ವಿಷಯಕ್ಕೆ ಹೋಗು

ಪುಟ:Dakshina Kannada Mangalore matthu Udupi.pdf/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕಾರಣವಾಗಿದೆ. ಅಡಿಕೆ ತೋಟದ ಮಧ್ಯೆ ಕೊಕ್ಕೊ ಬೆಳೆಯಬಹುದು. ಆದರೆ ರಬ್ಬರ್‌ ಗಿಡಗಳಿಗೆ ಪ್ರತ್ಕೇಕವಾಗಿ ಇಳಿಜಾರು ಪ್ರದೇಶಗಳೇ ಬೇಕಾಗುತ್ತದೆ.

ಅಲಂಕಾರ ಗಿಡಗಳಲ್ಲಿ ದಕ್ಷಿಣ ಕನ್ನಡದಲ್ಲಿ ಮಲ್ಲಿಗೆ, ಸೇವಂತಿಗೆ, ಆಬ್ಬಲಿಗೆಗಳಿಗೆ ಪ್ರಮುಖ ಸ್ಥಾನವಿದೆ. ಮಲ್ಲಿಗೆಯಲ್ಲಿ ಉಡುಪಿ ಮತ್ತು ಮ೦ಗಳೂರು ಮಲ್ಲಿಗೆಗಳೇ ಮುಖ್ಯವಾದುವು.

ಕರಾವಳಿ ಜಿಲ್ಲೆಯಲ್ಲಿ ಈ ಎಲ್ಲ ಸಸ್ಯವರ್ಗಗಳ ಜತೆ ವನಸ್ಪತಿಗಳು, ಕಳೆಗಿಡಗಳು, ಶಿಲೀಂದ್ರಗಳು ಕೂಡಾ ಬೆಳೆಯುತ್ತವೆ. ಇವಿಷ್ಟೇ ಆಲ್ಲ. ಆಲ, ಆಶ್ವಥ್ಥ, ಹುಣಸೆ, ಅತ್ತಿ, ಬೇವು ಮು೦ತಾದ ಮರಗಿಡಗಳು ಸಾಮಾನ್ಯವಾಗಿ ದಕ್ಷಿಣ ಕನ್ನಡದಲ್ಲಿ ಬೆಳೆಯುತ್ತವೆ.

ಪ್ರಾಣಿವರ್ಗ

ಕರಾವಳಿ ಜಿಲ್ಲೆಯ ಪ್ರಾಣಿವರ್ಗದ ಸಂಪತ್ತು ವೈವಿಧ್ಯಮಯವಾದದ್ದು. ಸಾಕುಪ್ರಾಣಿಗಳಾದ ದನ, ಆಡು, ಕೋಣ, ನಾಯಿ, ಕುರಿ, ಕೋಳಿ, ಮೊಲ ಇವೆಲ್ಲ ಇದ್ದರೆ, ಕಾಡಿನಲ್ಲಿ ಹುಲಿ, ಚರತೆ, ಆನೆ, ಜಿಂಕೆ, ಕಡವೆ, ಕಾಡುಕೋಳಿ, ಮ೦ಗ ಮುಂತಾದವು ಇವೆ.

ಜಲಚರಗಳಾದ ಮೀನು, ಮೊಸಳೆ, ನಾನಾ ಜಾತಿಯ ಹಾವುಗಳು ಎಲ್ಲವನ್ನು ನಮ್ಮ ಜಿಲ್ಲೆಯಲ್ಲಿ ಕಾಣಬಹುದು. ಕಾಡುಗಳಲ್ಲಿ ಸದಾ ಜೀರುಂಡೆಗಳ ನಾದವನ್ನು ಕೇಳಬಹುದು. ಪತ೦ಗಗಳಲ್ಲಿ ಅನೇಕ ಜಾತಿಗಳಿವೆ. ಅನೇಕ ಕೀಟರಾಶಿಗಳಿವೆ. ಇಲ್ಲಿ ಅತ್ಕ೦ತ ಉಪಯುಕ್ತ ಕೀಟದ ಜಾತಿ ಅಂದರೆ ಜೇನುನೊಣ. ಸ್ಥಳೀಯ ಜೇನಿಗೆ ಬಹಳ ಬೇಡಿಕೆ ಇದೆ.

ಪಕ್ಷಿಗಳು

ದಕ್ಷಿಣ ಕನ್ನಡ ಪಕ್ಷಿಗಳ ಜಾತಿಯನ್ನು ಎರಡು ವಿಭಾಗವಾಗಿ ಮಾಡಿದ್ದಾರೆ. ಮೊದಲನೆಯ ವರ್ಗದಲ್ಲಿ ಕೃಷಿಗೆ ಅಪಾಯಕಾರಿಯಾದ ಗಿಳಿ ಗೀಜಗಗಳು. ಎರಡನೆಯ ವರ್ಗದಲ್ಲಿ ಕೊಳ್ಳೆ ಹೊಡೆಯುವ ಪಕ್ಷಿಗಳು, ಗಿಡುಗಗಳು ಗೂಬೆಗಳು. ಈ ಪಕ್ಷಿಗಳ ವೈವಿಧ್ಯಮಯ ಅನ್ವೇಷಣೆಗೆ ವಿಪುಲ ಅವಕಾಶ ಇಲ್ಲಿ ತೆರೆದಿದೆ.

8