ವಿಷಯಕ್ಕೆ ಹೋಗು

ಪುಟ:ಶ್ರೀ ಬಸವಣ್ಣನವರ ದಿವ್ಯಜೀವನ.pdf/೧೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
131

ಆದುದು. ಅದು ಭಕ್ತವರರು ಆದ ನಾರದಮುನಿಗಳ ಏಕಾಂತಭಕ್ತರ ಬಣ್ಣನೆಯನ್ನು ತುಂಬ ಹೋಲುವದು. ಅನುಭಾವಿಗಳೆಲ್ಲರು ಒಂದೇ ಬಳಗದವರಿರುವದರಿಂದ ಅವರ ಮಾತು ಒಂದೇ ಬಗೆಯದಿರುವುದು ಸಹಜವಲ್ಲವೇ ?

ಕಂಡುದೆಲ್ಲ ಪಾವನ ; ಹೇಳಿದೆಲ್ಲ ಪರಮಬೋಧೆ
ಮುಟ್ಟಿತೆಲ್ಲವೋ ಪರುಷದ ಸೋಂಕು.
ಒಡನೆ ಕೂಡಿದವರೆಲ್ಲರು ಸದ್ಯೋನ್ಮುಕ್ತರು.
ಸುಳಿದ ಸುಳುಹೆಲ್ಲ ಜಗತ್ಪಾವನ
ಮೆಟ್ಟಿದ ಧರೆಯೆಲ್ಲವು ಅವಿಮುಕ್ತ ಕ್ಷೇತ್ರ,
ಸೋಂಕಿದ ಜಲಂಗಳೆಲ್ಲವು ಪುಣ್ಯತೀರ್ಥಂಗಳು
ಶರಣೆಂದು ಭಕ್ತಿಮಾಡಿದವರೆಲ್ಲರು ಸಾಯುಜ್ಯರು.
ಗುಹೇಶ್ವರ ! ನಿಮ್ಮ ಸುಳುಹಿನ ಸೊಗಸ
ಉಪಮಿಸಬಾರದು !

ಭಕ್ತಾಗ್ರಣಿಗಳಾದ ನಾರದರು ಭಕ್ತವರರ ಬಳಗವನ್ನು ಈ ಬಗೆ ಬಣ್ಣಿಸಿರುವರು :

“ಭಕ್ತಾ: ಏಕಾಂತಿನೋ ಮುಖ್ಯಾಃ । ಕಂಠಾವರೋಧ
ರೊಮಾಂಚಾಶ್ರುಭಿ: ಪರಸ್ಪರಂ ಲಪಮಾನಾಃ ಪಾವಯಂತಿ
ಕುಲಾನಿ ಪೃಥಿವೀಂ ಚ । ತೀರ್ಥಿಕುರ್ವಂತಿ ತೀರ್ಥಾನಿ ।
ಸುಕರ್ಮೀ ಕುರ್ವಂತಿ ಕರ್ಮಾಣಿ । ಸಚ್ಛಾಸೀ ಕುರ್ವಂತಿ
ಶಾಸ್ತ್ರಾಣಿ । ತನ್ಮಯಾಃ । ಮೋದಂತೇ ಪಿತರೋ ನೃತ್ಯಂತಿ
ದೇವತಾಃ । ಸನಾಥಾ ಚೇಯಂ ಭೂರ್ಭವತಿ ನಾಸ್ತಿ ತೇಷು
ಜಾತಿವಿದ್ಯಾರೂಪಧನಕ್ರಿಯಾದಿ ಭೇದ: । ಯತಸದೀಯಾಃ ॥

“ಭಕ್ತರಲ್ಲಿ ಅನನ್ಯ ಭಕ್ತರೇ ಎಲ್ಲಕ್ಕೂ ಶ್ರೇಷ್ಠರು. (ಭಕ್ತಿಭಾವನೆಯ ಮೂಲಕ) ಕುತ್ತಿಗೆ ಶಿರಗಳು ಬಿಗಿದು, ಮೈಮೇಲೆ ರೋಮಾಂಚನಗಳೆದ್ದು ಕಳವಳದಿಂದ ಕಣ್ಣೀರು ತುಂಬಿ, ಭಗವಂತನನ್ನು ಕುರಿತು ಒಡನೊಡನೆ ಸಂಭಾಷಣೆ ಮಾಡುವ ಭಕ್ತರು ತಮ್ಮ ಸಕಲ ಕುಲಗಳನ್ನೂ ಈ