ಹರಿಕಥಾಮೃತಸಾರ/ವಿಭೂತಿ ಸಂಧಿ

ವಿಕಿಸೋರ್ಸ್ದಿಂದ

ಶ್ರೀ ತರುಣಿವಲ್ಲಭನ ಪರಮವಿ ಭೂತಿರೂಪವ ಕಂಡ ಕಂಡ ಲ್ಲೀ ತೆರದಿ ಚಿಂತಿಸುತ ಮನದಲಿ ನೋಡು ಸಂಭ್ರಮದಿ |

ನೀತ ಸಾಧಾರಣ ವಿಶೇಷ ಸ ಜಾತಿ ನೈಜಾಹಿತವು ಸಹಜ ವಿ ಜಾತಿ ಖಂಡಾಖಂಡ ಬಗೆಗಳನರಿತು ಬುಧರಿಂದ || ೧ ||


ಜಲಧರಾಗಸದೊಳಗೆ ಚರಿಸುವ ಹಲವು ಜೀವರ ನಿರ್ಮಿಸಿಹನದ ರೊಳು ಸಜಾತಿ ವಿಜಾತಿ ಸಾಧಾರಣವಿಶೇಷಗಳು |

ತಿಳಿದು ತತ್ತತ್ ಸ್ಥಾನದಲಿ ವೆ ಗ್ಗಳಿಸಿ ಹಬ್ಬಿದ ಮನದಿ ಪೂಜಿಸು ತಲವವ್ಯಾಪ್ತನ ರೂಪಗಳ ನೋಡುತಲೆ ಹಿಗ್ಗುತಿರು || ೨ ||


ಪ್ರತಿಮೆ ಶಾಲಗ್ರಾಮ ಗೋಭ್ಯಾ ಗತ ಅತಿಥಿ ಶ್ರೀತುಳಸಿ ಪಿಪ್ಪಲ ಯತಿ ವನಸ್ಥ ಗೃಹಸ್ಥ ವಟು ಯಜಮಾನ ಸ್ವಪರಜನ |

ಪೃಥಿವಿ ಜಲ ಶಿಖಿ ಪವನ ತಾರಾ ಪಥ ನವಗ್ರಹ ಯೋಗಕರಣ ಭ ತಿಥಿ ಸಿತಾಸಿತ ಪಕ್ಷ ಸಂಕ್ರಮಣವನಧಿಷ್ಠಾನ || ೩ ||


ಕಾದ ಕಾಂಚನದೊಳಗೆ ಶೋಭಿಪ ಆದಿತೇಯಾಸ್ಯನ ತೆರದಿ ಲ ಕ್ಷ್ಮೀಧವನು ಪ್ರತಿದಿನದಿ ಶಾಲಗ್ರಾಮದೊಳಗಿಪ್ಪ |

ಐದುಸಾವಿರ ಮೇಲೆ ಮೂವ ತ್ತೈದಧಿಕ ಐನೂರು ರೂಪದಿ ಭೂಧರಗಳಭಿಮಾನಿ ದಿವಿಜರೊಳಿಪ್ಪನನವರತ || ೪ ||


ಶ್ರೀರಮಣ ಪ್ರತಿಮೆಗಳೊಳಗೆ ಹದಿ ಮೂರಧಿಕವಾಗಿಪ್ಪ ಮೇಲೈ ನೂರು ರೂಪವ ಧರಿಸಿ ಇಪ್ಪನಾಹಿತಾಚಲದಿ |

ದಾರು ಮಥನವ ಗೈಯೆ ಪಾವಕ ತೋರುವಂತೆ ಪ್ರತೀಕ ಸುರರೊಳು ತೋರುತಿಪ್ಪನು ತತ್ತದಾಕಾರದಲಿ ನೋಳ್ಪರಿಗೆ || ೫ ||


ಕರಣ ನೀಯಾಮಕನು ತಾನುಪ ಕರಣದೊಳಗೈವತ್ತೆರಡು ಸಾ ವಿರದ ಹದಿನಾಲ್ಕಧಿಕಶತರೂಪಂಗಳನೆ ಧರಿಸಿ |

ಇರುತಿಹನು ತದ್ರೂಪನಾಮಗ ಳರಿತು ಪೂಜಿಸುತಿಹರ ಪೂಜೆಯ ನಿರುತ ಕೈಗೊಂಬನು ತೃಷಾರ್ತನು ಜಲವ ಕೊಂಬಂತೆ || ೬ ||


