ಪುಟ:Vimoochane.pdf/೧೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವಿಮೋಚನೆ

೧೪೧

"ಅರ್ಜ್ಜಿ ಕೊಟ್ಟರು.ಉತ್ತರ ಬಂದರೆ ಮತ್ತೆ ಬಾ."

ಉತ್ತರ ಬರುವುದಕ್ಕೂ ಮತ್ತೆ ಹೋಗುವುದಕ್ಕೂ ಅವಕಾಶವೇ ದೊರೆಯಲಿಲ್ಲ.ನಾನು ಅರ್ಜಿ ಬರೆಯಲೇ ಇಲ್ಲ.

ಆ ಬಳಿಕ ನಾನು ಮಂಡಿಪೇಟೆಯಲ್ಲಿ ಸುತ್ತಾಡಿದೆ. ಪದ್ಮಾಸನ ಹಾಕಿ ಮಂಡದ ಮೇಲೆ ಕುಳಿತು,ಎಲೆಯಡಿಕೆ ಜಗಿದು ಉಗುಳುತ್ತಾ ದುಡ್ಡೆಣಿಸುತ್ತಿದ್ದ ವ್ಯಾಪಾರಿಗಳು,ನನ್ನ ಸೂಟನ್ನು ನೋಡಿ ನಕ್ಕರು. ನನ್ನನ್ನು ಮಾತನಾಡಿಸುವುದಕ್ಕೆ ಮುಂಚೆ,ಸ್ವರಕ್ಕೆ ಹಾದಿ ಮಾಡಿ ಕೊಡಲೆಂದು,ಅವರು ಎಂಜಲು ಉಗುಳುತ್ತಿದ್ದರು.ಕೆಲವರು ಪೀಕ ದಾನಿಯಲ್ಲಿ,ಕೆಲವರು ಹೊರಕ್ಕೆ ಬೀದಿಯಲ್ಲಿ.ಆ ಮೇಲೆ ಹೊರಡು ತ್ತಿದ್ದ ಮಾತುಗಳೆಲ್ಲ,ಏಕ ಪ್ರಕಾರವಾಗಿದ್ದವು.ನನ್ನನ್ನು ನೋಡಿ ದಾಗಲೆಲ್ಲಾ ಬೇಕುಬೇಕೆಂದೇ ಅವರು ಎಂಜಲು ಉಗುಳುತ್ತಿದ್ದರೆಂಬ ಭ್ರಮೆಯ ಆರೋಪವನ್ನೂ ಅವರ ಮೇಲೆ ನಾನು ಹೊರಿಸಿದೆ-ಮೌನ ವಾಗಿ ಮನಸಿನಲ್ಲೆ ಹೊರಿಸಿದೆ.

ಬೇರೆ ಕೆಲಸಗಳಿದ್ದವು.ಆದರೆ ಅದಕ್ಕೆ ನಿರ್ದಿಷ್ಟ ವಿದ್ಯೆ ದೊರಕಿಸಿ ಕೊಂಡ ವ್ಯಕ್ತಿಗಳೇ ಬೇಕಾಗಿದ್ದರು.ಆ ನಿರ್ದಿಷ್ಟ ವಿದ್ಯೆಯ ಪ್ರಮಾಣ ಪತ್ರವನ್ನು ಅವರು ಕೇಳುತ್ತಿದ್ದರು.ನನ್ನಲ್ಲಿ ಯಾವ ಪ್ರಮಾಣ ಪತ್ರವೂ ಇರಲಿಲ್ಲ.

ಹೀಗೆ ಊರೆಲ್ಲಾ ಸುತ್ತಾಡಿ.ಒಮ್ಮೊಮ್ಮೆ ಅಜ್ಜಿಯ ಮನೆಗೆ ಹಿಂತಿರುಗುತ್ತಿದ್ದೆ.ಅಜ್ಜಿಯ ಪಾತ್ರೆ ಸರಂಜಾಮಗಳು,ಡಬ್ಬ ತಪ್ಪಲೆ ಗಳು,ಮಡಿಕೆ ಕುಡಿಕೆಗಳು,ಇನ್ನೂ ಅಲ್ಲೆ ಇದ್ದುವು.ನನ್ನ ಹಾಗೆಯೇ ಅವು ಕೂಡ,ಆ ಮನೆಯ ಸದಸ್ಯರಾಗಿದ್ದುವು........

ಜೀವನದ ಪ್ರವಾಹದಲ್ಲಿ ಅನಿರೀಕ್ಷಿತವಾದ ಒರತೆಗಳಿರುತ್ತವೆ, ಸುಳಿಗಳಿರುತ್ತವೆ.ಇಂಥದು ಹೀಗೆಯೇ ಆಗುವುದೆಂದು ಹೇಳುವ ಸಾಮರ್ಥ್ಯ ಆಗ ನನಗಿರಲಿಲ್ಲ.

ಆ ಸಂಜೆ ಮತ್ತೊಮ್ಮೆ ಜೀವನದೊಂದು ಸುಳಿಯೊಳಕ್ಕೆ ಸಿಕ್ಕು ನಾನು ಎತ್ತಲೋ ಸಾಗಿಹೋದೆ.