ವಿಷಯಕ್ಕೆ ಹೋಗು

ಪುಟ:ಶ್ರೀ ಬಸವಣ್ಣನವರ ದಿವ್ಯಜೀವನ.pdf/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
7

ಎಂಬುದಾಗಿ ಬಸವಣ್ಣನವರು ತಮ್ಮ ಕಾಲದ ಮೂಢ ಆರಾಧನೆಗಳನ್ನು ವಿಡಂಬಿಸಿರುವರು.

ಇಂಥ ಹಾಳುಹಿಂಸೆ, ಪೊಳ್ಳುದಂಭ, ಮೂಢನಂಬಿಕೆ ಹಾಗೂ ಕಾಡುನಡತೆಗಳಿಂದ ಹಾಳಾಗಲಿರುವ ಸಮಾಜವನ್ನು ಎಚ್ಚರಿಸಿ, ಅದರಲ್ಲಿ ಪರಶಿವನ ಭಕ್ತಿಯನ್ನು ಬಲಿಸಿ, ಅದಕ್ಕೆ ಪರಮಾನಂದದಲ್ಲಿ ನಲಿಯಲು ಕಲಿಸಲೆಂದೇ ಬಸವಣ್ಣನವರು ಅಂದು ಅವತರಿಸಿದದು.

ಕಲ್ಯಾಣ-ಕೇಂದ್ರ :

ಅಂದು ಕಲ್ಯಾಣಪಟ್ಟಣವು ಕನ್ನಡನಾಡಿನ- ಅದೇಕೆ-ಇಡಿ ಭಾರತದ ಒಂದು ಪ್ರಧಾನ ಸಾಂಸ್ಕೃತಿಕ ಕೇಂದ್ರವಾಗಿದ್ದಿತು. ಅಂದಿನ ಚಾಲುಕ್ಯರ ವೀರ ವಿಕ್ರಮಾದಿತ್ಯನ ವೈಭವಸಂಪನ್ನ ಆಳಿಕೆಯು ಕಲ್ಯಾಣದ ಕೀರ್ತಿಯನ್ನು ತುಂಬ ಬೆಳೆಸಿದ್ದಿತು. ಅದು ಭಾರತದ ಉತ್ತರದ ತುತ್ತತುದಿಯಾದ ಕಾಶ್ಮೀರದವರೆಗೂ ಹಬ್ಬಿದ್ದಿತು. ಅದು ಎಲ್ಲೆಡೆಯಿಂದ ಪಂಡಿತರನ್ನೂ ಮಹಾಪುರುಷರನ್ನೂ ಕಲ್ಯಾಣದೆಡೆ ಆಕರ್ಷಿಸಿದ್ದಿತು. ಕಾಶ್ಮೀರದಿಂದ ಬಂದ ವಿಜ್ಞಾನೇಶ್ವರ ಪಂಡಿತನೂ, ಬಿಲ್ಹಣ ಮಹಾಕವಿಯೂ ಕಲ್ಯಾಣವನ್ನು ಬಣ್ಣಿಸಿದ ಬಗೆಯನ್ನು ನೋಡಿದರೆ, ಅಂದು ಅದು ಎಲ್ಲ ಬಗೆಯಾಗಿ 'ಕಲ್ಯಾಣ-ಕೇಂದ್ರ' - ಕಲ್ಯಾಣಕರ ಸಂಗತಿಗಳ ಕೇಂದ್ರವಾಗಿದ್ದಿತೆಂಬುದು ಸಹಜವಾಗಿ ಹೊಳೆಯದೆ ಇರದು.

ವಿಜ್ಞಾನೇಶ್ವರನು ತನ್ನ 'ಮಿತಾಕ್ಷರಾ' ಎಂಬ ಹಿರಿಯ ಗ್ರಂಥದ ಕೊನೆಯಲ್ಲಿ ಈ ರೀತಿ ಬಣ್ಣಿಸಿರುವ :

ನಾಸೀದಸ್ತಿ! ಭವಿಷ್ಯತಿ ಕ್ಷಿತಿತಲೇ ಕಲ್ಯಾಣಕಲ್ಪಂ ಪುರಂ |
ನ ದೃಷ್ಟಃ ಶ್ರುತ ಏವ ವಾ ಕ್ಷಿತಿಪತಿಃ ಶ್ರೀವಿಕ್ರಮಾರ್ಕೋಪಮಃ ||

“ಈ ಇಳೆಯ ಮೇಲೆ ಕಲ್ಯಾಣದಂಥ ಇನ್ನೊಂದು ಪಟ್ಟಣವು ಹಿಂದೆ ಇರಲಿಲ್ಲ, ಇಂದು ಇರುವದಿಲ್ಲ, ಮುಂದೆ ಆಗುವದಿಲ್ಲ. ಶ್ರೀವಿಕ್ರಮನಂಥ ಅರಸನನ್ನು ಕಂಡಿಲ್ಲ, ಕೇಳಿಲ್ಲ" ಅದೇ ಮೇರೆಗೆ ಕವಿ ಬಿಲ್ಹಣನು ತನ್ನ 'ವಿಕ್ರಮಾಂಕಚರಿತ' ದಲ್ಲಿ ಅಂದು ಪೂರ್ತಿಯಾಗಿ ನೆಲೆಗೊಂಡ