ಬಿಂಬರೂಪನು ಈ ತೆರದಿ ಜಡ ಪೊಂಬಸಿರ ಮೊದಲಾದ ಸುರರೊಳ ಗಿಂಬುಗೊಂಡಿಹನೆಂದರಿದು ಧರ್ಮಾರ್ಥ ಕಾಮಗಳ |

ಹಂಬಲಿಸದನುದಿನದಿ ವಿಶ್ವಕು ಟುಂಬಿ ಕೊಟ್ಟ ಕಣಾನ್ನ ಕುತ್ಸಿತ ಕಂಬಳಿಯೆ ಸೌಭಾಗ್ಯವೆಂದವನಂಘ್ರಿಗಳ ಭಜಿಸು || ೭ ||


ವಾರಿಯೊಳಗಿಪ್ಪತ್ತನಾಲಕು ಮೂರೆರಡು ಸಾವಿರದ ಮೇಲ್ಮು ನ್ನೂರ ಹದಿನೇಳೆನಿಪ ರೂಪವು ಶ್ರೀತುಳಸಿದಳದಿ |

ನೂರ ಅರವತ್ತೊಂದು ಪುಷ್ಪದಿ ಮೂರಧಿಕ ದಶದೀಪದೊಳು ನಾ ನೂರಮೂರು ಸುಮೂರ್ತಿಗಳು ಗಂಧದೊಳಗಿರುತಿಹವು || ೮ ||


ಅಷ್ಟದಳಸದ್ ಹೃದಯ ಕಮಲಾ ಧಿಷ್ಠಿತನು ತಾನಾಗಿ ಸರ್ವೋ ತ್ಕೃಷ್ಟಮಹಿಮನು ದಳಗಳಲಿ ಸಂಛರಿಸುತೊಳಗಿದ್ದು |

ದುಷ್ಟರಿಗೆ ದುರ್ಬುದ್ಧಿ ಕರ್ಮವ ಶಿಷ್ಟರಿಗೆ ಸುಜ್ಞಾನ ಧರ್ಮ ಸು ಪುಷ್ಟಿಗೈಸುತ ಸಂತಯಿಪ ನಿರ್ದುಷ್ಟ ಸುಖಪೂರ್ಣ || ೯ ||


ವಿತ್ತದೇಹಾಗಾರ ದಾರಾ ಪತ್ಯ ಮಿತ್ರಾದಿಗಳೊಳಗೆ ಗುಣ ಚಿತ್ತ ಬುದ್ಧ್ಯಾದಿಂದ್ರಿಯಗಳೊಳು ಜ್ಞಾನ ಕರ್ಮದೊಳು |

ತತ್ತದಾಹ್ವಯನಾಗಿ ಕರೆಸುತ ಸತ್ಯ ಸಂಕಲ್ಪಾನುಸಾರದಿ ನಿತ್ಯದಲಿ ತಾ ಮಾಡಿ ಮಾಡಿಪನೆಂದು ಸ್ಮರಿಸುತಿರು || ೧೦ ||


