ವಿಷಯಕ್ಕೆ ಹೋಗು

ಪುಟ:ಶ್ರೀ ಬಸವಣ್ಣನವರ ದಿವ್ಯಜೀವನ.pdf/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

104

ಆಮೇಲೆ ತಮ್ಮನ್ನು ಶರಣರ ಸಹವಾಸದಲ್ಲಿ ಇರಿಸಲು ಬಸವಣ್ಣನವರು ಭಗವಂತನನ್ನು ಪ್ರಾರ್ಥಿಸಿರು.
ಅಯ್ಯಾ ! ಸಜ್ಜನ ಸದ್ಭಾವರ ಸಂಗದಿಂದ
ಮಹಾನುಭಾವರ ಕಾಣಬಹುದು
ಮಹಾನುಭಾವರ ಸಂಗದಿಂದ... ತನ್ನ ತಾನರಿಯಬಹುದು
ಇದು ಕಾರಣ ಸದ್ಭಕ್ತರ ಸಂಗವನೆ ಕರುಣಿಸು.
ಮರಮರ ಮಂಥನದಿಂದ ಅಗ್ನಿ ಹುಟ್ಟಿ
ಆ ಮರವನೆಲ್ಲವ ಸುಡದಿಪ್ಪುದೇ ?
ಮಹಾನುಭಾವರ ಸಂಗದಿಂದ ಜ್ಞಾನಾಗ್ನಿ ಹುಟ್ಟಿ
ಎನ್ನ ತನುಮನ ಎಲ್ಲವ ಸುಡದಿಪ್ಪುದೇ ?
ಇದು ಕಾರಣ ಮಹಾನುಭಾವರ ತೋರಿಸು
ಕೂಡಲಸಂಗಮದೇವಾ !
ಆದುದರಿಂದ ಶರಣರ ಬರವು ಅವರಿಗೆ ಅಸುವಿನ ಬರವಿನಂತೆ ಪ್ರಿಯವಾಯಿತು. ಅವರದನ್ನು ಆತುರತೆಯಿಂದ ಕಾಯತೊಡಗಿದರು. ಸೂರ್ಯನ ಉದಯ ತಾವರೆಗೆ ಜೀವಾಳವಾದಂತೆ, ಚಂದ್ರಮನುದಯ ನೆಯ್ದಿಲೆಗೆ ಜೀವಾಳವಾದಂತೆ, ಶರಣರ ಬರವು ಅವರ ಪ್ರಾಣಜೀವಾಳವಾಯಿತು. ಅದರ ಮೂಲಕ,
ಹೊಲಬುಗೆಟ್ಟ ಶಿಶು ತನ್ನ ತಾಯ ಬಯಸುವಂತೆ ;
ಬಳಿದಪ್ಪಿದ ಪಶು ತನ್ನ ಹಿಂಡನರಸುವಂತೆ ;
ಬಯಸುತ್ತಿರ್ದೆನಯ್ಯಾ ನಿಮ್ಮ ಶರಣರ ಬರವನು
ದಿನಕರನುದಯಕ್ಕೆ ಕಮಳ ವಿಕಸಿತವಾದಂತೆ
ಎನಗೆ ನಿಮ್ಮ ಶರಣರ ಬರವು, ಕೂಡಲಸಂಗಮದೇವಾ! ಎಂದವರು ಉಸುರಿದರು.
ಇಂಥ ಪರಿಸ್ಥಿತಿಯಲ್ಲಿ ಶರಣರು ಬಂದಾಗ 'ಕರುಡ ಕಣ್ಣು ಪಡೆದಂತೆ, ಬಡವ ನಿಧಾನವ ಕಂಡಂತೆ ನೀರಡಿಸಿದವರ ನೀರ