ವಿಷಯಕ್ಕೆ ಹೋಗು

ಪುಟ:ಶ್ರೀ ಬಸವಣ್ಣನವರ ದಿವ್ಯಜೀವನ.pdf/೧೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

124

ಛಲ ಬೇಕು ಶರಣಂಗೆ 'ಪ್ರಸಾದ ದಿಟವೆಂಬ.
ಛಲವಿಲ್ಲದವರ ಮೆಚ್ಚ ನಮ್ಮ ಕೂಡಲಸಂಗಮದೇವ.

ಛಲವಿಲ್ಲದಿದ್ದರೆ ಭಕ್ತಿಯ ಸಾಧನವು ಕೊನೆಗೊಳ್ಳುವುದು, ಅದಕ್ಕೆ ಸರಿಯಾದ ಫಲವು ಲಭಿಸದು, ಎಂಬುದು ಬಸವಣ್ಣನವರ ಹೇಳಿಕೆ :

ಬರ ಬರ ಭಕ್ತಿಯರೆಯಾಯಿತ್ತು ಕಾಣಿರಣ್ಣಾ
ಮೊದಲ ದಿನ ಹಣೆ ಮುಟ್ಟಿ ಮರುದಿನ ಕೈಯ ಮುಟ್ಟಿ
ಮೂರೆಂಬ ದಿನಕ್ಕೆ ತೂಕಡಿಗೆ ಕಾಣಿರಣ್ಣಾ
ಹಿಡಿದುದ ಬಿಡದಿದ್ದರೆ, ಕಡೆಗೆ ಚಾಚುವ,
ಅಲ್ಲದಿದ್ದರೆ ನಡುನೀರಲದ್ದುವ ನಮ್ಮ ಕೂಡಲಸಂಗಮದೇವ

ಅಂತೂ ಈ ಪ್ರಧಾನ ಸದ್ಗುಣಗಳನ್ನು ಮನಕ್ಕೆ ಸಾಕ್ಷಿ ಇಟ್ಟು ಸಂಪಾದಿಸಬೇಕು. 'ಹೇಂಗೆ ಮನ, ಹಾಂಗೆ ಘನ' ಎಂಬುದನ್ನು ಮರೆಯಬಾರದು. ಈ ಬಗೆಯಾಗಿ ತಮ್ಮ ಅಂತರಂಗ-ಬಹಿರಂಗ ಶುದ್ಧಿಯನ್ನು ಮಾಡಿಕೊಂಡರೆ ಸಂಗನೊಲಿವ ಎಂದು ಅವರು ಬೋಧಿ ತವರು :

ಕಳಬೇಡ ; ಕೊಲಬೇಡ ; ಹುಸಿಯ ನುಡಿಯಲು ಬೇಡ ;
ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ ;
ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ ;
ಇದೇ ಅಂತರಂಗಶುದ್ಧಿ, ಇದೇ ಬಹಿರಂಗಶುದ್ಧಿ,
ಇದೇ ನಮ್ಮ ಕೂಡಲಸಂಗಮದೇವರನೊಲಿಸವ ಪರಿ.

ತ್ರಿವಿಧ ದಾಸ್ಯ :
'ತ್ರಿವಿಧ ದಾಸೋಹ'ವು ಬಸವಣ್ಣನವರ ಭಕ್ತಿಯ ಪ್ರಧಾನ ವಿಷಯ. ಅವರದು ದಾಸ್ಯಭಕ್ತಿ, 'ಸೋಹಂ ಎಂದೆನಿಸದೆ ದಾಸೋಹಂ ಎಂದೆನಿಸಯ್ಯ' ಎಂದು ಅವರು ಸಂಗನನ್ನು ಬೇಡಿಕೊಂಡರು. ಭಗವಂತನ ಪ್ರತೀಕಗಳಾದ "ಗುರು-ಲಿಂಗ-ಜಂಗಮ'ರನ್ನು ತನು-ಮನ-ಧನಗಳಿಂದ ಆರಾಧಿಸುವುದೇ ತ್ರಿವಿಧ ದಾಸೋಹ. ಅದನ್ನು