ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅಶೋಕ.

೨೨೭

ಅಶೋಕ:- ಕ್ರಿ. ಶ. ಪೂ. ೨೭೫-೨೩೨ ರ ವರೆಗೆ. ಬಿ೦ದೂಸಾರನ ತರುವಾಯ ಅಶೋಕನು ತನ್ನ ಅಣ್ಣತಮ್ಮಂದಿರೊಡನೆ ಬಡಿದಾಡಿತಾನೇ ಪಟ್ಟವೇರಿದನು. ಚಂದ್ರಗುಪ್ತನು ಆಳಿಬಾಳಿ ಹೋದನಂತರ ಅವನ ಮನೆತನದಲ್ಲಿ ಹುಟ್ಟಿದ ಶ್ರೇಷ್ಠವಾದ ವಿಭೂತಿ ಪುರುಷನೆಂದರೆ ಅಶೋಕನೇ ಸರಿ. ಈತನಲ್ಲಿ ಮೊಟ್ಟಮೊದಲು ಹೇಳುವಷ್ಟೇನೂ ಧರ್ಮಬುದ್ಧಿಯಾಗಲಿ, ಪ್ರಜೆಗಳ ವಿಷಯದಲ್ಲಿ ಅನುರಾಗವಾಗಲಿ ಕಂಡುಬರಲಿಲ್ಲ. ಎಲ್ಲರಂತೆ ಈತನು ವಿಲಾಸದಲ್ಲಿಯೇ ಮೈಮರೆತು ಕಾಲಹರಣ ಮಾಡುತ್ತಿದ್ದನು. ಆದರೆ, ಕಲಿಂಗರು ಅಶೋಕನ ವಿರುದ್ದವಾಗಿ ಬಂಡಾಯವೆಬ್ಬಿಸಿದ್ದೊಂದೇ ತಡ; ಅಶೋಕನಿಗೆ ಬಲಗಾಲವು ಸಂಧಿಸಿತು. ಕಲಿಂಗದೇಶಕ್ಕೆ ದಂಡೆತ್ತಿ ಹೋಗಿ ಅಶೋಕನು ಅವರನ್ನು ಮುರಿಬಡಿದು ತನ್ನ ಪಾದಕ್ಕೆರಗುವಂತೆ ಮಾಡಿದನು. ಈ ಯುದ್ಧದೊಳಗೆ ಅಶೋಕನು ೧ ಲಕ್ಷ ಜನರ ನೆತ್ತರ ಕಾವಲಿ ಹರಿಸಿದ್ದಲ್ಲದೆ, ತನ್ನ ದೇಶಕ್ಕೆ ಕಲಿಂಗ ದೇಶದಿಂದ ಒಂದೂವರೆ ಲಕ್ಷ ಜನರನ್ನು ಸೆರೆಯಾಳಾಗಿ ಒಯ್ದನು. ಇದುವೇ ಅಶೋಕನ ಮೊದಲಿನ ಹಾಗೂ ಕೊನೆಯ ಕಾಳಗವು. ಈ ಕಾಲಕ್ಕೆ ಬೆಳೆಯುತ್ತಿದ್ದ ಬುದ್ದನ ತತ್ವಗಳು ಮೆಲ್ಲಮೆಲ್ಲಗೆ ಅಶೋಕನ ಮನಸಿಗೆಹಿಡಿದು ಉಪಗುಪ್ತನ೦ಧ ಗುರುವು ದೊರೆತುದರಿಂದ ಕಲಿಂಗ ದೇಶವನ್ನು ಗೆಲಿಯುವಾಗ್ಗೆ ಅಶೋಕನಲ್ಲಿ ಸ೦ಚಾರವಾಗಿದ್ದ ರಣದೇವತೆಯ ಭೀಕರ ಸ್ವರೂಪವು ಈ ಯುದ್ದವಾದ ನಂತರ ಮೆಲ್ಲಮೆಲ್ಲಗೆ ಇಳಿಯತೊಡಗಿ, ಕೊನೆಗೆ ಅದುವೇ ಅವನಿಗೆ ಒಳ್ಳೆಯ ದಾರಿಗೊಯ್ಯುವದೊಂದು ಅದು ಮೆಟ್ಟಲಾಗಿ ಪರಿಣಮಿಸಿತು. ಅಶೋಕನ ಮನಸ್ಸು ತಿರುಗಿತು. ಕುರಿಗಳ೦ತೆ ಎಷ್ಟೊಂದು ಜನರನ್ನು ಕೊಲೆಮಾಡಿದ ಬಗ್ಗೆ ಅಶೋಕನು ಮರಮರನೆ ಮರುಗಿ ತನ್ನ ಘೋರ ಕೃತಿಯ ಬಗ್ಗೆ ಪಶ್ಚಾತ್ತಾಪಪಟ್ಟು, ಅಂದು ಮೊದಲ್ಗೊಂಡು ತನ್ನ ಸಾಮ್ರಾಜ್ಯದೊಳಗೆ ಶಾಂತಿಯ ಹಾಗೂ ಪ್ರೇಮದ ರಾಜ್ಯವನ್ನು ನಡೆಸಿಯೇ ತೀರಬೇಕೆಂದು ಪಣಗಟ್ಟಿದನು. ಮತ್ತು ಸರ್ವರಿಗೂ ಈ ವಿಷಯವು ತಿಳಿಯಬೇಕೆ೦ದು "ಈಗ ನಡೆದು ಹೋಗಿರುವ ಕೊಲೆಯ ಮಾತು ಬೇಡ. ಮುಂದೆ ಈ ಕೊಲೆಯಲ್ಲಿ ನಡೆದ೦ಥ ಒ೦ದೆರಡು