ವಿಷಯಕ್ಕೆ ಹೋಗು

ಪುಟ:ಶ್ರೀ ಬಸವಣ್ಣನವರ ದಿವ್ಯಜೀವನ.pdf/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
5

ನೋಡಲಾಗದು, ನುಡಿ ಕೇಳಲಾಗದು ಎಂದು ಪ್ರಭುದೇವರು ಅರುಹಿರುವರು. ಅವರು ಮತ್ತೂ ಹೇಳಿರುವುದೇನೆಂದರೆ :

ಪದ್ಯದಾಶೆಯ ಹಿರಿಯರು ಕೆಲವರು
ಬುದ್ಧಿಯಾಶೆಯ ಹಿರಿಯರು ಕೆಲವರು
ಸಮತೆಯಾಶೆಯ ಹಿರಿಯರು ಕೆಲವರು

ಕೆಲವರು ಕಾವ್ಯಪ್ರಿಯರು, ಕೆಲವರು ದರ್ಶನಪ್ರಿಯರು, ಕೆಲವರು ಪರಾರ್ಥ ಪ್ರಿಯರು. ಇವರೆಲ್ಲ ತಮ್ಮ ನಿಜವ ತಾವರಿಯದೆ ಆಚರಿಸುವರು. ಇವರಲ್ಲಿಯ ಕೆಲವರು -

ಗುರುಹಿರಿಯರು ತೋರಿದ ಉಪದೇಶದಿಂದ
ವಾಗದ್ವೈತವ ಕಲಿತು ವಾದಿಪರಲ್ಲದೆ,
ಆಗುಹೋಗೆಂಬುದನರಿಯರು.
ಯುಕ್ತಿಯನರಿಯರು, ಮುಕ್ತಿಯನರಿಯರು
ಭಕ್ತಿಯನರಿಯರು !
ಮತ್ತು ವಾದಿಗಳೆನಿಸುವರು,
ಹೋದರು ಗುಹೇಶ್ವರಾ ! ಸಲೆ ಕೊಂಡ ಮಾರಿಂಗೆ !
ಏನೆಂದರಿಯರು ! ಎಂತೆಂದರಿಯರು !
ಬರಿ ಮಾತಿನ ಬ್ರಹ್ಮವನಾಡುತ್ತಿದ್ದರು !

ಈ ಬಗೆಯಾಗಿ,

ಆಶೆಗೆ ಸತ್ತುದು ಕೋಟಿ !
ಆಮಿಷಕ್ಕೆ ಸತ್ತುದು ಕೋಟಿ !
ಹೊನ್ನು ಹೆಣ್ಣು ಮಣ್ಣಿಗೆ ಸತ್ತುದು ಕೋಟಿ !
ಗುಹೇಶ್ವರಾ ! ನಿನಗಾಗಿ ಸತ್ತವರನಾರನೂ ಕಾಣೆ

_____________________
೨. ಪ್ರ. ಪ್ರ. ಪು. ೪೧