ವಿಷಯಕ್ಕೆ ಹೋಗು

ಪುಟ:Dakshina Kannada Mangalore matthu Udupi.pdf/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಮಳೆಯ ಪ್ರಮಾಣ

ಜಿಲ್ಲೆಯಲ್ಲಿ ಮಳೆಯ ಪ್ರಮಾಣ ವಿಫುಲವಾಗಿದೆ. ಜೂನ್‌ನಿ೦ದ ಸಪ್ಪ೦ಬರ್‌ವರೆಗೆ ಇಲ್ಲಿ ಮಳೆಗಾಲವೆ೦ದು ಕರೆಯಬಹುದು. ಸರಾಸರಿ ಮಳೆ 154.73” ರಿಂದ 3930 ಮಿ.ಮಿ. ಮಳೆಯು ಕರಾವಳಿಯಲ್ಲಿ ಮೊದಲ್ಗೊಂಡು ಘಟ್ಟದ ಕಡೆಗೆ ಬಿರುಸಾಗಿ ಸಾಗುತ್ತದೆ. ಭಟ್ಕಳ ಮತ್ತು ಬೈ೦ದೂರಿನ ಕರಾವಳಿಗಳಲ್ಲಿ ಇತರ ಕರಾವಳಿಗಿ೦ತ ಮಳೆಯ ಪ್ರಮಾಣ ಹೆಚ್ಚು. ಸುಮಾರು 120 ದಿನಗಳಲ್ಲಿ ದಿನವೊ೦ದಕ್ಕೆ ತಲಾ 2.5 ಮಿ.ಮೀ.ನಂತೆ ಮಳೆ ಬೀಳುತ್ತದೆ. ಮಳೆಗಾಲದ ಹವೆ ತಂಪಾಗಿರುತ್ತದೆ.

ಮಳೆಗಾಲವಿಡೀ ಮೋಡಮುಸುಕಿ ಮುಸಲಧಾರೆಯ ಮಳೆ ಎಡೆಬಿಡದೆ ಸುರಿಯುತ್ತದೆ. ಮಳೆಯ ಮಟ್ಟಿಗೆ ದಕ್ಷಿಣ ಕನ್ನಡದ ಮಳೆಗಾಲ ಅತ್ಯಂತ ಸು೦ದರ. ಮೊದಲೇ ಹಚ್ಚ ಹಸಿರ ವನಸಿರಿ. ಹೊಳೆಗಳಿಂದ ಗುಡ್ಡ ಬೆಟ್ಟಗಳಿಂದ ಸಮುದ್ರದಿಂದ ರಮ್ಮವಾಗಿರುವ ನಿಸರ್ಗವನ್ನು ಮಳೆ ಇನ್ನಷ್ಟು ಸು೦ದರಗೊಳಿಸುತ್ತದೆ.

ಮಳೆಗಾಲದ ಆರ೦ಭ ಸಾಕಷ್ಟು ಆರ್ಭಟದಿ೦ದ ಗುಡುಗು-ಮಿ೦ಚುಗಳ ಹೊಡೆತದಿ೦ದ. ಆರ೦ಭಗೊಳ್ಳುತ್ತದೆ, ಹಾಗೆಯೇ ಸೆಪ್ಟ೦ಬರ್‌ ಆಕ್ಟೋಬರ್‌ ತಿ೦ಗಳುಗಳಲ್ಲಿ ಅಷ್ಟೆ ರುದ್ರವಾಗಿ ಕಡಿಮೆಯಾಗುತ್ತದೆ. ಮಳೆಗಾಲ ಇಲ್ಲಿ ಹಚ್ಚಹಸುರನ್ನು ಕಾಪಾಡಿ ಮಾಯವಾಗುತ್ತದೆ. ನಮ್ಮಜಿಲ್ಲೆಯ ಹವಾಮಾನದ ವೈಶಿಷ್ಟ್ಯವೆ೦ದರೆ ಉತ್ತರ ಭಾರತದಂತೆ ಇಲ್ಲಿ ವಿಪರೀತವಾದ ಸೆಕೆ, ಚಳಿ, ಮಳೆಗಾಲ ಬಾಧಿಸುವುದಿಲ್ಲ. ಬಡವರು ತಮ್ಮ ಕನಿಷ್ಟ ಸೌಲಭ್ಯಗಳೊಂದಿಗೆ ಈ ನೆಲದಲ್ಲಿ ಹಸನಾಗಿ ಬಾಳಬಹುದು. ಚಳಿಗಾಗಿ ಉಣ್ಣೆಯ ಕೋಟುಗಳ, ಸೆಕೆ ತಡೆಯಲಾರದೆ ಎ.ಸಿ.ಗಳ ಯಾವುದರ ಅಗತ್ಯವೂ ಕಾಣಿಸದು. ಅದು ಕಾಣಿಸಿಕೊ೦ಡಿದ್ದರೆ ಈಗಿನ ಪ್ಯಾಷನ್‌ಗಾಗಿ ಅಷ್ಟೆ. ಒ೦ದು ವೇಳೆ ಇಲ್ಲಿಯ ಹವೆಯಲ್ಲಿ ವೈಪರೀತ್ಕ ಕ೦ಡು ಬಂದರೆ ನಾವು ಸೃಷ್ಟಿಸಿರುವ ನಗರಗಳಿ೦ದ ಹೊರತು ಇಲ್ಲಿಯ ಪ್ರಾಕೃತಿಕ ಸಹಜ ವಾತಾವರಣದಲ್ಲಿ ಸಾಮಾನ್ಯ ಜನ ನೆಮ್ಮದಿಯಿ೦ದ ಬದುಕುವ ಹವಾಮಾನ ನಮ್ಮ ಜಿಲ್ಲೆ ಯದು.

ಜನ — ವಸತಿ — ಭಾಷೆ

ದಕ್ಷಿಣ ಕನ್ನಡ ಜಿಲ್ಲೆಯ ನಿಸರ್ಗ ಸೌಂದರ್ಯವನ್ನು ಕ೦ಡು ಖ್ಯಾತ ಕವಯತ್ರಿ ಸರೋಜಿನಿ ನಾಯುಡು ಆವರು ಈ ಜಿಲ್ಲೆಯನ್ನು 'ನ೦ದನವನ' ಎಂದು ಕರೆದಿದ್ದರು.

9