಖ೦ಡನ೦ಬ ಹಸರು ನಾರ್ಥಕ ವಾಗು ವಂತೆಯೇ ಇದೆ. 'ಭರತ'ವೆಂಬುದು ಬೇರೆ ಬೇರೆ ಅರ್ಥ ವಿಶೇಷಗಳಿಂದ ಬಳಕೆಯಲ್ಲಿದ್ದರೂ, ಭರತಖಂಡದ ಬಗ್ಗೆ ಅವುಗಳಲ್ಲೆಲ್ಲ ತು೦ಬಿ ಸೂಸಿ ಹರಿಯುತ್ತಿರುವ ಈ ಜಲ ಅಭಿಮಾನವ ಸೂರ್ತಿಯ ಅವುಗಳು ಮಹತ್ವವುಳ್ಳವಾಗಿವೆ. ಭರತಖಂಡದ ವಿಷಯವಾಗಿ ಅವರಿಲ್ಲ ಒ೦ದೇ ಪೂಜ್ಯ ಭಾವನೆಗಳೇ ಸ್ಪುರಿಸುತ್ತಿರುವವು; ಆದುದರಿಂದ ಅವರೆಲ್ಲರೂ ಬೇರೆ ಬೇರೆಯಾಗಿದ್ದರೆಂದು ಒಂದು ವೇಳೆ ಎಣಿಸಿದರೂ ಅವರಲ್ಲಿ ಉಕ್ಕಿ ಬರುವ ದಿವ್ಯ ಭಾವನೆಗಳೇನೂ ಬೇರೆಯಲ್ಲವಷ್ಟೆ!

ವೇದ ಪುರಾಣಗಳಲ್ಲಿ ಭಾರತದ ಹೆಸರು:- ಭರತವರ್ಷ ಭಾರತ ಇತ್ಯಾದಿ ಹೆಸರು ಖಗೋವಾ ದಿಗಳಲ್ಲಿ ಅಲ್ಲಲ್ಲಿ ಕಂಗೊಳಿಸು ಇವೆ; ಅಥರ್ವವೇದದೊಳಗಿನ ಪ್ರಥ್ವಿಸೂಕ್ತದೊಳಗಂತೂ "ಭರತ ಖಂಡದ ರಕ್ಷಣೆಗಾಗಿ ದೇವತೆಗಳು ಹಗಲಿರಳು ನಿದ್ದೆ ನೀರಡಿಕೆ ಲಕ್ಷ್ಮಿ ಸದೆ, ಕಣ್ಣಳಗೆ ಕಣ್ಣಿಟ್ಟು ಭರತಖಂಡವನ್ನು ರಕ್ಷಿಸುತ್ತಿರುವರು; ಆದ್ದರಿಂದ ಯಾರೂ ಭಾರತೀಯರೊಡನೆ ದ್ವೇಷ ಕಟ್ಟಿ ಕೊಳ್ಳ ಬಾರ ದೆಂದು” ವಾ ಕೈಗಳಿವೆ; ದೇವತೆಗಳು ಕಾವಲಾಗಿ ರು ವೆಂಧ ದೇಶದ ಪುಣ್ಯವಸ್ಥೆ೦ತು ಹೇಳೋಣ ಭಾಗವತ ಗ್ರ೦ಧದೊಳಗೂ ಭರತ ಖ೦ಡದ ಪುಣ್ಯ ವಿಶೇಷವನ್ನು ವರ್ಣಿಸುವಾಗ್ಗೆ ಮೊದಲಿನ ಭಾರತೀಯರು ಮೈ ಮರೆತಿರುವರು; “ಭರತಖಂಡದೊಳಗೆ ಮನುಷ್ಯನಾಗಿ ಹುಟ್ಟುವದು ದುರ್ಲಭವೆಂದೂ ಈ ಖಂಡದೊಳಗೆ ಹುಟ್ಟಿ ಬರಬೇಕೆಂದು ಇ೦ಾದಿ ದೇವತೆಗಳು ಸಹ ಯಾವಾಗಲೂ ಆತುರಪಡುತ್ತಿರುವರೆಂದೂ, ಒ೦ದೆ ಡೆಯಲ್ಲಿ ಭಾಗವತಕಾರರು ಹೇಳಿದ್ದಾರೆ; ” ಮತ್ತು ಭರತಖಂಡದೊಳಗೆ.