ಭಾವದ್ರವ್ಯಕ್ರಿಯೆಗಳೆನಿಸುವ

ಈ ವಿಧಾದ್ವೈತತ್ರಯಂಗಳ

ಭಾವಿಸುತ ಸದ್ಭಕ್ತಿಯಲಿ ಸರ್ವತ್ರ ಮರೆಯದಲೆ |

ತಾವಕನು ತಾನೆಂದು ಪ್ರತಿದಿನ

ಸೇವಿಸುವ ಭಕ್ತರಿಗೆ ತನ್ನನು

ಈವ ಕಾವ ಕೃಪಾಳು ಕರಿವರಗೊಲಿದ ತೆರನಂತೆ || ೧೧ ||


ಬಾಂದಳವೆ ಮೊದಲಾದುದರೊಳೊಂ

ದೊಂದರಲಿ ಪೂಜಾಸುಸಾಧನ

ವೆಂದೆನಿಸುವ ಪದಾರ್ಥಗಳು ಬಗೆಬಗೆಯ ನೂತನದಿ |

ಸಂದಣಿಸಿಕೊಂಡಿಹವು ಧ್ಯಾನಕೆ

ತಂದಿನಿತು ಚಿಂತಿಸಿ ಸದಾ ಗೋ

ವಿಂದನರ್ಚಿಸಿ ನೋಡು ನಲಿನಲಿದಾಡು ಕೊಂಡಾಡು || ೧೨ ||


ಜಲಜನಾಭನ ಮೂರ್ತಿ ಮನದಲಿ

ನೆಲೆಗೊಳಿಸಿ ನಿಶ್ಚಲ ಭಕುತಿಯಲಿ

ಛಳಿಬಿಸಿಲು ಮಳೆಗಾಳಿಗಳ ನಿಂದಿಸದೆ ನಿತ್ಯದಲಿ |

ನೆಲದಲಿಹ ಗಂಧವೆ ಸುಗಂಧವು

ಜಲವೆ ರಸ ರೂಪವೆ ಸುದೀಪವು

ಎಲರು ಚಾಮರ ಶಬ್ದವಾದ್ಯಗಳರ್ಪಿಸಲು ಒಲಿವ || ೧೩ ||


ಗೋಳಕಗಳು ರಮಾರಮಣನ ನಿ

ಜಾಲಯಗಳನುದಿನದಿ ಸಂಪ್ರ

ಕ್ಷಾಳನೆಯೆ ಸಮ್ಮಾರ್ಜನವು ಕರಣಗಳೆ ದೀಪಗಳು |

ಸಾಲು ತತ್ತದ್ವಿಷಯಗಳ ಸ

ಮ್ಮೇಳನವೆ ಪರಿಯುಂಕ ತತ್ಸುಖ

ದೇಳಿಗೆಯೆ ಸುಪ್ಪತ್ತಿ ಗಾತ್ಮನಿವೇದನವೆ ವಸನ || ೧೪ ||


ಪಾಪಕರ್ಮವು ಪಾದುಕೆಗಳನು

ಲೇಪನವು ಸತ್ಪುಣ್ಯಶಾಸ್ತ್ರಾ

ಲಾಪನವೆ ಶ್ರೀತುಲಸಿ ಸುಮನೋವೃತ್ತಿಗಳು ಸುಮನ |

ಕೋಪ ಧೂಪವು ಭಕ್ತಿ ಭೂಷಣ

ವ್ಯಾಪಿಸಿದ ಸದ್ಭುದ್ಧಿ ಛತ್ರವು

ದೀಪವೇ ಸುಜ್ಞಾನ ವಾರರ್ತಿಗಳೆ ಗುಣಕಥನ || ೧೫ ||


ಮನವಛನಕಾಯಕ ಪ್ರದಕ್ಷಿಣೆ

ಯನುದಿನದಿ ಸರ್ವತ್ರ ವ್ಯಾಪಕ

ವನರುಹೇಕ್ಷಣಗರ್ಪಿಸುತ ಮೋದಿಸುತಲಿರು ಸತತ |

ಅನುಭವಕೆ ತಂದುಕೊ ಸಕಲ ಸಾ

ಧನಗಳೊಳಗಿದೆ ಮುಖ್ಯ ಪಾಮರ

ಮನುಜರಿಗೆ ಪೇಳಿದರೆ ತಿಳಿಯದು ಬುಧರಿಗಲ್ಲದಲೆ || ೧೬ ||


