ಪುಟ:ಕರ್ನಾಟಕ ಗತವೈಭವ.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೪

ಕರ್ನಾಟಕ ಗತವೈಭವ


ಮ್ಮ ಪೂರ್ವಜರು ಬಿಟ್ಟು ಹೋದ ಸಾಧನ ಸಾಮಗ್ರಿಯು ಶಾಶ್ವತವಾಗಿದೆಯೆಂದು ಹೇಳಿದೆನಷ್ಟೆ ! ಆದರೆ ಆ ಸಾಧನಗಳು ಯಾವುವೆಂಬುದನ್ನು ಇನ್ನು ನೋಡುವ, ಅಂಥ ಸಾಧನಗಳು ವಿಪುಲವಾಗಿರದಿದ್ದರೂ, ಸ್ವದೇಶ ಭಕ್ತಿಯಿಂದ ಪ್ರೇರಿತನಾದವನಿಗೆ, ಇತಿಹಾಸವನ್ನು ಬರೆಯುವುದಕ್ಕೆ ಅಸಾಕಾಗುವಷ್ಟು ಇರುತ್ತವೆಂದು ಕಂಡುಬರುವುದು. ಅಂಥವನಿಗೆ ಕರ್ನಾಟಕದೊಳಗೆ ಎಲ್ಲಿ ನೋಡಿದರೂ ಇತಿಹಾಸ ಸಾಮಗ್ರಿಯ ರಾಶಿಗಳು ಅಲ್ಲಲ್ಲಿಗೆ ಒಟ್ಟಿರುವುದಾಗಿ ಕಾಣುವುವು. ಯಾಕಂದರೆ, ನಮ್ಮ ನಾಡಿನಲ್ಲಿ ಎತ್ತ ನೋಡಿದರತ್ತ ಶಿಲಾಲಿಪಿಗಳು ಹರಡಿಕೊಂಡಿರುವುವು. ಇಲ್ಲಿ ದೊರೆಯುವಷ್ಟು ಶಿಲಾಲಿಪಿಗಳು ಬೇರೆ ಯಾವ ಕಡೆಗೂ ದೊರೆಯುವುದಿಲ್ಲ, ನಮ್ಮ ನಾಡು ಶಿಲಾಲಿಪಿಗಳ ತವರು ಮನೆಯೆಂದರೂ ಸಲ್ಲುವುದು, ಕರ್ನಾಟಕದೊಳಗೆ ಕಲ್ಲು ಗುಡಿಯಿಲ್ಲದ ಊರಿಲ್ಲ; ಶಿಲಾಲಿಪಿಯಿಲ್ಲದ ಗುಡಿಯಿಲ್ಲ; ನಮ್ಮ ಅರಸರ ಔದಾರ್ಯವನ್ನೂ ದಾನಶೌಂಡತ್ವವನ್ನೂ ಹೊಗಳದ ಶಿಲಾಲಿಪಿಯಿಲ್ಲ, ನಮ್ಮ ಸುದೈವದಿಂದ ಮೈಸೂರಿನ ಸರಕಾರದವರು ತಮ್ಮ ಪ್ರಾಂತದ ಮಟ್ಟಿಗೆ ಏಕಾಗಲೊಲ್ಲದು, - ತಮ್ಮ ದೇಶದ ಮೂಲೆ ಕೊಂಪೆಗಳನ್ನು ಸಹ ಹುಡುಕಿ, ಸುಮಾರು ೮೦೦೦ ಶಿಲಾಲಿಪಿ ಮತ್ತು ತಾಮ್ರಶಾಸನಗಳನ್ನು ಅಚ್ಚು ಹಾಕಿಸಿದ್ದಾರೆ. ಉತ್ತರ ಕರ್ನಾಟಕದಲ್ಲಿಯೂ ಕನಿಷ್ಠ ಸಾವಿರಾರು ಶಿಲಾ ಲೇಖಗಳು ಸಿಕ್ಕಬಹುದು. ಧಾರವಾಡದ ಒಂದೇ ಜಿಲ್ಲೆಯಲ್ಲಿರುವ ಒಟ್ಟು ೧೦೦-೧೧೦ ದೊಡ್ಡ ಗ್ರಾಮಗಳೊಳಗೆ ನಾಲ್ಕೆಂಟು ಗ್ರಾಮಗಳನ್ನು ಮಾತ್ರವೇ ಬಿಟ್ಟು ಉಳಿದ ಎಲ್ಲ ಗ್ರಾಮಗಳಲ್ಲಿ ಶಿಲಾಲಿಪಿಗಳು ದೊರೆಯುತ್ತವೆ. ಲಕ್ಕುಂಡಿ, ಅಣ್ಣಗೇರಿ ಮುಂತಾದ ಗ್ರಾಮಗಳಲ್ಲಂತೂ ೨೦-೩೦ ಶಿಲಾಲಿಪಿಗಳು ಒಂದೊಂದೇ ಊರಿನಲ್ಲಿ ದೊರೆಯುತ್ತವೆ, ಸಾರಾಂಶ, ನಮ್ಮ ನಾಡು ಶಿಲಾಲಿಪಿಮಯವಾಗಿರುವುದಂದರೂ ಅತ್ಯುಕ್ತಿಯಾಗದು! ಎಂದೂ ಸವೆಯದಂಥ ಇಂಥ ಮೂಲಧನವು ನಮ್ಮಲ್ಲಿರಲು ಅದರ ಅವಸ್ಥೆ ಏನಾಗಿರುವುದು ನೋಡಿದಿರೊ? ಅಕಟಕಟ ! ಅದು ನೆನಪಾದೊಡನೆಯೇ ಎದೆ ಹಾರುತ್ತದೆ! ನಮ್ಮಲ್ಲಿ 'ನಾ ನೀ' ಎಂದೆನುವ ವಿದ್ವಾಂಸರಿಗೂ ಅವುಗಳ ಮೇಲ್ಮೆಯು ಚೆನ್ನಾಗಿ ಹೊಳೆದಿರುವುದಿಲ್ಲ. ಸಾಮಾನ್ಯ ಜನರ ಮಾತಂತೂ ದೂರವೇ ! ಸಾಮಾನ್ಯ ಜನರಲ್ಲಿ, ಕೆಲವರು ಅವುಗಳ ಮೇಲೆ ಎಣ್ಣೆ ಸುರಿಯುತ್ತಾರೆ, ಮತ್ತೆ ಕೆಲವರು ಅವಕ್ಕೆ ಬಣ್ಣ ಬಳಿಯುತ್ತಾರೆ; ಬೇರೆ ಕೆಲವು ಹುಡು