ವಿಷಯಕ್ಕೆ ಹೋಗು

ಪುಟ:ಶ್ರೀ ಬಸವಣ್ಣನವರ ದಿವ್ಯಜೀವನ.pdf/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
47

"ನಾನು ತಮ್ಮ ಈ ಆಶ್ವಾಸನಕ್ಕಾಗಿ ತಮ್ಮಿಂದ ತುಂಬ ಉಪಕೃತನು, ಅರಸರೇ!" ಬಸವಣ್ಣನವರೆಂದರು, "ತಮಗೆ ನನ್ನ ಅನಂತ ವಂದನೆಗಳು, ಕಾಯಕದಿಂದ ಬಾಳಲು ಗುರುಗಳು ಆಜ್ಞಾಪಿಸಿರುವ ಮೂಲಕ ನಾನು ತಮ್ಮ ಒಲವಿನ ಔತಣವನ್ನು ನಿರಾಕರಿಸಬೇಕಾಯಿತು. ಕ್ಷಮಿಸಿರಿ. ನಾಳಿನಿಂದ ತಮ್ಮ ಕಡೆ ಕೆಲಸಕ್ಕೆ ಬರುವೆ.

ಇಷ್ಟು ಹೇಳಿ ಬಸವಣ್ಣನವರು ಬಾಚರಸನೊಡನೆ ಅಲ್ಲಿಂದ ಹೊರಡಲು ಅನುವಾದರು. ಅವನ್ನು ಕಂಡು ಸಿದ್ಧರಸನು, ಫಲಾಹಾರವನ್ನು ಸೇವಿಸಿಕೊಂಡು ಹೋಗಲು ಅವರನ್ನು ಬಿನ್ನವಿಸಿದನು. ಆ ಮೇರೆಗೆ ಅದನ್ನು ಸ್ವೀಕರಿಸಿ, ಅವರಿಬ್ಬರೂ ಮನೆಗೆ ತೆರಳಿದರು.

ಮಂತ್ರಿಪದ:

ಮರುದಿನದಿಂದಲೇ ಬಸವಣ್ಣನವರ ಕೆಲಸವು ಪ್ರಾರಂಭ ಆಯಿತು. ಅವರು ದಿನಾಲು ಬೆಳಿಗ್ಗೆ ತಮ್ಮ ಇಷ್ಟಲಿಂಗದ ಪೂಜೆಯನ್ನೂ ಧ್ಯಾನವನ್ನೂ ತೀರಿಸಿಕೊಂಡು, ಸಿದ್ಧರಸನ ಮನೆಗೆ ಬಂದು, ಲೆಕ್ಕಪತ್ರಗಳನ್ನೊಳಗೊಂಡ ಮನೆಯ ಎಲ್ಲ ಆಢಳಿತವನ್ನು ನೋಡಿಕೊಳ್ಳತೊಡಗಿದರು. ಆಡಳಿತದಲ್ಲಿಯ ಅವರ ಕೌಶಲವನ್ನೂ ಪ್ರಾಮಾಣಿಕತೆಯನ್ನೂ ನಡತೆಯಲ್ಲಿಯ ಅವರ ನಯವಿನಯಗಳನ್ನೂ ನುಡಿಯಲ್ಲಿಯ ಮಾಧುರ್ಯವನ್ನೂ ಕಂಡು, ಸಿದ್ಧರಸನು ಅವರನ್ನು ತುಂಬ ಪ್ರೀತಿಸತೊಡಗಿದನು, ಗೌರವಿಸತೊಡಗಿದನು. ಆತನ ಪ್ರೀತ್ಯಾದರಗಳು ದಿನದಿನಕ್ಕೆ ಬೆಳೆಯುತ್ತಲೇ ನಡೆದವು. ಬಸವಣ್ಣನವರೂ ದಂಡಾಧಿಪನ ಸೌಜನ್ಯ ಕಂಡು ಆತನ ಬಗೆಗೆ ಆದರಭಾವವನ್ನು ತಳೆದರು. ಈ ರೀತಿ ಸಂಗನ ಕಾರಣದಿಂದ ಲಭಿಸಿದ ಈ ಯೋಗವು ಮುಂದೆ ಬರುವ ಭಾಗ್ಯೋದಯದ ಮುಂಬೆಳಕಾಗಿ ಪರಿಣಮಿಸಿತು, ಅದನ್ನೂ ಬೇಗನೆ ಬರಮಾಡಿಕೊಂಡಿತು. ಕೆಲದಿನಗಳಲ್ಲಿಯೇ ಬಸವಣ್ಣನವರಿಗೆ ತಮ್ಮ ಬುದ್ಧಿಚಾತುರ್ಯವನ್ನು ಕಾಣಿಸುವ ಒಂದು ಒಳ್ಳೆಯ ಸಂದರ್ಭವು ಲಭಿಸಿ, ಅದರ ಫಲವಾಗಿ ಅವರ ಭಾಗ್ಯರವಿಯು ಉದಿತನಾದ. ಅಂದಿನ ಕೆಲ ಸನ್ನಿವೇಶಗಳನ್ನು ನೆನೆದೇ ಬಸವಣ್ಣನವರು ಮುಂದಿನ ವಚನವನ್ನು