ವಿಷಯಕ್ಕೆ ಹೋಗು

ಪುಟ:ಶ್ರೀ ಬಸವಣ್ಣನವರ ದಿವ್ಯಜೀವನ.pdf/೧೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
141

ಅಂದಿನ ಸಮಾಜವ್ಯವಸ್ಥೆಯ ಬಗ್ಗೆ ತಾತ್ಸಾರ, ಅದಕ್ಕೆ ಸ್ಥಾಯಿ. ಭೂತದಯೆ, ಸಮಾನತೆಯ ತಳಹದಿಯ ಮೇಲೆ ನವಸಮಾಜವನ್ನು ಕಟ್ಟಬೇಕೆಂಬುದೇ ಬಸವಣ್ಣನ ದರ್ಶನವಾಯಿತು. ಅಂತೆಯೇ ಅರ್ಥರಹಿತವಾದ ಹಿಂಸೆಯನ್ನು ಬೋಧಿಸುವ ಯಜ್ಞಸಂಸ್ಥೆಯನ್ನು ಪ್ರಾಣಬಲಿಯನ್ನು ಅವನು ಖಂಡಿಸಿದನು. ವೈಷಮ್ಯಕ್ಕೆ ಕಾರಣವಾದ ವರ್ಣಾಶ್ರಮಪದ್ಧತಿಯನ್ನು ನಿರಾಕರಿಸಿದನು. ಮೂಲತಃ ಅವುಗಳಲ್ಲಿಯ ಗುಣಗಳೇನೇ ಇದ್ದರೂ, ಮಧ್ಯ ಯುಗದಲ್ಲಿ ಅವು ಕುರುಡುಸಂಪ್ರದಾಯಗಳಾಗಿ ಅಧರ್ಮ- ಅನೀತಿಗಳ ಪ್ರಸಾರ ಕೇಂದ್ರಗಳಾಗಿದ್ದವು. ಅವುಗಳನ್ನು ಪ್ರತಿಭಟಿಸುವುದು ಅವಶ್ಯವಾಗಿತ್ತು.
ಸಾಹಿತ್ಯ ದೃಷ್ಟಿಯಿಂದ ಈ ವಚನಗಳ ಗುಣಾತಿಶಯವನ್ನು ಈವರೆಗೆ ಸೂಚಿಸಲಾಗಿದೆ. ಪ್ರತ್ಯೇಕವಾಗಿ ನೋಡಿದರೂ ಅವುಗಳ ಸಹಜಸ್ಪೂ ರ್ತವಾದ ಚಿತ್ರಶಕ್ತಿ ಭಾವಶಕ್ತಿ ಮತ್ತು ಶಬ್ದಶಕ್ತಿಗಳು ಅಚ್ಚರಿಗೊಳಿಸುತ್ತವೆ... ಪ್ರಭುದೇವನ ವಚನಗಳಂತೆ ಕ್ವಚಿತ್ತಾಗಿ ಇಲ್ಲಿ ಬೆಡಗಿನ ವಚನದ ಕ್ಲಿಷ್ಟತೆ ಬಂದಿದೆ. ಆದರೆ ಸಾಮಾನ್ಯವಾಗಿ ಬಸವೇಶ್ವರನ ವಚನಗಳು ಪ್ರಸನ್ನವಾಗಿವೆ, ಲಲಿತವಾಗಿವೆ. ಹಿರಿಯ ಸಾಹಿತ್ಯದ ಒಂದು ವಿಶೇಷಸ್ವರೂಪವು ಅವುಗಳಲ್ಲಿದೆ. ಬಸವೇಶ್ವರನು ಕರ್ನಾಟಕದ ಮಹಾವ್ಯಕ್ತಿಯಾಗಿರುವಂತೆ ಭಾರತೀಯ ಮಹಾಪುರುಷರಲ್ಲಿ ಒಬ್ಬನಾಗಿದ್ದಾನೆ. ಅವನ ವಚನಗಳು ವೀರಶೈವ ಧರ್ಮದ ಹಾಗೂ ವಿಶ್ವಧರ್ಮದ ಕನ್ನಡಿಯಾಗಿದ್ದು ಭಾರತೀಯ ಸಾಹಿತ್ಯಕ್ಕೆ ಕನ್ನಡದ ಹಿರಿಯ ಕೊಡುಗೆಯಾಗಿದೆ. ೩೩
,, ಸನಾತನ ಸಂದೇಶ :
ಎಲ್ಲ ಸಂತರ, ಶರಣರ ಸಂದೇಶದಲ್ಲಿ ಎರಡು ಅಂಶಗಳು ಇರುವವು. ಒಂದು ತನಾತನ, ಇನ್ನೊಂದು ಸನಾತನ. ಒಂದು ತಾತ್ಕಾಲಿಕ, ಇನ್ನೊಂದು ಸಾರ್ವಕಾಲಿಕ. ಒಂದು ನಾಡಿಗಾಗಿ, ಇನ್ನೊಂದು ಎಲ್ಲ
————
೩೩. ಕ.ಸಾ.ಇ, ಪು. ೭೮-೮೩