ಚತುರವಿಧ ಪುರುಷಾರ್ಥ ಪಡೆವರೆ

ಚತುರದಶಲೋಕಗಳ ಮಧ್ಯದೊ

ಳಿತರುಪಾಯಗಳಿಲ್ಲ ನೋಡಲು ಸಕಲ ಶಾಸ್ತ್ರದಲಿ |

ಸತತ ವಿಷಯೇಂದ್ರಿಯಗಳಲಿ ಪ್ರವಿ

ತತನೆನಿಸಿ ರಾಜಿಸುವ ಲಕುಮೀ

ಪತಿಗೆ ಸರ್ವ ಸಮರ್ಪಣೆಯು ಮಹಾಪೂಜೆ ಸದುಪಾಯ || ೧೭ ||


ಗೋಳಕವೆ ಕುಂಡಾಗ್ನಿ ಕರಣವು

ಮೇಲೊದಗಿಬಹ ವಿಷಯ ಸಮಿಧೆಯು

ಗಾಳಿ ಯತ್ನವು ಕಾಮ ಧೂಮವು ಸನ್ನಿಧಾನರ್ಚಿ |

ಮೇಳನವೆ ಪ್ರಜ್ವಾಲೆ ಕಿಡಿಗಳು

ತೂಳಿದಾನಂದಗಳೆ ತತ್ತ

ತ್ಕಾಲ ಮಾತುಗಳೆಲ್ಲ ಮಂತ್ರಾಧ್ಯಾತ್ಮಯಜ್ಞವಿದು || ೧೮ ||


ಮಧುವಿರೋಧಿಯ ಪಟ್ಟಣಕೆ ಪೂ

ರ್ವದ ಕವಾಟಗಳಕ್ಷಿ ನಾಸಿಕ

ವದನಶ್ರೋತ್ರಗಳೆರಡು ದಕ್ಷಿಣ ಉತ್ತರ ದ್ವಾರ |

ಗುದ ಉಪಸ್ಥಗಳೆರಡು ಪಶ್ಚಿಮ

ಕದಗಳೆನಿಪವು ಷಟ್ಸರೋಜವೆ

ಸದನ ಹೃದಯವೆ ಮಂಟಪಂಗಳು ತ್ರಿಗುಣಗಳೆ ಕಲಶ || ೧೯ ||


ಧಾತುಗಳು ಸಪ್ತಾವರಣ ಉಪ

ವೀಥಿಗಳೆ ನಾಡಿಗಳು ಮದಗಳು

ಯೂಥಪಗಳು ಸುಷುಮ್ನಾ ನಾಡಿಯೆ ರಾಜಪಂಥಾನ |

ಈ ತನೂರುಹಗಳೆ ವನಂಗಳು

ಮಾತರಿಶ್ವನು ಪಂಚರೂಪದಿ

ಪಾತಕಗಳೆಂಬರಿಗಳನು ಸಂಹರಿಪ ತಳವಾರ || ೨೦ ||


ಇನಶಶಾಂಕಾದಿಗಳೆ ಲಕ್ಷ್ಮೀ

ವನಿತೆಯರಸನ ದ್ವಾರಪಾಲಕ

ರೆನಿಸುತಿಪ್ಪರು ಮನದ ವೃತ್ತಿಗಳೇ ಪದಾತಿಗಳು |

ಅನುಭವಿಪ ವಿಷಯಂಗಲೇ ಪ

ಟ್ಟಣಕೆ ಬಪ್ಪ ಪಸಾರಗಳು ಜೀ

ವನೆ ಸುವರ್ತಕ ಕಪ್ಪಗಳ ಕೈಗೊಂಬ ಹರಿ ತಾನು || ೨೧ ||


ಉರುಪರಾಕ್ರಮನರಮನೆಗೆ ದಶ

ಕರಣಗಳು ಕನ್ನಡಿಯ ಸಾಲುಗ

ಳರವಿದೂರನ ಸದ್ವಿಹಾರಕೆ ಚಿತ್ತ ಮಂಟಪವು |

ಮರಳಿ ಬೀಸುವ ಶ್ವಾಸಗಳು ಚಾ

ಮರ ವಿಲಾಸಿನಿ ಬುದ್ಧಿ ದಾಮೋ

ದರಗೆ ಸಾಷ್ಟಾಂಗ ಪ್ರಣಾಮಗಳೇ ಸುಶಯನಗಳು || ೨೨ ||


ಮಾರಮಣನರಮನೆಗೆ ಸುಮಹಾ

ದ್ವಾರವೆನಿಸುವ ವದನಕೊಪ್ಪುವ

ತೋರಣ ಸ್ಮಶ್ರುಗಳು ಕೇಶಗಳೇ ಪತಾಕೆಗಳು |

ಊರಿ ನಡೆವಂಘ್ರಿಗಳು ಜಂಘಗ

ಳೂರು ಮಧ್ಯೋದರ ಶಿರಗಳಾ

ಗಾರದುಪ್ಪರಿಗೆಗಳು ಕೋಶಗಳೈದು ಕೋಣೆಗಳು || ೨೩ ||


ಈ ಶರೀರವೆ ರಥ ಪತಾಕ ಸು

ವಾಸಗಳೆ ಪುಂಡ್ರಗಳು ಧ್ವಜ ಸಿಂ

ಹಾಸನವೆ ಚಿತ್ತವು ಸುಬುದ್ಧಿಯೆ ಕಲಶ ಸನ್ಮನವೆ

ಪಾಶ ಗುಣ ದಂಡತ್ರಯಗಳು ಶು

ಭಾಶುಭದ್ವಯ ಕರ್ಮ ಚಕ್ರ ಮ

ಹಾಸಮರ್ಥಾಶ್ವಗಳು ದಶಕರಣಂಗಳೆನಿಸುವುವು || ೨೪ ||


ಮಾತರಿಶ್ವನು ದೇಹರಥದೊಳು

ಸೂತನಾಗಿಹ ಸರ್ವಕಾಲದಿ

ಶ್ರೀತರುಣಿವಲ್ಲಭ ರಥಿಕನೆಂದರಿದು ನಿತ್ಯದಲಿ |

ಪ್ರೀತಿಯಿಂದಲಿ ಪೋಷಿಸುತ ವಾ

ತಾತಪಾದಿಗಳಿಂದಲವಿರತ

ಈ ತನುವಿನೊಳು ಮಮತೆ ಬಿಟ್ಟವನವನೆ ಮಹಯೋಗೀ || ೨೫ ||


ಭವವೆನಿಪ ವನಧಿಯೊಳು ಕರ್ಮ

ಪ್ರವಹದೊಳು ಸಂಚರಿಸುತಿಹ ದೇ

ಹವ ಸುನಾವೆಯ ಮಾಡಿ ತನ್ನವರಿಂದಲೊಡಗೂಡಿ |

ದಿವಸದಿವಸಗಳಲ್ಲಿ ಲಕುಮೀ

ಧವನು ಕ್ರೀಡಿಪನೆಂದು ಚಿಂತಿಸೆ

ಪವನನಯ್ಯ ಭವಾಬ್ಧಿ ದಾಟಿಸಿ ಪರಮಸುಖವೀವ || ೨೬ ||


ಆಪಣಾಲಯಗತ ಪದಾರ್ಥವು

ಸ್ತ್ರೀ ಪುರುಷರುಗಳಿಂದ್ರಿಯಗಳಲಿ

ದೀಪ ಪಾವಕರೊಳಿಡುತಿಹ ತೈಲಾದಿ ದ್ರವ್ಯಗಳ |

ಆ ಪರಮಗವದಾನವೆಂದು ಪ

ದೇಪದೇ ಮರೆಯದಲೆ ಸ್ಮರಿಸುತ

ಭೂಪನಂದದಿ ಸಂಚರಿಸು ನಿರ್ಭಯದಿ ಸರ್ವತ್ರ || ೨೭ ||


ವಾರಿಜಭವಂಡವೆ ಸುಮಂಟಪ

ಮೇರುಗಿರಿ ಸಿಂಹಾಸನವು ಭಾ

ಗೀರಥಿಯೆ ಮಜ್ಜನವು ದಿಗ್ವ ಸ್ತ್ರಗಳು ನುಡಿ ಮಂತ್ರ |

ಭೂರುಹಜ ಪಹಲಪುಷ್ಪ ಗಂಧ ಸ

ಮೀರ ಶಶಿರವಿ ದೀಪ ಭೂಷಣ

ತಾರಕೆಗಳೆಂದರ್ಪಿಸಲು ಕೈಗೊಂಡು ಮನ್ನಿಸುವ || ೨೮ ||


ಭೂಸುರರೊಳಿಪ್ಪಬ್ಜ ಭನನೊಳು

ವಾಸುದೇವನು ವಾಯುಖಗಪ ಸ

ದಾಶಿವಹಿಪೇಂದ್ರನು ವಿವಸ್ವಾನ್ನಾಮಕ ಸೂರ್ಯ |

ಭೇಶ ಕಾಮಮರಾಸ್ಯ ವರುಣಾ

ದೀ ಸುರರು ಕ್ಷತ್ರಿಯರೊಳಿಪ್ಪರು

ವಾಸವಾಗಿಹ ಸಂಕರುಷಣನ ನೋಡಿ ಮೋದಿಪರು || ೨೯ ||


ಮೀನಕೇತನತನಯ ಪ್ರಾಣ

ಪಾನವ್ಯಾನೋದಾನ ಮುಖ್ಯೈ

ಕೋನಪಂಚಾಶನ್ಮರುದ್ಗಣ ರುದ್ರ ವಸುಗಣರು |

ಮೇನಕಾತ್ಮಜ ಕುವರ ವಿಷ್ವ

ಕ್ಸೇನಧನಪಾದ್ಯ ನಿಮಿಷರನು ಸ

ದಾನುರಾಗದಿ ಧೇನಿಪುದು ವೈಶ್ಯರೊಳು ಪ್ರದ್ಯ್ಯುಮ್ನ || ೩೦ ||


ಇರುತಿಹರು ನಾಸತ್ಯದಸ್ರರು

ನಿಋಋತಿಯು ಯಮಧರ್ಮ ಯಮಕಿಂ

ಕರರು ಮೇದಿನಿ ಕಾಲಮೃತ್ಯು ಶನೈಶ್ಚರಾದಿಗಳು |

ಕರೆಸಿಕೊಂಬರು ಶೂದ್ರರೆಂದನ

ವರತ ಶೂದ್ರರೊಳಿಪ್ಪರಿವರೊಳ

ಗರವಿದೂರನಿರುದ್ಧನಿಹನೆಂದರಿತು ಮನ್ನಿಪುದು || ೩೧ ||


ವೀತಭಯ ನಾರಾಯಣ ಚತು

ಷ್ಪಾತು ತಾನೆಂದೆನಿಸಿ ತತ್ತ

ಜ್ಜಾತಿಧರ್ಮಸುಕರ್ಮಗಳ ತಾ ಮಾಡಿ ಮಾಡಿಸುವ |

ಚೇತನರ ಒಳಹೊರಗೆ ಓತ

ಪ್ರೋತನಾಗಿದ್ದೆಲ್ಲರಿಗೆ ಸಂ

ಪ್ರೀತಿಯಲಿ ಧರ್ಮಾರ್ಥಕಾಮಾದಿಗಳ ಕೊಡುತಿಹನು || ೩೨ ||


ನಿಧನಧನದ ವಿಧಾನ ವಿಗತಾ

ಭ್ಯಧಿಕ ಸಮಸಮವರ್ತಿ ಸಾಮಗ

ತ್ರಿದಶಗಣಸಂಪೂಜ್ಯ ತ್ರಿಕಕುದ್ಧಾಮ ಶುಭನಾಮ |

ಮಧುಮಥನ ಭೃಗುರಾಮ ಘೋಟಕ

ವದನ ಸ್ರ್ವಪದಾರ್ಥದೊಳು ತುದಿ

ಮೊದಲು ತುಂಬಿಹನೆಂದು ಚಿಂತಿಸು ಬಿಂಬರೂಪದಲಿ || ೩೩ ||


ಕನ್ನಡಿಯ ಕೈವಿಡಿದು ನೋಡಲು

ತನ್ನಿರವು ಸವ್ಯಾಪಸವ್ಯದಿ

ಕಣ್ಣಿಗೊಪ್ಪುವ ತೆರದಿ ಅನಿರುದ್ಧನಿಗೆ ಈ ಜಗವು |

ಭಿನ್ನಭಿನ್ನವೆ ತೋರುತ್ತಿಪ್ಪುದು

ಜನ್ಯವಾದುದರಿಂದ ಪ್ರತಿಬಿಂ

ಬನ್ನಮಯಗಾನೆಂದರಿದು ಪೂಜಿಸಲು ಕೈಗೊಂಬ || ೩೪ ||


ಬಿಂಬರೆನಿಪರು ಸ್ವೋತ್ತಮರು ಪ್ರತಿ

