ವಿಷಯಕ್ಕೆ ಹೋಗು

ಪುಟ:ಶ್ರೀ ಬಸವಣ್ಣನವರ ದಿವ್ಯಜೀವನ.pdf/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
17

“ಬುದ್ಧಿ ಬಲದಿಂದವರು ಭಗವಂತನನ್ನರಿತು,
ಭಾವಬಲದಿಂದಾತನನ್ನವರು ಒಲಿಸಿದರು ;
ತಪದ ಬಲದಿಂದ, ಜಪ-ಧ್ಯಾನಾದಿ-ಸಾಧನದ
ಬಲದಿಂದ, ಆತನ ಕರುಣವನ್ನು ಪಡೆದಿಹರು.

ಜಾಗ್ರತಾಂತಃಪ್ರಜ್ಞೆಯ ಬಲದಿಂದಾತನನು
ಸಾಕ್ಷಾತ್ಕರಿಸಿಕೊಂಡು, ಆ ಭವ್ಯರೂಪವನು
ಕಂಡು, ದಿವ್ಯಾನಂದ-ತಲ್ಲೀನರಾಗಿದ್ದು,
ಜಗಕೆಲ್ಲ ದಿವ್ಯ ಜೀವನವನ್ನು ತೋರಿದರು'.

ಇಂತೆಂದು - ಕನ್ನಡದ ಕನ್ನಡಿಗೆ - ಕಾಣಿಸಿದ
ದೇಶ್ಪಾಂಡೆ ಎಂಬವರ ಈ ಕೃತಿಯು ಸತ್ಕ್ರತಿಯು,
ಇನ್ನುಳಿದ ಶರಣಗಣ-ಜೀವನದ ಪರಿಚಯವು
ಹಲಕೆಲವು ಭಾಷೆಗಳಲೂ ಬರಲಿ, - ಪ್ರತಿಕೃತಿಯು.

ಲೋಕಕ್ಕೆ ಶಿಕ್ಷಣವ ಕೊಡಲೆಳಸಿ, ವಿಧಿಯಿಂದ,
"ಲೋಕ-ಶಿಕ್ಷಣ-ಮಾಲೆ" ಯೆಂಬ ಭೂಷಣದಿಂದ
ಶರಣಸಾಹಿತ್ಯವನು ಸಿಂಗರಿಸಿ, ಪೂಜಿಸುವ
ಶ್ರೀಮಾನ್‌ ದಿವಾಕರರು ಧನ್ಯವಾದಾರ್ಹರು.

ಬಸವಣ್ಣನವರ ಈ 'ದಿವ್ಯ ಜೀವನ'ವನ್ನು
ಕಾಣಿಸಿದ ಮೇಣ್ ಮುದ್ರಿಸಿದವರೀರ್ವರನು ಸಹ
ಆಯುರಾರೋಗ್ಯಸುಖಸಂಪತ್ತುಗಳನಿತ್ತು
ಗುರುಸಿದ್ದ ಕಾಪಾಡುತಿರಲೆಂದು ಹರಸುವೆವು.

ಸತ್ಯಂ ಶಿವಂ ಸುಂದರಂ