ವಿಷಯಕ್ಕೆ ಹೋಗು

ಪುಟ:ಶ್ರೀ ಬಸವಣ್ಣನವರ ದಿವ್ಯಜೀವನ.pdf/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
9

ಆ ಬೆಳಕಿನೊಳು ಒಪ್ಪುತ್ತಿರ್ದರಯ್ಯಾ ಅಸಂಖ್ಯಾತ ಮಹಾಗಣಂಗಳು!
ಶಿವಭಕ್ತರಿದ್ದ ಕ್ಷೇತ್ರ ಅವಿಮುಕ್ತ ಕ್ಷೇತ್ರವೆಂಬುದು ಹುಸಿಯೇ?
ಶಿವಭಕ್ತರಿದ್ದ ದೇಶ ಪಾವನವೆಂಬುದು ಹುಸಿಯೇ?
ಗುಹೇಶ್ವರಲಿಂಗದಲ್ಲಿ ಎನ್ನ ಪರಮಾರಾಧ್ಯರು
ಸಂಗನ ಬಸವಣ್ಣನ ಮಹಿಮೆ ನೋಡಾ ಸಿದ್ಧರಾಮಯ್ಯ!

"ಆ ಭಕ್ತಗಣದಲ್ಲಿ ಪ್ರಭುದೇವರೇ ಪ್ರಮುಖರು. ಅಲ್ಲಮ ವ್ಯೋಮ, ಬಸವ ಭಾನು, ಚನ್ನಬಸವ ಚಂದ್ರ, ಬೇರೆ ಶರಣರು ಉಳಿದ ಗ್ರಹನಕ್ಷತ್ರಗಳು, ಎಂಬುದು ತುಂಬ ಯಥಾರ್ಥವಾದ ಭಾವನೆ. ಏಕೆಂದರೆ ಗ್ರಹನಕ್ಷತ್ರಗಳಿಗೆಲ್ಲ ಆಕಾಶವು ಆಶ್ರಯವಿದ್ದಂತೆ, ಶರಣವೃಂದಕ್ಕೆಲ್ಲ ಪ್ರಭುದೇವ ಆಶ್ರಯವಾಗಿದ್ದ ಸ್ಫೂರ್ತಿಯ ಕೇಂದ್ರವಾಗಿದ್ದ."

ಈ ಬಗೆಯಾಗಿ ಬಸವಣ್ಣನವರು ಶರಣರನೇಕರನ್ನು ತಮ್ಮೆಡೆ ಸೆಳೆದರು. ಅವರ ನೆರವಿನಿಂದ ತಮ್ಮ ಭಕ್ತಿಭಾಂಡಾರವನ್ನು ಬೆಳೆಸಿದರು. ಅದನ್ನು ವಿಪುಲವಾಗಿ ಬಳಸಿ ವೀರಶೈವಬಾಂಧವ್ಯವನ್ನು ನೆಲೆಗೊಳಿಸಿದರು. ಆತ್ಮೋದ್ಧಾರವನ್ನೂ ಲೋಕೋದ್ಧಾರವನ್ನೂ ನೆರವೇರಿಸಿದರು.

ನಮ್ಮ ದೃಷ್ಟಿ

ನಮ್ಮದು ಮತಾತೀತ ದೃಷ್ಟಿ. ನಾವು ಬಸವಣ್ಣನವರನ್ನು ಕಾಣುವದು ಮತೋದ್ಧಾರಕರೆಂದಲ್ಲ, ಆದ್ದಾರಕರೆಂದು, ಲೋಕೋದ್ಧಾರಕರೆಂದು. ಬಸವಣ್ಣನವರು ವೀರಶೈವ ಮತವನ್ನು ಉದ್ದರಿಸಿದರು. ನಿಜ. ಅದು ಆ ದೇಶ-ಕಾಲಗಳಿಗೆ ಬೇಕಾದ ವಿಷಯ. ಅದರ ಜತೆಯಲ್ಲಿ ಅವರು ತಮ್ಮನ್ನು ತಾವು ಉದ್ದರಿಸಿಕೊಂಡರು. ತಮ್ಮ ಉಜ್ವಲ ಭಕ್ತಿ-ಆನುಭಾವ-ಬೋಧೆಗಳಿಂದ ತಮ್ಮ ಪರಿಸರದವರನ್ನು ಉದ್ದರಿಸಿದರು. ಇದು ಎಲ್ಲ ದೇಶ-ಕಾಲಗಳಿಗೆ ಬೇಕಾದ ಮಾತು. ಮತವು ದೇಹ-ಸಾಂತ; ಅನುಭಾವವು ಆತ್ಮ- ಅನಂತ. ಮತವು

೫. ಪ್ರ.ಪ್ರ. ಪು. ೨