ವಿಷಯಕ್ಕೆ ಹೋಗು

ಪುಟ:ಶ್ರೀ ಬಸವಣ್ಣನವರ ದಿವ್ಯಜೀವನ.pdf/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

126

ಹೀಗಾಗಕೂಡದು. ಅದೇ ಮೇರೆಗೆ :

ಓಡಲಾರದ ಮೃಗವು ಸೊಣಗಂಗೆ ಮಾಂಸವ ಕೊಡುವಂತೆ.
ಮಾಡಲಾಗದು ಭಕ್ತನು, ಕೊಳಲಾಗದು ಜಂಗಮ.
ತನುವು ಮನುವು ಮಾಡಬೇಕು ಭಕ್ತಿಯ.
ಮಾಡಿಸಿಕೊಳ್ಳಬೇಕು ಜಂಗಮ

ಕೂಡಲಸಂಗಮದೇವಾ. ಆದರೆ 'ಹಮ್ಮಿನ ಭಕ್ತಿ ಕರ್ಮಕ್ಕೆ ಮೊದಲು' ಎಂಬುದನ್ನು ಮರೆಯಬಾರದು. ಏಕೆಂದರೆ -

ಮಾಡಿದೆನೆಂಬುದು ಮನದಲ್ಲಿ ಮೂಡಿದರೆ,
ಏಡಿಸಿ ಕಾಡಿತ್ತು ಶಿವನ ಡಂಗುರ!
ಮಾಡಿದೆನೆನ್ನದಿರಾ ಲಿಂಗಕ್ಕೆ ಮಾಡಿದೆನೆನ್ನದಿರಾ ಜಂಗಮಕ್ಕೆ
ಮಾಡಿದೆನೆಂಬುದು ಮನದಲ್ಲಿಲ್ಲದ್ದರೆ,
ಬೇಡಿತನೀವ ಕೂಡಲಸಂಗಮದೇವ.

ಭಕ್ತಿಯ ಉತ್ಕಟತೆ :
ಭಕ್ತಿಯಲ್ಲಿಯ ಉತ್ಕಟತೆಯು ಬೆಳೆಯಬೇಕಾದರೆ ಅದನ್ನು ತಾವೇ ಮಾಡಬೇಕು, ನಂಬಿ ಮಾಡಬೇಕು. ಪೂಜಾಧ್ಯಾನಗಳನ್ನು ಒಲವಿನಿಂದ ಮಾಡಬೇಕು. ಭಾವಪೂರ್ಣತೆಯಿಂದಲೂ ಏಕಾಗ್ರತೆಯಿಂದಲೂ ಆನಂದದಿಂದಲೂ ಮಾಡಬೇಕು. ಅದು ಈ ಬಗೆಯಾಗಿ ನಡೆದರೇನೆ ಅದರ ಉತ್ಕಟತೆ ಬೆಳೆಯಿತೆಂದು ಭಾವಿಸಬೇಕು. ಬಸವಣ್ಣನವರು ಇವನ್ನೆಲ್ಲ ತಮ್ಮ ಬೇರೆ ಬೇರೆ ವಚನಗಳಲ್ಲಿ ಅರುಹಿರುವರು. ಅವನ್ನು ಕ್ರಮಶಃ ಅರಿತುಕೊಳ್ಳುವಾ. ತಮ್ಮ ಭಕ್ತಿಯನ್ನು ತಾವೇ ಮಾಡಬೇಕೆಂಬುದನ್ನು ಅವರು ಈ ರೀತಿ ಅರುಹಿರುವರು :

ತನ್ನಾಶ್ರಯದ ರತಿಸುಖವನು, ತಾನುಂಬ ಊಟವನು
ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೆ?