ವಿಷಯಕ್ಕೆ ಹೋಗು

ಪುಟ:ಶ್ರೀ ಬಸವಣ್ಣನವರ ದಿವ್ಯಜೀವನ.pdf/೧೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

140
વ ಮಹಾವ್ಯಕ್ತಿಗಳು ತಮ್ಮ ಕಣ್ಣ ಮುಂದಿನ ಹಿರಿಯ ಗುರಿಯನ್ನು ಯಾವಾಗಲೂ ನೆನೆದು, ಅದಕ್ಕೆ ಅನುಗುಣವಾಗಿ ತಾವು ಹದಿನಾರಾಣೆ ಬಾಳಿಲ್ಲವೆಂದು ಕೊರಗುತ್ತಾರೆ. ಅಂದಂದಿನ ಕಿರಿಯ ಕೊರತೆಗಳು ಅವರಿಗೆ ಹಿರಿಯವಾಗಿ ತೋರುತ್ತವೆ. ಅವನ್ನು ಅವರು ಅತಿಶಯೋಕ್ತಿಯ ಭಾಷೆಯಲ್ಲಿ ಕೆಲವು ಸಲ ಬಣ್ಣಿಸುತ್ತಾರೆ. ಅವರ ಪ್ರಗತಿಗೆ ಅದೇ ಪ್ರೇರಣೆಯಾಗುತ್ತದೆ. ಅವರ ಆತ್ಮದೂಷಣೆ ಸಾಮಾನ್ಯ ಮನುಷ್ಯನ ಆತ್ಮದೂಷಣೆಗಿಂತ ಬೇರೆ ಎಂಬುದನ್ನು ನೆನೆಯಬೇಕು... ಆತ್ಮಭಕ್ತಿಯಿಂದ ಮುಂದೆ ಸಾಧನೆ ಮಾಡುತ್ತ ಬಸವೇಶ್ವರನು ಭಕ್ತಿಯಲ್ಲಿ ಪರಿಣತನಾದನು, ಶಿವನಲ್ಲಿ ತನ್ನದೆಲ್ಲವನ್ನು ಅರ್ಪಿಸಿದನು. ಅವನ ದೇಹ-ಮನ-ಪ್ರಾಣಗಳ ತ್ರಿವಿಧವು 'ನಾನು ನಿನ್ನ ದಾಸ' ಎಂಬ ದಾಸೋಹ ಭಾವದಲ್ಲಿ ಮುಳುಗಿ ಏಳುತ್ತಿತ್ತು.
“ಬಸವೇಶ್ವರನು ತನ್ನ ಅಂತರಂಗವನ್ನು ತಿಳಿಗೊಳದಂತೆ ತೋರಿಸಿರುವಂತೆ ಸಮಾಜದ ಅಂತರಂಗವನ್ನೂ ಸಮರ್ಪಕವಾಗಿ ತನ್ನ ವಚನಗಳಲ್ಲಿ ಮೂಡಿಸಿದ್ದಾನೆ. ಅ೦ದಿನ ಸಮಾಜದ ಲೋಪದೋಷಗಳನ್ನು ನಿರ್ದಾಕ್ಷಿಣ್ಯವಾಗಿ ತೋರಿಸಿಕೊಟ್ಟಿದ್ದಾನೆ. ಹೊಸ ಸಮಾಜದ ಸೂತ್ರಗಳನ್ನು ಸಾರಿದ್ದಾನೆ... ಸಮಾಜದಲ್ಲಿ ಅಂದು ಬಸವಣ್ಣನಿಗೆ ಕಂಡುಬಂದ ದೋಷವೆಂದರೆ ತನ್ನನ್ನು ಬಿಟ್ಟು ಉಳಿದವರು ಡೊಂಕು ತಿದ್ದುವ ಹವ್ಯಾಸ, ಭೀತಿಗ್ರಸ್ತವೂ ದಾಂಭಿಕವೂ ಆದ ಸಮಾಜದಲ್ಲಿ ಈ ಆತ್ಮವಿಮರ್ಶೆಯ ಅಭಾವವು ಅಥವಾ ತನ್ನದನ್ನು ಮುಚ್ಚಿಟ್ಟು ಇತರರ ಹುಳುಕು ತೆಗೆಯುವ ಪ್ರವೃತ್ತಿ ಬೆಳೆಯುತ್ತ ಹೋಗುತ್ತದೆ. ಸಮಾಜದ ಮೂಲ್ಯಗಳು ತಿರುವುಮುರುವಾಗುತ್ತವೆ. ಈ ರೋಗನಿದಾನವನ್ನು ಬಸವಣ್ಣನು ಬಹಳ ಸಮರ್ಥವಾದ ರೀತಿಯಲ್ಲಿ ಮಾಡಿದ್ದಾನೆ... ಈ ಸಮಾಜ ಟೀಕೆ ಅಲ್ಲಲ್ಲಿ ಕಟುವಾಗಿದೆ, ನಿಜ. ಆದರೆ ಅದು ಸಾತ್ವಿಕ ಸಂತಾಪದಿಂದ ಪ್ರೇರಿತವಾದುದು. ವೈದಿಕರು-ಅವೈದಿಕರು, ಭವಿಗಳು- ಭಕ್ತರು ಯಾರೇ ಇರತಿ, ಅವರಲ್ಲಿಯ ಹುಸಿ-ಮೋಸಗಳನ್ನು ಅದು ಬಯಲಿಗೆಳೆಯುತ್ತದೆ. ಯಾವದೊಂದು ವ್ಯಕ್ತಿಯ ಅಥವಾ ಗುಂಪಿನ ದ್ವೇಷವಲ್ಲ ಆದರೆ ಅನ್ಯಾಯ ವೈಷಮ್ಯಗಳಿಂದ ಕೂಡಿದ