ವಿಷಯಕ್ಕೆ ಹೋಗು

ಪುಟ:ಶ್ರೀ ಬಸವಣ್ಣನವರ ದಿವ್ಯಜೀವನ.pdf/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

18

!!ಓಂ ನಮಃ ಶಿವಾಯ!!

ಜಗದ್ಗುರು ಶ್ರೀ ಶಿವರಾತ್ರಿರಾಜೇಂದ್ರ ಸ್ವಾಮಿಗಳು ರಾಮಾಜುನ ರಸ್ತೆ
ಶ್ರೀ ವೀರಸಿಂಹಾಸನ ಮಠ ಮೈಸೂರು
ಸುತ್ತೂರು ಸಂಸ್ಥಾನಂ ..........................

ಶ್ರೀ ಬಸವಣ್ಣನವರ ಅಂತರಂಗದ ಹಿರಿಮೆ ಮತ್ತು ಅವರ ಅನುಭಾವದ ಪ್ರಭಾವವನ್ನು ಮೂಡಿಸಲು ಪ್ರಯತ್ನಿಸಿರುವ ಈ ಗ್ರಂಥವನ್ನು ಅವಲೋಕಿಸಿ ಆನಂದಪಟ್ಟಿದ್ದೇವೆ. ಜೀವನದ ಶಾಶ್ವತವಾದ ಸತ್ಯಗಳನ್ನು ವಿಮರ್ಶಾತ್ಮಕವಾಗಿ ವಿವೇಚಿಸಿ ಆಧುನಿಕ ಜೀವನಕ್ಕೆ ಅವನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಈ ಯುಗದಲ್ಲಿ ಬಸವಣ್ಣನವರ ಆದರ್ಶ ಮತ್ತು ಸಾಧನೆಗಳು ಮಾರ್ಗದರ್ಶಕ ಶಕ್ತಿಗಳಾಗಿ ಪರಿಣಮಿಸಬಲ್ಲವು. ಅವರು ಬೋಧಿಸಿದ ಕಾಯಕನಿಷ್ಠೆ, ಸರ್ವಸಮತಾಭಾವ, ಅಂತರಂಗಶುದ್ಧಿ ಬಹಿರಂಗಶುದ್ಧಿ ಮೊದಲಾದ ಮಾನವ ಧರ್ಮದ ಮೌಲ್ಯಗಳು ಶಾಶ್ವತವಾದುವು. ಅವರ ಮಾತು ಮಾಣಿಕ್ಯದ ದೀಪ್ತಿಯಂತಹದು, ಅವರ ಕೃತಿ ಶಿವಕಾರುಣ್ಯದ ಒಲುಮೆಗೆ ಕಾರಣವಾದುದು. ನುಡಿದಂತೆ ನಡೆದು ತೋರಿಸಿದ ಅವರ ಸಾಧನೆ ಮಾನವತೆಯ ಮುಂದೆ ಎಂದೆಂದೂ ನಿಲ್ಲಬಹುದಾದ ಉಜ್ವಲವಾದ ಆದರ್ಶವಾಗಿದೆ. ಆದುದರಿಂದ ಇಂದಿನ ವಿಚಾರವಂತ ಜಗತ್ತು ಅತ್ತ ದೃಷ್ಟಿಯನ್ನು ತಿರುಗಿಸುತ್ತಿರುವುದು ಸಹಜವ ಆಗಿಯೇ ಇದೆ ; ಮತ್ತು ಅದು ಅವಶ್ಯಕವೂ ಹೌದು. ಆ ಮಾರ್ಗದಲ್ಲಿ ಶ್ರೀ ಮನೋಹರ ದೇಶಪಾಂಡೆಯವರ 'ಶ್ರೀ ಬಸವಣ್ಣನವರ ದಿವ್ಯಜೀವನ' ಎಂಬ ಈ ಗ್ರಂಥ ಒಂದು ಸ್ತುತ್ಯ ಪ್ರಯತ್ನವಾಗಿದೆ. ಇದನ್ನು ಹೊರತರುತ್ತಿರುವ ಲೋಕ ಶಿಕ್ಷಣ ಮಾಲೆಯ ಸಂಚಾಲಕರು ಅಭಿನಂದನೀಯರು. ಶ್ರೀ ಬಸವಣ್ಣನವರ ಜೀವನಚರಿತ್ರೆ, ಅವರ ಭಕ್ತಿಸಾಧನೆ, ಅವರ ಬೋಧನೆ ಮತ್ತು ಕಾರ್ಯನಿರ್ವಹಣೆ ಈ ಎಲ್ಲ ಅಂಶಗಳನ್ನು ಆಧಾರಸಹಿತವಾಗಿ ಪರಿಣಾಮಕಾರಿಯಾಗಿ ಲೇಖಕರು ಹೇಳಿದ್ದಾರೆ. ಅವರ ವಚನಗಳೊಡನೆ ಹರಿಹರನ ಬಸವರಾಜದೇವರ ರಗಳೆಯನ್ನೂ ಅಲ್ಲಲ್ಲಿ ಬಳಸಿಕೊಂಡಿರುವುದು ಸೂಕ್ತವಾಗಿದೆ. ಒಟ್ಟಿನಲ್ಲಿ ಬಹುಮುಖ ಪ್ರತಿಭೆಯುಳ್ಳ ಯುಗಪ್ರವರ್ತಕ ಶಕ್ತಿಯಾದ ಶ್ರೀ ಬಸವಣ್ಣನವರ ವ್ಯಕ್ತಿತ್ವವನ್ನು ಸಾಮಾನ್ಯರಿಗೂ ತಿಳಿಯುವಂತಹ ತಿಳಿಯಾದ ಕನ್ನಡದಲ್ಲಿ ಪರಿಚಯ