ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಆಹ್ವಾನ ಋಷಿ : "ಸಂ ಗಚ್ಛಧ್ವ ಸಂ ವದಧ್ವ ಸಂವೋ ಮನಾಂಸಿ ಜಾನತಾಮ್ ದೇವಾ ಭಾಗಂ ಯಥಾಪೂರ್ವ ಸಂಜಾನನ ಉಪಾಸತೇ ಸಮನೋ ಮಂತ್ರಃ ಸಮಿತಿಃ ಸಮಾನೀ ಸಮಾನಂ ಮನಃ ಸಹಚಿತ್ತ ಮೇಷಾಮ್ ಸಮಾನಂ ಮಂತ್ರಮಛಿಮಂತ್ರಯೇ ವಃ ಸಮಾನೇನ ವೋ ಹವಿಷಾ ಜುಹೋಮಿ ಸಮಾನಿ ವ ಆಕೃತಿಃ ಸಮಾನಾ ಹೃದಯಾನಿ ವಃ ಸಮಾನಮಸ್ತು ವೋ ಮನೋ ಯಥಾ ವಃ ಸುಸಹಾಸತಿ” ಸ್ರೀಕಂಠ : [ಮೇಲಿನ ಶ್ಲೋಕದ ಕೊನೆಯ ಚರಣಗಳ ಹಿನ್ನೆಲೆಯಲ್ಲಿ) ಒಂದೆಡೆ ಕರೆಯಿರಿ; ನಿಮ್ಮದಾಗಲಿ ಏಕ ಗುರಿ, ಸಮಾನ ಸಮಿತಿ; ಒಂದಾದ ವರ ಮನ ವಿಚಾರಗಳಿರಲಿ ಸಮಾನ. ನಿಮ್ಮ ಮುಂದಿಡುವೆ ಏಕೋದ್ದೇಶ. ಪೂಜಿಸಿರಿ ನೀವೆಲ್ಲ ಸಮಾನ ಬಲಿಯನ್ನಿತ್ತು. ನಿಮ್ಮದಾಗಲಿ ಏಕ ಧ್ಯೇಯ. ಇರಲಿ ಹೃದಯಗಳ ಐಕ್ಯ. ಒಂದಾಗಿರಲಿ ನಿಮ್ಮ ಮನ. ಹೀಗೆ ಸರ್ವರೂ ಸುಖವಾಗಿ ಒಟ್ಟಾಗಿ ಬಾಳಲಿ.
ನಿರೂಪಕ : ಸಾಮಾಜಿಕ ಐಕ್ಯವನ್ನು ಕುರಿತ ಈ ವೇದಘೋಷವೇ ಪ್ರಾಚೀನ ಜನಪದದ ರೀತಿ ನೀತಿಗಳ ತಿರುಳು. ಜನಕನಂತಹ ರಾಜರ್ಷಿಗಳಿಂದ, ಯಾಜ್ಞವಲ್ಕ್ಯ ನಂತಹ ಬ್ರಹ್ಮರ್ಷಿಗಳಿಂದ, ಬಾಳು ಆಗ ಬೆಳಗಿತು. ಮುಂದೆ ರಾಮಾಯಣ ಮಹಾಭಾರತಗಳು ರೂಪುಗೊಂಡು, ಪುರಾಣ ಗ್ರಂಥಗಳಾದುವು. ಅಲ್ಲಿದೆ ರಾಷ್ಟ್ರ ವಿಸ್ತಾರದ_ಸಮಗ್ರತೆಯ_ಕಲ್ಪನೆ. ಆಗಿನ ಅರಸರೆಲ್ಲ ಇಡಿಯ ದೇಶವನ್ನೇ ಆಳಬಯಸಿದರೆಂಬುದಕ್ಕೆ ಅಶ್ವಮೇಧ ಯಾಗವೊಂದು ದೃಷ್ಟಾಂತ. ....ನಾಲ್ಕನೆಯದಾದ ಅಥರ್ವವೇದ ಸೃಷ್ಟಿಯಾದುದು ಆರ್ಯ_ಅನಾರ್ಯ ಸಂಕರದಿಂದ ಪ್ರಭಾವಿತವಾಗಿ. ....ಉಪನಿಷತ್ತುಗಳು ರಚಿತವಾಗಿ ವೈಚಾರಿಕ ವಿಕಾಸಕ್ಕೆ ಇಂಬು ದೊರೆಯಿತು.