ರಾಗ, ತಾಳ ಮತ್ತು ಬಂಧಗಳ ಆಯ್ಕೆ ಮತ್ತು ಈ ವೈವಿದ್ಯಗಳ ದೃಷ್ಟಿ
ಯಿಂದ, ಪ್ರಸಂಗಕರ್ತನು ಆಗಲೇ ಹಿಂದಿನ ಪ್ರಸಂಗ ಸಾಹಿತ್ಯವನ್ನು ಸಾಕಷ್ಟು
ಅಭ್ಯಾಸಮಾಡಿದುದು ಕಂಡುಬರುತ್ತದೆ. ಮುದ್ದಣನ ಪ್ರಸಂಗಗಳನ್ನು ವಿಶೇಷ
ವಾಗಿ ನೆಚ್ಚಿಕೊಂಡಂತಿದೆ. ಬಂಧ ರಚನೆಗೆ, ಭಾವಕ್ಕೆ, ಸನ್ನಿವೇಶಕ್ಕೆ ಸಮರ್ಪಕ
ವಾಗಿದ್ದು, ಆ ಪ್ರಸಂಗವನ್ನು ರಂಗಕ್ಕೆ ಬೇಕಾದ ಯಾವುದೇ ಸೇರ್ಪಡೆ ಇಲ್ಲದೆ*
ಪ್ರದರ್ಶನಕ್ಕೆ ತರಬಹುದು.
ಕವಿಗೆ ಕನ್ನಡ, ಸಂಸ್ಕೃತಗಳೆರಡರಲ್ಲಿ ಒಳ್ಳೆಯ ಹಿಡಿತ, ಸಲೀಸಾದ ಪದ್ಯ
ರಚನೆಗಳು ಸಿದ್ದಿಸಿದುದು ಕಾಣುತ್ತದೆ. ಪ್ರಾಸ, ಅನುಪ್ರಾಸಗಳು ಸಹಜವಾಗಿ
ಬಂದಿವೆ : ಕೆಲವು ಉದಾಹರಣೆಗಳು :
ವಿಡುಕುತಿಹ ವಡದಿಯ ಗಡೆಬಡೆಯೊಳ
ದಡಕಡರುತೆಡೆ ಬಿಡದೆನಡೆ ತಂದರು
....ಈಟಿ ಕಠಾರಿಯ ನಾಟಿಸಿ ಬಹುಪರಿ ಪಾಟಲಿಯಧಿಪತಿ ಲೂಟಿಯೊಳಂದು....ಮೂಲೋಕದೊಳು ಭ್ರಮವಾಳಕಿಯ ಲಲನೆಯ.... ಕಾಣೆ
ಬಾಲಕಿಯರ ಸವಿಬಾಲಕಿಯ
ಈ ಪ್ರಸಂಗವನ್ನು ಬರೆಯುವ ಕಾಲಕ್ಕೆ ಜೈಮಿನಿ ಮೊದಲಾದ ಕನ್ನಡ
ಕಾವ್ಯಗಳ ಅಭ್ಯಾಸ ಕವಿಗಾಗಿತ್ತು ಎಂಬುದಕ್ಕೆ ದೃಷ್ಟಾಂತಗಳು :
....ಉಡಿದು ಧರೆಗುರುಳಿರ್ದ ಕಾಲ್ಗಳಿಂ ತೋಳಳಿಂ । ಮಡಿದು ಮೈ
ವರೆದಿರ್ದ ಸಾಂ ಬಾಳ ಳಿಂ । ಕಡಿದು ಮುರಿದಿರ್ದ ರಥ ಕೀಳಿಂ
ಕೋಳಿ೦ । ಬಾರಳಿ೦ ಸೀಳಿಂದಾ ।।
*ಸನ್ನಿವೇಶಕ್ಕನುಸರಿಸಿ - ರಚನೆ ಇಲ್ಲದಿದ್ದರೆ, ಪದ್ಯಗಳನ್ನು ಭಾಗವತರೇ ಸೇರಿಸಿ ಆಡಿಸುವುದು ಪದ್ಧತಿ.