ಬಿಂಬರೆನಿಪರು ಸ್ವಾವರರು ಪ್ರತಿ

ಬಿಂಬಬಿಂಬಗಳೊಳಗೆ ಕೇವಲ ಬಿಂಬ ಹರಿಯೆಂದು |

ಸಂಭ್ರಮದಿ ಪಾಡುತಲಿ ನೋಡುತ

ಲುಂಬುಡವುದಿಡುವುದು ಕೊಡುವುದೆ

ಲ್ಲಂಬುಜಾಂಬಕನಂಘ್ರಿ ಪೂಜೆಗಳೆಂದು ನಲಿದಾಡು || ೩೫ ||


ನದಿಯ ಜಲ ನದಿಗೆರೆವ ತೆರದಂ

ದದಲಿ ಭಗವದ್ದತ್ತ ಧರ್ಮಗ

ಳುದಧಿಶಯನನಿಗರ್ಪಿಸುತ ವ್ಯಾವರ್ತ ನೀನಾಗಿ |

ವಿಧಿನಿಷೇಧಾದಿಗಳಿಗೊಳಗಾ

ಗದಲೆ ಮಾಡುತ ದರ್ವಿಯಂದದಿ

ಪದುಮನಾಭನ ಸಕಲ ಕರ್ಮಗಳಲ್ಲಿ ನೆನೆವುತಿರು || ೩೬ ||


ಅರಿಯದಿರ್ದರು ಎಮ್ಮೊಳಿದ್ದನ

ವರತ ವಿಷಯಗಳುಂಬ ಜ್ಞಾನೋ

ತ್ತರದಿ ತನಗರ್ಪಿಸಲು ಚಿತ್ಸುಖವಿತ್ತು ಸಂತೈಪ |

ಸರಿತು ಕಾಲಪ್ರವಹಗಳು ಕಂ

ಡರೆಯು ಸರಿ ಕಾಣದಿರೆ ಪರಿವುವು

ಮರಳಿ ಮಜ್ಜನ ಪಾನಕರ್ಮಗಳಿಂದೆ ಸುಖವಿಹವು || ೩೭ ||


ಏನು ಮಾಡುವ ಕರ್ಮಗಳು ಲಕು

ಮೀನಿವಾಸನಿಗರ್ಪಿಸನು ಸಂ

ಧಾನಪೂರ್ವಕದಿಂದ ಸಂದೇಹಿಸದೆ ದಿನದಿನದಿ |

ಮಾನನಿಧಿ ಕೈಗೊಂಡು ಸುಖ ವಿ

ತ್ತಾನತರ ಸಂತಯಿಪ ತೃಣಜಲ

ಧೇನು ತಾನುಂಡನವರತ ಪಾಲ್ಗರೆವ ತೆರನಂತೆ || ೩೮ ||


ಪೂರ್ವ ದಕ್ಷಿಣ ಪಶ್ಚಿಮೋತ್ತರ

ಪಾರ್ವತೀಪತಿ ಯಗ್ನಿವಾಯುಸು

ಶಾರ್ವರೀಚರ ದಿಗ್ವಲಯದೊಳು ಹಂಸನಾಮಕನು |

ಸರ್ವ ಕಾಲದಿ ಸರ್ವರೊಳು ಸುರ

ಸಾರ್ವಭೌಮನು ಸ್ವೇಚ್ಛೆಯಲಿ ಮ

ತ್ತೋರ್ವರಿಗೆ ಗೋಚರಿಸದವ್ಯಕ್ತಾತ್ಮನೆಂದೆನಿಸಿ || ೩೯ ||


ಪರಿಯಿಡಾವತ್ಸರನು ಸಂವ

ತ್ಸರದೊಳನಿರುದ್ಧಾದಿ ರೂಪವ

ಧರಿಸಿ ಬಾರ್ಹಸ್ಪತ್ಯ ಸೌರಭ ಚಾಂದ್ರಮನು ಎನಿಸಿ |

ಇರುತಿಹ ಜಗನ್ನಾಥ ವಿಟ್ಠಲ

ಸ್ವರಿಸುವವರನು ಸಂತಯಿಪನೆಂ

ದುರು ಪರಾಕ್ರಮನುಚಿತ ಸಾಧನ ಯೋಗ್ಯತೆಯನರಿತು || ೪೦ ||